ಕೊಪ್ಪಳ : ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ರಥವನ್ನು ಎಳೆಯುವ ರೀತಿಯಲ್ಲಿ ನಗರದಲ್ಲಿ ಸಿಪಿಐ ಒಬ್ಬರು ಬಾಹುಬಲಿ ಸ್ಟೈಲ್ ನಲ್ಲಿ ಕೆಟ್ಟು ನಿಂತ ಸ್ಕಾರ್ಪಿಯೋ ವಾಹನ ರಿಯಲ್ ಆಗಿ ಎಳೆಯುವ ಮೂಲಕ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಯಲಬುರ್ಗಾ ಸಿಪಿಐ ನಾಗರಡ್ಡಿ ಅವರು ವಾಹನ ಎಳೆದ ವಿಡಿಯೋ ಸಖತ್ ವೈರಲ್ ಆಗಿದೆ. ಕೆಲಸದ ಹಿನ್ನೆಲೆಯಲ್ಲಿ ಸಿಪಿಐ ನಾಗರಡ್ಡಿ ಅವರು ಯಲಬುರ್ಗಾ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸ್ಕಾರ್ಪಿಯೋ ವಾಹನ ಕೆಟ್ಟು ನಿಂತಿತ್ತು. ವಾಹನದ ಚಾಲಕ ಮೆಕ್ಯಾನಿಕ್ ನನ್ನು ಕರೆತರಲು ಹೋಗಿದ್ದರು.