ETV Bharat / state

ಮಹಿಳೆಯರ ರಕ್ಷಣೆ, ಸುರಕ್ಷತೆಗಾಗಿ ಅಸ್ತಿತ್ವಕ್ಕೆ ಬಂತು ವಾಟ್ಸ್​​ಆ್ಯಪ್​​​ ಗ್ರೂಪ್​!

author img

By

Published : Oct 24, 2020, 2:43 PM IST

ಮಹಿಳಾ ಸುರಕ್ಷತೆಯ ಬಗ್ಗೆ ಸರ್ಕಾರ ಮಾತ್ರವಲ್ಲ, ಸಮುದಾಯದ ಸಹಕಾರವೂ ಬೇಕು ಎಂಬ ನಿಟ್ಟಿನಲ್ಲಿ ಇದೀಗ ತಾಲ್ಲೂಕಿನ ಕ್ರಿಯಾಶೀಲ ಯುವಕರ ತಂಡವೊಂದು 'ಒಂಟಿ ಮಹಿಳೆ'ಯರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸುವ ನಿಟ್ಟಿನಲ್ಲಿ ವಾಟ್ಸ್​​ಆ್ಯಪ್​​ ಗ್ರೂಪ್​​ ಒಂದನ್ನು ರಚಿಸಿಕೊಂಡಿದ್ದಾರೆ.

WhatsApp Group Existed, WhatsApp Group Existed for Women, WhatsApp Group Existed for Women Protection, WhatsApp Group Existed for Women Protection in Gangavati, Gangavati whatsapp news, ವಾಟ್ಸಾಪ್​ ಗ್ರೂಪ್​ ಕ್ರಿಯೆಟ್​, ಮಹಿಳೆಯರಿಗಾಗಿ ವಾಟ್ಸಾಪ್​ ಗ್ರೂಪ್​ ಕ್ರಿಯೆಟ್, ಗಂಗಾವತಿಯಲ್ಲಿ ಮಹಿಳೆಯರಿಗಾಗಿ ವಾಟ್ಸಾಪ್​ ಗ್ರೂಪ್​ ಕ್ರಿಯೆಟ್, ಮಹಿಳೆ ರಕ್ಷಣೆಗಾಗಿ ವಾಟ್ಸಾಪ್​ ಗ್ರೂಪ್​ ಕ್ರಿಯೆಟ್, ಗಂಗಾವತಿ ವಾಟ್ಸಾಪ್​ ಗೂಪ್​ ಸುದ್ದಿ,
ಮಹಿಳೆಯರ ರಕ್ಷಣೆ, ಸುರಕ್ಷತೆಗಾಗಿ ಅಸ್ತಿತ್ವಕ್ಕೆ ಬಂತು ವಾಟ್ಸಾಪ್​ ಗ್ರೂಪ್

ಗಂಗಾವತಿ: ಮಹಿಳಾ ಸುರಕ್ಷತೆಯ ಬಗ್ಗೆ ಸರ್ಕಾರ ಮಾತ್ರವಲ್ಲ, ಸಮುದಾಯದ ಸಹಕಾರವೂ ಬೇಕು ಎಂಬ ನಿಟ್ಟಿನಲ್ಲಿ ಇದೀಗ ತಾಲೂಕಿನ ಕ್ರಿಯಾಶೀಲ ಯುವಕರ ತಂಡವೊಂದು 'ಒಂಟಿ ಮಹಿಳೆ'ಯರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸುವ ನಿಟ್ಟಿನಲ್ಲಿ ವಾಟ್ಸ್​​ಆ್ಯಪ್​​ ಗ್ರೂಪ್​ವೊಂದನ್ನು ರಚಿಸಿಕೊಂಡಿದ್ದಾರೆ.

ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆಯಂತ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೆರವು ನೀಡುವ ಉದ್ದೇಶಕ್ಕೆ ಈಗಾಗಲೇ ರಕ್ತದಾನಿಗಳ ಮೊಬೈಲ್ ಸಂಖ್ಯೆ, ರಕ್ತದ ಗುಂಪು ಸಹಿತ ಒಂದು ವಾಟ್ಸ್​​ಆ್ಯಪ್​ ಗ್ರೂಪ್​ ರಚಿಸಿ ನೆರವು ನಿಡುತ್ತಿರುವ ಯುವಕರು, ಇದೀಗ ಒಂಟಿ ಮಹಿಳೆಯರ ನೆರವಿಗಾಗಿ ಧಾವಿಸಿದ್ದಾರೆ.

ಪ್ರಭುರಾಜ್, ಅಂಬಿ ನಾಯಕ್ ಕರಾಟೆ ಹಾಗೂ ಢಣಾಪುರದ ಹನುಮೇಶ ಭಾವಿಕಟ್ಟಿ ಎಂಬ ಯುವಕರು ಅಡ್ಮಿನ್ ಆಗಿರುವ 'ಶ್ರೀರಾಮ ರಕ್ಷೆ' ಎಂಬ ಹೆಸರಿನ್ಲಲಿ ಈ ಗ್ರೂಪ್ ಅ​ನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಪರಸ್ಪರ ಮಾಹಿತಿ ಹಂಚಿಕೊಂಡು ಮಹಿಳೆಯರಿಗೆ ನೆರವಾಗುವುದು ಈ ಗ್ರೂಪಿನ ಉದ್ದೇಶ ಎಂದು ಯುವಕರು ಹೇಳುತ್ತಾರೆ.

ಒಬ್ಬಂಟಿ ಮಹಿಳೆಯರು ತಾವು ಅಪಾಯದಲ್ಲಿದ್ದೇವೆ ಎಂಬ ಮಾಹಿತಿ ನೀಡಿದರೆ ಅಥವಾ ಎಲ್ಲಿಗಾದರೂ ಪಯಣ ಬೆಳೆಸಬೇಕಾಗಿದೆ ಎಂಬ ಮಾಹಿತಿ ಕೊಟ್ಟರೆ ಸಾಕು, ಆ ಮಹಿಳೆಯ ಸಮೀಪದಲ್ಲಿರುವ ಗ್ರೂಪಿನ ಸದಸ್ಯರು ಸ್ಥಳಕ್ಕೆ ತೆರಳಿ ಮಹಿಳೆಗೆ ರಕ್ಷಣೆ ನೀಡುತ್ತಾರೆ ಎಂದು ಯುವಕ ಹನುಮೇಶ ಭಾವಿಕಟ್ಟಿ ಹೇಳಿದ್ದಾರೆ.

ಗಂಗಾವತಿ: ಮಹಿಳಾ ಸುರಕ್ಷತೆಯ ಬಗ್ಗೆ ಸರ್ಕಾರ ಮಾತ್ರವಲ್ಲ, ಸಮುದಾಯದ ಸಹಕಾರವೂ ಬೇಕು ಎಂಬ ನಿಟ್ಟಿನಲ್ಲಿ ಇದೀಗ ತಾಲೂಕಿನ ಕ್ರಿಯಾಶೀಲ ಯುವಕರ ತಂಡವೊಂದು 'ಒಂಟಿ ಮಹಿಳೆ'ಯರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸುವ ನಿಟ್ಟಿನಲ್ಲಿ ವಾಟ್ಸ್​​ಆ್ಯಪ್​​ ಗ್ರೂಪ್​ವೊಂದನ್ನು ರಚಿಸಿಕೊಂಡಿದ್ದಾರೆ.

ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆಯಂತ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೆರವು ನೀಡುವ ಉದ್ದೇಶಕ್ಕೆ ಈಗಾಗಲೇ ರಕ್ತದಾನಿಗಳ ಮೊಬೈಲ್ ಸಂಖ್ಯೆ, ರಕ್ತದ ಗುಂಪು ಸಹಿತ ಒಂದು ವಾಟ್ಸ್​​ಆ್ಯಪ್​ ಗ್ರೂಪ್​ ರಚಿಸಿ ನೆರವು ನಿಡುತ್ತಿರುವ ಯುವಕರು, ಇದೀಗ ಒಂಟಿ ಮಹಿಳೆಯರ ನೆರವಿಗಾಗಿ ಧಾವಿಸಿದ್ದಾರೆ.

ಪ್ರಭುರಾಜ್, ಅಂಬಿ ನಾಯಕ್ ಕರಾಟೆ ಹಾಗೂ ಢಣಾಪುರದ ಹನುಮೇಶ ಭಾವಿಕಟ್ಟಿ ಎಂಬ ಯುವಕರು ಅಡ್ಮಿನ್ ಆಗಿರುವ 'ಶ್ರೀರಾಮ ರಕ್ಷೆ' ಎಂಬ ಹೆಸರಿನ್ಲಲಿ ಈ ಗ್ರೂಪ್ ಅ​ನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಪರಸ್ಪರ ಮಾಹಿತಿ ಹಂಚಿಕೊಂಡು ಮಹಿಳೆಯರಿಗೆ ನೆರವಾಗುವುದು ಈ ಗ್ರೂಪಿನ ಉದ್ದೇಶ ಎಂದು ಯುವಕರು ಹೇಳುತ್ತಾರೆ.

ಒಬ್ಬಂಟಿ ಮಹಿಳೆಯರು ತಾವು ಅಪಾಯದಲ್ಲಿದ್ದೇವೆ ಎಂಬ ಮಾಹಿತಿ ನೀಡಿದರೆ ಅಥವಾ ಎಲ್ಲಿಗಾದರೂ ಪಯಣ ಬೆಳೆಸಬೇಕಾಗಿದೆ ಎಂಬ ಮಾಹಿತಿ ಕೊಟ್ಟರೆ ಸಾಕು, ಆ ಮಹಿಳೆಯ ಸಮೀಪದಲ್ಲಿರುವ ಗ್ರೂಪಿನ ಸದಸ್ಯರು ಸ್ಥಳಕ್ಕೆ ತೆರಳಿ ಮಹಿಳೆಗೆ ರಕ್ಷಣೆ ನೀಡುತ್ತಾರೆ ಎಂದು ಯುವಕ ಹನುಮೇಶ ಭಾವಿಕಟ್ಟಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.