ETV Bharat / state

ಅಪಾಯದಲ್ಲೂ ನಾವು ಭಯಬೀಳಲ್ಲ: ಸೇಫ್​ ಆಗಿ ಬಂದ ರಕ್ಷಣಾ ಸಿಬ್ಬಂದಿಯ ಕೆಚ್ಚೆದೆಯ ಮಾತು - tungabhadra water flood

ನೆರೆ ಸಂದರ್ಭದಲ್ಲಿ ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಜನರನ್ನು ನಾವು ರಕ್ಷಣೆ ಮಾಡಿದ್ದೇವೆ. ಇಂದು ತಾಂತ್ರಿಕ ದೋಷವುಂಟಾಗಿ ಬೋಟ್ ಮಗುಚಿ ಬಿದ್ದಿತು. ನಾವು ಸಾವಿರಾರು ಜನರನ್ನು ರಕ್ಷಣೆ ಮಾಡಿರುವ ಪುಣ್ಯದಿಂದ ಮತ್ತೆ ಸೇಫ್ ಆಗಿ ಬಂದಿದ್ದೇವೆ. ಇಂತಹ ಸೇವೆಗೆ ನಾವು ಯಾವಾಗಲೂ ಸಿದ್ಧ ಎಂದು ಸಿವಿಲ್ ಡಿಫೆನ್ಸ್​​ ಕಮಾಂಡರ್ ಡಾ. ಚೇತನ್ ಹೇಳಿದರು.

ರಕ್ಷಣಾ ಸಿಬ್ಬಂದಿ
author img

By

Published : Aug 12, 2019, 7:45 PM IST

ಕೊಪ್ಪಳ: ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿಯಲ್ಲಿದ್ದ ಜನರ ರಕ್ಷಣೆ ವೇಳೆ ನೀರಿನಲ್ಲಿ ಕೊಚ್ಚಿಹೋಗಿ ಬಳಿಕ ಸೇಫ್​ ಆಗಿ ಬಂದ ರಕ್ಷಣಾ ಸಿಬ್ಬಂದಿಯು ಘಟನೆ ಬಗ್ಗೆ ಮಾತನಾಡಿದ್ದಾರೆ.

ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿಯಲ್ಲಿದ್ದ ಜನರ ರಕ್ಷಣೆಗೆ ವೇಳೆ ಆರು ಮಂದಿ ಸಿಬ್ಬಂದಿ ಬೋಟ್‍ ಮುಳುಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಬಳಿಕ ಅವರನ್ನು ರಕ್ಷಣೆ ಮಾಡಲಾಗಿತ್ತು. ಇವರಲ್ಲಿ ಸಿವಿಲ್ ಡಿಫೆನ್ಸ್​​ ಕಮಾಂಡರ್ ಡಾ. ಚೇತನ್ ಅವರು ಪ್ರವಾಹದಲ್ಲಿ ಬರೋಬ್ಬರಿ 12 ಕಿ.ಮೀ. ದೂರದವರೆಗೂ ಈಜಿಕೊಂಡು ಹೋಗಿದ್ದರು.

ಸೇಫ್​ ಆಗಿ ಬಂದ ರಕ್ಷಣಾ ಸಿಬ್ಬಂದಿಯ ಕೆಚ್ಚೆದೆಯ ಮಾತು

ನೆರೆ ಸಂದರ್ಭದಲ್ಲಿ ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಜನರನ್ನು ನಾವು ರಕ್ಷಣೆ ಮಾಡಿದ್ದೇವೆ. ಇಂದು ಸಹ ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗಾಗಿ ಬಂದಿದ್ದೆವು. ಬೋಟ್‍ನಲ್ಲಿ ತಾಂತ್ರಿಕ ದೋಷವುಂಟಾಗಿ ಬೋಟ್ ಮಗುಚಿ ಬಿದ್ದಿತು. ನಾವು ಸಾವಿರಾರು ಜನರನ್ನು ರಕ್ಷಣೆ ಮಾಡಿರುವ ಪುಣ್ಯದಿಂದ ಮತ್ತೆ ಸೇಫ್ ಆಗಿ ಬಂದಿದ್ದೇವೆ. ಇಂತಹ ಸೇವೆಗೆ ನಾವು ಯಾವಾಗಲೂ ಸಿದ್ಧ ಎಂದು ಡಾ. ಚೇತನ್ ಅವರು ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ.

ಇದೇ ಬೋಟ್‍ನಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಸೂಗೂರಪ್ಪ ಈಟಿವಿ ಭಾರತದೊಂದಿಗೆ ಮಾತನಾಡಿ, ತೇಲಿಕೊಂಡು ಹೋಗುವಾಗ ನಾವು ಬದುಕುಳಿಯುತ್ತೇವೆ ಎಂಬ ನಂಬಿಕೆ ಇತ್ತು. ಸ್ಥಳೀಯರ ಸಮಯ ಪ್ರಜ್ಞೆಯಿಂದ ನನ್ನನ್ನು ರಕ್ಷಣೆ ಮಾಡಿದರು. ಜನರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ಸಂದರ್ಭದಲ್ಲಿ ಯಾವುದೇ ಅಪಾಯ ಎದುರಾದರೂ ಸಹ ನಾವು ಭಯಬೀಳುವುದಿಲ್ಲ ಎಂದು ಹೇಳಿದರು.

ಕೊಪ್ಪಳ: ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿಯಲ್ಲಿದ್ದ ಜನರ ರಕ್ಷಣೆ ವೇಳೆ ನೀರಿನಲ್ಲಿ ಕೊಚ್ಚಿಹೋಗಿ ಬಳಿಕ ಸೇಫ್​ ಆಗಿ ಬಂದ ರಕ್ಷಣಾ ಸಿಬ್ಬಂದಿಯು ಘಟನೆ ಬಗ್ಗೆ ಮಾತನಾಡಿದ್ದಾರೆ.

ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿಯಲ್ಲಿದ್ದ ಜನರ ರಕ್ಷಣೆಗೆ ವೇಳೆ ಆರು ಮಂದಿ ಸಿಬ್ಬಂದಿ ಬೋಟ್‍ ಮುಳುಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಬಳಿಕ ಅವರನ್ನು ರಕ್ಷಣೆ ಮಾಡಲಾಗಿತ್ತು. ಇವರಲ್ಲಿ ಸಿವಿಲ್ ಡಿಫೆನ್ಸ್​​ ಕಮಾಂಡರ್ ಡಾ. ಚೇತನ್ ಅವರು ಪ್ರವಾಹದಲ್ಲಿ ಬರೋಬ್ಬರಿ 12 ಕಿ.ಮೀ. ದೂರದವರೆಗೂ ಈಜಿಕೊಂಡು ಹೋಗಿದ್ದರು.

ಸೇಫ್​ ಆಗಿ ಬಂದ ರಕ್ಷಣಾ ಸಿಬ್ಬಂದಿಯ ಕೆಚ್ಚೆದೆಯ ಮಾತು

ನೆರೆ ಸಂದರ್ಭದಲ್ಲಿ ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಜನರನ್ನು ನಾವು ರಕ್ಷಣೆ ಮಾಡಿದ್ದೇವೆ. ಇಂದು ಸಹ ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗಾಗಿ ಬಂದಿದ್ದೆವು. ಬೋಟ್‍ನಲ್ಲಿ ತಾಂತ್ರಿಕ ದೋಷವುಂಟಾಗಿ ಬೋಟ್ ಮಗುಚಿ ಬಿದ್ದಿತು. ನಾವು ಸಾವಿರಾರು ಜನರನ್ನು ರಕ್ಷಣೆ ಮಾಡಿರುವ ಪುಣ್ಯದಿಂದ ಮತ್ತೆ ಸೇಫ್ ಆಗಿ ಬಂದಿದ್ದೇವೆ. ಇಂತಹ ಸೇವೆಗೆ ನಾವು ಯಾವಾಗಲೂ ಸಿದ್ಧ ಎಂದು ಡಾ. ಚೇತನ್ ಅವರು ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ.

ಇದೇ ಬೋಟ್‍ನಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಸೂಗೂರಪ್ಪ ಈಟಿವಿ ಭಾರತದೊಂದಿಗೆ ಮಾತನಾಡಿ, ತೇಲಿಕೊಂಡು ಹೋಗುವಾಗ ನಾವು ಬದುಕುಳಿಯುತ್ತೇವೆ ಎಂಬ ನಂಬಿಕೆ ಇತ್ತು. ಸ್ಥಳೀಯರ ಸಮಯ ಪ್ರಜ್ಞೆಯಿಂದ ನನ್ನನ್ನು ರಕ್ಷಣೆ ಮಾಡಿದರು. ಜನರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ಸಂದರ್ಭದಲ್ಲಿ ಯಾವುದೇ ಅಪಾಯ ಎದುರಾದರೂ ಸಹ ನಾವು ಭಯಬೀಳುವುದಿಲ್ಲ ಎಂದು ಹೇಳಿದರು.

Intro:Body:ಕೊಪ್ಪಳ:- ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿಯಲ್ಲಿದ್ದ ಜನರ ರಕ್ಷಣೆಗೆ ಬಂದಿದ್ದ ರಕ್ಷಣಾ ಸಿಬ್ಬಂದಿ ನದಿ ಪ್ರವಾಹಕ್ಕೆ ಕೊಚ್ಚಿಹೋಗಿ ಬಳಿಕ ಸೇಫ್ ಆಗಿ ಮರಳಿದ್ದಾರೆ. ನದಿಯಲ್ಲಿ ಕೊಚ್ಚಿ ಹೋದಾಗ ಒಬ್ಬರು ಬರೋಬ್ಬರಿ 12 ಕಿ.ಮೀಟರ್ ದೂರವನ್ನು ಈಜಿಕೊಂಡು ಹೋದ ಘಟನೆಯನ್ನು ಮೈಜುಮ್ಮೆನ್ನುವಂತಿದೆ. ರಕ್ಷಣಾ ಕಾರ್ಯದಲ್ಲಿದ್ದ ಬೋಟ್‍ನಲ್ಲಿ ಸಿವಿಲ್ ಡಿಫೆನ್ಸಿಯ ಮೂವರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಒಬ್ಬ ಸಿಬ್ಬಂದಿ ಹಾಗೂ ಎನ್‍ಡಿಆರ್‍ಎಫ್‍ನ ಓರ್ವ ಸಿಬ್ಬಂದಿ ಬೋಟ್ ಮಗುಚಿಬಿದ್ದು ನದಿಯಲ್ಲಿ ಕೊಚ್ಚಿ ಹೋಗಿದ್ದರು. ನೀರಿನಲ್ಲಿ ಕೊಚ್ಚಿ ಹೋದವರೆಲ್ಲರೂ ಸೇಫ್ ಆಗಿ ಬಂದಿದ್ದಾರೆ. ಈ ಪೈಕಿ ಸಿವಿಲ್ ಡಿಫೆನ್ಸ್‍ನ ಕಮಾಂಡರ್ ಡಾ. ಚೇತನ್ ಅವರು ಪ್ರವಾಹದಲ್ಲಿ ಬರೋಬ್ಬರಿ 12 ಕಿ.ಮೀ. ದೂರದವರೆಗೂ ಈಜಿಕೊಂಡು ಹೋಗಿದ್ದಾರೆ. ನೆರೆ ಸಂದರ್ಭದಲ್ಲಿ ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಜನರನ್ನು ನಾವು ರಕ್ಷಣೆ ಮಾಡಿದ್ದೇವೆ. ಇಂದು ಸಹ ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗಾಗಿ ಬಂದಿದ್ದೆವು. ಬೋಟ್‍ನಲ್ಲಿ ತಾಂತ್ರಿಕ ದೋಷವುಂಟಾಗಿ ಬೋಟ್ ಮಗುಚಿ ಬಿದ್ದಿತು. ನಾವು ಸಾವಿರಾರು ಜನರನ್ನು ರಕ್ಷಣೆ ಮಾಡಿರುವ ಪುಣ್ಯದಿಂದ ನಾವು ಮತ್ತೆ ಸೇಫ್ ಆಗಿ ಬಂದಿದ್ದೇವೆ. ಇಂತಹ ಸೇವೆಗೆ ನಾವು ಯಾವಾಗಲೂ ಸಿದ್ದ ಎಂದು ಡಾ. ಚೇತನ್ ಅವರು ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ. ಇನ್ನು ಇದೇ ಬೋಟ್‍ನಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಸೂಗೂರಪ್ಪ ಅವರು ಸಹ ತೇಲಿಕೊಂಡು ಹೋಗಿದ್ದರು. ತೇಲಿಕೊಂಡು ಹೋಗುವಾಗ ನಾವು ಬದುಕುಳಿಯುತ್ತೇವೆ ಎಂಬ ನಂಬಿಕೆ ಇತ್ತು. ಸ್ಥಳೀಯರ ಸಮಯ ಪ್ರಜ್ಞೆಯಿಂದ ನನ್ನನ್ನು ರಕ್ಷಣೆ ಮಾಡಿದರು. ಜನರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ಸಂದರ್ಭದಲ್ಲಿ ಯಾವುದೇ ಅಪಾಯ ಎದುರಾದರೂ ಸಹ ನಾವು ಭಯಬೀಳುವುದಿಲ್ಲ ಎಂದು ಈಟಿವಿ ಭಾರತದೊಂದಿಗೆ ಸೂಗೂರಪ್ಪ ಅವರು ಮಾತನಾಡಿ ಹೇಳಿದರು.

ಬೈಟ್1:-ಡಾ.ಪಿಆರ್‍ಎಸ್ ಚೇತನ್, 12 ಕಿ.ಮೀ. ಈಜಿ ಸೇಫ್ ಆದ ಕಮಾಂಡರ್

ಬೈಟ್2:- ಸೂಗೂರಪ್ಪ, ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಅಗ್ನಿಶಾಮಕ ಸಿಬ್ಬಂದಿ (ನಮ್ಮ ಈಟಿವಿ ಭಾರತ ಲೋಗೋದೊಂದಿಗೆ ಮಾತನಾಡಿರುವ ವ್ಯಕ್ತಿ.)
--------------
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.