ETV Bharat / state

ಕಾಮಾಟಿಪುರ ನೆನಪಿಸಿದ ತಮ್ಮಣ್ಣ: ಕೆ ಆರ್​ ಪೇಟೆಯಲ್ಲಿ ಕಿಡಿ ಹೊತ್ತಿಸಿದ ಮಾಜಿ ಸಚಿವ

author img

By

Published : Nov 28, 2019, 1:36 PM IST

ಜೆಡಿಎಸ್​ ಅಭ್ಯರ್ಥಿ ಪರ ಕಿಕ್ಕೇರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಡಿ ಸಿ ತಮ್ಮಣ್ಣ ಅವರು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸಿದರೆ, ಅವರು ಕೆ ಆರ್​ ಪೇಟೆಯನ್ನು ಮುಂಬೈನ ಕಾಮಾಟಿಪುರ ಮಾಡ್ತಾರೆ ಅಷ್ಟೇ ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

DC Thammanna statement that embarrasses the party
ಕಿಡಿಹೊತ್ತಿಸಿದ ಮಾಜಿ ಸಚಿವ

ಮಂಡ್ಯ: ಕೆ ಆರ್​ ಪೇಟೆ ಕದನ ಕಣ ರಂಗೇರಿದ್ದು, ಆರೋಪ, ಪ್ರತ್ಯರೋಪಗಳು ಜೋರಾಗಿವೆ. ಪ್ರಚಾರ ಅಬ್ಬರದಲ್ಲಿ ಜೆಡಿಎಸ್​ನ ಶಾಸಕ, ಮಾಜಿ ಸಚಿವ ಡಿ ಸಿ ತಮ್ಮಣ್ಣ ವಿವಾದಾತ್ಮಕ ಹೇಳಿಕೆ ಮೂಲಕ ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದಾರೆ.

ಕಿಡಿಹೊತ್ತಿಸಿದ ಮಾಜಿ ಸಚಿವ

ಹೌದು, ಬುಧವಾರ ಜೆಡಿಎಸ್​ ಅಭ್ಯರ್ಥಿ ಪರ ಕಿಕ್ಕೇರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಡಿ ಸಿ ತಮ್ಮಣ್ಣ ಅವರು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸಿದರೆ, ಅವರು ಕೆ ಆರ್​ ಪೇಟೆಯನ್ನು ಮುಂಬೈನ ಕಾಮಾಟಿಪುರ ಮಾಡ್ತಾರೆ ಅಷ್ಟೇ ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. ಮಾಜಿ ಸಚಿವ ಮತ್ತು ದೇವೇಗೌಡರ ಸಂಬಂಧಿಯೂ ಆಗಿರುವ ಆಗಿರುವ ಡಿ.ಸಿ. ತಮ್ಮಣ್ಣರ ಈ ಹೇಳಿಕೆ ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.

ಏನಿದು ಕಾಮಾಟಿಪುರ? : ಬೈನ ಕಾಮಾಟಿಪುರ ರೆಡ್​ ಲೈಟ್ ಏರಿಯಾ ಆಗಿದ್ದು, ಇದು ಪರವಾನಿಗೆ ಹೊಂದಿದ ವೇಶ್ಯಾವಾಟಿಕೆ ಸ್ಥಳವಾಗಿದೆ. ವೇಶ್ಯಾವಾಟಿಕೆ ಸ್ಥಳಕ್ಕೂ ಕೆ.ಆರ್.ಪೇಟೆಗೂ ಏನೂ ನಂಟು ಎಂಬುದೇ ಇಲ್ಲಿಯ ಪ್ರಶ್ನೆಯಾಗಿದೆ.

ಇನ್ನು, ಡಿ ಸಿ ತಮ್ಮಣ್ಣ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ನಾರಾಯಣಗೌಡ ಗರಂ ಆಗಿದ್ದಾರೆ. ತಮ್ಮಣ್ಣ ಮೊದಲು ಕ್ಷೇತ್ರದ ಮಹಿಳೆಯರ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ. ಕಾಮಾಟಿಪುರದ ಅನುಭವ ಇರುವುದರಿಂದಲೇ ತಮ್ಮಣ್ಣ ಇಂತಹ ಮಾತುಗಳನ್ನು ಆಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಮುಂಬೈನ ಕಾಮಾಟಿಪುರ ಉಪ ಚುನಾವಣೆಯಲ್ಲಿ ಚರ್ಚೆಗೆ ಬಂದಿದೆ. ಮತದಾರರ ಜೊತೆಗೆ ಮಹಿಳೆಯರೂ ಈ ವಿಚಾರವಾಗಿ ಗರಂ ಆಗಿದ್ದಾರೆ. ಡಿ ಸಿ ತಮ್ಮಣ್ಣರ ಈ ಹೇಳಿಕೆ ಜೆಡಿಎಸ್​ಗೂ ನುಂಗಲಾರದ ತುತ್ತಾಗಿದೆ.

ಮಂಡ್ಯ: ಕೆ ಆರ್​ ಪೇಟೆ ಕದನ ಕಣ ರಂಗೇರಿದ್ದು, ಆರೋಪ, ಪ್ರತ್ಯರೋಪಗಳು ಜೋರಾಗಿವೆ. ಪ್ರಚಾರ ಅಬ್ಬರದಲ್ಲಿ ಜೆಡಿಎಸ್​ನ ಶಾಸಕ, ಮಾಜಿ ಸಚಿವ ಡಿ ಸಿ ತಮ್ಮಣ್ಣ ವಿವಾದಾತ್ಮಕ ಹೇಳಿಕೆ ಮೂಲಕ ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದಾರೆ.

ಕಿಡಿಹೊತ್ತಿಸಿದ ಮಾಜಿ ಸಚಿವ

ಹೌದು, ಬುಧವಾರ ಜೆಡಿಎಸ್​ ಅಭ್ಯರ್ಥಿ ಪರ ಕಿಕ್ಕೇರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಡಿ ಸಿ ತಮ್ಮಣ್ಣ ಅವರು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸಿದರೆ, ಅವರು ಕೆ ಆರ್​ ಪೇಟೆಯನ್ನು ಮುಂಬೈನ ಕಾಮಾಟಿಪುರ ಮಾಡ್ತಾರೆ ಅಷ್ಟೇ ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. ಮಾಜಿ ಸಚಿವ ಮತ್ತು ದೇವೇಗೌಡರ ಸಂಬಂಧಿಯೂ ಆಗಿರುವ ಆಗಿರುವ ಡಿ.ಸಿ. ತಮ್ಮಣ್ಣರ ಈ ಹೇಳಿಕೆ ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.

ಏನಿದು ಕಾಮಾಟಿಪುರ? : ಬೈನ ಕಾಮಾಟಿಪುರ ರೆಡ್​ ಲೈಟ್ ಏರಿಯಾ ಆಗಿದ್ದು, ಇದು ಪರವಾನಿಗೆ ಹೊಂದಿದ ವೇಶ್ಯಾವಾಟಿಕೆ ಸ್ಥಳವಾಗಿದೆ. ವೇಶ್ಯಾವಾಟಿಕೆ ಸ್ಥಳಕ್ಕೂ ಕೆ.ಆರ್.ಪೇಟೆಗೂ ಏನೂ ನಂಟು ಎಂಬುದೇ ಇಲ್ಲಿಯ ಪ್ರಶ್ನೆಯಾಗಿದೆ.

ಇನ್ನು, ಡಿ ಸಿ ತಮ್ಮಣ್ಣ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ನಾರಾಯಣಗೌಡ ಗರಂ ಆಗಿದ್ದಾರೆ. ತಮ್ಮಣ್ಣ ಮೊದಲು ಕ್ಷೇತ್ರದ ಮಹಿಳೆಯರ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ. ಕಾಮಾಟಿಪುರದ ಅನುಭವ ಇರುವುದರಿಂದಲೇ ತಮ್ಮಣ್ಣ ಇಂತಹ ಮಾತುಗಳನ್ನು ಆಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಮುಂಬೈನ ಕಾಮಾಟಿಪುರ ಉಪ ಚುನಾವಣೆಯಲ್ಲಿ ಚರ್ಚೆಗೆ ಬಂದಿದೆ. ಮತದಾರರ ಜೊತೆಗೆ ಮಹಿಳೆಯರೂ ಈ ವಿಚಾರವಾಗಿ ಗರಂ ಆಗಿದ್ದಾರೆ. ಡಿ ಸಿ ತಮ್ಮಣ್ಣರ ಈ ಹೇಳಿಕೆ ಜೆಡಿಎಸ್​ಗೂ ನುಂಗಲಾರದ ತುತ್ತಾಗಿದೆ.

Intro:ಮಂಡ್ಯ: ಮುಂಬೈನ ಕಾಮಾಟಿಪುರಕ್ಕೂ, ಕೆ.ಆರ್.ಪೇಟೆ ಉಪ ಚುನಾವಣೆಗೂ ಎತ್ತಣದೆತ್ತಣ ಸಂಬಂಧ. ಆದರೂ ಈ ಕಾಮಾಟಿಪುರದ ಚರ್ಚೆ ಈ ಚುನಾವಣೆಯಲ್ಲಿ ಚರ್ಚೆಗೆ ಬಂದಿದೆ. ಅದೂ ಮಾಜಿ ಸಚಿವರೂ, ದೇವೇಗೌಡರ ಕುಟುಂಬದ ಸದಸ್ಯರೂ ಆದ ಡಿ.ಸಿ. ತಮ್ಮಣ್ಣ ಹೇಳಿದ ಆ ಮಾತು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ಅವರು ಹೇಳಿದ್ದು ಏನು, ಏನೆಲ್ಲಾ ಚರ್ಚೆ ನಡೆಯುತ್ತಿದೆ, ಡಿ.ಸಿ. ತಮ್ಮಣ್ಣ ಯಾಕೆ ಮಹಿಳೆಯರ ಕ್ಷಮೆ ಕೋರಬೇಕು ಎಂದು ಬಿಜೆಪಿ ಅಭ್ಯರ್ಥಿ ಹೇಳಿದರು ಎಂಬುದರ ಸಂಪೂರ್ಣ ವರದಿ ಇಲ್ಲಿದೆ ನೋಡಿ.

ಕಾಮಾಟಿಪುರ ಮುಂಬೈನ ಪರವಾನಗಿ ಹೊಂದಿದ ದೇಶದ ವೇಶ್ಯವಾಟಿಕೆ ಸ್ಥಳ. ವೇಶ್ಯಿವಾಟಿಕೆ ಸ್ಥಳಕ್ಕೂ ಕೆ.ಆರ್.ಪೇಟೆಗೂ ಏನೂ ನಂಟು ಎಂಬುದೇ ಇಲ್ಲಿಯ ಪ್ರಶ್ನೆ. ಯಾಕೆಂದರೆ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸದಸ್ಯರಾಗಿರುವ ಡಿ.ಸಿ. ತಮ್ಮಣ್ಣರ ಆ ಮಾತು ಕ್ಷೇತ್ರದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಕೆ.ಆರ್.ಪೇಟೆಯನ್ನು ಮತ್ತೊಂದು ಕಾಮಾಟಿಪುರ ಮಾಡ್ತಾರೆ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದು, ಇದು ಚರ್ಚೆಯ ಜೊತೆಗೆ ಕ್ಷೇತ್ರದ ಜನರ ಆಕ್ರೋಶಕ್ಕೂ ಕಾರಣವಾಗಿದೆ. ಕಿಕ್ಕೇರಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಹೀಗೆ ಹೇಳಿದ್ದು, ಈ ಮಾತು ಜೆಡಿಎಸ್ ಗೂ ನುಂಗಲಾರದ ತುತ್ತಾಗಿದೆ.

ಬೈಟ್: ಡಿ.ಸಿ. ತಮ್ಮಣ್ಣ, ಮಾಜಿ ಸಚಿವರ.

ಮಾಜಿ ಸಚಿವರ ಈ ಆರೋಪಕ್ಕೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗರಂ ಆಗಿದ್ದಾರೆ. ತಮ್ಮಣ್ಣ ಮೊದಲು ಕ್ಷೇತ್ರ ಮಹಿಳೆಯರ ಕ್ಷಮೆ ಕೋರಬೇಕು ಎಂದು ಆಗ್ರಹ ಮಾಡಿದ್ದಾರೆ. ಜೊತೆಗೆ ಅವರ ಅಳಿಯ ಮುಂಬೈಗೆ ಬಂದಾಗ ನನ್ನ ಹೋಟೆಲ್ ನಲ್ಲೇ ಉಳಿದುಕೊಳ್ಳುತ್ತಾರೆ. ಅವರನ್ನು ಕೇಳಿ ತಿಳಿಯಲಿ, ಯಾರು ಕಾಮಾಟಿಪುರಕ್ಕೆ ಹೋಗುತ್ತಾರೋ ಅವರು ಈ ಬಗ್ಗೆ ಮಾತನಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೈಟ್: ನಾರಾಯಣಗೌಡ, ಬಿಜೆಪಿ ಅಭ್ಯರ್ಥಿ.

ಮುಂಬೈನ ಕಾಮಾಟಿಪುರ ಉಪ ಚುನಾವಣೆಯಲ್ಲಿ ಚರ್ಚೆಗೆ ಬಂದಿದೆ. ಮತದಾರರ ಜೊತೆಗೆ ಮಹಿಳೆಯರೂ ಈ ವಿಚಾರವಾಗಿ ಗರಂ ಆಗಿದ್ದಾರೆ. ಇದಕ್ಕೆ ಮತದಾನದ ದಿನ ಯಾವ ರೀತಿ ಉತ್ತರ ಕೊಡ್ತಾರೋ ಕಾದು ನೋಡಬೇಕಾಗಿದೆ.


(ಸರ್ ಇದಕ್ಕೆ ನಿನ್ನೆಯ ಜೆಡಿಎಸ್ ಸಮಾವೇಶದ ವಿಡಿಯೋ ಹಾಕಿಕೊಳ್ಳಿ ಸರ್)Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.