ETV Bharat / state

ಗಂಗಾವತಿಯಲ್ಲಿ ಚಿರತೆ ಸೆರೆ - ಕನಕಗಿರಿ ತಾಲ್ಲೂಕಿನ ಅಡವಿಭಾವಿ

ರೈತ ಯಮನೂರಪ್ಪ ನಾಯಕ ಎಂಬುವವರ ದ್ರಾಕ್ಷಿ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಗಂಡು ಚಿರತೆ ಸೆರೆಯಾಗಿದೆ.

Leopard caught
ಸೆರೆಯಾದ ಚಿರತೆ
author img

By

Published : Jan 9, 2021, 9:53 AM IST

ಗಂಗಾವತಿ: ಚಿರತೆಯೊಂದು ದ್ರಾಕ್ಷಿ ತೋಟದಲ್ಲಿ ಇರಿಸಿದ್ದ ಬೋನಿಗೆ ಬಿದ್ದ ಘಟನೆ ಕನಕಗಿರಿ ತಾಲ್ಲೂಕಿನ ಅಡವಿಭಾವಿಯಲ್ಲಿ ನಡೆದಿದೆ.

ಬೋನಿಗೆ ಬಿದ್ದ ಗಂಡು ಚಿರತೆ

ರೈತ ಯಮನೂರಪ್ಪ ನಾಯಕ ಎಂಬುವರ ದ್ರಾಕ್ಷಿ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಗಂಡು ಚಿರತೆ ಸೆರೆಯಾಗಿದೆ. ಚಿರತೆ ಅಂದಾಜು ಎರಡರಿಂದ ಮೂರು ವರ್ಷದ್ದಾಗಿದೆ. ಸುಮಾರು ನಾಲ್ಕು ಅಡಿ ಉದ್ದ ಇದ್ದು, ಚಿರತೆ ಸಂಪೂರ್ಣ ಆರೋಗ್ಯವಾಗಿದೆ ಎಂದು ಅರಣ್ಯ ಇಲಾಖೆಯ ಗಾರ್ಡ್ ಶಿವನಗೌಡ ತಿಳಿಸಿದ್ದಾರೆ.

ಆರೋಗ್ಯ ತಪಾಸಣೆಯ ಬಳಿಕ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರುವ ಅಥವಾ ಮೃಗಾಲಯಕ್ಕೆ ಕಳಿಸುವ ಬಗ್ಗೆ ಚಿಂತನೆ ‌ನಡೆಸಲಾಗುವುದು ಎಂದು ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.

ಗಂಗಾವತಿ: ಚಿರತೆಯೊಂದು ದ್ರಾಕ್ಷಿ ತೋಟದಲ್ಲಿ ಇರಿಸಿದ್ದ ಬೋನಿಗೆ ಬಿದ್ದ ಘಟನೆ ಕನಕಗಿರಿ ತಾಲ್ಲೂಕಿನ ಅಡವಿಭಾವಿಯಲ್ಲಿ ನಡೆದಿದೆ.

ಬೋನಿಗೆ ಬಿದ್ದ ಗಂಡು ಚಿರತೆ

ರೈತ ಯಮನೂರಪ್ಪ ನಾಯಕ ಎಂಬುವರ ದ್ರಾಕ್ಷಿ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಗಂಡು ಚಿರತೆ ಸೆರೆಯಾಗಿದೆ. ಚಿರತೆ ಅಂದಾಜು ಎರಡರಿಂದ ಮೂರು ವರ್ಷದ್ದಾಗಿದೆ. ಸುಮಾರು ನಾಲ್ಕು ಅಡಿ ಉದ್ದ ಇದ್ದು, ಚಿರತೆ ಸಂಪೂರ್ಣ ಆರೋಗ್ಯವಾಗಿದೆ ಎಂದು ಅರಣ್ಯ ಇಲಾಖೆಯ ಗಾರ್ಡ್ ಶಿವನಗೌಡ ತಿಳಿಸಿದ್ದಾರೆ.

ಆರೋಗ್ಯ ತಪಾಸಣೆಯ ಬಳಿಕ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರುವ ಅಥವಾ ಮೃಗಾಲಯಕ್ಕೆ ಕಳಿಸುವ ಬಗ್ಗೆ ಚಿಂತನೆ ‌ನಡೆಸಲಾಗುವುದು ಎಂದು ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.