ETV Bharat / state

ಕೊಪ್ಪಳದಲ್ಲಿ ಭೂತ ಬಂಗಲೆಗಳಂತಾದ ಹುಡ್ಕೋ ನಿರ್ಮಿಸಿದ ಮನೆಗಳು.. ಖರೀದಿಗೆ ಜನರ ಹಿಂದೇಟು - ಗಂಗಾವತಿ ನಗರದ ಕನಕಗಿರಿ ರಸ್ತೆ

ಯಾವುದೇ ಒಂದು ಯೋಜನೆ ಇಂಪ್ಲಿಮೆಂಟ್ ಮಾಡುವ ಮೊದಲು ಅದರ ಸಾಧಕ ಬಾಧಕಗಳನ್ನು ಹಾಗೂ ಪೂರ್ವಾಪರವನ್ನು ಯೋಚಿಸಬೇಕು. ಆದರೆ, ಈ ಮುಂದಾಲೋಚನೆ ಇಲ್ಲದೆ ಮಾಡಿದ ಯೋಜನೆಯೊಂದು ಇದೀಗ ಹದಗೆಟ್ಟು ಹಳ್ಳ ಹಿಡಿದಿದೆ.

ಕರ್ನಾಟಕ ಗೃಹ ನಿರ್ಮಾಣ ಮಂಡಳಿ ವತಿಯಿಂದ ಮನೆಗಳ ನಿರ್ಮಾಣ
author img

By

Published : Sep 25, 2019, 10:18 PM IST

ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಮನೆಗಳು ಈಗ ಭೂತ ಬಂಗಲೆಗಳಂತಾಗಿವೆ. 2005ರಲ್ಲಿಯೇ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಇಲ್ಲಿ ಮನೆ ಹಾಗೂ ನಿವೇಶನ ಯೋಜನೆ ರೂಪಿಸಿದೆ. ಅದರಂತೆ ಮೂರು ಕ್ಯಾಟಗರಿಯಲ್ಲಿ ಮನೆ ಹಾಗೂ ನಿವೇಶನ ರೆಡಿ ಮಾಡಿ, ಎಲ್ಐಜಿ (25), ಎಂಐಜಿ (20) ಹಾಗೂ ಹೆಚ್ಐಜಿಯ (05) ಮನೆಗಳನ್ನು ನಿರ್ಮಾಣ ಮಾಡಿದೆ.

ಅಲ್ಲದೇ ಎಲ್ಐಜಿಯ (54), ಎಂಐಜಿ (44) ಹಾಗೂ ಹೆಚ್ಐಜಿ ಕ್ಯಾಟಗರಿಯ 26 ನಿವೇಶನಗಳನ್ನು ಸಹ ರೂಪಿಸಿದೆ. ರಸ್ತೆ, ವಿದ್ಯುತ್ ಸಂಪರ್ಕವೂ ಇದೆ. ಆದರೆ, ಇಲ್ಲಿಯ ಮನೆ ಹಾಗೂ ನಿವೇಶನ ತೆಗೆದುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ, ಅಲ್ಲಿ ಕಾಲುವೆಯ ಹಾಗೂ ಭತ್ತದ ಗದ್ದೆಗಳ ಸೀಪೇಜ್ ವಾಟರ್ ಈ ನಿವೇಶನದಲ್ಲಿ ಹರಿಯುತ್ತಿರುವುದು‌ ಹಾಗೂ ಭೂಮಿ ಸರಿ ಇಲ್ಲ ಎಂಬುದು. ಹೀಗಾಗಿ, ಹುಡ್ಕೋ ನಿರ್ಮಾಣ ಮಾಡಿರುವ ಮನೆಗಳು ಈಗ ಹಾಳಾಗಿ ಭೂತ ಬಂಗಲೆಗಳಾಗಿ ಮಾರ್ಪಟ್ಟಿವೆ.

ಕರ್ನಾಟಕ ಗೃಹ ನಿರ್ಮಾಣ ಮಂಡಳಿ ವತಿಯಿಂದ ಮನೆಗಳ ನಿರ್ಮಾಣ..

ಹುಡ್ಕೋ ಮನೆಗಳು ಈಗ ಬಹುತೇಕ ಶಿಥಿಲಾವಸ್ಥೆ ತಲುಪುವ ಹಂತಕ್ಕೆ ಬಂದಿವೆ.‌ ಮನೆಯ ಒಳಗಿನ ವಿದ್ಯುತ್ ಸಂಪರ್ಕ ಕಿತ್ತಿವೆ. ಕೆಲ ಬಾಗಿಲುಗಳು ನೆಲಕ್ಕುರುಳಿವೆ. ಮನೆಯ ಸುತ್ತಮುತ್ತ ಜಾಲಿ ಕಂಟಿಗಳು ಬೆಳೆದು ನಿಂತಿವೆ.‌ ಇದರಿಂದಾಗಿ ಆ ಪ್ರದೇಶ ಪುಂಡ ಪೋಕರಿಗಳ ಅಡ್ಡವಾಗುತ್ತಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರೂಪಿಸಿರುವ ಈ ಯೋಜನೆ ಕಣ್ಮುಂದೆಯೇ ಹಾಳಾಗುತ್ತಿದ್ದರೂ ಸಹ ಸಂಬಂಧಿಸಿದ ಹುಡ್ಕೋ ಅಧಿಕಾರಿಗಳು ಮಾತ್ರ ಇದನ್ನು ಸೀರಿಯಸ್ ಆಗಿ ಪರಿಗಣನೆಗೆ ತೆಗೆದುಕೊಳ್ತಿಲ್ಲ.

ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಮನೆಗಳು ಈಗ ಭೂತ ಬಂಗಲೆಗಳಂತಾಗಿವೆ. 2005ರಲ್ಲಿಯೇ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಇಲ್ಲಿ ಮನೆ ಹಾಗೂ ನಿವೇಶನ ಯೋಜನೆ ರೂಪಿಸಿದೆ. ಅದರಂತೆ ಮೂರು ಕ್ಯಾಟಗರಿಯಲ್ಲಿ ಮನೆ ಹಾಗೂ ನಿವೇಶನ ರೆಡಿ ಮಾಡಿ, ಎಲ್ಐಜಿ (25), ಎಂಐಜಿ (20) ಹಾಗೂ ಹೆಚ್ಐಜಿಯ (05) ಮನೆಗಳನ್ನು ನಿರ್ಮಾಣ ಮಾಡಿದೆ.

ಅಲ್ಲದೇ ಎಲ್ಐಜಿಯ (54), ಎಂಐಜಿ (44) ಹಾಗೂ ಹೆಚ್ಐಜಿ ಕ್ಯಾಟಗರಿಯ 26 ನಿವೇಶನಗಳನ್ನು ಸಹ ರೂಪಿಸಿದೆ. ರಸ್ತೆ, ವಿದ್ಯುತ್ ಸಂಪರ್ಕವೂ ಇದೆ. ಆದರೆ, ಇಲ್ಲಿಯ ಮನೆ ಹಾಗೂ ನಿವೇಶನ ತೆಗೆದುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ, ಅಲ್ಲಿ ಕಾಲುವೆಯ ಹಾಗೂ ಭತ್ತದ ಗದ್ದೆಗಳ ಸೀಪೇಜ್ ವಾಟರ್ ಈ ನಿವೇಶನದಲ್ಲಿ ಹರಿಯುತ್ತಿರುವುದು‌ ಹಾಗೂ ಭೂಮಿ ಸರಿ ಇಲ್ಲ ಎಂಬುದು. ಹೀಗಾಗಿ, ಹುಡ್ಕೋ ನಿರ್ಮಾಣ ಮಾಡಿರುವ ಮನೆಗಳು ಈಗ ಹಾಳಾಗಿ ಭೂತ ಬಂಗಲೆಗಳಾಗಿ ಮಾರ್ಪಟ್ಟಿವೆ.

ಕರ್ನಾಟಕ ಗೃಹ ನಿರ್ಮಾಣ ಮಂಡಳಿ ವತಿಯಿಂದ ಮನೆಗಳ ನಿರ್ಮಾಣ..

ಹುಡ್ಕೋ ಮನೆಗಳು ಈಗ ಬಹುತೇಕ ಶಿಥಿಲಾವಸ್ಥೆ ತಲುಪುವ ಹಂತಕ್ಕೆ ಬಂದಿವೆ.‌ ಮನೆಯ ಒಳಗಿನ ವಿದ್ಯುತ್ ಸಂಪರ್ಕ ಕಿತ್ತಿವೆ. ಕೆಲ ಬಾಗಿಲುಗಳು ನೆಲಕ್ಕುರುಳಿವೆ. ಮನೆಯ ಸುತ್ತಮುತ್ತ ಜಾಲಿ ಕಂಟಿಗಳು ಬೆಳೆದು ನಿಂತಿವೆ.‌ ಇದರಿಂದಾಗಿ ಆ ಪ್ರದೇಶ ಪುಂಡ ಪೋಕರಿಗಳ ಅಡ್ಡವಾಗುತ್ತಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರೂಪಿಸಿರುವ ಈ ಯೋಜನೆ ಕಣ್ಮುಂದೆಯೇ ಹಾಳಾಗುತ್ತಿದ್ದರೂ ಸಹ ಸಂಬಂಧಿಸಿದ ಹುಡ್ಕೋ ಅಧಿಕಾರಿಗಳು ಮಾತ್ರ ಇದನ್ನು ಸೀರಿಯಸ್ ಆಗಿ ಪರಿಗಣನೆಗೆ ತೆಗೆದುಕೊಳ್ತಿಲ್ಲ.

Intro:


Body:ಕೊಪ್ಪಳ:-ಯಾವುದೇ ಒಂದು ಯೋಜನೆ ಇಂಪ್ಲಿಮೆಂಟ್ ಮಾಡುವ ಮೊದಲು ಅದರ ಸಾಧಕ ಬಾಧಕಗಳನ್ನು ಹಾಗೂ ಪೂರ್ವಾಪರವನ್ನು ಯೋಚಿಸಬೇಕು. ಆದರೆ, ಈ ಮುಂದಾಲೋಚನೆ ಇಲ್ಲದೆ ಮಾಡಿದ ಯೋಜನೆಯೊಂದು ಹದಗೆಟ್ಟು ಹಳ್ಳ ಹಿಡಿದಿದೆ. ಆ ಯೋಜನೆ‌ ಯಾವುದು ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ....

ವಾ.ಓ.1:-ಎಸ್..... ಹೀಗೆ ಜಾಲಿಕಂಟಿಗಳ ಮಧ್ಯದಲ್ಲಿರುವ ಈ ಮನೆಗಳು ಹಾಗೂ ನಿವೇಶಗಳು ಕರ್ನಾಟಕ ಗೃಹ ನಿರ್ಮಾಣ ಮಂಡಳಿ (ಹುಡ್ಕೋ) ನಿರ್ಮಾಣ ಮಾಡಿರುವ ಮನೆಗಳು ಹಾಗೂ ನಿವೇಶನಗಳು. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಈ ಮನೆಗಳು ಈಗ ಅಕ್ಷರಸಹ ಭೂತ ಬಂಗಲೆಗಳಂತಾಗಿವೆ. 2005 ರಲ್ಲಿಯೇ ಕರ್ನಾಟಕ ಗೃಹ ನಿರ್ಮಾಣ ಮಂಡಳಿಗೆ ಇಲ್ಲಿ ಮನೆ ಹಾಗೂ ನಿವೇಶನ ಯೋಜನೆ ರೂಪಿಸಿದೆ. ಅದರಂತೆ ಮೂರು ಕ್ಯಾಟಗರಿಯಲ್ಲಿ ಮನೆ ಹಾಗೂ ನಿವೇಶನ ರೆಡಿ ಮಾಡಿದೆ. ಎಲ್ಐಜಿ (25) , ಎಂಐಜಿ (20) ಹಾಗೂ ಎಚ್ಐಜಿಯ (05) ಮನೆಗಳನ್ನು ನಿರ್ಮಾಣ ಮಾಡಿದೆ. ಅದರ ಜೊತೆಗೆ ಎಲ್ಐಜಿಯ (54) , ಎಂಐಜಿ (44) ಹಾಗೂ ಎಚ್ಐಜಿ ಕ್ಯಾಟಗರಿಯ 26 ನಿವೇಶನಗಳನ್ನು ಸಹ ರೂಪಿಸಿದೆ. ರಸ್ತೆ, ವಿದ್ಯುತ್ ಸಂಪರ್ಕವೂ ಇದೆ. ಆದರೆ, ಇಲ್ಲಿ‌ ಮನೆ ಹಾಗೂ ನಿವೇಶನ ತೆಗೆದುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ, ಅಲ್ಲಿ ಕಾಲುವೆಯ ಹಾಗೂ ಭತ್ತದ ಗದ್ದೆಗಳ ಸೀಪೇಜ್ ವಾಟರ್ ಈ ನಿವೇಶನದಲ್ಲಿ ಹರಿಯುತ್ತಿರುವುದು‌ ಹಾಗೂ ಭೂಮಿ ಸರಿ ಇಲ್ಲ ಎಂಬುದು. ಹೀಗಾಗಿ, ಹುಡ್ಕೋ ನಿರ್ಮಾಣ ಮಾಡಿರುವ ಮನೆಗಳು ಈಗ ಹಾಳಾಗಿ ಭೂತ ಬಂಗಲೆಗಳಾಗಿ ಮಾರ್ಪಟ್ಟಿವೆ.

ಬೈಟ್1:- ಮನೋಹರಸ್ವಾಮಿ ಹೇರೂರು, ನಗರಸಭೆ ಸದಸ್ಯ, ಗಂಗಾವತಿ.

ವಾ.ಓ.2:-ಹುಡ್ಕೋ ಮನೆಗಳು ಈಗ ಭಾಗಶ ಶಿಥಿಲಾವಸ್ಥೆಯನ್ನು ತಲುಪುವ ಹಂತಕ್ಕೆ ಬಂದಿವೆ.‌ ಮನೆಯ ಒಳಗಿನ ವಿದ್ಯುತ್ ಸಂಪರ್ಕ ಕಿತ್ತಿವೆ. ಕೆಲ ಬಾಗಿಲುಗಳು ನೆಲಕ್ಕುರುಳಿವೆ. ಮನೆಯ ಸುತ್ತಮುತ್ತ ಜಾಲಿ ಕಂಟಿಗಳು ಬೆಳೆದು ನಿಂತಿವೆ.‌ ಇದರಿಂದಾಗಿ ಆ ಪ್ರದೇಶ ಪುಂಡಪೋಕರಿಗಳ ಅಡ್ಡವಾಗುತ್ತಿದೆ. ಕೋಟ್ಯಂತರ ರುಪಾಯಿ ಖರ್ಚು ಮಾಡಿ ರೂಪಿಸಿರುವ ಈ ಯೋಜನೆ ಕಣ್ಮುಂದೆಯೇ ಹಾಳಾಗುತ್ತಿದ್ದರೂ ಸಹ ಸಂಬಂಧಿಸಿದ ಹುಡ್ಕೋ ಅಧಿಕಾರಿಗಳು ಮಾತ್ರ ಇದನ್ನು ಸಿರಿಯಸ್ ಆಗಿ ಪರಿಗಣನೆಗೆ ತೆಗೆದುಕೊಳ್ತಿಲ್ಲ. ಈ ಮನೆಗಳನ್ನು ರೇಲ್ವೆ ಕ್ವಾಟ್ರಸ್ ಆಗಿ ಪರಿವರ್ತಿಸಲು ರೇಲ್ವೆ ಇಲಾಖೆಯೊಂದಿಗೆ ಈ ಹಿಂದೆ ಹುಡ್ಕೋ ಮಾತುಕತೆ ನಡೆಸಿದರೂ ಅದ್ಯಾಕೋ ಫಲಪ್ರದವಾಗಿಲ್ಲ. ಹೀಗಾಗಿ, ಗಂಗಾವತಿಯ ಕನಕಗಿರಿ ರಸ್ತೆಯಲ್ಲಿರುವ ಈ ಹುಡ್ಕೋ ಮನೆಗಳು ಇನ್ನೊಂದಿಷ್ಟು ವರ್ಷದಲ್ಲಿ ದೀಪಹಚ್ಚಿ ಹುಡುಕಿದರೂ ಸಿಗದಂತಾಗುವುದರಲ್ಲಿ ಎರಡು ಮಾತಿಲ್ಲ.

ಬೈಟ್2:- ಬೈಟ್1:- ಮನೋಹರಸ್ವಾಮಿ ಹೇರೂರು, ನಗರಸಭೆ ಸದಸ್ಯ, ಗಂಗಾವತಿ.

ವಾ.ಓ.3:- ಸರ್ಕಾರದ ದುಡ್ಡು ಅಂದ್ರೆ ಅದು ಸಾರ್ವಜನಿಕರ ದುಡ್ಡು. ಸಾರ್ವಜನಿಕರ ದುಡ್ದಿನಿಂದ ರೂಪಿಸಿದ ಯೋಜನೆಯೊಂದು ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಪರ್ಯಾಯ ಮಾರ್ಗಗಳನ್ನು ಹುಡುಕಿ ಈ ಯೋಜನೆಯನ್ನು ಉದ್ದೇಶವನ್ನು ಕಂಪ್ಲೀಟ್ ಮಾಡುವ ಮೂಲಕ ತಮ್ಮ‌ ಜವಾಬ್ದಾರಿ ನಿರ್ವಹಿಸಬೇಕಿದೆ.



Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.