ETV Bharat / state

ಕಣ್ಣೀರಲ್ಲೇ ಕೈ ತೊಳೆಯುತ್ತಿದೆ ಕನಕಾಂಬರ ಹೂ ಬೆಳೆದಿದ್ದ ರೈತರ ಕುಟುಂಬ - ಮಂಡ್ಯ ಹೂ ಬೆಳೆಗಾರರ ಸಮಸ್ಯೆ

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದಲ್ಲಿ ಸುಮಾರು 40 ಕುಟುಂಬಗಳು ಕಳೆದೆರಡು ವರ್ಷಗಳಿಂದ ಹೂವನ್ನೇ ಬೆಳೆದು ಜೀವನ ನಡೆಸುತ್ತಿದ್ದರು.‌ ಆದ್ರೆ ಕೋವಿಡ್​ ಇವರನ್ನು ಸಂಕಷ್ಟಕ್ಕೆ ದೂಡಿದೆ.

covid lock down effects on mandya farmers
ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಮಾರ್ಗಾನುಕುಂಟೆ ವ್ಯಾಪ್ತಿಯ ಮಾಡಪ್ಪಲ್ಲಿ ಗ್ರಾಮದಲ್ಲಿಬೇಸಿಗೆಯ ರಣಬಿಸಿಲು ದಿನದಿಂದ ದಿನಕ್ಕೆ ತೀವ್ರವಾಗತೊಡಗಿದ್ದು, ಕುಡಿಯುವ ನೀರಿಗೆ ತಾತ್ವಾರವಾಗುತ್ತಿರುವುದರ ಜೊತೆಯಲ್ಲೆ ರಾಸುಗಳ ಹಸಿರು ಮೇವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಸಿರು ಮೇವು ಖರೀದಿ ಮಾಡಲಿಕ್ಕೆ ಸಾಧ್ಯವಾಗದೆ ಪರದಾಡುವಂತಹ ಪರಿಸ್ಥಿತಿ ಗ್ರಾಮಗಳಲ್ಲಿ ನಿರ್ಮಾಣವಾಗಿದೆ.'ಈ ಭಾಗದಲ್ಲಿ ಕಳೆದ ಮಳೆಗಾಲದಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗಿಲ್ಲ, ಕೆರೆ, ಕುಂಟೆಗಳಲ್ಲಿ ಒಂದು ಹನಿ ನೀರಿಲ್ಲ. ಕೊಳವೆಬಾವಿಗಳಲ್ಲಿ ಅಂತರ್ಜಲದ ಮಟ್ಟ 1500 ಅಡಿಗಳಿಗೆ ಕುಸಿದಿದೆ. ಕುಡಿಯುವ ನೀರಿಗಾಗಿ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿರುವ ಸಂದಿಗ್ಧ ಪರಿಸ್ಥಿತಿ ಬಂದಿದೆ. ಸಾಲ ಮಾಡಿ ಕೊಳವೆಬಾವಿ ಕೊರೆಯಿಸಿದರೂ ಸಿಗುತ್ತಿರುವ ನೀರು ಇಷ್ಟೇ ದಿನ ಬರುತ್ತವೆ ಎಂದು ಹೇಳಲಿಕ್ಕೆ ಸಾಧ್ಯವಾಗುತ್ತಿಲ್ಲ. ಇದ್ದ ಅಲ್ಪಸ್ವಲ್ಪ ನೀರಿನಲ್ಲಿ ಮೇವಿನ ಬೆಳೆಗಳನ್ನಾದರೂ ಬೆಳೆದುಕೊಳ್ಳೋಣ ಅಂದರೆ, ಇತ್ತೀಚೆಗೆ ಕೊಳವೆಬಾವಿಗಳಲ್ಲೂ ನೀರು ಬತ್ತಿಹೋಗುತ್ತಿವೆ.ನಾವು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ರಾಸುಗಳಿಗೆ ಹಸಿರು ಮೇವು ಪೂರೈಕೆ ಮಾಡುವುದು ಸವಾಲಿನ ಕೆಲಸವಾಗಿದೆ' ಎಂದು ಮಾಡಪ್ಪಲ್ಲಿ ರೈತ ನರಸಿಂಹಮೂರ್ತಿ ಆತಂಕ ವ್ಯಕ್ತಪಡಿಸಿದರು.ಮಾಡಪ್ಪಲ್ಲಿ ರೈತ ಗೋಪಾಲಪ್ಪ ಮಾತನಾಡಿ, 'ಕಳೆದ ವರ್ಷ ಬಾರಿ ಮಳೆ ಬಿದ್ದಿತ್ತು. ರಾಗಿ ಬೆಳೆಗಳು ಚೆನ್ನಾಗಿ ಆಗಿದ್ದರೂ ಹಸಿರು ಮೇವಿನ ಕೊರತೆ ನೀಗಿಸಲಿಕ್ಕೆ ಕಷ್ಟವಾಗುತ್ತಿದೆ. ಈ ಬೇಸಿಗೆಯಲ್ಲಿ ಹಸಿರು ಮೇವು ಕೊಡಲೇ ಬೇಕು. ಇಲ್ಲವಾದರೆ ಹಸುಗಳು ಸುಸ್ತಾಗಿ ಬಿಡ್ತಾವೆ. ಹಾಲಿನ ಉತ್ಪಾದನೆಯೂ ಕಡಿಮೆಯಾಗಿ ಬಿಡುತ್ತದೆ. ಹಾಲಿನ ಉತ್ಪಾದನೆ ಕಡಿಮೆಯಾದರೆ ಮತ್ತೊಮ್ಮೆ ಉತ್ಪಾದನೆ ಹೆಚ್ಚು ಮಾಡಿಕೊಳ್ಳಬಹುದು. ರಾಸುಗಳು ಅನಾರೋಗ್ಯಕ್ಕೆ ಒಳಗಾದರೆ ನಷ್ಟ ಅನುಭವಿಸಬೇಕಾಗುತ್ತದೆ' ಎಂದು ಆತಂಕ ವ್ಯಕ್ತಪಡಿಸಿದರು.'ಕಳೆದ ವರ್ಷ ಹೊಲಗಳಲ್ಲಿ ಅವರೆ, ಮುಸುಕಿನಜೋಳದಂತಹ ಮೇವಿನ ಬೆಳೆಗಳೂ ಆಗಿದ್ದು ಕಡಿಮೆ. ಆದ್ದರಿಂದ ಉತ್ತಮವಾಗಿ ಮಳೆಗಳಾಗಿರುವ ಗೌರಿಬಿದನೂರು, ಹಿಂದೂಪುರ, ಚೇಳೂರು ಮುಂತಾದ ಕಡೆಗಳಿಗೆ ಹೋಗಿ ಹಸಿರು ಮೇವು ಖರೀದಿ ಮಾಡಿಕೊಂಡು ಬರುತಿದ್ದೇವೆ' ಎಂದರು.
author img

By

Published : May 20, 2021, 11:05 AM IST

Updated : May 20, 2021, 11:14 AM IST

ಮಂಡ್ಯ: ಲಕ್ಷ ಲಕ್ಷ ಎಣಿಸುವ ಕನಸು ಕಂಡಿದ್ದ ಅನ್ನದಾತನ ಆಸೆ ಕಮರಿದೆ.‌ ಕಳೆದೆರಡು ವರ್ಷಗಳಿಂದ ವಿಭಿನ್ನ ಪ್ರಯೋಗದ ಮೂಲಕ ಕನಕಾಂಬರ ಹೂ ಬೆಳೆದಿದ್ದ ರೈತರ ಕಟುಂಬ ಇದೀಗ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಪರಿಹಾರವೇನೋ ಘೋಷಣೆಯಾಗಿದೆ. ಆದ್ರೆ ಹಾಕಿದ ಬಂಡವಾಳದಷ್ಟು ಹಣ ಸಿಗುವುದಿಲ್ಲವಲ್ಲ ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿದೆ.

ಸಕ್ಕರೆ ನಾಡು ಮಂಡ್ಯ ಅಂದರೆ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ ನೆನಪಾಗುವುದು ಸಾಮಾನ್ಯ. ಆದರೆ ಈ ನೆಲದಲ್ಲಿ ಕಬ್ಬು ಮತ್ತು ಭತ್ತ ಮಾತ್ರವಲ್ಲ ಹೂವನ್ನು ಕೂಡ ಬೆಳೆಯಬಹುದು ಎಂದು ತೊರಿಸಿಕೊಟ್ಟಿದ್ದಾರೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದ ರೈತರು. ಆದರೆ ಕೊರೊನಾ ಪರಿಣಾಮ ರೈತರಿಗೆ ಹೂವಿನ ಬೆಳೆಯಲ್ಲಿ ನಷ್ಟವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಕನಕಾಂಬರ ಹೂ ಬೆಳೆದಿದ್ದ ರೈತರ ಸಂಕಷ್ಟ

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದಲ್ಲಿ ಸುಮಾರು 40 ಕುಟುಂಬಗಳು ಕಳೆದೆರಡು ವರ್ಷಗಳಿಂದ ಹೂವನ್ನೇ ಬೆಳೆದು ಜೀವನ ನಡೆಸುತ್ತಿದ್ದರು.‌ ಹೇಗೋ ಸಾಲ ಮಾಡಿ ಸುಮಾರು 20 ಎಕರೆ ಪ್ರದೇಶದಲ್ಲಿ ಕನಕಾಂಬರ ಹೂ ಬೆಳೆದಿದ್ದರು. ಆದರೆ ಕಳೆದ ವರ್ಷ ಇನ್ನೇನು ಬೆಳೆದ ಹೂವು ಕೈಗೆ ಬಂದು ಸಾಲ ತೀರಿಸಬೇಕು ಎನ್ನುವಷ್ಟರಲ್ಲಿ ಕೊರೊನಾ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.

ಇನ್ನೂ ಈ ಬಾರಿಯೂ ಎಲ್ಲಾ ಶುಭ ಕಾರ್ಯಗಳು ಪ್ರಾರಂಭವಾಗುತ್ತಿದ್ದಂತೆ ಒಂದೊಂದು ಕುಟುಂಬದವರು ಸುಮಾರು 2 ಲಕ್ಷ ರೂ. ಸಾಲ ಮಾಡಿ ಹೂವು ಬೆಳೆದಿದ್ದರು. ಕೊರೊನಾ ಎರಡನೇ ಅಲೆಯಿಂದ ಇದೀಗ ರೈತರು ಬೆಳೆದ ಹೂವುಗಳನ್ನು ಕೊಳ್ಳುವವರಿಲ್ಲದೆ ತಿಪ್ಪೆಗೆ ಎಸೆಯುತ್ತಿದ್ದಾರೆ. ನಿತ್ಯ 25 ಸಾವಿರದಷ್ಟು ಆದಾಯ ಕೊಡುತ್ತಿದ್ದ ಹೂಗಳು ಬಾಡುತ್ತಿವೆ. ಕೂಲಿ ಕಾರ್ಮಿಕರ ಖರ್ಚು ವೆಚ್ಚ ಕಳೆದು 10 ಸಾವಿರದಷ್ಟು ಉಳಿಕೆ ಆಗುತ್ತಿದ್ದ ಅನ್ನದಾತ ಸದ್ಯ ದಿಕ್ಕು ತೋಚದೆ ಕಂಗಾಲಾಗಿದ್ದಾನೆ.

ಕೋವಿಡ್​ ಪರಿಣಾಮ ದೇಶಾದ್ಯಂತ ಲಾಕ್‌ಡೌನ್‌ನಿಂದಾಗಿ ದೇವಾಲಯ, ಮದುವೆ, ಶುಭ ಕಾರ್ಯಗಳಿಗೆ ಬಳಕೆ ಆಗುತ್ತಿದ್ದ ಕನಕಾಂಬರ ಹೂ ಹೆಚ್ಚಾಗಿ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿಗೆ ರಫ್ತು ಆಗುತ್ತಿತ್ತು. ಹೂ ಬೆಳೆದರೆ ಬದುಕು ಕಟ್ಟಿಕೊಳ್ಳಬಹುದು ಎನ್ನುವಷ್ಟರಲ್ಲಿ ಪುನಃ ಕೋವಿಡ್​ ಶಾಕ್​ ನೀಡಿ ಲಾಕ್‌ಡೌನ್ ಜಾರಿಗೆ ಬಂದಿದೆ. ಯಾವ ಶುಭಕಾರ್ಯಗಳು ಕೂಡ ನಡೆಯದೇ ಇದ್ದುದ್ದರಿಂದ ಅನ್ನದಾತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಅಳಲು ತೋಡಿಕೊಂಡಿದ್ದೇವೆ.

ಇದನ್ನೂ ಓದಿ: ಲಾಕ್​ಡೌನ್ ನಡುವೆಯೂ ಹೋಟೆಲ್​ನಲ್ಲಿ ಜೂಜಾಟ: 27 ಜನರ ಬಂಧನ

ನಿನ್ನೆ ಹಣ್ಣು, ತರಕಾರಿ, ಹೂವು ಬೆಳೆಗಾರರಿಗೆ ಸರ್ಕಾರ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂಪಾಯಿಯಂತೆ ಸಹಾಯಧನ ಘೋಷಿಸಿದ್ದು, ಇದಕ್ಕೆ 70 ಕೋಟಿ ರೂ. ಮೀಸಲಿಡಲಾಗಿದೆ. ಆದ್ರೆ ಹೂಡಿದ ಬಂಡವಾಳ ನಮ್ಮ ಕೈ ಸೇರುವುದಿಲ್ಲ ಎನ್ನುವ ಆತಂಕ ರೈತರಲ್ಲಿದೆ. ಇನ್ನೂ ಕಳೆದ ಬಾರಿ ಘೋಷಿಸಿದ ಪರಿಹಾರ ಕೂಡ ನಮ್ಮ ಕೈಸೇರಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಈ ಬಾರಿ ಸಹಾಯಧನ ರೈತರ ಕೈ ಸೇರಿದರೆ ಒಂದಿಷ್ಟು ಸಮಸ್ಯೆಯಾದರೂ ಪರಿಹಾರವಾದೀತು.

ಮಂಡ್ಯ: ಲಕ್ಷ ಲಕ್ಷ ಎಣಿಸುವ ಕನಸು ಕಂಡಿದ್ದ ಅನ್ನದಾತನ ಆಸೆ ಕಮರಿದೆ.‌ ಕಳೆದೆರಡು ವರ್ಷಗಳಿಂದ ವಿಭಿನ್ನ ಪ್ರಯೋಗದ ಮೂಲಕ ಕನಕಾಂಬರ ಹೂ ಬೆಳೆದಿದ್ದ ರೈತರ ಕಟುಂಬ ಇದೀಗ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಪರಿಹಾರವೇನೋ ಘೋಷಣೆಯಾಗಿದೆ. ಆದ್ರೆ ಹಾಕಿದ ಬಂಡವಾಳದಷ್ಟು ಹಣ ಸಿಗುವುದಿಲ್ಲವಲ್ಲ ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿದೆ.

ಸಕ್ಕರೆ ನಾಡು ಮಂಡ್ಯ ಅಂದರೆ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ ನೆನಪಾಗುವುದು ಸಾಮಾನ್ಯ. ಆದರೆ ಈ ನೆಲದಲ್ಲಿ ಕಬ್ಬು ಮತ್ತು ಭತ್ತ ಮಾತ್ರವಲ್ಲ ಹೂವನ್ನು ಕೂಡ ಬೆಳೆಯಬಹುದು ಎಂದು ತೊರಿಸಿಕೊಟ್ಟಿದ್ದಾರೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದ ರೈತರು. ಆದರೆ ಕೊರೊನಾ ಪರಿಣಾಮ ರೈತರಿಗೆ ಹೂವಿನ ಬೆಳೆಯಲ್ಲಿ ನಷ್ಟವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಕನಕಾಂಬರ ಹೂ ಬೆಳೆದಿದ್ದ ರೈತರ ಸಂಕಷ್ಟ

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದಲ್ಲಿ ಸುಮಾರು 40 ಕುಟುಂಬಗಳು ಕಳೆದೆರಡು ವರ್ಷಗಳಿಂದ ಹೂವನ್ನೇ ಬೆಳೆದು ಜೀವನ ನಡೆಸುತ್ತಿದ್ದರು.‌ ಹೇಗೋ ಸಾಲ ಮಾಡಿ ಸುಮಾರು 20 ಎಕರೆ ಪ್ರದೇಶದಲ್ಲಿ ಕನಕಾಂಬರ ಹೂ ಬೆಳೆದಿದ್ದರು. ಆದರೆ ಕಳೆದ ವರ್ಷ ಇನ್ನೇನು ಬೆಳೆದ ಹೂವು ಕೈಗೆ ಬಂದು ಸಾಲ ತೀರಿಸಬೇಕು ಎನ್ನುವಷ್ಟರಲ್ಲಿ ಕೊರೊನಾ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.

ಇನ್ನೂ ಈ ಬಾರಿಯೂ ಎಲ್ಲಾ ಶುಭ ಕಾರ್ಯಗಳು ಪ್ರಾರಂಭವಾಗುತ್ತಿದ್ದಂತೆ ಒಂದೊಂದು ಕುಟುಂಬದವರು ಸುಮಾರು 2 ಲಕ್ಷ ರೂ. ಸಾಲ ಮಾಡಿ ಹೂವು ಬೆಳೆದಿದ್ದರು. ಕೊರೊನಾ ಎರಡನೇ ಅಲೆಯಿಂದ ಇದೀಗ ರೈತರು ಬೆಳೆದ ಹೂವುಗಳನ್ನು ಕೊಳ್ಳುವವರಿಲ್ಲದೆ ತಿಪ್ಪೆಗೆ ಎಸೆಯುತ್ತಿದ್ದಾರೆ. ನಿತ್ಯ 25 ಸಾವಿರದಷ್ಟು ಆದಾಯ ಕೊಡುತ್ತಿದ್ದ ಹೂಗಳು ಬಾಡುತ್ತಿವೆ. ಕೂಲಿ ಕಾರ್ಮಿಕರ ಖರ್ಚು ವೆಚ್ಚ ಕಳೆದು 10 ಸಾವಿರದಷ್ಟು ಉಳಿಕೆ ಆಗುತ್ತಿದ್ದ ಅನ್ನದಾತ ಸದ್ಯ ದಿಕ್ಕು ತೋಚದೆ ಕಂಗಾಲಾಗಿದ್ದಾನೆ.

ಕೋವಿಡ್​ ಪರಿಣಾಮ ದೇಶಾದ್ಯಂತ ಲಾಕ್‌ಡೌನ್‌ನಿಂದಾಗಿ ದೇವಾಲಯ, ಮದುವೆ, ಶುಭ ಕಾರ್ಯಗಳಿಗೆ ಬಳಕೆ ಆಗುತ್ತಿದ್ದ ಕನಕಾಂಬರ ಹೂ ಹೆಚ್ಚಾಗಿ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿಗೆ ರಫ್ತು ಆಗುತ್ತಿತ್ತು. ಹೂ ಬೆಳೆದರೆ ಬದುಕು ಕಟ್ಟಿಕೊಳ್ಳಬಹುದು ಎನ್ನುವಷ್ಟರಲ್ಲಿ ಪುನಃ ಕೋವಿಡ್​ ಶಾಕ್​ ನೀಡಿ ಲಾಕ್‌ಡೌನ್ ಜಾರಿಗೆ ಬಂದಿದೆ. ಯಾವ ಶುಭಕಾರ್ಯಗಳು ಕೂಡ ನಡೆಯದೇ ಇದ್ದುದ್ದರಿಂದ ಅನ್ನದಾತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಅಳಲು ತೋಡಿಕೊಂಡಿದ್ದೇವೆ.

ಇದನ್ನೂ ಓದಿ: ಲಾಕ್​ಡೌನ್ ನಡುವೆಯೂ ಹೋಟೆಲ್​ನಲ್ಲಿ ಜೂಜಾಟ: 27 ಜನರ ಬಂಧನ

ನಿನ್ನೆ ಹಣ್ಣು, ತರಕಾರಿ, ಹೂವು ಬೆಳೆಗಾರರಿಗೆ ಸರ್ಕಾರ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂಪಾಯಿಯಂತೆ ಸಹಾಯಧನ ಘೋಷಿಸಿದ್ದು, ಇದಕ್ಕೆ 70 ಕೋಟಿ ರೂ. ಮೀಸಲಿಡಲಾಗಿದೆ. ಆದ್ರೆ ಹೂಡಿದ ಬಂಡವಾಳ ನಮ್ಮ ಕೈ ಸೇರುವುದಿಲ್ಲ ಎನ್ನುವ ಆತಂಕ ರೈತರಲ್ಲಿದೆ. ಇನ್ನೂ ಕಳೆದ ಬಾರಿ ಘೋಷಿಸಿದ ಪರಿಹಾರ ಕೂಡ ನಮ್ಮ ಕೈಸೇರಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಈ ಬಾರಿ ಸಹಾಯಧನ ರೈತರ ಕೈ ಸೇರಿದರೆ ಒಂದಿಷ್ಟು ಸಮಸ್ಯೆಯಾದರೂ ಪರಿಹಾರವಾದೀತು.

Last Updated : May 20, 2021, 11:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.