ಮಂಡ್ಯ: ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಡಿ ಸಿ ತಮ್ಮಣ್ಣ ನೀಡಿದ್ದ ಹೇಳಿಕೆಯೊಂದು ಈಗ ವಿವಾದದ ಕಿಡಿ ಹೊತ್ತಿಸಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಕೆಆರ್ಪೇಟೆಯನ್ನು ಮುಂಬೈನ ಕಾಮಾಟಿಪುರ ಮಾಡುತ್ತೇನೆ ಎಂದಿದ್ದರು ಅಂತಾ ತಮ್ಮಣ್ಣ ಹೇಳಿಕೆ ನೀಡಿದ್ದರು. ಈ ಹೇಳಿಕೆ ಈಗ ಕೆಆರ್ಪೇಟೆ ಜನರನ್ನು ಕೆರಳಿಸಿದೆ.
ಈ ಮಾತು ಮುಂಬೈ ಕನ್ನಡಿಗರನ್ನು ಕೂಡ ಕೆರಳಿಸಿದೆ. ಕೂಡಲೇ ಮಾಜಿ ಸಚಿವ ತಮ್ಮಣ್ಣ ಕನ್ನಡಿಗರ ಕ್ಷಮೆ ಕೋರಬೇಕು. ಇಲ್ಲವೇ ಹೋರಾಟ ಮಾಡುವುದಾಗಿ ಮುಂಬೈ ಕನ್ನಡಿಗರ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಮುಂಬೈ ಕನ್ನಡಿಗರ ಸಂಘದ ಸದಸ್ಯರು.. ಕೆಆರ್ಪೇಟೆ ಉಪ ಚುನಾವಣೆ ಸಂಬಂಧ ಕಿಕ್ಕೇರಿಯಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಡಿ ಸಿ ತಮ್ಮಣ್ಣ ವಿವಾದ ಕಿಡಿ ಹೊತ್ತಿಸಿದ್ದರು. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಕೆಆರ್ಪೇಟೆಯನ್ನು ಮುಂಬೈನ ಕಾಮಾಟಿಪುರ ಮಾಡುತ್ತೇನೆ ಎಂದಿದ್ದರು ಅಂತಾ ತಮ್ಮಣ್ಣ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಈಗ ಕನ್ನಡಿಗರು ಧ್ವನಿ ಎತ್ತಿದ್ದಾರೆ.
ಕೆಆರ್ಪೇಟೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಮುಂಬೈ ಕನ್ನಡಿಗರ ಸಂಘದ ಸದಸ್ಯರು, ಕೂಡಲೇ ಮಾಜಿ ಸಚಿವ ತಮ್ಮಣ್ಣ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಕ್ಷಮೆ ಕೋರದೇ ಇದ್ದರೆ ಮುಂಬೈ ಹಾಗೂ ಕೆಆರ್ಪೇಟೆಯಲ್ಲೂ ಹೋರಾಟ ಮಾಡಲಾಗುವುದು. 12 ಸಾವಿರ ಮತದಾರರು ಮುಂಬೈನಲ್ಲಿದ್ದೇವೆ. ನಾವು ಯಾರೂ ನಿಮ್ಮ ಬೆಂಬಲಕ್ಕೆ ನಿಲ್ಲೋದಿಲ್ಲ ಎಂದು ಎಚ್ಚರಿಕೆ ನೀಡಿದರು.