ಕೊಪ್ಪಳ : ತಾಲೂಕಿನ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯ ಉಪನಾಲೆಗೆ ಇಂದು ಗೇಟ್ ಅಳವಡಿಸಲಾಯಿತು.
ಪೂಜೆ ಸಲ್ಲಿಸುವ ಮೂಲಕ ನಾಲೆಯ ಹೊಸ ಗೇಟ್ಅನ್ನು ಅಳವಡಿಸಲಾಯಿತು. ಕಳೆದ ಆಗಷ್ಟ್ ತಿಂಗಳಲ್ಲಿ ಈ ಗೇಟ್ನಲ್ಲಿ ದೋಷ ಕಂಡು ಬಂದಿತ್ತು. ಅಲ್ಲದೆ ಸಾಕಷ್ಟು ಆತಂತಕ್ಕೆ ಕಾರಣವಾಗಿತ್ತು. ಸತತ ಕಾರ್ಯಾಚರಣೆಯ ಮೂಲಕ ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತು. ಬಳಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು.
ಇಂದು ಕೆಲಸ ಮುಗಿದ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಹೊಸ ಗೇಟ್ ಅಳವಡಿಸಲಾಯಿತು. ಕೆಎನ್ಎನ್ಎಲ್ ನ ಕಾರ್ಯಪಾಲಕ ಅಭಿಯಂತರ ನಾಗಭೂಷಣ, ಎಇಇ ಪುರುಷೋತ್ತಮ, ಎಇ ಕೃಷ್ಣ ಕುಮಾರ್, ವೆಂಕಟರಮಣ ಶಾಸ್ತ್ರಿ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.