ETV Bharat / state

ಮಂಜಿನ ನಗರಿಯಲ್ಲಿ ವರುಣನ ಆರ್ಭಟ: ಆತಂಕದಲ್ಲಿ ಜನರು

ಮಂಜಿನ ನಗರಿ‌‌ ಮಡಿಕೇರಿಯಲ್ಲಿ ವಾಡಿಕೆ ಮಳೆ ಆಗದಿದ್ದರೂ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಯಾಗಿದೆ. ಕಳೆದ ಬಾರಿ ಕುಸಿದಿದ್ದ ಕೆಲ ಗುಡ್ಡಗಳ ಬಳಿ ಸಡಿಲಗೊಂಡ ಮಣ್ಣು ಕುಸಿದಿರೋದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

author img

By

Published : Jul 24, 2019, 11:06 AM IST

ಮಂಜಿನ ನಗರಿಯಲ್ಲಿ ವರುಣಾರ್ಭಟ

ಮಡಿಕೇರಿ: ಮಂಜಿನ ನಗರಿ‌‌ ಮಡಿಕೇರಿಯಲ್ಲಿ ವಾಡಿಕೆ ಮಳೆ ಆಗದಿದ್ದರೂ ಕಳೆದೊಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ಮಂಜಿನ ನಗರಿಯಲ್ಲಿ ವರುಣಾರ್ಭಟ

ಕಳೆದ ಬಾರಿ ಕುಸಿದಿದ್ದ ಕೆಲ ಗುಡ್ಡಗಳ ಬಳಿ ಸಡಿಲಗೊಂಡಿದ್ದ ಮಣ್ಣು ಕುಸಿದಿರೋದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಜಿಲ್ಲೆಯ ನದಿ ತೊರೆ, ಹಳ್ಳ ಕೊಳ್ಳ, ಜಲಪಾತಗಳು ಉಕ್ಕಿ ಹರಿಯುತ್ತಿವೆ. ಮಳೆ ಹೀಗೆ ಮುಂದುವರಿದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ.

ರೆಡ್ ಅಲರ್ಟ್ ಘೋಷಣೆಯಾಗಿ ಬಳಿಕ ಆರೆಂಜ್ ಅಲರ್ಟ್‌ನಲ್ಲಿದ್ದ ಜಿಲ್ಲೆಗೆ ಮತ್ತೆ ಜಿಲ್ಲಾಡಳಿತ ಜುಲೈ 22 ರಿಂದ 24 ರವರೆಗೆ ರೆಡ್ ಅಲರ್ಟ್ ಘೋಷಿಸಿದೆ. ವಿರಾಜಪೇಟೆ ತಾಲೂಕಿನಲ್ಲಿ ವರುಣನ ಅಬ್ಬರಕ್ಕೆ ಮರ ಉರುಳಿ ವಾಹನಗಳು ಜಖಂಗೊಂಡಿವೆ.‌‌ ಅಷ್ಟೇ ಅಲ್ಲದೇ ನಾಪೋಕ್ಲು ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಮಳೆ ಮುಂದುವರಿದಲ್ಲಿ ರಸ್ತೆ ಮುಳುಗಡೆಯಾಗುವ ಭೀತಿ ಎದುರಾಗಿದೆ.

ಮಡಿಕೇರಿ: ಮಂಜಿನ ನಗರಿ‌‌ ಮಡಿಕೇರಿಯಲ್ಲಿ ವಾಡಿಕೆ ಮಳೆ ಆಗದಿದ್ದರೂ ಕಳೆದೊಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ಮಂಜಿನ ನಗರಿಯಲ್ಲಿ ವರುಣಾರ್ಭಟ

ಕಳೆದ ಬಾರಿ ಕುಸಿದಿದ್ದ ಕೆಲ ಗುಡ್ಡಗಳ ಬಳಿ ಸಡಿಲಗೊಂಡಿದ್ದ ಮಣ್ಣು ಕುಸಿದಿರೋದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಜಿಲ್ಲೆಯ ನದಿ ತೊರೆ, ಹಳ್ಳ ಕೊಳ್ಳ, ಜಲಪಾತಗಳು ಉಕ್ಕಿ ಹರಿಯುತ್ತಿವೆ. ಮಳೆ ಹೀಗೆ ಮುಂದುವರಿದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ.

ರೆಡ್ ಅಲರ್ಟ್ ಘೋಷಣೆಯಾಗಿ ಬಳಿಕ ಆರೆಂಜ್ ಅಲರ್ಟ್‌ನಲ್ಲಿದ್ದ ಜಿಲ್ಲೆಗೆ ಮತ್ತೆ ಜಿಲ್ಲಾಡಳಿತ ಜುಲೈ 22 ರಿಂದ 24 ರವರೆಗೆ ರೆಡ್ ಅಲರ್ಟ್ ಘೋಷಿಸಿದೆ. ವಿರಾಜಪೇಟೆ ತಾಲೂಕಿನಲ್ಲಿ ವರುಣನ ಅಬ್ಬರಕ್ಕೆ ಮರ ಉರುಳಿ ವಾಹನಗಳು ಜಖಂಗೊಂಡಿವೆ.‌‌ ಅಷ್ಟೇ ಅಲ್ಲದೇ ನಾಪೋಕ್ಲು ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಮಳೆ ಮುಂದುವರಿದಲ್ಲಿ ರಸ್ತೆ ಮುಳುಗಡೆಯಾಗುವ ಭೀತಿ ಎದುರಾಗಿದೆ.

Intro:ಕೊಡಗಿನಲ್ಲಿ ವರುಣನ ಅಬ್ಬರ: ಹಲವೆಡೆ ಬರೆ ಕುಸಿತ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಮಳೆರಾಯ..!

ಕೊಡಗು: ಮಂಜಿನ ನಗರಿ‌‌ ಮಡಿಕೇರಿಯಲ್ಲಿ ವಾಡಿಕೆ ಮಳೆ ಆಗದಿದ್ದರೂ ಕಳೆದೊಂದು ವಾರದಿಂದ ಸುರಿಸುತ್ತಿರುವ ಭಾರೀ ಮಳೆಗೆ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಯಾಗಿದೆ. ಕಳೆದ ಬಾರಿ ಕುಸಿದಿದ್ದ ಕೆಲ ಗುಡ್ಡಗಳ ಬಳಿ ಸಡಿಲಗೊಂಡ ಮಣ್ಣು ಕುಸಿದಿರೋದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಜಿಲ್ಲೆಯ ನದಿ ತೊರೆ, ಹಳ್ಳ ಕೊಳ್ಳ, ಜಲಪಾತಗಳು ಉಕ್ಕಿ ಹರಿಯುತ್ತಿವೆ. ಮಳೆ ಹೀಗೆ ಮುಂದುವರಿದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.

ಕಳೆದ ಬಾರಿ ಕೊಡಗಿನಲ್ಲಿ ಸುರಿದ ಕುಂಭದ್ರೋಣ ಮಳೆಗೆ ಬೆಟ್ಟ ಗುಡ್ಡಗಳು ಕುಸಿದು, ಪ್ರವಾಹ ಉಂಟಾಗಿ ಜನ‌ ಅತಂತ್ರಗೊಂಡಿದ್ದರೂ, ಈ ಬಾರಿಯ ಮಳೆ ಮತ್ಯಾವ ಆತಂಕ‌ ತರುತ್ತದೊ ಎಂದು ಭಯ ಭೀತರಾಗಿದ್ದಾರೆ.
ಆದರೆ ಈ ಬಾರಿ ಹೇಳಿಕೊಳ್ಳುವಂತ ಮಳೆ ಆಗದಿದ್ದರೂ ಜನತೆ ಆತಂಕದಲ್ಲಿದ್ದಾರೆ.ಇದಕ್ಕೆ ಕಾರಣವಾಗಿರೋದು 3 ದಿನಗಳ ಸತತ ಮಳೆಗೆ ಕಳೆದ ಬಾರಿ ಕುಸಿದಿದ್ದ ಗುಡ್ಡಗಳ ಬಳಿ ಸಡಿಲಗೊಂಡಿದ್ದ ಮಣ್ಣು ಕುಸಿಯುತ್ತಿರುವುದು..!!

ಅದಕ್ಕೆ ಸಾಕ್ಷಿ ಎಂಬಂತೆ ಎರಡನೆ ಬಾರಿ ಮಡಿಕೇರಿ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಮಣ್ಣು ಕುಸಿತ, ಇನ್ನು ಮಡಿಕೇರಿ ಸಮೀಪದ ಕಳೆದ ಬಾರಿ ಗುಡ್ಡ ಕುಸಿದಿದ್ದ ಜೋಡುಪಾಲ ಬಳಿ ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲೆ ಗುಡ್ಡದ ಮಣ್ಣು ಕುಸಿಯುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ ಅಂತಾರೆ ಸ್ಥಳೀಯ ನಿವಾಸಿ ಸುಹಾನ್.

ಬೈಟ್-1 ಸುಹಾನ್, ಸ್ಥಳೀಯ ನಿವಾಸಿ ( ಕಪ್ಪು ಜರ್ಕಿನ್ ಧರಿಸಿದ್ದಾರೆ)

ರೆಡ್ ಅಲರ್ಟ್ ಘೋಷಣೆಯಾಗಿ ಬಳಿಕ ಆರೆಂಜ್ ಅಲರ್ಟ್‌ನಲ್ಲಿದ್ದ ಜಿಲ್ಲೆಗೆ ಮತ್ತೆ ಜಿಲ್ಲಾಡಳಿತ ಜುಲೈ 22 ರಿಂದ 24 ರವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಹಾಗೆಯೇ ವಿವಿಧೆಡೆ ನಿರಂತರ ಸುರಿಯುತ್ತಿರುವ ವರುಣ ಜಿಲ್ಲೆಯಾದ್ಯಂತ ವಿವಿಧೆಡೆ ಅವಾಂತರವನ್ನೇ ಸೃಷ್ಟಿಸಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಸುರಿದ ಭಾರೀ ಮಳೆ ಗಾಳಿಗೆ ಮರ ಉರುಳಿ ವಾಹನಗಳು ಜಖಂಗೊಂಡಿವೆ.‌‌ ಅಷ್ಟೇ ಅಲ್ಲದೇ ನಾಪೋಕ್ಲು ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು‌ ಮಳೆ ಮುಂದುವರಿದಲ್ಲಿ ರಸ್ತೆ ಮುಳುಗಡೆಯಾಗುವ ಭೀತಿ ಎದುರಾಗಿದೆ.ಬ್ರಹ್ಮಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮದಲ್ಲಿ ನೀರಿನ‌ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಸತ್ಯನಾರಾಯಣ.

ಬೈಟ್-2 ಸತ್ಯನಾರಾಯಣ, ಸ್ಥಳೀಯರು (ತಲೆ ಮೇಲೆ ಬಿಳಿ ಟವೆಲ್ ಇದೆ)

ವಾಡಿಕೆ ಮಳೆಯಾಗದಿದ್ದರೂ ಕಳೆದ ಬಾರಿ ಭೂ ಕುಸಿತ ಉಂಟಾಗಿದ್ದ ಸ್ಥಳಗಳಲ್ಲಿ ಸಡಿಲಗೊಂಡಿರೊ ಮಣ್ಣು ಜರಿಯುತ್ತಿದ್ದು ಆತಂಕ ಸೃಷ್ಟಿಸಿದ್ದು, ಒಟ್ಟಿನಲ್ಲಿ ಹೀಗೆ ಮಳೆ‌ ಹೆಚ್ಚಾದಲ್ಲಿ ಇನ್ಯಾವ ಅನಾಹುತ ಎದುರಿಸಬೇಕಾಗುತ್ತೊ
ಎಂಬ ಭಯದಲ್ಲೇ ಜಿಲ್ಲೆಯ ಜನತೆ ದಿನ ದೂಡುವಂತಾಗಿದೆ ಎಂದು ಸ್ಥಳೀಯರ ಅಳಲು.‌

- ಕೆ.ಸಿ.ಮಣಿಕಂಠ, ಈಟಿವಿ,ಭಾರತ, ಕೊಡಗು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.