ETV Bharat / state

ಲೋನ್​ ಕೊಡಿಸೋದಾಗಿ ಮಹಿಳೆಯರಿಗೆ ವಂಚನೆ: ಹಣ, ಒಡವೆ ಕೊಟ್ಟವರು ಕಂಗಾಲು - Fraud for women at Gangavati in Koppal

ಪ್ರಧಾನಿ ಮೋದಿ ಹೆಸರಲ್ಲಿ ಯುವಕನೊಬ್ಬ ಮಹಿಳೆಯರಿಗೆ ಪಂಗನಾಮ ಹಾಕಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಹಿರೇಡಂಕನಕಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Fraud for women at Gangavati in Koppal
ಮೋದಿ ಯೋಜನೆಯಿಂದ ಲೋನ್​ ಕೊಡಿಸುವುದಾಗಿ ಮಹಿಳೆಯರಿಗೆ ವಂಚ
author img

By

Published : Jan 2, 2020, 6:21 PM IST

ಕೊಪ್ಪಳ : ಪ್ರಧಾನಿ ಮೋದಿ ಹೆಸರಲ್ಲಿ ಯುವಕನೊಬ್ಬ ಮಹಿಳೆಯರಿಗೆ ಪಂಗನಾಮ ಹಾಕಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕು ಹಿರೇಡಂಕನಕಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮೋದಿ ಯೋಜನೆಯಿಂದ ಲೋನ್​ ಕೊಡಿಸುವುದಾಗಿ ಮಹಿಳೆಯರಿಗೆ ವಂಚನೆ

ಪ್ರಧಾನಿ ಮೋದಿ ಯೋಜನೆಯಿಂದ ಅಕೌಂಟ್ ಗೆ 15 ಲಕ್ಷ ರುಪಾಯಿ ಬರುತ್ತೆ ಎಂದು ಹೇಳಿ, ಉಮೇಶ ಲಿಂಗದಳ್ಳಿ ಎಂಬ ಯುವಕ ಮಹಿಳೆಯರಿಗೆ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಹಿರೇಡಂಕನಕಲ್ ಗ್ರಾಮದ ಐವರು ಮಹಿಳೆಯರಿಗೆ ಈ ಯುವಕ ಮೋಸ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಪ್ರಧಾನಿ ಮೋದಿಯವರ ಯೋಜನೆಯಿಂದ ನಿಮ್ಮ ಖಾತೆಗೆ ಹಣ ಬರುವಂತೆ ಮಾಡುವೆ ಎಂದು, ಗೌರಮ್ಮ ಎಂಬ ಮಹಿಳೆಯಿಂದ 35 ಗ್ರಾಂ ಬಂಗಾರ, ಒಂದುವರೆ ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾನಂತೆ. ಇದೇ ರೀತಿಯಾಗಿ ಈತ ಗ್ರಾಮದ ಐವರು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಹಣ, ಒಡವೆ ನೀಡಿದ ಮಹಿಳೆಯರು 15 ಲಕ್ಷ ಯಾವಾಗ ಬರುತ್ತೇ ಎಂದು ಕೇಳಿದ್ರೆ, ಬೆದರಿಕೆ ಹಾಕುತ್ತಿದ್ದಾನಂತೆ. ಅಲ್ಲದೆ ಹಣ ಕೇಳಿದ ಕೆಲವರಿಗೆ ಬೌನ್ಸ್​ ಆದ ಚೆಕ್​ ನೀಡಿದ್ದಾನೆ ಎನ್ನಲಾಗುತ್ತಿದೆ.

ಈಗ ಕೆಲ ದಿನಗಳಿಂದ ಹಣ ಪಡೆದುಕೊಂಡ ಉಮೇಶ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, 15 ಲಕ್ಷ ಹಣ ಬರುತ್ತೇ ಎಂದು ಮಗಳ ಮದುವೆಗೆ ಇಟ್ಟಿದ್ದ ಹಣವನ್ನೆಲ್ಲಾ ಕೊಟ್ಟಿದ್ದೇವೆ. ಆದ್ದರಿಂದ ನಮ್ಮ ಹಣ ನಮಗೆ ಕೊಡಿಸಿ ಎಂದು ಮೋಸ ಹೋಗಿರುವ ಗೌರಮ್ಮ ಅಳವತ್ತುಕೊಂಡಿದ್ದಾರೆ.

ಕೊಪ್ಪಳ : ಪ್ರಧಾನಿ ಮೋದಿ ಹೆಸರಲ್ಲಿ ಯುವಕನೊಬ್ಬ ಮಹಿಳೆಯರಿಗೆ ಪಂಗನಾಮ ಹಾಕಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕು ಹಿರೇಡಂಕನಕಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮೋದಿ ಯೋಜನೆಯಿಂದ ಲೋನ್​ ಕೊಡಿಸುವುದಾಗಿ ಮಹಿಳೆಯರಿಗೆ ವಂಚನೆ

ಪ್ರಧಾನಿ ಮೋದಿ ಯೋಜನೆಯಿಂದ ಅಕೌಂಟ್ ಗೆ 15 ಲಕ್ಷ ರುಪಾಯಿ ಬರುತ್ತೆ ಎಂದು ಹೇಳಿ, ಉಮೇಶ ಲಿಂಗದಳ್ಳಿ ಎಂಬ ಯುವಕ ಮಹಿಳೆಯರಿಗೆ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಹಿರೇಡಂಕನಕಲ್ ಗ್ರಾಮದ ಐವರು ಮಹಿಳೆಯರಿಗೆ ಈ ಯುವಕ ಮೋಸ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಪ್ರಧಾನಿ ಮೋದಿಯವರ ಯೋಜನೆಯಿಂದ ನಿಮ್ಮ ಖಾತೆಗೆ ಹಣ ಬರುವಂತೆ ಮಾಡುವೆ ಎಂದು, ಗೌರಮ್ಮ ಎಂಬ ಮಹಿಳೆಯಿಂದ 35 ಗ್ರಾಂ ಬಂಗಾರ, ಒಂದುವರೆ ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾನಂತೆ. ಇದೇ ರೀತಿಯಾಗಿ ಈತ ಗ್ರಾಮದ ಐವರು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಹಣ, ಒಡವೆ ನೀಡಿದ ಮಹಿಳೆಯರು 15 ಲಕ್ಷ ಯಾವಾಗ ಬರುತ್ತೇ ಎಂದು ಕೇಳಿದ್ರೆ, ಬೆದರಿಕೆ ಹಾಕುತ್ತಿದ್ದಾನಂತೆ. ಅಲ್ಲದೆ ಹಣ ಕೇಳಿದ ಕೆಲವರಿಗೆ ಬೌನ್ಸ್​ ಆದ ಚೆಕ್​ ನೀಡಿದ್ದಾನೆ ಎನ್ನಲಾಗುತ್ತಿದೆ.

ಈಗ ಕೆಲ ದಿನಗಳಿಂದ ಹಣ ಪಡೆದುಕೊಂಡ ಉಮೇಶ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, 15 ಲಕ್ಷ ಹಣ ಬರುತ್ತೇ ಎಂದು ಮಗಳ ಮದುವೆಗೆ ಇಟ್ಟಿದ್ದ ಹಣವನ್ನೆಲ್ಲಾ ಕೊಟ್ಟಿದ್ದೇವೆ. ಆದ್ದರಿಂದ ನಮ್ಮ ಹಣ ನಮಗೆ ಕೊಡಿಸಿ ಎಂದು ಮೋಸ ಹೋಗಿರುವ ಗೌರಮ್ಮ ಅಳವತ್ತುಕೊಂಡಿದ್ದಾರೆ.

Intro:Body:ಕೊಪ್ಪಳ:- ಮೋದಿ ಹೆಸರಲ್ಲಿ ಯುವಕನೊಬ್ಬ ಮಹಿಳೆಯರಿಗೆ ಪಂಗನಾಮ ಹಾಕಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಡಂಕನಕಲ್ ಗ್ರಾಮದಲ್ಲಿ ಕೇಳಿಬಂದಿದೆ. ಪ್ರಧಾನಿ ಮೋದಿ ಯೋಜನೆಯಂತೆ ಅಕೌಂಟ್ ಗೆ 15 ಲಕ್ಷ ರುಪಾಯಿ ಬರುತ್ತೆ ಎಂದು ಹೇಳಿ ಉಮೇಶ ಲಿಂಗದಳ್ಳಿ ಎಂಬ ಯುವಕ ಮಹಿಳೆಯರಿಗೆ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹಿರೇಡಂಕನಕಲ್ ಗ್ರಾಮದ ಐವರು ಮಹಿಳೆಯರಿಗೆ ಈ ಯುವಕ ಮೋಸ ಮಾಡಿದ್ದಾನೆ. ಮೋದಿ ಹಣ ಬರುವಂತೆ ಮಾಡುವೆ ಎಂದು ಗೌರಮ್ಮ ಎಂಬ ಮಹಿಳೆಯಿಂದ 35 ಗ್ರಾಂ ಬಂಗಾರ, ಒಂದುವರೆ ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾನಂತೆ. ಇದೇ ರೀತಿಯಾಗಿ ಗ್ರಾಮದಲ್ಲಿ ಐವರು ಮಹಿಳೆಯರಿಗೆ ಮೋಸ ಮಾಡಿದ್ದಾನೆ. 15 ಲಕ್ಷ ಬರುತ್ತೆ ಎಂದು ಹಣ ನೀಡಿದ್ದ ಮಹಿಳೆಯರು ಮೋದಿ ಹಣ ಯಾವಾಗ ಬರುತ್ತೆ ಎಂದು ಕೇಳಿದ್ರೆ ಉಮೇಶ ಬೆದರಿಕೆ ಹಾಕುತ್ತಿದ್ದಾನೆ. ಹಣ ಕೇಳಿದ ಕೆಲವರಿಗೆ ಬೌನ್ಸ ಆದ ಚೆಕ್‌ ನೀಡಿದ್ದಾನಂತೆ. ಈಗ ಕೆಲ ದಿನಗಳಿಂದ ಆತ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನಂತೆ. ಮೋದಿಯ 15 ಲಕ್ಷ ರುಪಾಯಿ ಬರುತ್ತೆ ಎಂದು ಹೇಳಿದ್ದರಿಂದ ಮಗಳ ಮದುವೆಗೆ ಎಂದು ಇಟ್ಟಿದ್ದ ಹಣವನ್ನೆಲ್ಲಾ ಉಮೇಶ್ ಗೆ ಕೊಟ್ಟಿದ್ದೇವೆ ಎಂದು ಮೋಸ ಹೋಗಿರುವ ಗೌರಮ್ಮ ಎಂಬ ಮಹಿಳ ಅಳಲನ್ನು ತೊಡಿಕೊಂಡಿದ್ದಾಳೆ. ನಮ್ಮ ಹಣ ನಮಗೆ ಕೊಡಿಸಿ ಎಂದಹ ಆ ಮಹಿಳೆ ಮನವಿ ಮಾಡಿಕೊಂಡಿದ್ದಾಳೆ.

ಬೈಟ್1:- ಗೌರಮ್ಮ, ಮೋಸ ಹೋಗಿರುವ ಮಹಿಳೆConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.