ETV Bharat / state

ಸಡಿಲಿಕೆ ಅಂದ ತಕ್ಷಣ ಕೊರೊನಾ ಭೀತಿ ಮರೆತು ಬೀದಿಗಿಳಿದ ಕೋಲಾರ ಜನತೆ - ಕೊರೊನಾ ಪ್ರಕರಣಗಳು

ಕೊರೊನಾ ಭೀತಿಯಿಂದ ಹೇರಲಾಗಿದ್ದ ಲಾಕ್​ಡೌನ್​​ನನ್ನು ಸರ್ಕಾರ​ ಸಡಿಲಗೊಳಿಸಿದ ಪರಿಣಾಮ ಕೋಲಾರ ಜಿಲ್ಲೆಯ ವೇಮಗಳ್​ನಲ್ಲಿ ಜನರು ಮೊಬೈಲ್​ ಶಾಪ್​ ಮತ್ತು ರಸ್ತೆಗಳಲ್ಲಿ ಅಂತರ ಕಾಯ್ದುಕೊಳ್ಳದೆ, ಮಾಸ್ಕ್​ ಧರಿಸದೆ ನಿರ್ಭಯವಾಗಿ ಓಡಾಡುತ್ತಿದ್ದಾರೆ.

after-lock-down-relaxation-kolar-people-came-road
ಲಾಕ್ ಡೌನ್ ಸಡಿಲಿಕೆ
author img

By

Published : Apr 24, 2020, 11:36 AM IST

ಕೋಲಾರ: ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲಿಯೇ ಜಿಲ್ಲೆಯಲ್ಲಿ ಮೊಬೈಲ್ ಅಂಗಡಿಗಳನ್ನು ತೆರೆದ ಪರಿಣಾಮ ಜನರು ಕೊರೊನಾ ಭೀತಿ ಮರೆತು ಅಂಗಡಿಗಳಿಗೆ ಮುಗಿಬಿದ್ದಿದ್ದ ದೃಶ್ಯ ಕಂಡು ಬಂತು.

ತಾಲೂಕಿನ ವೇಮಗಲ್​ನಲ್ಲಿ ಮೊಬೈಲ್ ಖರೀದಿ ಹಾಗೂ ರೀಚಾರ್ಚ್​​​ಗಾಗಿ ಜನರು ಮುಗಿಬಿದ್ದಿದ್ದದ್ದರು. ಇನ್ನು ಮೊಬೈಲ್ ಹಾಗೂ ರೀಚಾರ್ಜ್ ಮಳಿಗೆಗಳಿಗೆ ಸರ್ಕಾರ ಅನುಮತಿ‌ ನೀಡಿದ್ದೇ ತಡ ಅಂಗಡಿಗಳು ಮುಂದೆ ನೂರಾರು ಜನರು ಜಮಾಯಿಸಿದ್ದಾರೆ. ಜೊತೆಗೆ ಗ್ರಾಮದ ರಸ್ತೆಯಲ್ಲಿ ಎಂದಿಗಿಂತ ಜನರ ಸಂಖ್ಯೆ ಹೆಚ್ಚಳವಾಗಿದ್ದು, ಯಾರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಕೆಲವರು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸಿದ್ದರು.

ಸಡಿಲಿಕೆ ಅಂದ ತಕ್ಷಣ ಕೊರೊನಾ ಭೀತಿ ಮರೆತು ಬೀದಿಗಿಳಿದ ಜನ

ನಿನ್ನೆಯಿಂದ ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಲಾಕ್ ಡೌನ್ ‌ಸಡಿಲಿಕೆಯಾದ ಹಿನ್ನೆಲೆ ಜನರ ಓಡಾಟ ಹೆಚ್ಚಾಗಿದೆ. ಜೊತೆಗೆ ಗ್ರೀನ್ ಜೋನ್ ಜಿಲ್ಲೆಗಳಲ್ಲೂ ಸರ್ಕಾರ ಸಡಿಲಿಕೆ ನೀಡಬಾರದಿತ್ತು ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಕೋಲಾರ: ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲಿಯೇ ಜಿಲ್ಲೆಯಲ್ಲಿ ಮೊಬೈಲ್ ಅಂಗಡಿಗಳನ್ನು ತೆರೆದ ಪರಿಣಾಮ ಜನರು ಕೊರೊನಾ ಭೀತಿ ಮರೆತು ಅಂಗಡಿಗಳಿಗೆ ಮುಗಿಬಿದ್ದಿದ್ದ ದೃಶ್ಯ ಕಂಡು ಬಂತು.

ತಾಲೂಕಿನ ವೇಮಗಲ್​ನಲ್ಲಿ ಮೊಬೈಲ್ ಖರೀದಿ ಹಾಗೂ ರೀಚಾರ್ಚ್​​​ಗಾಗಿ ಜನರು ಮುಗಿಬಿದ್ದಿದ್ದದ್ದರು. ಇನ್ನು ಮೊಬೈಲ್ ಹಾಗೂ ರೀಚಾರ್ಜ್ ಮಳಿಗೆಗಳಿಗೆ ಸರ್ಕಾರ ಅನುಮತಿ‌ ನೀಡಿದ್ದೇ ತಡ ಅಂಗಡಿಗಳು ಮುಂದೆ ನೂರಾರು ಜನರು ಜಮಾಯಿಸಿದ್ದಾರೆ. ಜೊತೆಗೆ ಗ್ರಾಮದ ರಸ್ತೆಯಲ್ಲಿ ಎಂದಿಗಿಂತ ಜನರ ಸಂಖ್ಯೆ ಹೆಚ್ಚಳವಾಗಿದ್ದು, ಯಾರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಕೆಲವರು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸಿದ್ದರು.

ಸಡಿಲಿಕೆ ಅಂದ ತಕ್ಷಣ ಕೊರೊನಾ ಭೀತಿ ಮರೆತು ಬೀದಿಗಿಳಿದ ಜನ

ನಿನ್ನೆಯಿಂದ ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಲಾಕ್ ಡೌನ್ ‌ಸಡಿಲಿಕೆಯಾದ ಹಿನ್ನೆಲೆ ಜನರ ಓಡಾಟ ಹೆಚ್ಚಾಗಿದೆ. ಜೊತೆಗೆ ಗ್ರೀನ್ ಜೋನ್ ಜಿಲ್ಲೆಗಳಲ್ಲೂ ಸರ್ಕಾರ ಸಡಿಲಿಕೆ ನೀಡಬಾರದಿತ್ತು ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.