ETV Bharat / state

ಪ್ರಧಾನ ಸಿವಿಲ್ ನ್ಯಾಯಾಧೀಶರ ಮಗ ಈಗ ಸ್ಥಳೀಯ ಅಂಗನವಾಡಿ ವಿದ್ಯಾರ್ಥಿ

author img

By

Published : Dec 23, 2021, 7:44 PM IST

ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ತಳವಾರ ಎಂಬುವವರು ತಮ್ಮ ಮಗನನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Civil Judge admitted his son local anganavadi
ಮಗನನ್ನು ಸ್ಥಳೀಯ ಅಂಗವಾಡಿಗೆ ಸೇರಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ

ಕುಷ್ಟಗಿ(ಕೊಪ್ಪಳ): ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ತಳವಾರ ಎಂಬುವವರು ತಮ್ಮ ಪುತ್ರನನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ತಳವಾರ ಅವರು ತಮ್ಮ 3 ವರ್ಷದ ಮಗ ಶ್ರೀನಿವಾಸ್​ನನ್ನು ಪಟ್ಟಣದ 4ನೇ ವಾರ್ಡ್​​ನ 15ನೇ ಅಂಗನವಾಡಿ ಕೇಂದ್ರಕ್ಕೆ ದಾಖಲಿಸಿದರು. ಈ ವೇಳೆ, ನ್ಯಾಯಾಧೀಶರ ಮಗನನ್ನು ಅಂಗನವಾಡಿ ಕಾರ್ಯಕರ್ತೆ ಸುನೀತಾ ಅಬ್ಬಿಗೇರಿ, ಸಹಾಯಕಿ ದುರ್ಗಮ್ಮ ಆರತಿ ಬೆಳಗಿ ಸ್ವಾಗತಿಸಿಕೊಂಡರು.

ನ್ಯಾಯಾಧೀಶರ ಮಗ ನಮ್ಮ ಅಂಗನವಾಡಿ ಕೇಂದ್ರ ಸೇರಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ನ್ಯಾಯಾಧೀಶರ ಈ ನಡೆಯಿಂದ ನಮ್ಮ ಅಂಗನವಾಡಿ ಕೇಂದ್ರಗಳಿಗೆ ವಿಶ್ವಾಸಾರ್ಹತೆ ಹೆಚ್ಚಿದ್ದು, ಸಂತಸವಾಗಿದೆ ಎಂದು ಸಿಡಿಪಿಒ ಅಮರೇಶ್ ಹಾವಿನಾಳ ಹೇಳಿದರು.

ಕುಷ್ಟಗಿ(ಕೊಪ್ಪಳ): ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ತಳವಾರ ಎಂಬುವವರು ತಮ್ಮ ಪುತ್ರನನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ತಳವಾರ ಅವರು ತಮ್ಮ 3 ವರ್ಷದ ಮಗ ಶ್ರೀನಿವಾಸ್​ನನ್ನು ಪಟ್ಟಣದ 4ನೇ ವಾರ್ಡ್​​ನ 15ನೇ ಅಂಗನವಾಡಿ ಕೇಂದ್ರಕ್ಕೆ ದಾಖಲಿಸಿದರು. ಈ ವೇಳೆ, ನ್ಯಾಯಾಧೀಶರ ಮಗನನ್ನು ಅಂಗನವಾಡಿ ಕಾರ್ಯಕರ್ತೆ ಸುನೀತಾ ಅಬ್ಬಿಗೇರಿ, ಸಹಾಯಕಿ ದುರ್ಗಮ್ಮ ಆರತಿ ಬೆಳಗಿ ಸ್ವಾಗತಿಸಿಕೊಂಡರು.

ನ್ಯಾಯಾಧೀಶರ ಮಗ ನಮ್ಮ ಅಂಗನವಾಡಿ ಕೇಂದ್ರ ಸೇರಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ನ್ಯಾಯಾಧೀಶರ ಈ ನಡೆಯಿಂದ ನಮ್ಮ ಅಂಗನವಾಡಿ ಕೇಂದ್ರಗಳಿಗೆ ವಿಶ್ವಾಸಾರ್ಹತೆ ಹೆಚ್ಚಿದ್ದು, ಸಂತಸವಾಗಿದೆ ಎಂದು ಸಿಡಿಪಿಒ ಅಮರೇಶ್ ಹಾವಿನಾಳ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.