ETV Bharat / state

ಬ್ಯಾಂಕ್​ ಲೂಟಿಗೆ ಸ್ಕೆಚ್​.. ಸೈರನ್ ಶಬ್ದ ಕೇಳಿ ಪರಾರಿಯಾಗಿದ್ದ ಖದೀಮರು ಅರೆಸ್ಟ್​ - ಚಿತ್ತೂರಿನಲ್ಲಿ ಬ್ಯಾಂಕ್ ಲೂಟಿ ಯತ್ನ ಪ್ರಕರಣ

ಬ್ಯಾಂಕ್ ಲೂಟಿಗೆ ಯತ್ನಿಸಿದ ಕೋಲಾರ ಮೂಲದ ಆರು ಮಂದಿ ಆರೋಪಿಗಳನ್ನು ಆಂಧ್ರಪ್ರದೇಶದ ಚಿತ್ತೂರು ಪೊಲೀಸರು ಬಂಧಿಸಿದ್ದಾರೆ.

6-people-arrested-in-bank-robbery-attempt-case
ಬ್ಯಾಂಕ್​ ಲೂಟಿಗೆ ಸ್ಕೆಚ್​... ಸೈರನ್ ಶಬ್ದ ಕೇಳಿ ಪರಾರಿಯಾಗಿದ್ದ ಖದೀಮರು ಅರೆಸ್ಟ್​
author img

By

Published : Jun 3, 2022, 6:26 PM IST

ಕೋಲಾರ: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬ್ಯಾಂಕ್ ಲೂಟಿಗೆ ಯತ್ನಿಸಿದ ಕೋಲಾರ ಮೂಲದ ಆರು ಮಂದಿ ಆರೋಪಿಗಳನ್ನು ಚಿತ್ತೂರು ಪೊಲೀಸರು ಬಂಧಿಸಿದ್ದಾರೆ. ಚಿತ್ತೂರು ಜಿಲ್ಲೆಯ ರಾಮಕುಪ್ಪಂನ ಸಪ್ತಗಿರಿ ಬ್ಯಾಂಕ್ ಲೂಟಿಗೆ ಆಂದ್ರಪ್ರದೇಶದ ಇಬ್ಬರೊಂದಿಗೆ ರಾಜ್ಯದ ಆರು ಮಂದಿ ಯತ್ನಿಸಿದ್ದರು.

ಗ್ಯಾಸ್ ಕಟ್ಟರ್​​ನಿಂದ ಬ್ಯಾಂಕ್​ನ ಶೆಟರ್ ಕತ್ತರಿಸಿ ಆರೋಪಿಗಳು ಪ್ರವೇಶಿಸಿದ ತಕ್ಷಣ, ಬ್ಯಾಂಕ್‌ ಸೈರನ್ ಶಬ್ದ ಬಂದಿದೆ. ಇದನ್ನರಿತ ಲೂಟಿಕೋರರು ಸ್ಥಳದಿಂದ ಪರಾರಿಯಾಗಿದ್ದರು. ಕೃತ್ಯಕ್ಕೆ ಬೆಂಗಳೂರಿನ ಮಾರತ್​​ಹಳ್ಳಿಯಿಂದ ಗ್ಯಾಸ್ ಕಟರ್ ಖರೀದಿಸಿದ್ದರು ಎನ್ನಲಾಗಿದೆ.

ಪವನ್(20), ಅಂಬರೀಷ್(23), ಶ್ರೇಯಸ್(20), ಸುಮನ್(24) ಮಂಜುನಾಥ್ (26), ಶಿವ (29), ಚರಣ್ ಕುಮಾರ್ (24) ಹಾಗೂ ಕುಮಾರ್ (22) ಬಂಧಿತ ಆರೋಪಿಗಳಾಗಿದ್ದಾರೆ. ಇವರೆಲ್ಲ ಕೋಲಾರ ಜಿಲ್ಲೆಯ ಕೆಜಿಎಫ್ ಹಾಗೂ ಮಾಲೂರು ಮೂಲದವರಾಗಿದ್ದಾರೆ. ಚಿತ್ತೂರು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿ, ಪ್ರಧಾನಿ ಭೇಟಿ ನಡುವೆಯೇ ಕಾನ್ಪುರದಲ್ಲಿ ಕೋಮು ಗಲಾಟೆ, ಕಲ್ಲು ತೂರಾಟ

ಕೋಲಾರ: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬ್ಯಾಂಕ್ ಲೂಟಿಗೆ ಯತ್ನಿಸಿದ ಕೋಲಾರ ಮೂಲದ ಆರು ಮಂದಿ ಆರೋಪಿಗಳನ್ನು ಚಿತ್ತೂರು ಪೊಲೀಸರು ಬಂಧಿಸಿದ್ದಾರೆ. ಚಿತ್ತೂರು ಜಿಲ್ಲೆಯ ರಾಮಕುಪ್ಪಂನ ಸಪ್ತಗಿರಿ ಬ್ಯಾಂಕ್ ಲೂಟಿಗೆ ಆಂದ್ರಪ್ರದೇಶದ ಇಬ್ಬರೊಂದಿಗೆ ರಾಜ್ಯದ ಆರು ಮಂದಿ ಯತ್ನಿಸಿದ್ದರು.

ಗ್ಯಾಸ್ ಕಟ್ಟರ್​​ನಿಂದ ಬ್ಯಾಂಕ್​ನ ಶೆಟರ್ ಕತ್ತರಿಸಿ ಆರೋಪಿಗಳು ಪ್ರವೇಶಿಸಿದ ತಕ್ಷಣ, ಬ್ಯಾಂಕ್‌ ಸೈರನ್ ಶಬ್ದ ಬಂದಿದೆ. ಇದನ್ನರಿತ ಲೂಟಿಕೋರರು ಸ್ಥಳದಿಂದ ಪರಾರಿಯಾಗಿದ್ದರು. ಕೃತ್ಯಕ್ಕೆ ಬೆಂಗಳೂರಿನ ಮಾರತ್​​ಹಳ್ಳಿಯಿಂದ ಗ್ಯಾಸ್ ಕಟರ್ ಖರೀದಿಸಿದ್ದರು ಎನ್ನಲಾಗಿದೆ.

ಪವನ್(20), ಅಂಬರೀಷ್(23), ಶ್ರೇಯಸ್(20), ಸುಮನ್(24) ಮಂಜುನಾಥ್ (26), ಶಿವ (29), ಚರಣ್ ಕುಮಾರ್ (24) ಹಾಗೂ ಕುಮಾರ್ (22) ಬಂಧಿತ ಆರೋಪಿಗಳಾಗಿದ್ದಾರೆ. ಇವರೆಲ್ಲ ಕೋಲಾರ ಜಿಲ್ಲೆಯ ಕೆಜಿಎಫ್ ಹಾಗೂ ಮಾಲೂರು ಮೂಲದವರಾಗಿದ್ದಾರೆ. ಚಿತ್ತೂರು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿ, ಪ್ರಧಾನಿ ಭೇಟಿ ನಡುವೆಯೇ ಕಾನ್ಪುರದಲ್ಲಿ ಕೋಮು ಗಲಾಟೆ, ಕಲ್ಲು ತೂರಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.