ಗಂಗಾವತಿ: ಕೊಲೆ ಆರೋಪದ ಹಿನ್ನೆಲೆ ಹೊಂದಿದ್ದ ರಾಜಕೀಯ ವ್ಯಕ್ತಿಗಳ ಮದುವೆ ಸಮಾರಂಭಕ್ಕೆ ಹಾಜರಾಗಿದ್ದ ಮೂವರು ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ.
ಗಂಗಾವತಿ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಗಂಗಾವತಿ ಗ್ರಾಮೀಣ ಸಿಪಿಐ ಉದಯರವಿ ಹಾಗೂ ಕನಕಗಿರಿ ಪಿಎಸ್ಐ ತಾರಾಬಾಯಿ ಇದೀಗ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಡಿಜೆ ಮತ್ತು ಐಜಿ ಪ್ರವೀಣ್ ಸೂದ್, ಐಜಿ ಮನೀಷ್ ಕರವೇಕರ ನಿರ್ದೇಶನದ ಮೆರೆಗೆ ಎಸ್ಪಿ ಟಿ.ಶ್ರೀಧರ ಸೂಚನೆ ನೀಡಿದ್ದಾರೆ.
ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ಹನುಮೇಶ ನಾಯಕ ಅವರ ಪುತ್ರ ಆನಂದ್ ಎಂಬಾತನ ವಿವಾಹ ಸಮಾರಂಭಕ್ಕೆ ಈ ಅಧಿಕಾರಿಗಳು ಸಮವಸ್ತ್ರ ಸಮೇತ ಭೇಟಿ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದಲ್ಲಿ ಹನುಮೇಶ ನಾಯಕ ಮತ್ತು ಬೆಂಬಲಿಗರ ಕೈವಾಡ ಇರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇನ್ನು ಪ್ರಕರಣ ನ್ಯಾಯಾಲಯದ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮದುವೆ ಸಮಾರಂಭಕ್ಕೆ ಭೇಟಿ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು.