ETV Bharat / state

ಬರಿದಾಗುತ್ತಿರುವ ತುಂಗಭದ್ರೆಯ ಒಡಲು: ಆತಂಕದಲ್ಲಿ ಜನತೆ

ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರೆಯ ಒಡಲು ಬರಿದಾಗಲಾರಂಭಿಸಿದೆ. ಜಲಾಶಯದಲ್ಲಿ ಕೇವಲ ಸುಮಾರು 3 ಟಿಎಂಸಿಯಷ್ಟು ಮಾತ್ರ ನೀರು ಉಳಿದುಕೊಂಡಿದ್ದು ಜಲಾಶಯದ ಅಂಗಳವೀಗ ಕ್ರಿಕೆಟ್ ಮೈದಾನವಾಗುತ್ತಿದೆ.

author img

By

Published : May 13, 2019, 8:12 PM IST

ಬರಿದಾಗುತ್ತಿರುವ ತುಂಗಭದ್ರೆಯ ಒಡಲು

ಕೊಪ್ಪಳ:ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರೆಯ ಒಡಲು ಬರಿದಾಗಲಾರಂಭಿಸಿದೆ. ಜಲಾಶಯದಲ್ಲಿ ಕೇವಲ ಸುಮಾರು 3 ಟಿಎಂಸಿಯಷ್ಟು ಮಾತ್ರ ನೀರು ಉಳಿದುಕೊಂಡಿದ್ದು ಜಲಾಶಯದ ಅಂಗಳದಲ್ಲಿ ಮಕ್ಕಳು ಕ್ರಕಿಟ್ ಆಡಲು ಮೈದಾನವಾದಂತಾಗಿದೆ.

ಮೇ 31 ಕ್ಕೆ ಈ ಜಲ ವರ್ಷ ಮುಗಿಯುತ್ತದೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಾಶಯದಿಂದ ಈಗಾಗಲೇ ಕೆಲವೆಡೆ ನೀರನ್ನು ಬೇರೆ ಬೇರೆ ಕಡೆ ಸಂಗ್ರಹಿಸಿಕೊಳ್ಳಲಾಗಿದೆ. ಆದರೆ ನೀರಿನ ಸಂಗ್ರಹಣೆ ಎಲ್ಲಿ ಇಲ್ಲವೋ ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಉಂಟಾಗಿದೆ. ಮೇ ಅಂತ್ಯದೊಳಗಾಗಿ ದೊಡ್ಡ ಮಳೆಯಾಗಿ ಜಲಾಶಯಕ್ಕೆ ನೀರು ಹರಿದು ಬರದೇ ಇದ್ದರೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ ಎನ್ನುತ್ತಾರೆ ತುಂಗಭದ್ರಾ ಬಚಾವೋ ಆಂದೋಲನ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಆರ್. ವೆಂಕಟೇಶ್ ಅವರು.

ಬರಿದಾಗುತ್ತಿರುವ ತುಂಗಭದ್ರೆಯ ಒಡಲು


ಒಟ್ಟಾರೆ ಈಗ ಮಳೆರಾಯನ ಆಗಮನಕ್ಕೆ ಜನರು ಮುಗಿಲಿಗೆ ಮುಖಮಾಡಿ ಎದುರು ನೋಡುವಂತಾಗಿದೆ. ಮೇ ಅಂತ್ಯದೊಳಗೆ ಚೆನ್ನಾಗಿ ಮಳೆಯಾದರೆ ಮಾತ್ರ ಮುಂದಾಗಬಹುದಾದ ಕುಡಿಯುವ ನೀರಿನ ತೊಂದರೆಯಿಂದ ಪಾರಾಗಬಹುದು. ಇಲ್ಲದೆ ಹೋದರೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಲಿದೆ.

ಕೊಪ್ಪಳ:ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರೆಯ ಒಡಲು ಬರಿದಾಗಲಾರಂಭಿಸಿದೆ. ಜಲಾಶಯದಲ್ಲಿ ಕೇವಲ ಸುಮಾರು 3 ಟಿಎಂಸಿಯಷ್ಟು ಮಾತ್ರ ನೀರು ಉಳಿದುಕೊಂಡಿದ್ದು ಜಲಾಶಯದ ಅಂಗಳದಲ್ಲಿ ಮಕ್ಕಳು ಕ್ರಕಿಟ್ ಆಡಲು ಮೈದಾನವಾದಂತಾಗಿದೆ.

ಮೇ 31 ಕ್ಕೆ ಈ ಜಲ ವರ್ಷ ಮುಗಿಯುತ್ತದೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಾಶಯದಿಂದ ಈಗಾಗಲೇ ಕೆಲವೆಡೆ ನೀರನ್ನು ಬೇರೆ ಬೇರೆ ಕಡೆ ಸಂಗ್ರಹಿಸಿಕೊಳ್ಳಲಾಗಿದೆ. ಆದರೆ ನೀರಿನ ಸಂಗ್ರಹಣೆ ಎಲ್ಲಿ ಇಲ್ಲವೋ ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಉಂಟಾಗಿದೆ. ಮೇ ಅಂತ್ಯದೊಳಗಾಗಿ ದೊಡ್ಡ ಮಳೆಯಾಗಿ ಜಲಾಶಯಕ್ಕೆ ನೀರು ಹರಿದು ಬರದೇ ಇದ್ದರೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ ಎನ್ನುತ್ತಾರೆ ತುಂಗಭದ್ರಾ ಬಚಾವೋ ಆಂದೋಲನ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಆರ್. ವೆಂಕಟೇಶ್ ಅವರು.

ಬರಿದಾಗುತ್ತಿರುವ ತುಂಗಭದ್ರೆಯ ಒಡಲು


ಒಟ್ಟಾರೆ ಈಗ ಮಳೆರಾಯನ ಆಗಮನಕ್ಕೆ ಜನರು ಮುಗಿಲಿಗೆ ಮುಖಮಾಡಿ ಎದುರು ನೋಡುವಂತಾಗಿದೆ. ಮೇ ಅಂತ್ಯದೊಳಗೆ ಚೆನ್ನಾಗಿ ಮಳೆಯಾದರೆ ಮಾತ್ರ ಮುಂದಾಗಬಹುದಾದ ಕುಡಿಯುವ ನೀರಿನ ತೊಂದರೆಯಿಂದ ಪಾರಾಗಬಹುದು. ಇಲ್ಲದೆ ಹೋದರೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಲಿದೆ.

Intro:


Body:ಕೊಪ್ಪಳ:- ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರೆಯ ಒಡಲು ಬರಿದಾಗಲಾರಂಭಿಸಿದೆ. ಜಲಾಶಯದಲ್ಲಿ ಕೇವಲ ಸುಮಾರು 3 ಟಿಎಂಸಿಯಷ್ಟು ಮಾತ್ರ ನೀರು ಉಳಿದುಕೊಂಡಿದ್ದು ಜಲಾಶಯದ ಅಂಗಳವೀಗ ಕ್ರಿಕೆಟ್ ಮೈದಾನವಾಗುತ್ತಿದೆ. ನೀರಿಲ್ಲದ ಪರಿಣಾಮ ಜಲಾಶಯದ ಅಂಗಳದಲ್ಲಿ ಮಕ್ಕಳು ಕ್ರಿಕೆಟ್ ಆಟವಾಡುತ್ತಿದ್ದಾರೆ.
ಹೌದು..., ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆ ಸೇರಿದಂತೆ ಆಂಧ್ರದ ಲಕ್ಷಾಂತರ ರೈತರ ಜೀವನಾಡಿಯಾಗಿರುವ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯ ಜಲಾಶಯದ ಒಡಲು ಬರಿದಾಗಲಾರಂಭಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಜಲಾಶಯದಲ್ಲಿ ನೀರು ಸಂಪೂರ್ಣವಾಗಿ ಬರಿದಾಗಲಿದ್ದು ಕುಡಿಯುವ ನೀರಿಗಾಗಿ ನಂಬಿಕೊಂಡಿರುವ ಟಿಬಿ ಡ್ಯಾಂನ್ನು ನಂಬಿಕೊಂಡಿರುವ ಅನೇಕ ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿ ನೀರಿನ ತೀವ್ರ ಅಭಾವ ಎದುರಿಸುವ ಕಾಲ ಸನ್ನಿಹಿತವಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ ಈಗ ಕೇವಲ 3 ಟಿಎಂಸಿಯಷ್ಟು ಮಾತ್ರ ನೀರಿದ್ದು ಇದರಲ್ಲಿ ಬಚಾವತ್ ಆಯೋಗದ ತೀರ್ಪಿನಂತೆ ಎರಡು ಟಿಎಂಸಿಯಷ್ಟು ನೀರನ್ನು ಜಲಾಶಯದಲ್ಲಿ ಡೆಡ್ ಸ್ಟಾಕ್ ಆಗಿ ಉಳಿಸಬೇಕು. ಈ ಎರಡು ಟಿಎಂಸಿ ನೀರು ಜಲಾಶಯದಲ್ಲಿನ ಜಲಚರಗಳ ಉಳಿವಿಗಾಗಿ ಡೆಡ್ ಸ್ಟಾಕ್ ಉಳಿಸಬೇಕು. ಇನ್ನು ಉಳಿಯುವುದು 1 ಟಿಎಂಸಿ ನೀರು ಮಾತ್ರ. ಈ 1 ಟಿಎಂಸಿ ನೀರಿನಲ್ಲಿ ಅರ್ಧ ಟಿಎಂಸಿಯಷ್ಟು ನೀರು ಬಿಸಿಲಿಗೆ ಆವಿಯಾಗುತ್ತದೆ. ಉಳಿದ ಇನ್ನರ್ಧ ಟಿಎಂಸಿ ನೀರು ವಿಜಯನಗರ ಕಾಲುವೆಗಳಿಗೆ ಹರಿಸಬೇಕು. ಕುಡಿಯುವ ನೀರಿಗಾಗಿ ಜಲಾಶಯದ ನೀರಿನ್ನೇ ನಂಬಿಕೊಂಡಿದ್ದ ಕೊಪ್ಪಳ ನಗರ ಸೇರಿದಂತೆ ಅನೇಕ ಹಳ್ಳಿ, ಪಟ್ಟಣಗಳು ಕುಡಿಯುವ ನೀರಿನ ಅಭಾವ ಎದುರಿಸಬೇಕಾದ ಸಾಧ್ಯತೆ ದಟ್ಟವಾಗಿದೆ. ಮೇ 31 ಕ್ಕೆ ಈ ಜಲ ವರ್ಷ ಮುಗಿಯುತ್ತದೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಾಶಯದಿಂದ ಈಗಾಗಲೇ ಕೆಲವೆಡೆ ನೀರನ್ನು ಬೇರೆ ಬೇರೆ ಕಡೆ ಸಂಗ್ರಹಿಸಿಕೊಳ್ಳಲಾಗಿದೆ. ಆದರೆ ನೀರಿನ ಸಂಗ್ರಹಣೆ ಎಲ್ಲಿ ಇಲ್ಲವೋ ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಯಾಗಲಿದೆ. ಮೇ ಅಂತ್ಯದೊಳಗಾಗಿ ದೊಡ್ಡ ಮಳೆಯಾಗಿ ಜಲಾಶಯಕ್ಕೆ ನೀರು ಹರಿದು ಬರದೇ ಇದ್ದರೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ ಎನ್ನುತ್ತಾರೆ ತುಂಗಭದ್ರಾ ಬಚಾವೋ ಆಂದೋಲನ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಆರ್. ವೆಂಕಟೇಶ್ ಅವರು.

ಬೈಟ್1:- ಎಂ.ಆರ್. ವೆಂಕಟೇಶ್, ತುಂಗಭದ್ರಾ ಬಚಾವೋ ಆಂದೋಲನ ಸಮಿತಿ ಪ್ರಧಾನ ಕಾರ್ಯದರ್ಶಿ.

ಇನ್ನು ಜಲಾಶಯದಲ್ಲಿ ನೀರು ಕಡಿಮೆಯಾಗಿರುವುದರಿಂದ ತುಂಗಭದ್ರೆಯ ಅಂಗಳವೀಗ ಆಟದ ಮೈದಾನದಂತಾಗಿದೆ. ಹೀಗಾಗಿ ಮುನಿರಾಬಾದ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಯುವಕರು ಮತ್ತು ಮಕ್ಕಳು ತುಂಗಭದ್ರ ಜಲಾಶಯದಲ್ಲಿ ಒಡಲಲ್ಲಿ ಕ್ರಿಕೆಟ್ ಆಟವಾಡಿ ಸಂತೋಷಪಡುತ್ತಿದ್ದಾರೆ. ಡ್ಯಾಂ ನಲ್ಲಿ ನೀರಿಲ್ಲದ ಕಾರಣ ಮೈದಾನದಂತಾಗಿದೆ. ಹೀಗಾಗಿ ಇಲ್ಲಿ ಬಂದು ಕ್ರಿಕೆಟ್ ಆಡುತ್ತೇವೆ ಎನ್ನುತ್ತಾರೆ ಸ್ಥಳೀಯ ಯುವಕರು.

ಬೈಟ್2:- ಇಮ್ರಾನ್, ಸ್ಥಳೀಯ ಯುವಕ.

ಒಟ್ಟಾರೆಯಾಗಿ ಈಗ ಮಳೆರಾಯನ ಆಗಮನಕ್ಕೆ ಜನರು ಮುಗಿಲಿಗೆ ಮುಖಮಾಡಿ ಎದುರು ನೋಡುವಂತಾಗಿದೆ. ಮೇ ಅಂತ್ಯದೊಳಗೆ ದೊಡ್ಡ ಮಳೆಯಾದರೆ ಮಾತ್ರ ಮುಂದಾಗಬಹುದಾದ ಕುಡಿಯುವ ನೀರಿನ ತೊಂದರೆಯಿಂದ ಪಾರಾಗಬಹುದು. ಇಲ್ಲದೆ ಹೋದರೆ ಕುಡಿಯುವ ನೀರಿಗಾಗಿ ತತ್ವಾರ ತಪ್ಪಿದ್ದಲ್ಲ.



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.