ETV Bharat / state

ಮಲೇಷಿಯಾದಿಂದ ಮಹಾಮಾರಿ ಹೊತ್ಕೊಂಡ ಬಂದ ಟೆಕ್ಕಿ.. ಬಂಗಾರಪೇಟೆ ಜನರಲ್ಲಿ ಢವಢವ.. - ಕೋಲಾರದ ಬಂಗಾರಪೇಟೆಯಲ್ಲಿ ಕೊರೊನಾ ಆತಂಕ

ಮಲೇಷಿಯಾದಿಂದ ಬಂದ ವ್ಯಕ್ತಿಯೊಬ್ಬನ ಕ್ವಾರಂಟೈನ್​ ಉಲ್ಲಂಘನೆ ಹಾಗೂ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕೋಲಾರದಲ್ಲಿ ಕೊರೊನಾ ಆತಂಕ ಶುರುವಾಗಿದೆ.

corona effect in bangarapete
ಬಂಗಾರಪೇಟೆಯಲ್ಲಿ ಕೊರೊನಾ ಆತಂಕ
author img

By

Published : Jun 1, 2020, 5:51 PM IST

ಕೋಲಾರ: ಮಲೇಷಿಯಾದಿಂದ ಬಂದ ವ್ಯಕ್ತಿಯೊಬ್ಬನ ಕ್ವಾರಂಟೈನ್​ ಉಲ್ಲಂಘನೆ ಹಾಗೂ ಬೆಂಗಳೂರಿನ ಆರೋಗ್ಯ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ಬಂಗಾರಪೇಟೆಯಲ್ಲಿ ಆತಂಕ ಶುರುವಾಗಿದೆ.

ಮೇ 22 ರಂದು ಹೊರ ದೇಶದಲ್ಲಿದ್ದವರನ್ನು ಭಾರತಕ್ಕೆ ಕರೆ ತರಲಾಗಿತ್ತು. ಆ ಪೈಕಿ ಮಲೇಷಿಯಾದಿಂದ ಬಂದಿದ್ದ ಬಂಗಾರಪೇಟೆ ಮೂಲದ ಟೆಕ್ಕಿ, ಪಿ3186 ಕೂಡಾ ಒಬ್ಬ. ಆತನನ್ನು ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್​ ಮಾಡಲಾಗಿತ್ತು. ಬಳಿಕ ಮೇ 27ರಂದು ಆ ವ್ಯಕ್ತಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಆದರೆ, ವರದಿ ಬರುವ ಮುನ್ನವೇ ಮೇ 29ರಂದು ಹೋಂ ಕ್ವಾರಂಟೈನ್​ನಲ್ಲಿರಲು ಸೂಚನೆ ನೀಡಿ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಿ ಬೆಂಗಳೂರಿನ ಆರೋಗ್ಯ ಇಲಾಖೆ ಮಾಡಿದ ಎಡವಟ್ಟಿನಿಂದ, ಈಗ ಬಂಗಾರಪೇಟೆ ಪಟ್ಟಣದಲ್ಲಿ ಬಹುದೊಡ್ಡ ಆತಂಕವೊಂದು ಶುರುವಾಗಿದೆ.

ಬಂಗಾರಪೇಟೆಗೆ ಬಂದಿದ್ದ ಆ ವ್ಯಕ್ತಿ ತನ್ನ ವಯಸ್ಸಾದ ತಂದೆ-ತಾಯಿ ಜೊತೆಗಿದ್ದ. ಅಷ್ಟೇ ಅಲ್ಲ, ಅವರ ಮನೆ ಬಳಿ ಇರುವ ಸೂಪರ್​ ಜೆಂಟ್ಸ್​ ಪಾರ್ಲರ್​ ಅನ್ನೋ ಸಲೂನ್​ನಲ್ಲಿ ಹೇರ್​ ಕಟ್​ ಮಾಡಿಸಿಕೊಂಡಿದ್ದ. ಆದರೆ, ಮದ್ಯಾಹ್ನದ ಹೊತ್ತಿಗೆ ಈ ಟೆಕ್ಕಿಯ ವರದಿಯಲ್ಲಿ ಕೊರೊನಾ ಪಾಸಿಟಿವ್​ ಬಂದಿದ್ದು, ಸದ್ಯ ಆತಂಕಕ್ಕೆ ಕಾರಣವಾಗಿದೆ.

ಬಂಗಾರಪೇಟೆಯಲ್ಲಿ ಕೊರೊನಾ ಆತಂಕ..

ತಕ್ಷಣವೇ ಆತನನ್ನು ಕೋಲಾರದ ಕೋವಿಡ್-19​ ಆಸ್ಪತ್ರೆಗೆ ದಾಖಲು ಮಾಡಿ, ಕುಟುಂಬದ ಮೂವರನ್ನು ಕ್ವಾರಂಟೈನ್​ ಮಾಡಲಾಗಿದೆ. ಹಾಗೂ ಸಲೂನ್​ ಶಾಪ್​ನ ಮಾಲೀಕನನ್ನು ಕ್ವಾರಂಟೈನ್​ ಮಾಡಿ, ಸೋಂಕಿತ ಟೆಕ್ಕಿ ಬಂದು ಹೋದ ನಂತರ ಶಾಪ್​ಗೆ ಬಂದು ಹೋದವರ ಹುಡುಕಾಟ ಶುರು ಮಾಡಲಾಗಿದೆ. ಅಲ್ಲಿ ಹತ್ತಕ್ಕೂ ಹೆಚ್ಚು ಜನ ಬಂದು ಹೋಗಿರುವ ಮಾಹಿತಿ ಪಡೆದ ಅಧಿಕಾರಿಗಳು, ಬೇರೆ ದಾರಿ ಕಾಣದೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೈಕ್​ ಹಿಡಿದು ಅನೌನ್ಸ್​ ಮಾಡೋದಕ್ಕೆ ಆರಂಭಿಸಿದ್ರು. ಆ ನಂತರವೇ ಸುಮಾರು 8 ಜನರ ಮಾಹಿತಿ ಸಿಕ್ಕಿದೆ.

ಸದ್ಯ ವಿದೇಶದಿಂದ ಬಂದಿದ್ದ ಈ ಸೋಂಕಿತನಿದ್ದ ಬಂಗಾರಪೇಟೆ ಪಟ್ಟಣದ ವಿವೇಕಾನಂದ ನಗರದ ಪ್ರದೇಶವನ್ನು ನಿರ್ಬಂಧಿತ ಪ್ರದೇಶ​ ಎಂದು ಘೋಷಣೆ ಮಾಡಿ, ಪ್ರಮುಖ ರಸ್ತೆಗಳನ್ನು ಸೀಲ್​ ಮಾಡಲಾಗಿದೆ. ಜೊತೆಗೆ ಇಡೀ ಏರಿಯಾಗೆ ಸೋಂಕು ನಿವಾರಕ ಸಿಂಪಡಿಸಲಾಗಿದ್ದು, ಮತ್ಯಾರಾದ್ರು ಸೋಂಕಿತ ಸಂಪರ್ಕ ಅಥವಾ ಈ ಸಲೂನ್​ಗೆ ಬಂದು ಹೋಗಿದ್ದಾರಾ ಅನ್ನೋ ಹುಡುಕಾಡಲಾಗ್ತಿದೆ. ಇಂಥ ಆತಂಕದ ನಡುವೆಯೂ ಕೋಲಾರ ಜಿಲ್ಲಾ ಕೇಂದ್ರದಲ್ಲೂ ಕೂಡಾ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಈಗಾಗಲೇ ಕೋಲಾರ ನಗರದ ನಾಲ್ಕು ಬಡಾವಣೆಗಳು ನಿರ್ಬಂಧಿತ ಪ್ರದೇಶವೆಂದು​ ಘೋಷಣೆ ಮಾಡಲಾಗಿದೆ.

ಕೋಲಾರದ ಗಾಂಧಿನಗರ, ಆರೋಹಳ್ಳಿ ಬಡಾವಣೆ, ಗೌರಿಪೇಟೆ ಹಾಗೂ ಕುರುಬರಪೇಟೆ ಬಡಾವಣೆಗಳು ಸೀಲ್​​​ಡೌನ್ ​ಆಗಿವೆ. ಮತ್ತಷ್ಟು ಏರಿಯಾಗಳು ಇದೇ ರೀತಿ ಬಂದ್​ ಆದ್ರೆ ಗತಿ ಏನು ಅನ್ನೋ ಭಯ ಕೂಡಾ ಜನರಲ್ಲಿ ಹಾಗೂ ಅಧಿಕಾರಿಗಳಲ್ಲಿ ಶುರುವಾಗಿದೆ.

ಕೋಲಾರ: ಮಲೇಷಿಯಾದಿಂದ ಬಂದ ವ್ಯಕ್ತಿಯೊಬ್ಬನ ಕ್ವಾರಂಟೈನ್​ ಉಲ್ಲಂಘನೆ ಹಾಗೂ ಬೆಂಗಳೂರಿನ ಆರೋಗ್ಯ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ಬಂಗಾರಪೇಟೆಯಲ್ಲಿ ಆತಂಕ ಶುರುವಾಗಿದೆ.

ಮೇ 22 ರಂದು ಹೊರ ದೇಶದಲ್ಲಿದ್ದವರನ್ನು ಭಾರತಕ್ಕೆ ಕರೆ ತರಲಾಗಿತ್ತು. ಆ ಪೈಕಿ ಮಲೇಷಿಯಾದಿಂದ ಬಂದಿದ್ದ ಬಂಗಾರಪೇಟೆ ಮೂಲದ ಟೆಕ್ಕಿ, ಪಿ3186 ಕೂಡಾ ಒಬ್ಬ. ಆತನನ್ನು ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್​ ಮಾಡಲಾಗಿತ್ತು. ಬಳಿಕ ಮೇ 27ರಂದು ಆ ವ್ಯಕ್ತಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಆದರೆ, ವರದಿ ಬರುವ ಮುನ್ನವೇ ಮೇ 29ರಂದು ಹೋಂ ಕ್ವಾರಂಟೈನ್​ನಲ್ಲಿರಲು ಸೂಚನೆ ನೀಡಿ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಿ ಬೆಂಗಳೂರಿನ ಆರೋಗ್ಯ ಇಲಾಖೆ ಮಾಡಿದ ಎಡವಟ್ಟಿನಿಂದ, ಈಗ ಬಂಗಾರಪೇಟೆ ಪಟ್ಟಣದಲ್ಲಿ ಬಹುದೊಡ್ಡ ಆತಂಕವೊಂದು ಶುರುವಾಗಿದೆ.

ಬಂಗಾರಪೇಟೆಗೆ ಬಂದಿದ್ದ ಆ ವ್ಯಕ್ತಿ ತನ್ನ ವಯಸ್ಸಾದ ತಂದೆ-ತಾಯಿ ಜೊತೆಗಿದ್ದ. ಅಷ್ಟೇ ಅಲ್ಲ, ಅವರ ಮನೆ ಬಳಿ ಇರುವ ಸೂಪರ್​ ಜೆಂಟ್ಸ್​ ಪಾರ್ಲರ್​ ಅನ್ನೋ ಸಲೂನ್​ನಲ್ಲಿ ಹೇರ್​ ಕಟ್​ ಮಾಡಿಸಿಕೊಂಡಿದ್ದ. ಆದರೆ, ಮದ್ಯಾಹ್ನದ ಹೊತ್ತಿಗೆ ಈ ಟೆಕ್ಕಿಯ ವರದಿಯಲ್ಲಿ ಕೊರೊನಾ ಪಾಸಿಟಿವ್​ ಬಂದಿದ್ದು, ಸದ್ಯ ಆತಂಕಕ್ಕೆ ಕಾರಣವಾಗಿದೆ.

ಬಂಗಾರಪೇಟೆಯಲ್ಲಿ ಕೊರೊನಾ ಆತಂಕ..

ತಕ್ಷಣವೇ ಆತನನ್ನು ಕೋಲಾರದ ಕೋವಿಡ್-19​ ಆಸ್ಪತ್ರೆಗೆ ದಾಖಲು ಮಾಡಿ, ಕುಟುಂಬದ ಮೂವರನ್ನು ಕ್ವಾರಂಟೈನ್​ ಮಾಡಲಾಗಿದೆ. ಹಾಗೂ ಸಲೂನ್​ ಶಾಪ್​ನ ಮಾಲೀಕನನ್ನು ಕ್ವಾರಂಟೈನ್​ ಮಾಡಿ, ಸೋಂಕಿತ ಟೆಕ್ಕಿ ಬಂದು ಹೋದ ನಂತರ ಶಾಪ್​ಗೆ ಬಂದು ಹೋದವರ ಹುಡುಕಾಟ ಶುರು ಮಾಡಲಾಗಿದೆ. ಅಲ್ಲಿ ಹತ್ತಕ್ಕೂ ಹೆಚ್ಚು ಜನ ಬಂದು ಹೋಗಿರುವ ಮಾಹಿತಿ ಪಡೆದ ಅಧಿಕಾರಿಗಳು, ಬೇರೆ ದಾರಿ ಕಾಣದೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೈಕ್​ ಹಿಡಿದು ಅನೌನ್ಸ್​ ಮಾಡೋದಕ್ಕೆ ಆರಂಭಿಸಿದ್ರು. ಆ ನಂತರವೇ ಸುಮಾರು 8 ಜನರ ಮಾಹಿತಿ ಸಿಕ್ಕಿದೆ.

ಸದ್ಯ ವಿದೇಶದಿಂದ ಬಂದಿದ್ದ ಈ ಸೋಂಕಿತನಿದ್ದ ಬಂಗಾರಪೇಟೆ ಪಟ್ಟಣದ ವಿವೇಕಾನಂದ ನಗರದ ಪ್ರದೇಶವನ್ನು ನಿರ್ಬಂಧಿತ ಪ್ರದೇಶ​ ಎಂದು ಘೋಷಣೆ ಮಾಡಿ, ಪ್ರಮುಖ ರಸ್ತೆಗಳನ್ನು ಸೀಲ್​ ಮಾಡಲಾಗಿದೆ. ಜೊತೆಗೆ ಇಡೀ ಏರಿಯಾಗೆ ಸೋಂಕು ನಿವಾರಕ ಸಿಂಪಡಿಸಲಾಗಿದ್ದು, ಮತ್ಯಾರಾದ್ರು ಸೋಂಕಿತ ಸಂಪರ್ಕ ಅಥವಾ ಈ ಸಲೂನ್​ಗೆ ಬಂದು ಹೋಗಿದ್ದಾರಾ ಅನ್ನೋ ಹುಡುಕಾಡಲಾಗ್ತಿದೆ. ಇಂಥ ಆತಂಕದ ನಡುವೆಯೂ ಕೋಲಾರ ಜಿಲ್ಲಾ ಕೇಂದ್ರದಲ್ಲೂ ಕೂಡಾ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಈಗಾಗಲೇ ಕೋಲಾರ ನಗರದ ನಾಲ್ಕು ಬಡಾವಣೆಗಳು ನಿರ್ಬಂಧಿತ ಪ್ರದೇಶವೆಂದು​ ಘೋಷಣೆ ಮಾಡಲಾಗಿದೆ.

ಕೋಲಾರದ ಗಾಂಧಿನಗರ, ಆರೋಹಳ್ಳಿ ಬಡಾವಣೆ, ಗೌರಿಪೇಟೆ ಹಾಗೂ ಕುರುಬರಪೇಟೆ ಬಡಾವಣೆಗಳು ಸೀಲ್​​​ಡೌನ್ ​ಆಗಿವೆ. ಮತ್ತಷ್ಟು ಏರಿಯಾಗಳು ಇದೇ ರೀತಿ ಬಂದ್​ ಆದ್ರೆ ಗತಿ ಏನು ಅನ್ನೋ ಭಯ ಕೂಡಾ ಜನರಲ್ಲಿ ಹಾಗೂ ಅಧಿಕಾರಿಗಳಲ್ಲಿ ಶುರುವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.