ಕೊಡಗು: ಮಡಿಕೇರಿ ಜಿಲ್ಲಾಸ್ಪತ್ರೆ ಆವರಣದಲ್ಲೇ 80 ಲಕ್ಷ ರೂ. ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ದಿನಕ್ಕೆ 15 ಸಾವಿರ ಕಿಲೋ ಲೀಟರ್ ಆಮ್ಲಜನಕ ಉತ್ಪಾದನೆಯಾಗುತ್ತಿದೆ. ಜಿಲ್ಲೆಯ ಮಟ್ಟಿಗೆ ಇಷ್ಟು ಸಾಕು ಎಂದು ಆರೋಗ್ಯಾಧಿಕಾರಿ ಡಾ. ಮೋಹನ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸೋಂಕಿತರ ಪ್ರಮಾಣ ಹೆಚ್ಚಾದಲ್ಲಿ ಅವರ ಆರೈಕೆಗೆ ಅಗತ್ಯವಾಗಿ ಬೇಕಾಗೋದು ಹಾಸಿಗೆಗಳು. ಈ ನಿಟ್ಟಿನಲ್ಲಿಯೂ ಪೂರ್ವ ಸಿದ್ಧತೆ ಕೈಗೊಂಡಿರೋ ಜಿಲ್ಲಾಡಳಿತ ಗಾಳಿಬೀಡು ಗ್ರಾಮದಲ್ಲಿರೋ ನವೋದಯ ಶಾಲೆಯನ್ನೇ ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯಿಸಿದೆ. ಕಳೆದ ಬಾರಿಯೂ ಇದೇ ಶಾಲೆ ಕೋವಿಡ್ ಕೇರ್ ಸೆಂಟರ್ ಆಗಿ ಜಿಲ್ಲೆಯ ಜನರಿಗೆ ಯಶಸ್ವಿ ಸೇವೆ ನೀಡಿತ್ತು. ಈ ಸೆಂಟರ್ನಲ್ಲಿ ಅಗತ್ಯ ಸಿಬ್ಬಂದಿಯನ್ನ ಈಗಾಗಲೇ ನಿಯೋಜಿಸಲಾಗಿದೆ ಎಂದರು.