ETV Bharat / state

ತನ್ನ ಮೂರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ!

ತನ್ನ ಮೂರು ಮಕ್ಕಳನ್ನು ಕೊಂದು ತಾಯಿಯೊಬ್ಬರು ತಾವೂ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

author img

By

Published : Jun 18, 2019, 11:58 AM IST

ಹೆತ್ತ ಮಕ್ಕಳನ್ನೇ ಕೊಂದು ತಾಯಿ ಆತ್ಮಹತ್ಯೆ

ಕೊಪ್ಪಳ: ತನ್ನ ಮೂರು ಮಕ್ಕಳನ್ನು ಕೊಂದು ಬಳಿಕ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಹೆತ್ತ ಮಕ್ಕಳನ್ನೇ ಕೊಂದು ತಾಯಿ ಆತ್ಮಹತ್ಯೆ

ಜಿಲ್ಲೆಯ ಕುಕನೂರು ತಾಲೂಕಿನ ಯರೆ ಹಂಚಿನಾಳ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ದುರ್ಘಟನೆ ನಡೆದಿದ್ದು, ಮೂವರು ಮಕ್ಕಳು ಸೇರಿದಂತೆ ತಾಯಿ ಯಲ್ಲಮ್ಮ ಕೂಡ ದಾರುಣ ಅಂತ್ಯ ಕಂಡಿದ್ದಾರೆ. ಹಿರಿಯ ಮಗಳಾದ ಅಕ್ಷತಾಳನ್ನು ನೀರು ತುಂಬಿಸುವ ಹಂಡೆಯಲ್ಲಿ‌ ಮುಳುಗಿಸಿ ಮತ್ತು ಎರಡು ವರ್ಷದ ಮಗನಾದ ನಾಗರಾಜನನ್ನು ನೀರಿರುವ ಬಕೆಟ್​​ನಲ್ಲಿ ಮುಳುಗಿಸಿ ಹಾಗೂ ನಾಲ್ಕು ವರ್ಷದ ಮಗಳಾದ ಕಾವ್ಯಳನ್ನು ನೀರಿನ ಟ್ಯಾಂಕಿಯಲ್ಲಿ ಮುಳುಗಿಸಿ ತಾಯಿಯೇ ಸಾಯಿಸಿದ್ದಾರೆ.

ಬಳಿಕ ತಾಯಿ ಯಲ್ಲಮ್ಮ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ, ಯಲ್ಲಮ್ಮನ ಗಂಡ ಪ್ರತಿನಿತ್ಯ ಕುಡಿದು ಬಂದು ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಇವರು ರೋಸಿ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಘಟನೆಯಿಂದ ಇಡೀ ಊರಿಗೆ ಊರೇ ಮಮ್ಮಲ ಮರುಗುತ್ತಿದೆ. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳ: ತನ್ನ ಮೂರು ಮಕ್ಕಳನ್ನು ಕೊಂದು ಬಳಿಕ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಹೆತ್ತ ಮಕ್ಕಳನ್ನೇ ಕೊಂದು ತಾಯಿ ಆತ್ಮಹತ್ಯೆ

ಜಿಲ್ಲೆಯ ಕುಕನೂರು ತಾಲೂಕಿನ ಯರೆ ಹಂಚಿನಾಳ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ದುರ್ಘಟನೆ ನಡೆದಿದ್ದು, ಮೂವರು ಮಕ್ಕಳು ಸೇರಿದಂತೆ ತಾಯಿ ಯಲ್ಲಮ್ಮ ಕೂಡ ದಾರುಣ ಅಂತ್ಯ ಕಂಡಿದ್ದಾರೆ. ಹಿರಿಯ ಮಗಳಾದ ಅಕ್ಷತಾಳನ್ನು ನೀರು ತುಂಬಿಸುವ ಹಂಡೆಯಲ್ಲಿ‌ ಮುಳುಗಿಸಿ ಮತ್ತು ಎರಡು ವರ್ಷದ ಮಗನಾದ ನಾಗರಾಜನನ್ನು ನೀರಿರುವ ಬಕೆಟ್​​ನಲ್ಲಿ ಮುಳುಗಿಸಿ ಹಾಗೂ ನಾಲ್ಕು ವರ್ಷದ ಮಗಳಾದ ಕಾವ್ಯಳನ್ನು ನೀರಿನ ಟ್ಯಾಂಕಿಯಲ್ಲಿ ಮುಳುಗಿಸಿ ತಾಯಿಯೇ ಸಾಯಿಸಿದ್ದಾರೆ.

ಬಳಿಕ ತಾಯಿ ಯಲ್ಲಮ್ಮ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ, ಯಲ್ಲಮ್ಮನ ಗಂಡ ಪ್ರತಿನಿತ್ಯ ಕುಡಿದು ಬಂದು ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಇವರು ರೋಸಿ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಘಟನೆಯಿಂದ ಇಡೀ ಊರಿಗೆ ಊರೇ ಮಮ್ಮಲ ಮರುಗುತ್ತಿದೆ. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:ಕೊಪ್ಪಳ:- ತನ್ನ ಮೂರು ಮಕ್ಕಳನ್ನು ಸಾಯಿಸಿದ ತಾಯಿ ಬಳಿಕ ತಾನೂವಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಜಿಲ್ಲೆಯ ಕುಕನೂರು ತಾಲೂಕಿನ ಯರೆ ಹಂಚಿನಾಳ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ದರ್ಘಟನೆ ನಡೆದಿದ್ದು ಮೂವರು ಮಕ್ಕಳು ಸೇರಿದಂತೆ ತಾಯಿ ಯಲ್ಲಮ್ಮ ಕೂಡ ದಾರಯಣ ಅಂತ್ಯಕಂಡಿದ್ದಾರೆ. ಹಿರಿಯ ಮಗಳಾದ ಅಕ್ಷತಾಳ ನ್ನು ನೀರು ತುಂಬಿಸುವ ಹಂಡೆಯಲ್ಲಿ‌ ಮುಳುಗಿಸಿ ಮತ್ತು ಎರಡು ವರ್ಷದ ಮಗನಾದ ನಾಗರಾಜನನ್ನು ನೀರಿರುವ ಬಕೆಟ್ ನಲ್ಲಿ ಮುಳುಗಿಸಿ ಹಾಗೂ ನಾಲ್ಕು ವರ್ಷದ ಮಗಳಾದ ಕಾವ್ಯಳನ್ನು ನೀರಿನ ಟಾಕಿಯಲ್ಲಿ ಮುಳುಗಿಸಿ ತಾಯಿ ಸಾಯಿಸಿದ್ದಾಳೆ. ಬಳಿಕ ತಾನೂ‌ ಮನೆಯಲ್ಲಿಯಢ ನೇಣು ಬಿಗಿದುಕೊಂಡು ತಾಯಿ ಯಲ್ಲಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕುಕನೂರು ಪೋಲಿಸರು ಆಗಮಿಸಿ ಪರಿಶೀಲನೆ ನೆಡಸಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ, ಯಲ್ಲಮ್ಮನ ಗಂಡ ಪ್ರತಿನಿತ್ಯ ಕುಡಿದು ಬಂದು ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಇವರು ರೋಸಿ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಘಟನೆಯಿಂದ ಇಡೀ ಊರಿಗೆ ಊರೇ ಮಮ್ಮಲ ಮರುಗುತ್ತಿದೆ. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.