ETV Bharat / state

ಚಿಕೂನ್​ಗುನ್ಯಾ ಭೀತಿ ನಡುವೆಯೂ ಡಿಸಿ ಗ್ರಾಮ ವಾಸ್ತವ್ಯಕ್ಕೆ ರ‍್ಯಾವಣಕಿ ಸಜ್ಜು

ಫೆ.20 ರಂದು ಕೊಪ್ಪಳ ಡಿಸಿ ವಿಕಾಸ್ ಕಿಶೋರ್ ಸುರಾಳ್ಕರ್ ಜಿಲ್ಲೆಯ ರ‍್ಯಾವಣಕಿ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದು, ಅದಕ್ಕಾಗಿ ಗ್ರಾಮ ಸಕಲ ರೀತಿಯಲ್ಲಿ ಸಜ್ಜುಗೊಳ್ಳುತ್ತಿದೆ.

author img

By

Published : Feb 17, 2021, 11:42 AM IST

ryavanaki village is ready for koppala dc village stay
ಡಿಸಿ ಗ್ರಾಮ ವಾಸ್ತವ್ಯಕ್ಕೆ ರ‍್ಯಾವಣಕಿ ಗ್ರಾಮ ಸಜ್ಜು

ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕು ರ‍್ಯಾವಣಕಿಯಲ್ಲಿ ತಿಂಗಳಿನಿಂದ ಗ್ರಾಮಸ್ಥರಿಗೆ ಚಿಕೂನ್ ಗುನ್ಯ ಲಕ್ಷಣಗಳಾದ ಜ್ವರ, ಮೈ ಕೈ ನೋವು ಕಾಣಿಸಿಕೊಂಡಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲೂ ಈ ಗ್ರಾಮ ಫೆ.20 ಕೊಪ್ಪಳ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಸಜ್ಜಾಗಿದೆ.

ryavanaki village is ready for koppala dc village stay
ಡಿಸಿ ಗ್ರಾಮ ವಾಸ್ತವ್ಯಕ್ಕೆ ರ‍್ಯಾವಣಕಿ ಗ್ರಾಮ ಸಜ್ಜು

ನೂರಕ್ಕೂ ಅಧಿಕ ಜನರು ಚಳಿಜ್ವರ, ಮೈ- ಕೈ ನೋವಿನಿಂದ ಬಳಲುತ್ತಿದ್ದು, ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡರೂ ಜ್ವರ ನಿಯಂತ್ರಣಕ್ಕೆ ಬಂದಿಲ್ಲ. ಈ ನಡುವೆಯೂ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ. ರಸ್ತೆಯ ಅಕ್ಕ ಪಕ್ಕದಲ್ಲಿ ಬಿದ್ದಿದ್ದ ತ್ಯಾಜ್ಯ, ತಿಪ್ಪೆ ಗುಂಡಿ ತೆರವುಗೊಂಡಿವೆ ಹೂಳು ತುಂಬಿದ್ದ ಚರಂಡಿಗಳನ್ನು ಜೆಸಿಬಿ ಯಂತ್ರದಿಂದ ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿವೆ.

ಈ ಹಿನ್ನೆಲೆ ತಾಲೂಕು ಆಡಳಿತ ರ‍್ಯಾವಣಕಿ ಗ್ರಾಮದಲ್ಲಿ ಮೊಕ್ಕಾಂ ಮಾಡಿದ್ದು, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಫೆ.20 ರಂದು ಆಗಮಿಸಿ ಅಧಿಕಾರಿಗಳ ಸಮಕ್ಷದಲ್ಲಿ ಗ್ರಾಮದ ಕುಂದು ಕೊರತೆ ಆಲಿಸಿ ಅಲ್ಲಿಯೇ ಪರಿಹಾರ ಕಂಡುಕೊಳ್ಳುವರು.

ಇದನ್ನೂ ಓದಿ:ಲೈಸೆನ್ಸ್​ ಬಂದೂಕು, ಒಡವೆ, ನಗದು ಸೇರಿದಂತೆ ಟಿಕ್ ಟಾಕ್​ ​ಸ್ಟಾರ್​ ಮನೆಯಲ್ಲಿ ಭಾರಿ ಕಳ್ಳತನ!

ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕು ರ‍್ಯಾವಣಕಿಯಲ್ಲಿ ತಿಂಗಳಿನಿಂದ ಗ್ರಾಮಸ್ಥರಿಗೆ ಚಿಕೂನ್ ಗುನ್ಯ ಲಕ್ಷಣಗಳಾದ ಜ್ವರ, ಮೈ ಕೈ ನೋವು ಕಾಣಿಸಿಕೊಂಡಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲೂ ಈ ಗ್ರಾಮ ಫೆ.20 ಕೊಪ್ಪಳ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಸಜ್ಜಾಗಿದೆ.

ryavanaki village is ready for koppala dc village stay
ಡಿಸಿ ಗ್ರಾಮ ವಾಸ್ತವ್ಯಕ್ಕೆ ರ‍್ಯಾವಣಕಿ ಗ್ರಾಮ ಸಜ್ಜು

ನೂರಕ್ಕೂ ಅಧಿಕ ಜನರು ಚಳಿಜ್ವರ, ಮೈ- ಕೈ ನೋವಿನಿಂದ ಬಳಲುತ್ತಿದ್ದು, ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡರೂ ಜ್ವರ ನಿಯಂತ್ರಣಕ್ಕೆ ಬಂದಿಲ್ಲ. ಈ ನಡುವೆಯೂ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ. ರಸ್ತೆಯ ಅಕ್ಕ ಪಕ್ಕದಲ್ಲಿ ಬಿದ್ದಿದ್ದ ತ್ಯಾಜ್ಯ, ತಿಪ್ಪೆ ಗುಂಡಿ ತೆರವುಗೊಂಡಿವೆ ಹೂಳು ತುಂಬಿದ್ದ ಚರಂಡಿಗಳನ್ನು ಜೆಸಿಬಿ ಯಂತ್ರದಿಂದ ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿವೆ.

ಈ ಹಿನ್ನೆಲೆ ತಾಲೂಕು ಆಡಳಿತ ರ‍್ಯಾವಣಕಿ ಗ್ರಾಮದಲ್ಲಿ ಮೊಕ್ಕಾಂ ಮಾಡಿದ್ದು, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಫೆ.20 ರಂದು ಆಗಮಿಸಿ ಅಧಿಕಾರಿಗಳ ಸಮಕ್ಷದಲ್ಲಿ ಗ್ರಾಮದ ಕುಂದು ಕೊರತೆ ಆಲಿಸಿ ಅಲ್ಲಿಯೇ ಪರಿಹಾರ ಕಂಡುಕೊಳ್ಳುವರು.

ಇದನ್ನೂ ಓದಿ:ಲೈಸೆನ್ಸ್​ ಬಂದೂಕು, ಒಡವೆ, ನಗದು ಸೇರಿದಂತೆ ಟಿಕ್ ಟಾಕ್​ ​ಸ್ಟಾರ್​ ಮನೆಯಲ್ಲಿ ಭಾರಿ ಕಳ್ಳತನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.