ETV Bharat / state

ಮತ್ತೆ ಸುಮಲತಾ ಜಾತಿ ಕೆದಕಿದ ಸಂಸದ... ದರ್ಶನ್​ ವಿರುದ್ಧ ಗುಡುಗು - Mandya_election

ಇಂದು ಮತ್ತೆ ಜೆಡಿಎಸ್ ಸಭೆಯಲ್ಲಿ ಸುಮಲತಾ ಅವರ ಜಾತಿಯನ್ನು ಸಂಸದ ಶಿವರಾಮೇಗೌಡ ಕೆದಕಿದ್ದಾರೆ. ಗೌಡ್ತಿ ಗೌಡ್ತಿ ಅಂದ್ರೆ, ಯಾವ್ ತರ ಗೌಡ್ತಿ ಹೇಳಬೇಕಲ್ಲ ಎಂದು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ ಶಿವರಾಮೇಗೌಡ. ಸುಮಲತಾ ಪರ ನಿಂತಿರುವ ದರ್ಶನ್​ಗೂ ಟಾಂಗ್.

ಸಂಸದ ಶಿವರಾಮೇಗೌಡ
author img

By

Published : Apr 1, 2019, 9:59 PM IST

ಮಂಡ್ಯ:ಜಿಲ್ಲೆಯಲ್ಲಿ ರಾಜಕೀಯ ಕೆಸರೆರಚಾಟದ ಮಧ್ಯೆ ಜಾತಿ ರಾಜಕಾರಣ ಸಹ ನಡೆಯುತ್ತಿದೆ. ಮತ್ತೊಮ್ಮೆ ಸುಮಲತಾ ಅವರ ಜಾತಿ ಕೆದಕಿ ದಳಪತಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.

ನಿನ್ನೆಯಷ್ಟೇ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸಂಸದ ಶಿವರಾಮೇಗೌಡ, ಸುಮಲತಾ ಜಾತಿ ವಿಚಾರ ಎತ್ತಿದ್ದರು. ಇಂದು ಮತ್ತೆ ಜೆಡಿಎಸ್ ಸಭೆಯಲ್ಲಿ ಮಾತನಾಡುತ್ತಾ, ಗೌಡ್ತಿ ಗೌಡ್ತಿ ಅಂದ್ರೆ, ಯಾವ್ ತರ ಗೌಡ್ತಿ ಹೇಳಬೇಕಲ್ಲ. ಜಾತಿ ಬಿಟ್ಟು ಬೇರೆ ಜಾತಿಯವರನ್ನ ಮದುವೆ ಆದ ಮೇಲೆ ಹೇಗೆ ಗೌಡ್ತಿ ಆಗ್ತಾರೆ ಎಂದು ಸುಮಲತಾಗೆ ಪ್ರಶ್ನಿಸಿದ್ದಾರೆ.

ಅಂಬರೀಶ್ ನಮ್ಮ ಗೌಡ್ರು ಓಕೆ, ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ನಮ್ಮ ಸಿಎಂ‌ ಕುಮಾರಸ್ವಾಮಿ ಏನು ತಪ್ಪು ಮಾಡದಿದ್ರೂ ಇಲ್ಲಸಲ್ಲದ ಆರೋಪ ಮಾಡ್ತಿದ್ರೆ ಕೈಕಟ್ಟಿ ಕೂರೋಕೆ ಆಗುತ್ತಾ.ಇವರೆಲ್ಲಾ ಬೆಂಗಳೂರು ಸುತ್ತಮುತ್ತ ಆವರಿಸಿದ್ದಾರೆ. ಮಂಡ್ಯವನ್ನೂ ನಾಯ್ಡುಮಯ ಮಾಡಲು ಹೊರಟಿದ್ದಾರೆ ಎಂದು ಸಂಸದ ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ.

ಸಂಸದ ಶಿವರಾಮೇಗೌಡ

ದರ್ಶನ್​ಗೆ ಟಾಂಗ್:

ಇದೇ ವೇಳೆ ಸುಮಲತಾ ಪರ ನಿಂತಿರುವ ದರ್ಶನ್​ಗೆ ಟಾಂಗ್​ ನೀಡಿರುವ ಶಿವರಾಮೇಗೌಡ, ನಟರು ಸಿನಿಮಾಗೆ ಮಾತ್ರ ಸೀಮಿತವಾಗಿರಬೇಕು. ಅದನ್ನ ಬಿಟ್ಟು ಇಡೀ ಒಕ್ಕಲಿಗ ಸಮುದಾಯದ ವಿರುದ್ಧ, ಒಂದು ಪಕ್ಷದ ವಿರುದ್ಧ, ರೈತ ಸಮುದಾಯದ ವಿರುದ್ಧ ತೊಡೆ ತಟ್ಟಿ ನಿಂತಿರುವ ನಿಮ್ಮನ್ನ ನೋಡ್ತಾ ಸುಮ್ಮನೆ ಕೂರೋಕೆ ಆಗಲ್ಲವೆಂದು ಗುಡುಗಿದರು.

ಮಂಡ್ಯ:ಜಿಲ್ಲೆಯಲ್ಲಿ ರಾಜಕೀಯ ಕೆಸರೆರಚಾಟದ ಮಧ್ಯೆ ಜಾತಿ ರಾಜಕಾರಣ ಸಹ ನಡೆಯುತ್ತಿದೆ. ಮತ್ತೊಮ್ಮೆ ಸುಮಲತಾ ಅವರ ಜಾತಿ ಕೆದಕಿ ದಳಪತಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.

ನಿನ್ನೆಯಷ್ಟೇ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸಂಸದ ಶಿವರಾಮೇಗೌಡ, ಸುಮಲತಾ ಜಾತಿ ವಿಚಾರ ಎತ್ತಿದ್ದರು. ಇಂದು ಮತ್ತೆ ಜೆಡಿಎಸ್ ಸಭೆಯಲ್ಲಿ ಮಾತನಾಡುತ್ತಾ, ಗೌಡ್ತಿ ಗೌಡ್ತಿ ಅಂದ್ರೆ, ಯಾವ್ ತರ ಗೌಡ್ತಿ ಹೇಳಬೇಕಲ್ಲ. ಜಾತಿ ಬಿಟ್ಟು ಬೇರೆ ಜಾತಿಯವರನ್ನ ಮದುವೆ ಆದ ಮೇಲೆ ಹೇಗೆ ಗೌಡ್ತಿ ಆಗ್ತಾರೆ ಎಂದು ಸುಮಲತಾಗೆ ಪ್ರಶ್ನಿಸಿದ್ದಾರೆ.

ಅಂಬರೀಶ್ ನಮ್ಮ ಗೌಡ್ರು ಓಕೆ, ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ನಮ್ಮ ಸಿಎಂ‌ ಕುಮಾರಸ್ವಾಮಿ ಏನು ತಪ್ಪು ಮಾಡದಿದ್ರೂ ಇಲ್ಲಸಲ್ಲದ ಆರೋಪ ಮಾಡ್ತಿದ್ರೆ ಕೈಕಟ್ಟಿ ಕೂರೋಕೆ ಆಗುತ್ತಾ.ಇವರೆಲ್ಲಾ ಬೆಂಗಳೂರು ಸುತ್ತಮುತ್ತ ಆವರಿಸಿದ್ದಾರೆ. ಮಂಡ್ಯವನ್ನೂ ನಾಯ್ಡುಮಯ ಮಾಡಲು ಹೊರಟಿದ್ದಾರೆ ಎಂದು ಸಂಸದ ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ.

ಸಂಸದ ಶಿವರಾಮೇಗೌಡ

ದರ್ಶನ್​ಗೆ ಟಾಂಗ್:

ಇದೇ ವೇಳೆ ಸುಮಲತಾ ಪರ ನಿಂತಿರುವ ದರ್ಶನ್​ಗೆ ಟಾಂಗ್​ ನೀಡಿರುವ ಶಿವರಾಮೇಗೌಡ, ನಟರು ಸಿನಿಮಾಗೆ ಮಾತ್ರ ಸೀಮಿತವಾಗಿರಬೇಕು. ಅದನ್ನ ಬಿಟ್ಟು ಇಡೀ ಒಕ್ಕಲಿಗ ಸಮುದಾಯದ ವಿರುದ್ಧ, ಒಂದು ಪಕ್ಷದ ವಿರುದ್ಧ, ರೈತ ಸಮುದಾಯದ ವಿರುದ್ಧ ತೊಡೆ ತಟ್ಟಿ ನಿಂತಿರುವ ನಿಮ್ಮನ್ನ ನೋಡ್ತಾ ಸುಮ್ಮನೆ ಕೂರೋಕೆ ಆಗಲ್ಲವೆಂದು ಗುಡುಗಿದರು.

Intro:ಮಂಡ್ಯ: ಮತ್ತೆ ಸುಮಲತಾ ಜಾತಿ ಕೆದಕಿ ದಳಪತಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಸಂಸದ ಶಿವರಾಮೇಗೌಡ ಜೆಡಿಎಸ್ ಸಭೆಯಲ್ಲಿ ಮಾತನಾಡುತ್ತಾ, ನಾನು ಗೌಡ್ತಿ ಗೌಡ್ತಿ ಅಂದ್ರೆ, ಯಾವ್ ತರ ಗೌಡ್ತಿ ಹೇಳಬೇಕಲ್ಲ. ಜಾತಿ ಬಿಟ್ಟು ಜಾತಿಯವರನ್ನ ಮದುವೆ ಆದ ಮೇಲೆ ಹೇಗೆ ಗೌಡ್ತಿ ಆಗ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.Body:ಸುಮಲತಾ ಜಾತಿ ವಿಚಾರವಾಗಿ ಸಂಸದ ಎಲ್.ಆರ್. ಶಿವರಾಮೇಗೌಡ, ಅಂಬರೀಶ್ ನಮ್ಮ ಗೌಡ್ರು ಒಕೆ, ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ನಮ್ಮ ಸಿಎಂ‌ ಕುಮಾರಸ್ವಾಮಿ ಏನು ತಪ್ಪು ಮಾಡದಿದ್ರೂ ಇಲ್ಲ ಸಲ್ಲದ ಆರೋಪ ಮಾಡ್ತಿದ್ರೆ ಕೈಕಟ್ಟಿ ಕೂರಕ್ಕೆ ಆಗುತ್ತಾ ಎಂದಿದ್ದಾರೆ.
ಇವರೆಲ್ಲಾ ನಾಯ್ಡುಗಳು. ಬೆಂಗಳೂರು ಸುತ್ತಮುತ್ತ ಆವರಿಸಿದ್ದಾರೆ. ಮಂಡ್ಯವನ್ನೂ ನಾಯ್ಡು ಮಯ ಮಾಡಲು ಹೊರಟಿದ್ದಾರೆಂದು‌ ಹೇಳಿದ್ದಾರೆ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.