ETV Bharat / state

ಜೂ.16 ರಂದು ಕುಷ್ಟಗಿ ಫ್ಲೈ ಓವರ್ ಉದ್ಘಾಟಿಸಲಿರುವ ಡಿಸಿಎಂ ಕಾರಜೋಳ

ಪ್ರಥಮ ಬಾರಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು, ಜನತೆಯ ಮೇಲ್ಸೇತುವೆ ಬೇಡಿಕೆಗೆ ಸ್ಪಂದಿಸಿ, ಮೇ 2014 ರಲ್ಲಿ 68.2 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿತ್ತು. ಇದೀಗ ಪೂರ್ಣಗೊಂಡಿದೆ. ಕೊರೊನಾ ಲಾಕಡೌನ್ ಹಿನ್ನೆಲೆಯಲ್ಲಿ ವಿಳಂಬವಾಗಿದ್ದ ಲೋಕಾರ್ಪಣೆ, ಜೂ.16 ರಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

author img

By

Published : Jun 14, 2020, 8:21 PM IST

DCM Karajola to inaugurate Kushtagi Plyover ಕುಷ್ಟಗಿ ಪ್ಲೈಓವರ್ ಉದ್ಘಾಟಿಸಲಿರುವ ಡಿಸಿಎಂ ಕಾರಜೋಳ
ಕುಷ್ಟಗಿ ಪ್ಲೈಓವರ್ ಉದ್ಘಾಟಿಸಲಿರುವ ಡಿಸಿಎಂ ಕಾರಜೋಳ

ಕುಷ್ಟಗಿ (ಕೊಪ್ಪಳ): ಕುಷ್ಟಗಿ ಮೂಲಕ ಹಾದು ಹೋಗಿರುವ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಕುಷ್ಟಗಿ ಮೇಲ್ಸೇತುವೆಯನ್ನು ಮೇ 16 ರಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಲೋಕಾರ್ಪಣೆಗೊಳಿಸುವರು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು.

ಕುಷ್ಟಗಿ ಪ್ಲೈಓವರ್ ಉದ್ಘಾಟಿಸಲಿರುವ ಡಿಸಿಎಂ ಕಾರಜೋಳ

ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುನಗುಂದ-ಹೊಸಪೇಟೆ ಎನ್​ಹೆಚ್​-13 ನಂತರ ಸುವರ್ಣ ಚತುಷ್ಪಥ ಹೆದ್ದಾರಿ ಮೇಲ್ದರ್ಜೆಯ ಅಭಿವೃಧ್ಧಿ ಬಳಿಕ, ಈ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಮೇಲ್ಸೇತುವೆ ನಿರ್ಮಿಸಿದರೆ, ಅಪಘಾತ ತಪ್ಪಿಸಬಹುದು. ಈ ಭಾಗದ ಜನತೆಯ ಬಹುದಿನದ ಬೇಡಿಕೆ ಕುಷ್ಟಗಿ ಮೇಲ್ಸೇತುವೆ ಆಗಿತ್ತು. ಪ್ರಥಮ ಬಾರಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು, ಜನತೆಯ ಮೇಲ್ಸೇತುವೆ ಬೇಡಿಕೆಗೆ ಸ್ಪಂದಿಸಿ, ಮೇ 2014 ರಲ್ಲಿ 68.2 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿತ್ತು. ಇದೀಗ ಪೂರ್ಣಗೊಂಡಿದೆ. ಕೊರೊನಾ ಲಾಕಡೌನ್ ಹಿನ್ನೆಲೆಯಲ್ಲಿ ವಿಳಂಬವಾಗಿದ್ದ ಲೋಕಾರ್ಪಣೆ, ಜೂ.16 ರಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃಧ್ಧಿ ಪಂಚಾಯಿತಿ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ, ಕೊಪ್ಪಳ ಸಂಸದ ಕರಡಿ ಸಂಗಣ್ಣ ಮೊದಲಾದವರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಕುಷ್ಟಗಿ (ಕೊಪ್ಪಳ): ಕುಷ್ಟಗಿ ಮೂಲಕ ಹಾದು ಹೋಗಿರುವ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಕುಷ್ಟಗಿ ಮೇಲ್ಸೇತುವೆಯನ್ನು ಮೇ 16 ರಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಲೋಕಾರ್ಪಣೆಗೊಳಿಸುವರು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು.

ಕುಷ್ಟಗಿ ಪ್ಲೈಓವರ್ ಉದ್ಘಾಟಿಸಲಿರುವ ಡಿಸಿಎಂ ಕಾರಜೋಳ

ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುನಗುಂದ-ಹೊಸಪೇಟೆ ಎನ್​ಹೆಚ್​-13 ನಂತರ ಸುವರ್ಣ ಚತುಷ್ಪಥ ಹೆದ್ದಾರಿ ಮೇಲ್ದರ್ಜೆಯ ಅಭಿವೃಧ್ಧಿ ಬಳಿಕ, ಈ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಮೇಲ್ಸೇತುವೆ ನಿರ್ಮಿಸಿದರೆ, ಅಪಘಾತ ತಪ್ಪಿಸಬಹುದು. ಈ ಭಾಗದ ಜನತೆಯ ಬಹುದಿನದ ಬೇಡಿಕೆ ಕುಷ್ಟಗಿ ಮೇಲ್ಸೇತುವೆ ಆಗಿತ್ತು. ಪ್ರಥಮ ಬಾರಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು, ಜನತೆಯ ಮೇಲ್ಸೇತುವೆ ಬೇಡಿಕೆಗೆ ಸ್ಪಂದಿಸಿ, ಮೇ 2014 ರಲ್ಲಿ 68.2 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿತ್ತು. ಇದೀಗ ಪೂರ್ಣಗೊಂಡಿದೆ. ಕೊರೊನಾ ಲಾಕಡೌನ್ ಹಿನ್ನೆಲೆಯಲ್ಲಿ ವಿಳಂಬವಾಗಿದ್ದ ಲೋಕಾರ್ಪಣೆ, ಜೂ.16 ರಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃಧ್ಧಿ ಪಂಚಾಯಿತಿ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ, ಕೊಪ್ಪಳ ಸಂಸದ ಕರಡಿ ಸಂಗಣ್ಣ ಮೊದಲಾದವರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.