ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ಜಾಗೀರಗುಡದೂರು ಕೆರೆಯಲ್ಲಿ ಈಜಲು ತೆರಳಿದ್ದ ಯುವಕ ನೀರು ಪಾಲಾಗಿದ್ದಾನೆ.
ಜಾಗೀರಗುಡದೂರ ಗ್ರಾಮದ ವಿನೋದ್ ಶರಣಪ್ಪ ಬಾದಿಮಿನಾಳ (24) ಮೃತ ವ್ಯಕ್ತಿ. ಡಿ.1ರಂದು ಇಬ್ಬರು ಸ್ನೇಹಿತರೊಂದಿಗೆ ತುಂಬಿದ ಕೆರೆ ನೋಡಲು ಹೋಗಿದ್ದರು. ಈ ವೇಳೆ ಸ್ನೇಹಿತರು ಬಹಿರ್ದೆಸೆಗೆಂದು ತೆರಳಿದ್ದಾರೆ. ಆದರೆ ಅಲ್ಪಸ್ವಲ್ಪ ಈಜು ಕಲಿತಿದ್ದ ವಿನೋದ್ ಕೆರೆಯಲ್ಲಿ ಈಜಲು ಮುಂದಾಗಿದ್ದು, ನೀರುಪಾಲಾಗಿದ್ದಾನೆ. ಬಳಿಕ ಸ್ಥಳಕ್ಕೆ ಬಂದ ಸ್ನೇಹಿತರಿಗೆ ವಿನೋದ ಕಣ್ಮರೆಯಾಗಿರುವುದು ತಿಳಿದುಬಂದಿದೆ.
![ಜಾಗೀರಗುಡದೂರು ಕೆರೆ](https://etvbharatimages.akamaized.net/etvbharat/prod-images/kn-kst-03-02-crime-news-kac10028_02122020133436_0212f_1606896276_169.jpg)
ಮೃತ ವಿನೋದ್ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಶೋಧಕಾರ್ಯ ನಡೆಸಿದ್ದು, ಇಂದು ಪತ್ತೆಯಾಗಿದೆ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.