ETV Bharat / state

ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್ ​: ಪ್ರಕರಣದ ಎಲ್ಲಾ ಆರೋಪಿಗಳು ಅಂದರ್​

author img

By

Published : Dec 23, 2020, 1:20 PM IST

ಮಾಜಿ ಸಚಿವ ವರ್ತೂರು ಪ್ರಕಾಶ್​ ಅಪಹರಣ ಪ್ರಕರಣದ ಆರು ಮಂದಿ ಆರೋಪಿಗಳನ್ನು ಕೋಲಾರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

former mla varthur prakash kidanppers arrested
ಆರೋಪಿಗಳ ಬಂಧನ

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನ ಕಿಡ್ನ್ಯಾಪರ್ಸ್​ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನ

ಇಂದು ಕೋಲಾರದ ಎಸ್ಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಐಜಿ ಸೀಮಂತ್ ಕುಮಾರ್ ಸಿಂಗ್, ಪ್ರಕರಣದ ಆರು ಆರೋಪಿಗಳನ್ನ ಬಂಧಿಸಿರುವುದಾಗಿ ಮಾಹಿತಿ ನೀಡಿದ್ರು. ಕಿಂಗ್​​ಪಿನ್ ಕವಿರಾಜ್, ಎಸ್. ಲಿಖಿತ್, ಉಲ್ಲಾಸ್​, ಮನೋಜ್, ರಾಘವೇಂದ್ರ, ಪ್ರವೀಣ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಅಪಹರಣಕ್ಕೆ ಬಳಸಲಾಗಿದ್ದ ಮಾರುತಿ ಕಾರುಗಳು ಹಾಗೂ ಬೈಕ್​ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಅಪಹರಣಾಕಾರರು ವರ್ತೂರು ಪ್ರಕಾಶ್​​ರ ಚಲನವಲನ ಹಾಗೂ ಕಾಫಿ ಡೇ ಬಳಿ ಹಣ ಪಡೆಯಲು ಬೈಕ್​ ಬಳಸಲಾಗಿದೆ. ಅಲ್ಲದೆ ಕಾರಿನಲ್ಲಿ ವರ್ತೂರು ಪ್ರಕಾಶ್ ಅವರನ್ನ ಕೂರಿಸಿಕೊಂಡು ಹೋಗಿದ್ದ ಆರೋಪಿಗಳು, ಎರಡು ಕಾರುಗಳನ್ನ ತಮ್ಮ ಓಡಾಟಕ್ಕಾಗಿ ಬಳಸಿದ್ದಾರೆ. ಕೃತ್ಯಕ್ಕಾಗಿ ನಾಲ್ಕು ಲಾಂಗ್, ಒಂದು ಮಚ್ಚು, ಮೂರು ಚಾಕು, ಬೇಸ್​ಬಾಲ್, ಐದು ಮೊಬೈಲ್ ಫೋನ್​ ಬಳಸಿದ್ದು, ಇವುಗಳ ಜೊತೆಗೆ ಸುಮಾರು 20 ಲಕ್ಷದ 50 ಸಾವಿರ ಹಣವನ್ನ ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ.

ನವೆಂಬರ್ 25 ರಂದು ಮಾಜಿ ಸಚಿವ ವರ್ತೂರು ಪ್ರಕಾಶ್, ಕೋಲಾರದ ಬೆಗ್ಗಿ ತೋಟದ ಮನೆಯಿಂದ‌ ಅಪಹರಣವಾಗಿದ್ದರು. ಈ ಪ್ರಕರಣ ಭೇದಿಸಲು 25 ಜನರ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಮಿಂಚಿನ ಕಾರ್ಯಾಚರಣೆ ನಡೆಸಿದ ಈ ಪೊಲೀಸ್​ ತಂಡ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಅಡಗಿದ್ದ ಅಪಹರಣ ಪ್ರಕರಣದ ಆರೋಪಿಗಳನ್ನ ಬಂಧಿಸಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಗೆ ಕ್ಯಾಶ್ ಅವಾರ್ಡ್ ಮತ್ತು ಸರ್ಟಿಫಿಕೇಟ್ ‌ನೀಡಲಾಗಿದೆ.

ಇದನ್ನೂ ಓದಿ: ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ತನಿಖೆ ಚುರುಕು

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನ ಕಿಡ್ನ್ಯಾಪರ್ಸ್​ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನ

ಇಂದು ಕೋಲಾರದ ಎಸ್ಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಐಜಿ ಸೀಮಂತ್ ಕುಮಾರ್ ಸಿಂಗ್, ಪ್ರಕರಣದ ಆರು ಆರೋಪಿಗಳನ್ನ ಬಂಧಿಸಿರುವುದಾಗಿ ಮಾಹಿತಿ ನೀಡಿದ್ರು. ಕಿಂಗ್​​ಪಿನ್ ಕವಿರಾಜ್, ಎಸ್. ಲಿಖಿತ್, ಉಲ್ಲಾಸ್​, ಮನೋಜ್, ರಾಘವೇಂದ್ರ, ಪ್ರವೀಣ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಅಪಹರಣಕ್ಕೆ ಬಳಸಲಾಗಿದ್ದ ಮಾರುತಿ ಕಾರುಗಳು ಹಾಗೂ ಬೈಕ್​ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಅಪಹರಣಾಕಾರರು ವರ್ತೂರು ಪ್ರಕಾಶ್​​ರ ಚಲನವಲನ ಹಾಗೂ ಕಾಫಿ ಡೇ ಬಳಿ ಹಣ ಪಡೆಯಲು ಬೈಕ್​ ಬಳಸಲಾಗಿದೆ. ಅಲ್ಲದೆ ಕಾರಿನಲ್ಲಿ ವರ್ತೂರು ಪ್ರಕಾಶ್ ಅವರನ್ನ ಕೂರಿಸಿಕೊಂಡು ಹೋಗಿದ್ದ ಆರೋಪಿಗಳು, ಎರಡು ಕಾರುಗಳನ್ನ ತಮ್ಮ ಓಡಾಟಕ್ಕಾಗಿ ಬಳಸಿದ್ದಾರೆ. ಕೃತ್ಯಕ್ಕಾಗಿ ನಾಲ್ಕು ಲಾಂಗ್, ಒಂದು ಮಚ್ಚು, ಮೂರು ಚಾಕು, ಬೇಸ್​ಬಾಲ್, ಐದು ಮೊಬೈಲ್ ಫೋನ್​ ಬಳಸಿದ್ದು, ಇವುಗಳ ಜೊತೆಗೆ ಸುಮಾರು 20 ಲಕ್ಷದ 50 ಸಾವಿರ ಹಣವನ್ನ ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ.

ನವೆಂಬರ್ 25 ರಂದು ಮಾಜಿ ಸಚಿವ ವರ್ತೂರು ಪ್ರಕಾಶ್, ಕೋಲಾರದ ಬೆಗ್ಗಿ ತೋಟದ ಮನೆಯಿಂದ‌ ಅಪಹರಣವಾಗಿದ್ದರು. ಈ ಪ್ರಕರಣ ಭೇದಿಸಲು 25 ಜನರ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಮಿಂಚಿನ ಕಾರ್ಯಾಚರಣೆ ನಡೆಸಿದ ಈ ಪೊಲೀಸ್​ ತಂಡ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಅಡಗಿದ್ದ ಅಪಹರಣ ಪ್ರಕರಣದ ಆರೋಪಿಗಳನ್ನ ಬಂಧಿಸಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಗೆ ಕ್ಯಾಶ್ ಅವಾರ್ಡ್ ಮತ್ತು ಸರ್ಟಿಫಿಕೇಟ್ ‌ನೀಡಲಾಗಿದೆ.

ಇದನ್ನೂ ಓದಿ: ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ತನಿಖೆ ಚುರುಕು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.