ETV Bharat / state

ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಅನುದಾನ ಕಡಿತ: ಜೂ. 25 ಕ್ಕೆ ಶಾಸಕರ ಭವನದಲ್ಲಿ ತುರ್ತು ಸಭೆ - Lawyer Amaregauda Patil Biayapura

ಕಲ್ಯಾಣ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಯ ಸರ್ವ ಪಕ್ಷದ ಶಾಸಕರ ತುರ್ತು ಸಭೆಯನ್ನು ಬೆಂಗಳೂರಿನಲ್ಲಿ ಜೂನ್​ 25 ರಂದು ಶಾಸಕರ ಭವನದಲ್ಲಿ ಕರೆಯಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

legislators Emergency meeting
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ
author img

By

Published : Jun 23, 2020, 11:34 AM IST

ಕುಷ್ಟಗಿ(ಕೊಪ್ಪಳ): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಸಕ್ತ ವರ್ಷದಲ್ಲಿ ಅಭಿವೃದ್ದಿ ಅನುದಾನ ಕಡಿತದ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಕಲ್ಯಾಣ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಯ ಸರ್ವ ಪಕ್ಷದ ಶಾಸಕರ ತುರ್ತು ಸಭೆಯನ್ನು ಬೆಂಗಳೂರಿನಲ್ಲಿ 25.06.2020 ರಂದು ಶಾಸಕರ ಭವನ 5ರಲ್ಲಿ (ಎರಡನೇ ಮಹಡಿಯ ಸಭಾಂಗಣ) ಕರೆಯಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಜೂನ್ 25 ಕ್ಕೆ ಶಾಸಕರ ಭವನದಲ್ಲಿ ತುರ್ತು ಸಭೆ ಕರೆಯಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಈ ಕುರಿತು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ 371 (ಜೆ) ವಿಶೇಷ ಸ್ಥಾನಮಾನವನ್ನು ಈಗಿನ ಸರ್ಕಾರ, ಹಿಂದಿನ ಸರ್ಕಾರ ಕಡೆಗಾಣಿಸುತ್ತ ಬಂದಿದೆ. 2020-21ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ, ಕಲಬುರಗಿ ಪ್ರಾದೇಶಿಕ ವಲಯ ಆಯುಕ್ತರು ಬರೆದ ಪತ್ರ ಲಭ್ಯವಾಗಿದೆ. ಆ ಪತ್ರದಲ್ಲಿ 1,100 ಕೋಟಿ ರೂ. ಮಂಜೂರು ಮಾಡುವ ಕುರಿತು ಪ್ರಸ್ತಾಪಿಸಿದ್ದಾರೆ ಎಂದರು.

legislators Emergency meeting
ಜೂನ್ 25 ಕ್ಕೆ ಶಾಸಕರ ಭವನದಲ್ಲಿ ತುರ್ತು ಸಭೆ
legislators Emergency meeting
ಜೂನ್ 25 ಕ್ಕೆ ಶಾಸಕರ ಭವನದಲ್ಲಿ ತುರ್ತು ಸಭೆ

ಈ ಹಿನ್ನೆಲೆಯಲ್ಲಿ ಕಡೇ ಪಕ್ಷ ಬಜೆಟ್​ ಮಂಡನೆಯ ವೇಳೆಯಲ್ಲಿ ಘೋಷಿಸಿದ ಮೊತ್ತ 1500 ರೂ.ಕೋಟಿ ಪ್ರಸ್ತಾಪಿಸಿದ್ದನ್ನು ಬಿಡುಗಡೆಗೊಳಿಸಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಿರ್ವಹಣೆಯ ಅರ್ಥಿಕ ಹೊರೆಯಾಗಿರುವ ಹಿನ್ನೆಲೆಯಲ್ಲಿ ಹಿಂದಿನ ಮುಖ್ಯಮಂತ್ರಿ 2,500 ಕೋಟಿ ರೂ. ಬೇಡಿಕೆ ಬದಲಿಗೆ, ಕಳೆದ ಬಜೆಟ್​ನಲ್ಲಿ ಘೋಷಿಸಿದ 1500 ಕೋಟಿ ರೂ. ಮಂಜೂರು ಮಾಡಬೇಕು ಈ ಹಿನ್ನೆಲೆಯಲ್ಲಿ ಶಾಸಕರ ತುರ್ತು ಸಭೆ ಕರೆಯಲಾಗಿದೆ ಎಂದರು.

ಎಲ್ಲ ಶಾಸಕರಿಗೂ ಪತ್ರ ಬರೆಯಲಾಗಿದ್ದು, ಮೊಬೈಲ್ ಮೂಲಕ ಸಂಪರ್ಕಿಸಿ ಸಭೆಗೆ ಅಹ್ವಾನಿಸಲಾಗಿದ್ದು, ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಈ ಸಭೆಯಲ್ಲಿ ಅನುದಾನ ಕಡಿತ ಮಾತ್ರವಲ್ಲ ಅನುಷ್ಠಾನದಲ್ಲಿ ಆಗಿರುವ ನ್ಯೂನ್ಯತೆ ಕುರಿತು ಚರ್ಚೆ ಹಾಗೂ ಪರಿಹಾರದ ಈ ಸಭೆಗೆ ಎಲ್ಲ ಸಮಾನ ಮನಸ್ಕ ಶಾಸಕರು, ಪಕ್ಷಾತೀತವಾಗಿ ಸ್ಪಂದಿಸಿದ್ದಾರೆ. ಈ ಮಹತ್ವದ ಸಭೆಗೆ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ಶಾಸಕರ ಸಮೂಹ ಸಾರಥ್ಯವಿದೆ ಎಂದರು.

ಕುಷ್ಟಗಿ(ಕೊಪ್ಪಳ): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಸಕ್ತ ವರ್ಷದಲ್ಲಿ ಅಭಿವೃದ್ದಿ ಅನುದಾನ ಕಡಿತದ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಕಲ್ಯಾಣ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಯ ಸರ್ವ ಪಕ್ಷದ ಶಾಸಕರ ತುರ್ತು ಸಭೆಯನ್ನು ಬೆಂಗಳೂರಿನಲ್ಲಿ 25.06.2020 ರಂದು ಶಾಸಕರ ಭವನ 5ರಲ್ಲಿ (ಎರಡನೇ ಮಹಡಿಯ ಸಭಾಂಗಣ) ಕರೆಯಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಜೂನ್ 25 ಕ್ಕೆ ಶಾಸಕರ ಭವನದಲ್ಲಿ ತುರ್ತು ಸಭೆ ಕರೆಯಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಈ ಕುರಿತು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ 371 (ಜೆ) ವಿಶೇಷ ಸ್ಥಾನಮಾನವನ್ನು ಈಗಿನ ಸರ್ಕಾರ, ಹಿಂದಿನ ಸರ್ಕಾರ ಕಡೆಗಾಣಿಸುತ್ತ ಬಂದಿದೆ. 2020-21ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ, ಕಲಬುರಗಿ ಪ್ರಾದೇಶಿಕ ವಲಯ ಆಯುಕ್ತರು ಬರೆದ ಪತ್ರ ಲಭ್ಯವಾಗಿದೆ. ಆ ಪತ್ರದಲ್ಲಿ 1,100 ಕೋಟಿ ರೂ. ಮಂಜೂರು ಮಾಡುವ ಕುರಿತು ಪ್ರಸ್ತಾಪಿಸಿದ್ದಾರೆ ಎಂದರು.

legislators Emergency meeting
ಜೂನ್ 25 ಕ್ಕೆ ಶಾಸಕರ ಭವನದಲ್ಲಿ ತುರ್ತು ಸಭೆ
legislators Emergency meeting
ಜೂನ್ 25 ಕ್ಕೆ ಶಾಸಕರ ಭವನದಲ್ಲಿ ತುರ್ತು ಸಭೆ

ಈ ಹಿನ್ನೆಲೆಯಲ್ಲಿ ಕಡೇ ಪಕ್ಷ ಬಜೆಟ್​ ಮಂಡನೆಯ ವೇಳೆಯಲ್ಲಿ ಘೋಷಿಸಿದ ಮೊತ್ತ 1500 ರೂ.ಕೋಟಿ ಪ್ರಸ್ತಾಪಿಸಿದ್ದನ್ನು ಬಿಡುಗಡೆಗೊಳಿಸಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಿರ್ವಹಣೆಯ ಅರ್ಥಿಕ ಹೊರೆಯಾಗಿರುವ ಹಿನ್ನೆಲೆಯಲ್ಲಿ ಹಿಂದಿನ ಮುಖ್ಯಮಂತ್ರಿ 2,500 ಕೋಟಿ ರೂ. ಬೇಡಿಕೆ ಬದಲಿಗೆ, ಕಳೆದ ಬಜೆಟ್​ನಲ್ಲಿ ಘೋಷಿಸಿದ 1500 ಕೋಟಿ ರೂ. ಮಂಜೂರು ಮಾಡಬೇಕು ಈ ಹಿನ್ನೆಲೆಯಲ್ಲಿ ಶಾಸಕರ ತುರ್ತು ಸಭೆ ಕರೆಯಲಾಗಿದೆ ಎಂದರು.

ಎಲ್ಲ ಶಾಸಕರಿಗೂ ಪತ್ರ ಬರೆಯಲಾಗಿದ್ದು, ಮೊಬೈಲ್ ಮೂಲಕ ಸಂಪರ್ಕಿಸಿ ಸಭೆಗೆ ಅಹ್ವಾನಿಸಲಾಗಿದ್ದು, ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಈ ಸಭೆಯಲ್ಲಿ ಅನುದಾನ ಕಡಿತ ಮಾತ್ರವಲ್ಲ ಅನುಷ್ಠಾನದಲ್ಲಿ ಆಗಿರುವ ನ್ಯೂನ್ಯತೆ ಕುರಿತು ಚರ್ಚೆ ಹಾಗೂ ಪರಿಹಾರದ ಈ ಸಭೆಗೆ ಎಲ್ಲ ಸಮಾನ ಮನಸ್ಕ ಶಾಸಕರು, ಪಕ್ಷಾತೀತವಾಗಿ ಸ್ಪಂದಿಸಿದ್ದಾರೆ. ಈ ಮಹತ್ವದ ಸಭೆಗೆ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ಶಾಸಕರ ಸಮೂಹ ಸಾರಥ್ಯವಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.