ಗಂಗಾವತಿ: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ 50 ಮಂದಿ ಬಡ ಕೋವಿಡ್ ರೋಗಿಗಳ ಚಿಕಿತ್ಸೆಗೆ ನೆರವಾಗಲು ದಾನಿಯೊಬ್ಬರು ಮುಂದಾಗಿದ್ದಾರೆ.
![gangavathi](https://etvbharatimages.akamaized.net/etvbharat/prod-images/kn-gvt-05-05-industrialist-open-hand-poor-covid-patient-pic-kac10005_05052021114430_0505f_1620195270_301.jpg)
ನಗರದ ಉದ್ಯಮಿ ಕೆ. ಕಾಳಪ್ಪ ಎಂಬುವವರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ ಬಡ ಸೋಂಕಿತರಿಗೆ ಸಿಟಿ ಸ್ಕ್ಯಾನ್ ಮಾಡಿಸಲು ತಗಲುವ ಸುಮಾರು 4 ರಿಂದ 5 ಸಾವಿರ ಮೊತ್ತದಂತೆ ಹಣ ಪಾವತಿಗೆ ಮುಂದಾಗಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ನೀಡುವುದಾಗಿ ಅವರು ಘೋಷಿಸಿದ್ದಾರೆ.
ಉದ್ಯಮಿಯ ಸಹಾಯ ಹಸ್ತದ ಹಿನ್ನೆಲೆ ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಈಶ್ವರ ಸವಡಿ ಹಾಗೂ ತಹಶೀಲ್ದಾರ್ ನಾಗರಾಜ್ ಅಭಿನಂದಿಸಿದ್ದಾರೆ.