ETV Bharat / state

ಕಲಬುರಗಿ; ಕಳ್ಳತನ ಮಾಡಲು ಬಂದು ಅಂಗಡಿಗೆ ಬೆಂಕಿ ಇಟ್ಟ ಖದೀಮರು..! - ಅಂಗಡಿಗೆ ಬೆಂಕಿ ಹಚ್ಚಿ ಪರಾರಿ

ಖತರ್ನಾಕ್ ಕಳ್ಳರು ಕಳ್ಳತನಕ್ಕೆ ಬಂದಾಗ ನಗದು ಹಣ ಸಿಗದಿದ್ದಕ್ಕೆ ಕೋಪಗೊಂಡು ಅಂಗಡಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಜರುಗಿದೆ.

thief put fire on general store in gulbarga
ಅಂಗಡಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದ ದುಷ್ಕರ್ಮಿಗಳು
author img

By

Published : Dec 31, 2020, 6:43 PM IST

Updated : Dec 31, 2020, 9:10 PM IST

ಕಲಬುರಗಿ: ಕಳ್ಳತನಕ್ಕೆ ಬಂದ ಕಳ್ಳರು ಕೈಗೆ ಸಿಕ್ಕಿದ್ದನ್ನು ದೋಚಿ ಪರಾರಿಯಾಗುವುದು ಸಾಮಾನ್ಯ. ಆದರೆ, ಇಲ್ಲಿ ಕಳ್ಳರು ಮಾಡಿದ್ದೇ ಬೇರೆ. ಖತರ್ನಾಕ್ ಕಳ್ಳರು ಕಳ್ಳತನಕ್ಕೆ ಬಂದಾಗ ನಗದು ಹಣ ಸಿಗದಿದ್ದಕ್ಕೆ ಕೋಪಗೊಂಡು ಅಂಗಡಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಜರುಗಿದೆ.

ಅಂಗಡಿಗೆ ಬೆಂಕಿ ಇಟ್ಟ ಖದೀಮರು

ಕೃಷ್ಣ ಎಂಬುವರಿಗೆ ಸೇರಿದ ಕೃಷ್ಣಾ ಟ್ರೇಡಿಂಗ್ ಹೋಲ್ ಸೇಲ್ ಅಂಗಡಿಯಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಸುಮಾರು ಒಂದು ಕೋಟಿ ಮೌಲ್ಯದ ದಿನಸಿ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ.

ಸುಮಾರು 1 ಕೋಟಿ ರೂಪಾಯಿಯಷ್ಟು ಮೌಲ್ಯದ ಸಾಮಾನುಗಳು ಅಂಗಡಿಯಲ್ಲಿದ್ದವು ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಅಂಗಡಿ ಸಂಪೂರ್ಣ ಸುಟ್ಟು ಹೋಗಿದ್ದು, ಇದರಿಂದ ಮಾಲೀಕರು ಕಂಗಾಲಾಗಿದ್ದಾರೆ.

ಘಟನೆ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ಕಳ್ಳತನಕ್ಕೆ ಬಂದ ಕಳ್ಳರು ಕೈಗೆ ಸಿಕ್ಕಿದ್ದನ್ನು ದೋಚಿ ಪರಾರಿಯಾಗುವುದು ಸಾಮಾನ್ಯ. ಆದರೆ, ಇಲ್ಲಿ ಕಳ್ಳರು ಮಾಡಿದ್ದೇ ಬೇರೆ. ಖತರ್ನಾಕ್ ಕಳ್ಳರು ಕಳ್ಳತನಕ್ಕೆ ಬಂದಾಗ ನಗದು ಹಣ ಸಿಗದಿದ್ದಕ್ಕೆ ಕೋಪಗೊಂಡು ಅಂಗಡಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಜರುಗಿದೆ.

ಅಂಗಡಿಗೆ ಬೆಂಕಿ ಇಟ್ಟ ಖದೀಮರು

ಕೃಷ್ಣ ಎಂಬುವರಿಗೆ ಸೇರಿದ ಕೃಷ್ಣಾ ಟ್ರೇಡಿಂಗ್ ಹೋಲ್ ಸೇಲ್ ಅಂಗಡಿಯಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಸುಮಾರು ಒಂದು ಕೋಟಿ ಮೌಲ್ಯದ ದಿನಸಿ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ.

ಸುಮಾರು 1 ಕೋಟಿ ರೂಪಾಯಿಯಷ್ಟು ಮೌಲ್ಯದ ಸಾಮಾನುಗಳು ಅಂಗಡಿಯಲ್ಲಿದ್ದವು ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಅಂಗಡಿ ಸಂಪೂರ್ಣ ಸುಟ್ಟು ಹೋಗಿದ್ದು, ಇದರಿಂದ ಮಾಲೀಕರು ಕಂಗಾಲಾಗಿದ್ದಾರೆ.

ಘಟನೆ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 31, 2020, 9:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.