ETV Bharat / state

Next CM ವಿಚಾರ ಬಹಿರಂಗ ಚರ್ಚೆ ಅನಾವಶ್ಯಕ: ಸತೀಶ್​ ಜಾರಕಿಹೊಳಿ - satish jarkiholi reaction about next CM

ನಮಗೆ 2023 ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಗುರಿ ಇದೆ. ಸಿಎಂ ಆಗಲು ಯಾರಿಗೆ ಆಸೆ ಇರುವುದಿಲ್ಲ ಹೇಳಿ?, ಆದರೆ ಈ ಕುರಿತು ಬಹಿರಂಗ ಚರ್ಚೆ ಮಾಡುವುದು ಬೇಡ. ಈಗ Next CM ಚರ್ಚೆ ಅನಾವಶ್ಯಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ​ ಸತೀಶ್​ ಜಾರಕಿಹೊಳಿ ಹೇಳಿದರು.

satish jarkiholi
ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ​ ಸತೀಶ್​ ಜಾರಕಿಹೊಳಿ
author img

By

Published : Jul 18, 2021, 12:15 PM IST

ಕುಷ್ಟಗಿ: ಸಿಎಂ ಆಗಲು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ​ಅಷ್ಟೇ ಅಲ್ಲ, ಕಾಂಗ್ರೆಸ್​ನಲ್ಲಿ ಅನೇಕ ಅರ್ಹ ನಾಯಕರಿದ್ದಾರೆ. ಈ ಕುರಿತು ಬಹಿರಂಗ ಚರ್ಚೆ ಮಾಡುವುದು ಬೇಡ. ಈಗ ಸಿಎಂ ಚರ್ಚೆ ಅನಾವಶ್ಯಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ್​ ಜಾರಕಿಹೊಳಿ ಹೇಳಿದರು.

ಇತ್ತೀಚೆಗೆ ಕೋವಿಡ್​ನಿಂದಾಗಿ ಅಕಾಲಿಕ ಮರಣಹೊಂದಿದ್ದ ಆಪ್ತ ಕಾರ್ಯಕರ್ತ ಮಹೇಶ ಕೊನಸಾಗರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ನಮಗೆ 2023ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಗುರಿ ಇದೆ. ಸಿಎಂ ಆಗಲು ಯಾರಿಗೆ ಆಸೆ ಇರುವುದಿಲ್ಲ ಹೇಳಿ?. ಸಿಎಂ ಆಗುವ ಆಸೆ ಇರಬಾರದು ಅಂತೇನೂ ಇಲ್ಲ, ಎಲ್ಲರಿಗೂ ಸಿಎಂ‌ ಆಗುವ ಆಸೆ ಇದ್ದೇ ಇರುತ್ತದೆ. ಮುಂದಿನ ಚುನಾವಣೆಯಲ್ಲಿ‌‌ ಕಾಂಗ್ರೆಸ್ ಪಕ್ಷದಿಂದ 113 ಮಂದಿ ಶಾಸಕರು ಆಯ್ಕೆಯಾಗಬೇಕು, ಅಗ ಹೈಕಮಾಂಡ್ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ​ ಸತೀಶ್​ ಜಾರಕಿಹೊಳಿ

ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ. ಈ ಹಿಂದೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ಸಂದರ್ಭದಲ್ಲಿ 40, 50 ಸೀಟ್​ಗಳು ಮಾತ್ರ ಬಂದಿದ್ದವು. ಬಿಜೆಪಿ ಟಾರ್ಗೆಟ್ ಅಷ್ಟೇ, ಹೆಚ್ಚು ಸ್ಥಾನ ಬರುವುದಿಲ್ಲ ಎಂದು ಸತೀಶ್​ ಜಾರಕಿಹೊಳಿ ಭವಿಷ್ಯ ನುಡಿದರು.

ಕುಷ್ಟಗಿ: ಸಿಎಂ ಆಗಲು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ​ಅಷ್ಟೇ ಅಲ್ಲ, ಕಾಂಗ್ರೆಸ್​ನಲ್ಲಿ ಅನೇಕ ಅರ್ಹ ನಾಯಕರಿದ್ದಾರೆ. ಈ ಕುರಿತು ಬಹಿರಂಗ ಚರ್ಚೆ ಮಾಡುವುದು ಬೇಡ. ಈಗ ಸಿಎಂ ಚರ್ಚೆ ಅನಾವಶ್ಯಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ್​ ಜಾರಕಿಹೊಳಿ ಹೇಳಿದರು.

ಇತ್ತೀಚೆಗೆ ಕೋವಿಡ್​ನಿಂದಾಗಿ ಅಕಾಲಿಕ ಮರಣಹೊಂದಿದ್ದ ಆಪ್ತ ಕಾರ್ಯಕರ್ತ ಮಹೇಶ ಕೊನಸಾಗರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ನಮಗೆ 2023ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಗುರಿ ಇದೆ. ಸಿಎಂ ಆಗಲು ಯಾರಿಗೆ ಆಸೆ ಇರುವುದಿಲ್ಲ ಹೇಳಿ?. ಸಿಎಂ ಆಗುವ ಆಸೆ ಇರಬಾರದು ಅಂತೇನೂ ಇಲ್ಲ, ಎಲ್ಲರಿಗೂ ಸಿಎಂ‌ ಆಗುವ ಆಸೆ ಇದ್ದೇ ಇರುತ್ತದೆ. ಮುಂದಿನ ಚುನಾವಣೆಯಲ್ಲಿ‌‌ ಕಾಂಗ್ರೆಸ್ ಪಕ್ಷದಿಂದ 113 ಮಂದಿ ಶಾಸಕರು ಆಯ್ಕೆಯಾಗಬೇಕು, ಅಗ ಹೈಕಮಾಂಡ್ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ​ ಸತೀಶ್​ ಜಾರಕಿಹೊಳಿ

ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ. ಈ ಹಿಂದೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ಸಂದರ್ಭದಲ್ಲಿ 40, 50 ಸೀಟ್​ಗಳು ಮಾತ್ರ ಬಂದಿದ್ದವು. ಬಿಜೆಪಿ ಟಾರ್ಗೆಟ್ ಅಷ್ಟೇ, ಹೆಚ್ಚು ಸ್ಥಾನ ಬರುವುದಿಲ್ಲ ಎಂದು ಸತೀಶ್​ ಜಾರಕಿಹೊಳಿ ಭವಿಷ್ಯ ನುಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.