ETV Bharat / state

ಒಂದು ತಿಂಗಳಲ್ಲಿ ರಾಜ್ಯ ಸರ್ಕಾರ ಏನ್ ಬೇಕಾದ್ರು ಆಗಬಹುದು: ಶಾಸಕ ಕೆ.ವೈ.ನಂಜೇಗೌಡ ಭವಿಷ್ಯ

author img

By

Published : Oct 24, 2019, 7:56 AM IST

ಬಿಜೆಪಿ ಪ್ರೇರಿತವಾಗಿ ನಡೆಸಿದ ಐಟಿ, ಇಡಿ ದಾಳಿಗಳ ವಿರುದ್ಧ ನ್ಯಾಯಾಲಯದಲ್ಲಿ ಜಯ ಸಿಕ್ಕಿದ್ದು, ಶಾಸಕ ಡಿಕೆಶಿಗೆ ಜಾಮೀನು ಮಂಜೂರಾಗಿದೆ. ರಾಜ್ಯದಲ್ಲಿ ಇನ್ನು ಒಂದು ತಿಂಗಳಲ್ಲಿ ಏನಾಗುತ್ತದೆ ಗೊತ್ತಿಲ್ಲ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಶಾಸಕ ಕೆ.ವೈ.ನಂಜೇಗೌಡ

ಕೋಲಾರ: ರಾಜ್ಯ ಬಿಜೆಪಿ ಸರ್ಕಾರ ಇನ್ನೂ ಒಂದು ತಿಂಗಳಲ್ಲಿ ಏನ್​ ಬೇಕಾದ್ರು ಆಗತ್ತೆ. ಕಾಂಗ್ರೆಸ್​ಗೆ ವಂಚಿಸಿ ಹೋದವರ ಸ್ಥಿತಿ ಅತಂತ್ರವಾಗಿದೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಭವಿಷ್ಯ ನುಡಿದಿದ್ದಾರೆ.

ಶಾಸಕ ಕೆ.ವೈ.ನಂಜೇಗೌಡ

ಡಿಕೆಶಿಗೆ ಜಾಮೀನು ಸಿಕ್ಕ ಹಿನ್ನೆಲೆ, ಮಾಲೂರಿನಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರನ್ನು ಹಿಮ್ಮೆಟ್ಟಿಸಲು ಹೂಡಿದ ಐಟಿ, ಇಡಿ ದಾಳಿಗಳ ವಿರುದ್ಧ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಬಲಿಷ್ಠವಾಗಿರುವುದನ್ನು ಬಿಜೆಪಿ ಸಹಿಸುತ್ತಿಲ್ಲ ಎಂದು ಟೀಕಿಸಿದರು.

ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಕೆಡವಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಅದನ್ನು ಯಾವ ಅಧಿಕಾರಿಗಳು ಕೇಳುತ್ತಿಲ್ಲ. ಕ್ಯಾನ್ಸರ್​ ಕಾಯಿಲೆಯಂತೆ ಅನರ್ಹ ಶಾಸಕರು ನರಳುತ್ತಿದ್ದಾರೆ ಎಂದು ಹೇಳಿದರು.

ಕೋಲಾರ: ರಾಜ್ಯ ಬಿಜೆಪಿ ಸರ್ಕಾರ ಇನ್ನೂ ಒಂದು ತಿಂಗಳಲ್ಲಿ ಏನ್​ ಬೇಕಾದ್ರು ಆಗತ್ತೆ. ಕಾಂಗ್ರೆಸ್​ಗೆ ವಂಚಿಸಿ ಹೋದವರ ಸ್ಥಿತಿ ಅತಂತ್ರವಾಗಿದೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಭವಿಷ್ಯ ನುಡಿದಿದ್ದಾರೆ.

ಶಾಸಕ ಕೆ.ವೈ.ನಂಜೇಗೌಡ

ಡಿಕೆಶಿಗೆ ಜಾಮೀನು ಸಿಕ್ಕ ಹಿನ್ನೆಲೆ, ಮಾಲೂರಿನಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರನ್ನು ಹಿಮ್ಮೆಟ್ಟಿಸಲು ಹೂಡಿದ ಐಟಿ, ಇಡಿ ದಾಳಿಗಳ ವಿರುದ್ಧ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಬಲಿಷ್ಠವಾಗಿರುವುದನ್ನು ಬಿಜೆಪಿ ಸಹಿಸುತ್ತಿಲ್ಲ ಎಂದು ಟೀಕಿಸಿದರು.

ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಕೆಡವಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಅದನ್ನು ಯಾವ ಅಧಿಕಾರಿಗಳು ಕೇಳುತ್ತಿಲ್ಲ. ಕ್ಯಾನ್ಸರ್​ ಕಾಯಿಲೆಯಂತೆ ಅನರ್ಹ ಶಾಸಕರು ನರಳುತ್ತಿದ್ದಾರೆ ಎಂದು ಹೇಳಿದರು.

Intro:ಆಂಕರ್​: ಬಿಜೆಪಿ ಸರ್ಕಾರ ಯಾವಗ ಏನ್​ ಬೇಕಾದ್ರು ಆಗಬಹುದು, ಇನ್ನೊಂದುವರೆ ತಿಂಗಳಲ್ಲಿ ಸರ್ಕಾರ ಏನಾಗುತ್ತೋ ಗೊತ್ತಿಲ್ಲ ಎಂದು ಕೋಲಾರ ಜಿಲ್ಲೆ ಮಾಲೂರು ಶಾಸಕ ಕೆವೈ ನಂಜೇಗೌಡ ಭವಿಷ್ಯ ನುಡಿದಿದ್ದಾರೆ.

Body:ಮಾಲೂರಿನಲ್ಲಿ ಡಿಕೆಶಿಗೆ ಜಾಮೀನು ಸಿಕ್ಕ ಹಿನ್ನೆಲೆ ಸಿಹಿ ಹಂಚಿ ಸಂಭ್ರಮಿಸಿ, ಮಾಲೂರು ಮಾರಮ್ಮನಿಗೆ ಈಡುಗಾಯಿ ಹೊಡೆದು ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ನಂಜೇಗೌಡ, ಜೆಡಿಎಸ್ ಮತ್ತು ಕಾಂಗ್ರೇಸ್​ನಿಂದ ಯಾವುದೇ ಶಾಸಕರು ಬಿಜೆಪಿ ಹೋಗಲ್ಲ,ಹೋದವರ ಕಷ್ಟ ದೇವರಿಗೆ ಮುಟ್ಟಿದೆ, ಕಾಂಗ್ರೇಸ್​ನ ಬಲಿಷ್ಠ ನಾಯಕರೇ ಬಿಜೆಪಿಗೆ ಹೋಗಿ ನೋವಲ್ಲಿ ಕುದಿಯುತ್ತಿದ್ದಾರೆ,ಅದೊಂದು ಕ್ಯಾನ್ಸರ್​ ಕಾಯಿಲೆಯಂತೆ ನರಳುತ್ತಿದ್ದಾರೆ, ಬುದ್ದಿ ಇರುವ ಯಾವುದೇ ಶಾಸಕರು ಹೋಗಲ್ಲ, ಎಂದು ಅಲ್ಲದೆ ಬಿಜೆಪಿ ನಾಯಕರಿಂದ ಕಾಂಗ್ರೇಸ್​ ನಾಯಕರನ್ನು ಜೈಲಿಗೆ ಕಳುಹಿಸುವ ಕೆಟ್ಟ ಪ್ರೌರುತ್ತಿ ಆರಂಭಿಸಿದ್ದಾರೆ,ಆದ್ರೆ ಇದಕ್ಕೆ ಡಿಕೆಶಿಗೆ ಬೇಲ್​ ಕೊಟ್ಟು ಕೋರ್ಟ್​ ತಕ್ಕ ಉತ್ತರ ಕೊಟ್ಟಿದೆ,ರಾಜ್ಯದಲ್ಲಿ ಕಾಂಗ್ರೇಸ್​ ಪ್ರಭಲವಾಗಿರೋದನ್ನ ಸಹಿಸದೆ ಬಿಜೆಪಿ ನಾಯಕರು ಕಾಂಗ್ರೇಸ್ ನಾಯಕರುಗಳ ಮೇಲೆ ಕೇಸ್​ ಹಾಕಿಸುತ್ತಿದ್ದಾರೆ ಎಂದ್ರು.

ಬೈಟ್​:1 ಕೆ.ವೈ.ನಂಜೇಗೌಡ (ಮಾಲೂರು ಶಾಸಕ)Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.