ಕಲಬುರ್ಗಿ : ಭಾನುವಾರದ ಕರ್ಫ್ಯೂ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಹಜ ಸ್ಥಿತಿಯಿದೆ. ಸಾರಿಗೆ ಬಸ್ ಜೊತೆಗೆ ಇತರೆ ವಾಹನ ಸಂಚಾರವೂ ಎಂದಿನಂತಿದೆ.
ಕಳೆದ ಭಾನುವಾರ ಸರ್ಕಾರ ಸಂಪೂರ್ಣ ಕರ್ಫ್ಯೂ ಘೋಷಿಸಿದ ಹಿನ್ನೆಲೆ ಯಾವುದೇ ವಾಹನ ಸಂಚಾರ ಕಂಡು ಬಂದಿರಲ್ಲಿಲ್ಲ. ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಜಿಲ್ಲೆಯ ಜನತೆ ಕರ್ಫ್ಯೂಗೆ ಬೆಂಬಲಿಸಿದ್ದರು. ಈ ಭಾನುವಾರ ಸರ್ಕಾರ ಆದೇಶ ಹಿಂಪಡೆದಿರುವ ಕಾರಣ ಸಾರಿಗೆ ಹಾಗೂ ಅಂಗಡಿ-ಮುಂಗಟ್ಟುಗಳು ಯಥಾರೀತಿ ತೆರೆದಿವೆ. ವ್ಯಾಪಾರ, ವಹಿವಾಟು ಮುಂದುವರೆದಿದೆ.
ವೈನ್ ಶಾಪ್ಗಳ ಬಾಗಿಲು ಸಹ ತೆರೆದಿವೆ. ಲಾಕ್ಡೌನ್ ಗೊಂದಲದಿಂದಾಗಿ ಸಾರಿಗೆ ಬಸ್ನಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಕೊಂಚ ಇಳಿಮುಕವಾಗಿದೆ. ಉಳಿದಂತೆ ಜನ ಜೀವನ ಸಹಜ ಸ್ಥಿತಿಯಲ್ಲಿದೆ.