ಕೊಪ್ಪಳ : ವಿಶ್ವ ನೃತ್ಯ ದಿನದ ಅಂಗವಾಗಿ ಗಂಗಾವತಿ ನಗರದ ನೃತ್ಯ ಸಂಯೋಜಕರು,ಪತ್ರಕರ್ತರ ನೇತೃತ್ವದಲ್ಲಿ ನಗರದಲ್ಲಿ ಕೊರೊನಾ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
![World Dance Day: Corona Awareness Jatha by choreographers and journalists](https://etvbharatimages.akamaized.net/etvbharat/prod-images/kn-gvt-02-29-world-danc-day-awerness-program-by-coriyographers-pic-kac10005_29042020084537_2904f_1588130137_114.jpg)
ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಮುಂದೆಯಿರುವ ಕೃಷ್ಣದೇವರಾಯ ವೃತ್ತದಲ್ಲಿ ಜಾಥಾಗೆ ಡಿವೈಎಸ್ಪಿ ಡಾ.ಬಿ ಪಿ ಚಂದ್ರಶೇಖರ ಚಾಲನೆ ನೀಡಿದರು. ಈ ವೇಳೆ ಕಳೆದ ಐದು ವಾರದಿಂದ ಕೊರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್,ಆರೋಗ್ಯ ಸಿಬ್ಬಂದಿ ಹಾಗೂ ಸೂಕ್ತ ನಿರ್ದೇಶನ ನೀಡಿ ಜವಾಬ್ದಾರಿ ನಿಭಾಯಿಸಿದ ಶಾಸಕ ಪರಣ್ಣ ಮುನವಳ್ಳಿ ಅವರನ್ನ ಸನ್ಮಾನಿಸಿ,ಗೌರವಿಸಲಾಯಿತು.
ಈ ವೇಳೆ ಕಾನಿಪ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ, ನಾಗರಾಜ ಇಂಗಳಗಿ, ನೃತ್ಯ ಸಂಯೋಜಕರಾದ ದೇವರಾಜ, ಮೊಜಸ್ ಪೌಲ್ ಉಪಸ್ಥಿತರಿದ್ದರು.