ETV Bharat / state

ಮಡಿಕೇರಿ ಕೋಟೆಗೆ ಕೂಡಿಬಂದ ಕಾಯಕಲ್ಪ: ನವೀಕರಣಕ್ಕೆ  ಪ್ರಾಚ್ಯವಸ್ತು ಇಲಾಖೆ ಸಿದ್ಧತೆ

author img

By

Published : Aug 3, 2019, 8:46 PM IST

ಮಡಿಕೇರಿಯಲ್ಲಿ ರಾಜ ಮನೆತನದ ಕೋಟೆ ಹಾಳು ಬೀಳುತ್ತಿತ್ತು, ಇದನ್ನು ನೋಡಲಾರದೆ ಸ್ಥಳೀಯರೊಬ್ಬರು ಕೋರ್ಟ್​ ಮೊರೆ ಹೋಗಿದ್ದರು. ಇದೀಗ ಹೈ ಕೋರ್ಟ್​ ಪ್ರಾಚ್ಯವಸ್ತು ಇಲಾಖೆಗೆ ಈ ಸಂಬಂಧ ಕಾರ್ಯ ವಹಿಸಿದ್ದು, ಸದ್ಯದಲ್ಲೇ ಕೋಟೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಮಡಿಕೇರಿ ಕೋಟೆ

ಕೊಡಗು: ರಾಜ-ಮಹಾರಾಜರು ಆಳ್ವಿಕೆ ನಡೆಸಿದ ಮಡಿಕೇರಿ ಕೋಟೆಗೆ ಕೊನೆಗೂ ಕಾಯಕಲ್ಪದ ಯೋಗ ಕೂಡಿ ಬಂದಿದೆ. ಅಳಿವಿನಂಚಿನಲ್ಲಿರುವ ಕೋಟೆಯ ನವೀಕರಣಕ್ಕೆ ಇದೀಗ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಮುಂದಾಗಿದೆ.

ಪಾಳು ಬಿದ್ದಿರುವ ಕೋಟೆ. ಅರಮನೆ ಗೋಡೆಯ ಮೇಲೆಲ್ಲಾ ಹಸಿರುಗಟ್ಟಿರುವ ಪಾಚಿ, ಶಿಥಿಲಗೊಂಡಿರುವ ಗೋಡೆಗಳು. ಇಂತಹ ಸ್ಥಿತಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮಡಿಕೇರಿಯ ಅರಮನೆಯದು. ಸ್ವಾತಂತ್ರ್ಯ ಬಂದಾಗಿನಿಂದ ಈ ಅರಮನೆಯಲ್ಲಿ ಜಿಲ್ಲಾಡಳಿತದ ವಿವಿಧ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಇದೀಗ ಬಹುತೇಕ ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದ್ದು ಕೆಲವು ಕಚೇರಿಗಳು ಹಾಗೂ ಶಾಸಕರ ಕಚೇರಿಗಳು ಉಳಿದಿವೆ. ಸಾಕಷ್ಟು ಬಾರಿ ಕೋಟೆ ಅಳಿವಿನ ಅಂಚಿಗೆ ತಲುಪಿರುವ ಬಗ್ಗೆ ಮನವರಿಕೆಯನ್ನೂ ಮಾಡಲಾಗಿತ್ತು.

ಮಡಿಕೇರಿ ಕೋಟೆ

ಶಿಥಿಲಾವಸ್ಥೆ ತಲುಪಿರುವ ಕೋಟೆಯನ್ನು ಸರಿಪಡಿಸುವಂತೆ ಸ್ಥಳೀಯರೊಬ್ಬರು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಕೈಗೊಳ್ಳಬೇಕಾದ ಕೆಲಸದ ಬಗ್ಗೆ ಮಾಹಿತಿ ನೀಡುವಂತೆ ಪ್ರಾಚ್ಯವಸ್ತು ಇಲಾಖೆಗೆ ಸೂಚನೆ ನೀಡಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ಇಲಾಖೆಯ ಸೂಪರಿಟೆಂಡೆಂಟ್ ಮೂರ್ತೇಶ್ವರಿ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದೆ.

ಜಿಲ್ಲಾಡಳಿತ ಅಕ್ಟೋಬರ್ 31 ರ ಒಳಗೆ ಎಲ್ಲಾ ಕಚೇರಿ ಖಾಲಿ ಮಾಡುವುದಾಗಿ ಹೇಳಿದೆ. ಆದರೆ ಅದರೊಳಗೆ ಮಳೆ ಬಂದು ಅರಮನೆ ಕುಸಿದು ಬೀಳುವ ಸಂಭವವಿದ್ದು, ಮೇಲ್ಛಾವಣಿಯನ್ನಾದರೂ ಸರಿಪಡಿಸಲು ಸೂಚನೆ ನೀಡಿ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದರು. ಇದೀಗ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ನೀಡಲಿದ್ದು, ತುರ್ತಾಗಿ ಆಗಬೇಕಿರುವ ಕಾಮಗಾರಿ ನಡೆಸಲ್ಲಿದ್ದಾರೆ.

ಕೋಟೆಯಲ್ಲಿ ಕೊಡಗಿನ ಸಂಸ್ಕೃತಿ, ರಾಜರ ಆಳ್ವಿಕೆ ಬಿಂಬಿಸುವ ವಸ್ತುಗಳು, ಧ್ವನಿ, ಬೆಳಕು ಹಾಗೂ ಮಡಿಕೇರಿ ಗದ್ದುಗೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಚಿಂತಿಸಲಾಗಿದೆ ಎನ್ನುತ್ತಾರೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಮೈಸೂರು ವಿಭಾಗದ ಮೇಲ್ವಿಚಾರಕಿ ಮೂರ್ತೇಶ್ವರಿ.‌

‌ಕೋರ್ಟ್ ಆದೇಶದಿಂದಲಾದರೂ ಪುರಾತನ ಅರಮನೆಗೆ ನವೀಕರಣದ ಭಾಗ್ಯ ಸಿಗಲಿ. ಮಡಿಕೇರಿಯ ಸುಂದರ ತಾಣಗಳ ಪೈಕಿ ಕೋಟೆ ಕೂಡ ಅಗ್ರಗಣ್ಯ ಸ್ಥಾನ ಪಡೆದರೆ ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಜಿಲ್ಲೆಯನ್ನು ಮತ್ತಷ್ಟು ಸುಧಾರಿಸಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಕೊಡಗು: ರಾಜ-ಮಹಾರಾಜರು ಆಳ್ವಿಕೆ ನಡೆಸಿದ ಮಡಿಕೇರಿ ಕೋಟೆಗೆ ಕೊನೆಗೂ ಕಾಯಕಲ್ಪದ ಯೋಗ ಕೂಡಿ ಬಂದಿದೆ. ಅಳಿವಿನಂಚಿನಲ್ಲಿರುವ ಕೋಟೆಯ ನವೀಕರಣಕ್ಕೆ ಇದೀಗ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಮುಂದಾಗಿದೆ.

ಪಾಳು ಬಿದ್ದಿರುವ ಕೋಟೆ. ಅರಮನೆ ಗೋಡೆಯ ಮೇಲೆಲ್ಲಾ ಹಸಿರುಗಟ್ಟಿರುವ ಪಾಚಿ, ಶಿಥಿಲಗೊಂಡಿರುವ ಗೋಡೆಗಳು. ಇಂತಹ ಸ್ಥಿತಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮಡಿಕೇರಿಯ ಅರಮನೆಯದು. ಸ್ವಾತಂತ್ರ್ಯ ಬಂದಾಗಿನಿಂದ ಈ ಅರಮನೆಯಲ್ಲಿ ಜಿಲ್ಲಾಡಳಿತದ ವಿವಿಧ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಇದೀಗ ಬಹುತೇಕ ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದ್ದು ಕೆಲವು ಕಚೇರಿಗಳು ಹಾಗೂ ಶಾಸಕರ ಕಚೇರಿಗಳು ಉಳಿದಿವೆ. ಸಾಕಷ್ಟು ಬಾರಿ ಕೋಟೆ ಅಳಿವಿನ ಅಂಚಿಗೆ ತಲುಪಿರುವ ಬಗ್ಗೆ ಮನವರಿಕೆಯನ್ನೂ ಮಾಡಲಾಗಿತ್ತು.

ಮಡಿಕೇರಿ ಕೋಟೆ

ಶಿಥಿಲಾವಸ್ಥೆ ತಲುಪಿರುವ ಕೋಟೆಯನ್ನು ಸರಿಪಡಿಸುವಂತೆ ಸ್ಥಳೀಯರೊಬ್ಬರು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಕೈಗೊಳ್ಳಬೇಕಾದ ಕೆಲಸದ ಬಗ್ಗೆ ಮಾಹಿತಿ ನೀಡುವಂತೆ ಪ್ರಾಚ್ಯವಸ್ತು ಇಲಾಖೆಗೆ ಸೂಚನೆ ನೀಡಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ಇಲಾಖೆಯ ಸೂಪರಿಟೆಂಡೆಂಟ್ ಮೂರ್ತೇಶ್ವರಿ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದೆ.

ಜಿಲ್ಲಾಡಳಿತ ಅಕ್ಟೋಬರ್ 31 ರ ಒಳಗೆ ಎಲ್ಲಾ ಕಚೇರಿ ಖಾಲಿ ಮಾಡುವುದಾಗಿ ಹೇಳಿದೆ. ಆದರೆ ಅದರೊಳಗೆ ಮಳೆ ಬಂದು ಅರಮನೆ ಕುಸಿದು ಬೀಳುವ ಸಂಭವವಿದ್ದು, ಮೇಲ್ಛಾವಣಿಯನ್ನಾದರೂ ಸರಿಪಡಿಸಲು ಸೂಚನೆ ನೀಡಿ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದರು. ಇದೀಗ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ನೀಡಲಿದ್ದು, ತುರ್ತಾಗಿ ಆಗಬೇಕಿರುವ ಕಾಮಗಾರಿ ನಡೆಸಲ್ಲಿದ್ದಾರೆ.

ಕೋಟೆಯಲ್ಲಿ ಕೊಡಗಿನ ಸಂಸ್ಕೃತಿ, ರಾಜರ ಆಳ್ವಿಕೆ ಬಿಂಬಿಸುವ ವಸ್ತುಗಳು, ಧ್ವನಿ, ಬೆಳಕು ಹಾಗೂ ಮಡಿಕೇರಿ ಗದ್ದುಗೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಚಿಂತಿಸಲಾಗಿದೆ ಎನ್ನುತ್ತಾರೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಮೈಸೂರು ವಿಭಾಗದ ಮೇಲ್ವಿಚಾರಕಿ ಮೂರ್ತೇಶ್ವರಿ.‌

‌ಕೋರ್ಟ್ ಆದೇಶದಿಂದಲಾದರೂ ಪುರಾತನ ಅರಮನೆಗೆ ನವೀಕರಣದ ಭಾಗ್ಯ ಸಿಗಲಿ. ಮಡಿಕೇರಿಯ ಸುಂದರ ತಾಣಗಳ ಪೈಕಿ ಕೋಟೆ ಕೂಡ ಅಗ್ರಗಣ್ಯ ಸ್ಥಾನ ಪಡೆದರೆ ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಜಿಲ್ಲೆಯನ್ನು ಮತ್ತಷ್ಟು ಸುಧಾರಿಸಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

Intro:ಮಡಿಕೇರಿ ಕೋಟೆಗೆ ಕೊನೆಗೂ ಕಾಯಕಲ್ಪ; ನವೀಕರಣಕ್ಕೆ  ಪ್ರಾಚ್ಯವಸ್ತು ಇಲಾಖೆ ಪರಿಶೀಲನೆ ಕೊಡಗು: ರಾಜ-ಮಹಾರಾಜರು ಆಳ್ವಿಕೆ ನಡೆಸಿದ ಮಡಿಕೇರಿ ಕೋಟೆಗೆ ಕೊನೆಗೂ ಕಾಯಕಲ್ಪ ಕೂಡಿ ಬಂದಿದೆ. ಅಳಿವಿನ ಅಂಚಿನಲ್ಲಿರುವ ಕೋಟೆಯ ನವೀಕರಣಕ್ಕೆ ಇದೀಗ  ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಮುಂದಾಗಿದೆ.  ಪಾಳು ಬಿದ್ದಿರುವ ಕೋಟೆ.ಅರಮನೆ ಗೋಡೆಯ ಮೇಲೆಲ್ಲಾ ಹಸಿರುಗಟ್ಟಿರುವ ಪಾಚಿ.ಶಿಥಿಲಗೊಂಡಿರುವ  ಗೋಡೆಗಳು...ಇಂತಹ ಸ್ಥಿತಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮಡಿಕೇರಿಯ ಅರಮನೆಯ ದುಸ್ಥಿತಿ. ಸ್ವಾತಂತ್ರ್ಯ ಬಂದಾಗಿನಿಂದ ಈ ಅರಮನೆಯಲ್ಲಿ ಜಿಲ್ಲಾಡಳಿತದ ವಿವಿಧ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು.ಇದೀಗ ಬಹುತೇಕ ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದ್ದು ಕೆಲವು ಕಚೇರಿಗಳು ಹಾಗೂ ಶಾಸಕರು ಕಚೇರಿಗಳು ಉಳಿದಿವೆ. ಸಾಕಷ್ಟು ಬಾರಿ ಹೃದಯ ಭಾಗದಲ್ಲಿರುವ ಕೋಟೆ ಅಳಿವಿನ ಅಂಚಿಗೆ ತಲುಪಿರುವ ಬಗ್ಗೆ ಮನವರಿಕೆಯನ್ನೂ ಮಾಡಿಕೊಡಲಾಗಿತ್ತು. ಶಿಥಿಲಾವಸ್ಥೆ ತಪುಪಿರುವ ಕೋಟೆಯನ್ನು ಸರಿಪಡಿಸುವಂತೆ  ಸ್ಥಳೀಯರೊಬ್ಬರು ಹೈ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಾಲಯ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಕೈಗೊಳ್ಳಬೇಕಾದ ಕೆಲಸದ ಬಗ್ಗೆ ಮಾಹಿತಿ ನೀಡುವಂತೆ ಪ್ರಾಚ್ಯವಸ್ತು ಇಲಾಖೆಗೆ ಸೂಚನೆ ನೀಡಿದೆ.ನ್ಯಾಯಾಲಯದ ಸೂಚನೆ ಮೇರೆಗೆ ಇಲಾಖೆಯ ಸೂಪರಿಟೆಂಡೆಂಟ್ ಮೂರ್ತಿಶ್ವರಿ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದೆ ಅಂತಾರೆ ಅರ್ಜಿದಾರ  ವಿರೂಪಾಕ್ಷಯ್ಯ.‌ ಬೈಟ್1- ವಿರೂಪಾಕ್ಷಯ್ಯ, ಅರ್ಜಿದಾರ ಜಿಲ್ಲಾಡಳಿತ ಅಕ್ಟೋಬರ್ 31 ರ ಒಳಗೆ ಎಲ್ಲಾ ಕಚೇರಿ ಖಾಲಿ ಮಾಡುವುದಾಗಿ ಹೇಳಿದೆ. ಆದರೆ ಅದರೊಳಗೆ ಮಳೆಗೆ ಅರಮನೆ ಕುಸಿದು ಬೀಳುವ ಸಂಭವವಿದ್ದು, ಮೇಲ್ಛಾವಣಿಯನ್ನಾದರೂ ಸರಿಪಡಿಸಲು ಸೂಚನೆ ನೀಡಿ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದೆವು. ಇದೀಗ ಸ್ಥಳಪರಿಶೀಲನೆ ನಡೆಸಿದ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ನೀಡಲ್ಲಿದ್ದು,ತುರ್ತಾಗಿ ಆಗಬೇಕಿರುವ ಕಾಮಗಾರಿ ನಡೆಸಲ್ಲಿದ್ದಾರೆ. ಕೋಟೆಯಲ್ಲಿ ಕೊಡಗಿನ ಸಂಸ್ಕೃತಿ, ರಾಜರ ಆಳ್ವಿಕೆ ಬಿಂಬಿಸುವ ವಸ್ತುಗಳು,ಧ್ವನಿ ಬೆಳಕು ಹಾಗೂ ಮಡಿಕೇರಿ ಗದ್ದುಗೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಚಿಂತಿಸಲಾಗಿದೆ ಎನ್ನುತ್ತಾರೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಮೈಸೂರು ವಿಭಾಗದ ಮೇಲ್ವಿಚಾರಕಿ ಮೂರ್ತೇಶ್ವರಿ.‌ ಬೈಟ್-2 ಮೂರ್ತೇಶ್ವರಿ, ಕೇಂದ್ರ ಪ್ರಾಚ್ಯವಸ್ತು ಇಲಾಖೆ ಮೈಸೂರು ವಿಭಾಗದ ಮೇಲ್ವಿಚಾರಕಿ.  ‌ಕೋರ್ಟ್ ಆದೇಶದಿಂದಾರೂ ಪುರಾತನ ಅರಮನೆಗೆ ನವೀಕರಣದ ಭಾಗ್ಯ ಸಿಗಲಿ. ಮಡಿಕೇರಿಯ ಸುಂದರ ತಾಣಗಳ ಪೈಕಿ ಕೋಟೆ ಕೂಡ ಅಗ್ರಗಣ್ಯ ಸ್ಥಾನ ಪಡೆದರೆ  ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಜಿಲ್ಲೆಯನ್ನು ಮತ್ತಷ್ಟು ಸುಧಾರಿಸಬಹುದು.  - ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.


Body:0


Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.