ETV Bharat / state

ವೈಭವದ ಶ್ರೀರಂಗಪಟ್ಟಣ ದಸರಾಗೆ ಚಾಲನೆ: ಅಂಬಾರಿ ಹೊತ್ತು ಸಾಗಿದ ಅಭಿಮನ್ಯು

author img

By

Published : Oct 3, 2019, 8:18 PM IST

ಮೈಸೂರು ದಸರಾದಷ್ಟೆ ವೈಭವದಿಂದ ನಡೆಯುವ ಶ್ರೀರಂಗಪಟ್ಟಣ ದಸರಾಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು. ಮಾಜಿ ಸಿಎಂ ಎಸ್.ಎಂ.ಕೃಷ್ಣ ಚಾಲನೆ ನೀಡಿದ್ರು.

ವೈಭವದ ಶ್ರೀರಂಗಪಟ್ಟಣ ದಸರಾಗೆ ಚಾಲನೆ

ಮಂಡ್ಯ: ಇಂದು ಶ್ರೀರಂಗಪಟ್ಟಣ ದಸರಾಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಂದಿ ಪೂಜೆ ನೆರವೇರಿಸಿ ಅಂಬಾರಿ ಹೊತ್ತ ಅಭಿಮನ್ಯುಗೆ ಸಿಹಿ ತಿನ್ನಿಸಿ, ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಸಮ್ಮುಖದಲ್ಲಿ ವೈಭವದ ಶ್ರೀರಂಗಪಟ್ಟಣ ದಸರಾ ಆರಂಭಗೊಂಡಿತು. ಅದ್ಧೂರಿ ದಸರಾಗೆ ರಾಜ್ಯ ಸರ್ಕಾರ 2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇದರಿಂದ ಈ ಬಾರಿ ದಸರಾ ಅದ್ಧೂರಿಯಾಗಿ ನಡೆಯುತ್ತಿದ್ದು, ಅಭಿಮನ್ಯುಗೆ ಸ್ಥಳೀಯ ಕಲಾವಿದರ ವಿವಿಧ ಕಲಾ ತಂಡಗಳು ಸಾಥ್ ನೀಡಿದವು. ಪಟ ಕುಣಿತ, ಡೊಳ್ಳು ಕುಣಿತ, ಕಂಸಾಳೆ ಸೇರಿದಂತೆ ಹಲವು ಕಲಾ ತಂಡಗಳು ದಸರಾ ಮೆರವಣಿಗೆಗೆ ಮೆರುಗು ನೀಡಿದವು.

ವೈಭವದ ಶ್ರೀರಂಗಪಟ್ಟಣ ದಸರಾಗೆ ಚಾಲನೆ

ಇನ್ನು ಶ್ರೀರಂಗಪಟ್ಟಣ ದಸರಾವನ್ನು ಮುಂದಿನ ವರ್ಷದಿಂದ ಯಾವುದೇ ಅಡೆತಡೆ ಇಲ್ಲದೆ ನಡೆಸಿಕೊಂಡು ಹೋಗಲು ನಿರ್ಧಾರ ಮಾಡಲಾಗಿದೆ. ವೇದಿಕೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಎರಡು ಎಕರೆ ಜಮೀನು ವಶಕ್ಕೆ ಪಡೆದು ಕಾರ್ಯಕ್ರಮ ರೂಪಿಸಲು ನಿರ್ಧಾರ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.

ಮಂಡ್ಯ: ಇಂದು ಶ್ರೀರಂಗಪಟ್ಟಣ ದಸರಾಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಂದಿ ಪೂಜೆ ನೆರವೇರಿಸಿ ಅಂಬಾರಿ ಹೊತ್ತ ಅಭಿಮನ್ಯುಗೆ ಸಿಹಿ ತಿನ್ನಿಸಿ, ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಸಮ್ಮುಖದಲ್ಲಿ ವೈಭವದ ಶ್ರೀರಂಗಪಟ್ಟಣ ದಸರಾ ಆರಂಭಗೊಂಡಿತು. ಅದ್ಧೂರಿ ದಸರಾಗೆ ರಾಜ್ಯ ಸರ್ಕಾರ 2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇದರಿಂದ ಈ ಬಾರಿ ದಸರಾ ಅದ್ಧೂರಿಯಾಗಿ ನಡೆಯುತ್ತಿದ್ದು, ಅಭಿಮನ್ಯುಗೆ ಸ್ಥಳೀಯ ಕಲಾವಿದರ ವಿವಿಧ ಕಲಾ ತಂಡಗಳು ಸಾಥ್ ನೀಡಿದವು. ಪಟ ಕುಣಿತ, ಡೊಳ್ಳು ಕುಣಿತ, ಕಂಸಾಳೆ ಸೇರಿದಂತೆ ಹಲವು ಕಲಾ ತಂಡಗಳು ದಸರಾ ಮೆರವಣಿಗೆಗೆ ಮೆರುಗು ನೀಡಿದವು.

ವೈಭವದ ಶ್ರೀರಂಗಪಟ್ಟಣ ದಸರಾಗೆ ಚಾಲನೆ

ಇನ್ನು ಶ್ರೀರಂಗಪಟ್ಟಣ ದಸರಾವನ್ನು ಮುಂದಿನ ವರ್ಷದಿಂದ ಯಾವುದೇ ಅಡೆತಡೆ ಇಲ್ಲದೆ ನಡೆಸಿಕೊಂಡು ಹೋಗಲು ನಿರ್ಧಾರ ಮಾಡಲಾಗಿದೆ. ವೇದಿಕೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಎರಡು ಎಕರೆ ಜಮೀನು ವಶಕ್ಕೆ ಪಡೆದು ಕಾರ್ಯಕ್ರಮ ರೂಪಿಸಲು ನಿರ್ಧಾರ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.

Intro:ಮಂಡ್ಯ: ಮೈಸೂರು ದಸರಾದಷ್ಟೆ ವೈಭವ ನಮ್ಮ ಶ್ರೀರಂಗಪಟ್ಟಣ ದಸರಾ. ಜಂಬೂ ಸವಾರಿಯ ವೈಭವದ ಮೆರವಣಿಗೆಗೆ ಮೆರಗು ನೀಡಿದ್ದು ಕಲಾ ತಂಡಗಳು. ಸ್ಥಳೀಯ ಪ್ರತಿಭೆಗಳ ಜೊತೆಗೆ ಗಮನ ಸೆಳೆದವು ಟ್ಯಾಬ್ಲೋಗಳು. ಹಾಗಾದರೆ ಶ್ರೀರಂಗಪಟ್ಟಣ ದಸರಾದ ವೈಭವ ಇಲ್ಲಿದೆ ನೋಡಿ.


Body:ನಿಮ್ಗೆಲ್ಲಾ ಮೈಸೂರು ದಸರಾದ ಜಂಬೂ ಸವಾರಿ ಗೊತ್ತು. ಇದೇ ರೀತಿಯ ಜಂಬೂ ಸವಾರಿ ನಮ್ಮ ಮಂಡ್ಯದಲ್ಲೂ ನಡೆಯುತ್ತೆ. ತಾಯಿ ಚಾಮುಂಡೇಶ್ವರಿಯ ಅಂಬಾರಿ ಹೊತ್ತ ಅಭಿಮಾನ್ಯು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುವ ಆ ದೃಶ್ಯ ಮೈಸೂರು ದಸರಾವನ್ನು ಕಣ್ಣ ಮುಂದೆ ತಂದು ನಿಲ್ಲಿಸಿತು‌.

ಹೌದು, ಇಂದು ಶ್ರೀರಂಗಪಟ್ಟಣ ದಸರಾಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಂದಿ ಪೂಜೆ ನೆರವೇರಿಸಿ ಅಂಬಾರಿ ಹೊತ್ತ ಅಭಿಮನ್ಯು ಗೆ ಸಿಹಿ ತನ್ನಿಸಿ, ತಾಯಿ ಚಾಮುಂಡೇಶ್ವರಿ ಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಸಮ್ಮುಖದಲ್ಲಿ ನಡೆದ ವೈಭವದ ಶ್ರೀರಂಗಪಟ್ಟಣ ದಸರಾ ಆರಂಭಗೊಂಡಿದೆ.

ಬೈಟ್: ಭಾನು ಪ್ರಕಾಶ್ ಶರ್ಮ, ಪುರೋಹಿತರು.

ಅದ್ದೂರಿ ದಸರಾಗೆ ರಾಜ್ಯ ಸರ್ಕಾರ 2 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದೆ. ಇದರಿಂದ ಈ ಬಾರಿ ದಸರಾ ಅದ್ದೂರಿಯಾಗಿ ನಡೆಯುತ್ತಿದ್ದು, ಅಭಿಮನ್ಯು ಗೆ ಸ್ಥಳೀಯ ಕಲಾವಿದರ ವಿವಿಧ ಕಲಾ ತಂಡಗಳು ಸಾಥ್ ನೀಡಿದವು. ಪಟ ಕುಣಿತ, ಡೊಳ್ಳು ಕುಣಿತ, ಕಂಸಾಳೆ ಸೇರಿದಂತೆ ಹಲವು ಕಲಾ ತಂಡಗಳು ದಸರಾ ಮೆರವಣಿಗೆಗೆ ಜೀವ ತುಂಬಿದವು.

ಪ್ಲೋ...
ಇನ್ನು ಶ್ರೀರಂಗಪಟ್ಟಣ ದಸರಾವನ್ನೂ ಮುಂದಿನ ವರ್ಷದಿಂದ ಯಾವುದೇ ಅಡೆತಡೆ ಇಲ್ಲದೆ ನಡೆಸಿಕೊಂಡು ಹೋಗಲು ನಿರ್ಧಾರ ಮಾಡಲಾಗಿದೆ. ವೇದಿಕೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಎರಡು ಎಕರೆ ಜಮೀನು ವಶಕ್ಕೆ ಪಡೆದು ಕಾರ್ಯಕ್ರಮ ರೂಪಿಸಲು ನಿರ್ಧಾರ ಮಾಡಿದೆ.

ಬೈಟ್: ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ.

ಮೂರು ದಿನಗಳ ಶ್ರೀರಂಗಪಟ್ಟಣ ದಸರಾಗೆ ಚಾಲನೆ ದೊರಕಿದೆ. ಪ್ರತಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀರಂಗ ಮಂಟಪದಲ್ಲಿ ನಡೆಯಲಿದ್ದು, ರಸಮಂಜರಿಯ ಔತಣವೂ ಜನರಿಗೆ ಸಿಗಲಿದೆ.

ಯತೀಶ್ ಬಾಬು, ಮಂಡ್ಯ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.