ETV Bharat / state

ಕಟ್ಟಡ ಕಾರ್ಮಿಕನ ಮೇಲೆ ಲಾಠಿ: ಮೆಸೇಜ್​​​ಗೆ ತಕ್ಷಣ ಸ್ಪಂದಿಸಿದ ಡಿಸಿ

ಕೊರೊನಾದಂತ ತುರ್ತು ಪರಿಸ್ಥಿತಿ ನಿಭಾಯಿಸುವಲ್ಲಿ ಸದಾ ಮಗ್ನವಾಗಿರುವ ಜಿಲ್ಲಾಧಿಕಾರಿ ಸುನಿಲ್ ಕುಮಾರ್, ಸಾಮಾನ್ಯ ಕಟ್ಟಡ ಕಾರ್ಮಿಕನೊಬ್ಬ ಮಾಡಿದ ಕೇವಲ ವಾಟ್ಸ್​​ಆ್ಯಪ್​​​ ಮೆಸೇಜ್​ಗೂ ಸ್ಪಂದಿಸುವ ಮೂಲಕ ಗಮನ ಸೆಳೆದಿದ್ದಾರೆ.

author img

By

Published : Apr 10, 2020, 6:31 PM IST

A baton on a building worker
ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್​​

ಗಂಗಾವತಿ: ಹೊಸಳ್ಳಿ ಗ್ರಾಮದ ಕಟ್ಟಡ ಕಾರ್ಮಿಕ ಶಿವರಾಜ್ ಎಂಬಾತ ನಿತ್ಯ ಅಗತ್ಯ ವಸ್ತುಗಳ ಖರೀದಿಗೆ ಬಂದಾಗ ವಿಚಾರಣೆ ನಡೆಸದೇ ಪೊಲೀಸರು ಲಾಠಿ ಬೀಸಿದ್ದಾರೆ. ಈ ಕುರಿತು ನೋವುತೋಡಿಕೊಂಡು ವಾಟ್ಸ್​​​ಆ್ಯಪ್​ ಮೂಲಕ ದೂರು ನೀಡಿದ ಕಾರ್ಮಿಕನಿಗೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್​​​​​​ ಸ್ಪಂದಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

A baton on a building worker
ವಾಟ್ಸ್​​ಆ್ಯಪ್​​​ನಲ್ಲಿ ನೀಡಿದ ದೂರು

ವಿನಾಕಾರಣ ಲಾಠಿ ಚಾರ್ಜ್​​​ ಮಾಡಿದ ಘಟನೆ ವಿಚಾರಣೆಗೆ ಎಸ್ಪಿಗೆ ಸೂಚಿಸುತ್ತೇನೆ ಎಂದು ಕಾರ್ಮಿಕ ಕಳುಹಿಸಿದ್ದ ಮೆಸೇಜ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ಯುವಕನನ್ನು ಸಂಪರ್ಕಿಸಿ ಅಗತ್ಯ ಏರ್ಪಾಟು ಮಾಡುವಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

A baton on a building worker
ದೂರು ನೀಡಿದ ಕಾರ್ಮಿಕ

ತಾಲೂಕು ಪಂಚಾಯಿತಿ ಇಒ ಮೋಹನ್, ಯುವಕನನ್ನು ಸಂಪರ್ಕಿಸಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಿದ್ದು, ಹೊರಗೆ ಬಾರದಂತೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಗಂಗಾವತಿ: ಹೊಸಳ್ಳಿ ಗ್ರಾಮದ ಕಟ್ಟಡ ಕಾರ್ಮಿಕ ಶಿವರಾಜ್ ಎಂಬಾತ ನಿತ್ಯ ಅಗತ್ಯ ವಸ್ತುಗಳ ಖರೀದಿಗೆ ಬಂದಾಗ ವಿಚಾರಣೆ ನಡೆಸದೇ ಪೊಲೀಸರು ಲಾಠಿ ಬೀಸಿದ್ದಾರೆ. ಈ ಕುರಿತು ನೋವುತೋಡಿಕೊಂಡು ವಾಟ್ಸ್​​​ಆ್ಯಪ್​ ಮೂಲಕ ದೂರು ನೀಡಿದ ಕಾರ್ಮಿಕನಿಗೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್​​​​​​ ಸ್ಪಂದಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

A baton on a building worker
ವಾಟ್ಸ್​​ಆ್ಯಪ್​​​ನಲ್ಲಿ ನೀಡಿದ ದೂರು

ವಿನಾಕಾರಣ ಲಾಠಿ ಚಾರ್ಜ್​​​ ಮಾಡಿದ ಘಟನೆ ವಿಚಾರಣೆಗೆ ಎಸ್ಪಿಗೆ ಸೂಚಿಸುತ್ತೇನೆ ಎಂದು ಕಾರ್ಮಿಕ ಕಳುಹಿಸಿದ್ದ ಮೆಸೇಜ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ಯುವಕನನ್ನು ಸಂಪರ್ಕಿಸಿ ಅಗತ್ಯ ಏರ್ಪಾಟು ಮಾಡುವಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

A baton on a building worker
ದೂರು ನೀಡಿದ ಕಾರ್ಮಿಕ

ತಾಲೂಕು ಪಂಚಾಯಿತಿ ಇಒ ಮೋಹನ್, ಯುವಕನನ್ನು ಸಂಪರ್ಕಿಸಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಿದ್ದು, ಹೊರಗೆ ಬಾರದಂತೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.