ETV Bharat / state

ಭವಿಷ್ಯ ನಿಧಿ ಬಗ್ಗೆ ವಿಚಾರಿಸಿದ ಪೌರ ಕಾರ್ಮಿಕರ ವಿರುದ್ದ ಪ್ರಕರಣ? - case register

ವಿರಾಜಪೇಟೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳಲ್ಲಿ ಭವಿಷ್ಯ ನಿಧಿಯ ಹಣ ಕೇಳಿದ ಪೌರಕಾರ್ಮಿಕರ ವಿರುದ್ಧವೇ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ.

case register against civil workers
ಪೌರ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲು
author img

By

Published : May 13, 2020, 7:15 PM IST

ಕೊಡಗು: ಕಾರ್ಮಿಕ ಭವಿಷ್ಯ ನಿಧಿಯ ಹಣವನ್ನು ಪಾವತಿಸಿಲ್ಲ ಎಂದು ಕೇಳಿದ್ದಕ್ಕೆ ಪೌರ ಕಾರ್ಮಿಕರ ವಿರುದ್ಧವೇ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ.

ಪೌರ ಕಾರ್ಮಿಕರಾದ ಆರ್ಮುಗಂ ಹಾಗೂ ಸಣ್ಣು ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೇ, ಕಾರ್ಮಿಕರ ಪರವಾಗಿ ಮಾತನಾಡಿದ ಸಾರ್ವಜನಿಕರ ಮೇಲೂ ಕೇಸ್​​ ಜಡಿಯಲಾಗಿದೆ ಅಂತಿದ್ದಾರೆ ಕಾರ್ಮಿಕರು.

ಪೌರ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲು

ಭವಿಷ್ಯ ನಿಧಿ‌ ಹಣ ಹಾಕದೇ ಮೋಸ ಮಾಡಿದ್ದೀರಿ. ಪ್ರತಿ ತಿಂಗಳ ಸಂಬಳದಲ್ಲಿ ಪಿಎಫ್‌ಗೆ ಹಣ ಕಡಿತವಾಗುತ್ತಿದೆ. ಹಣವನ್ನು ತೆಗೆದುಕೊಳ್ಳಲು ಮುಂದಾದಾಗ ಖಾತೆಯಲ್ಲಿ ಹಣ ಇರಲಿಲ್ಲ. ಹೀಗಾಗಿ, ಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿ ಪಿಎಫ್ ಹಣ ಹಾಕುವಂತೆ ಒತ್ತಾಯಿಸಿದ್ದಕ್ಕೆ ಪ್ರಕರಣ ದಾಖಲಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಕೊಡಗು: ಕಾರ್ಮಿಕ ಭವಿಷ್ಯ ನಿಧಿಯ ಹಣವನ್ನು ಪಾವತಿಸಿಲ್ಲ ಎಂದು ಕೇಳಿದ್ದಕ್ಕೆ ಪೌರ ಕಾರ್ಮಿಕರ ವಿರುದ್ಧವೇ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ.

ಪೌರ ಕಾರ್ಮಿಕರಾದ ಆರ್ಮುಗಂ ಹಾಗೂ ಸಣ್ಣು ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೇ, ಕಾರ್ಮಿಕರ ಪರವಾಗಿ ಮಾತನಾಡಿದ ಸಾರ್ವಜನಿಕರ ಮೇಲೂ ಕೇಸ್​​ ಜಡಿಯಲಾಗಿದೆ ಅಂತಿದ್ದಾರೆ ಕಾರ್ಮಿಕರು.

ಪೌರ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲು

ಭವಿಷ್ಯ ನಿಧಿ‌ ಹಣ ಹಾಕದೇ ಮೋಸ ಮಾಡಿದ್ದೀರಿ. ಪ್ರತಿ ತಿಂಗಳ ಸಂಬಳದಲ್ಲಿ ಪಿಎಫ್‌ಗೆ ಹಣ ಕಡಿತವಾಗುತ್ತಿದೆ. ಹಣವನ್ನು ತೆಗೆದುಕೊಳ್ಳಲು ಮುಂದಾದಾಗ ಖಾತೆಯಲ್ಲಿ ಹಣ ಇರಲಿಲ್ಲ. ಹೀಗಾಗಿ, ಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿ ಪಿಎಫ್ ಹಣ ಹಾಕುವಂತೆ ಒತ್ತಾಯಿಸಿದ್ದಕ್ಕೆ ಪ್ರಕರಣ ದಾಖಲಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.