ETV Bharat / state

ವಾಡಿ - ಗದಗ ರೈಲ್ವೆ ಮಾರ್ಗದ ಭೂಸ್ವಾಧೀನಕ್ಕೆ ವಿರೋದ:  ರೈತರಿಂದ ಪ್ರತಿಭಟನೆ - Opposition to land acquisition of Wadi - Gadag railway line

ವಾಡಿ - ಗದಗ ರೈಲ್ವೆ ಮಾರ್ಗಕ್ಕಾಗಿ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಂಡಿದ್ದಾರೆ. ರೈತರೊಂದಿಗೆ ಚರ್ಚಿಸದೇ ತಾವೇ ಜಮೀನಿನ ಮೌಲ್ಯ ನಿಗದಿಪಡಿಸಿ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Farmers protest in Kalaburagi
ರೈತರಿಂದ ಪ್ರತಿಭಟನೆ
author img

By

Published : Jul 27, 2020, 2:29 PM IST

ಕಲಬುರಗಿ : ವಾಡಿ - ಗದಗ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧಿನ ಮಾಡಿಕೊಳ್ಳುತ್ತಿರುವ ಅಧಿಕಾರಿಗಳು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮನಸೋ ಇಚ್ಚೆ ವರ್ತಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್.ಕೆ.ಎಸ್ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ರೈತರು, ರೈಲ್ವೆ ಯೋಜನೆಗಾಗಿ ಹಲಕರ್ಟಿ ಗ್ರಾಮದ 17 ಜನರ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಂಡಿದ್ದಾರೆ. ರೈತರೊಂದಿಗೆ ಚರ್ಚಿಸದೇ ತಾವೇ ಜಮೀನಿನ ಮೌಲ್ಯ ನಿಗದಿಪಡಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಂದ ಪ್ರತಿಭಟನೆ

ಪ್ರತಿ ಎಕರೆಗೆ 25 ಲಕ್ಷ ರೂ. ಬೆಲೆ ನಿಗದಿಪಡಿಸಬೇಕು, ರೈಲ್ವೆ ಮಾರ್ಗದಲ್ಲಿ ರೈತರ ಎತ್ತು ಬಂಡಿ ಓಡಾಡಲು ಅಂಡರ್‌ ಬ್ರಿಡ್ಜ್​ ನಿರ್ಮಾಣ ಮಾಡಬೇಕು, ರೈತರ ಸಮ್ಮುಖದಲ್ಲಿ ಭೂಮಿ ಮರು ಸರ್ವೆ ಮಾಡಬೇಕು ಹಾಗೂ ಭೂಮಿ ನೀಡಿದ ರೈತರ ಕುಟುಂಬದಲ್ಲಿ ಒಬ್ಬರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡುವಂತೆ ಆಗ್ರಹಿಸಿದರು.

ಕಲಬುರಗಿ : ವಾಡಿ - ಗದಗ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧಿನ ಮಾಡಿಕೊಳ್ಳುತ್ತಿರುವ ಅಧಿಕಾರಿಗಳು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮನಸೋ ಇಚ್ಚೆ ವರ್ತಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್.ಕೆ.ಎಸ್ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ರೈತರು, ರೈಲ್ವೆ ಯೋಜನೆಗಾಗಿ ಹಲಕರ್ಟಿ ಗ್ರಾಮದ 17 ಜನರ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಂಡಿದ್ದಾರೆ. ರೈತರೊಂದಿಗೆ ಚರ್ಚಿಸದೇ ತಾವೇ ಜಮೀನಿನ ಮೌಲ್ಯ ನಿಗದಿಪಡಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಂದ ಪ್ರತಿಭಟನೆ

ಪ್ರತಿ ಎಕರೆಗೆ 25 ಲಕ್ಷ ರೂ. ಬೆಲೆ ನಿಗದಿಪಡಿಸಬೇಕು, ರೈಲ್ವೆ ಮಾರ್ಗದಲ್ಲಿ ರೈತರ ಎತ್ತು ಬಂಡಿ ಓಡಾಡಲು ಅಂಡರ್‌ ಬ್ರಿಡ್ಜ್​ ನಿರ್ಮಾಣ ಮಾಡಬೇಕು, ರೈತರ ಸಮ್ಮುಖದಲ್ಲಿ ಭೂಮಿ ಮರು ಸರ್ವೆ ಮಾಡಬೇಕು ಹಾಗೂ ಭೂಮಿ ನೀಡಿದ ರೈತರ ಕುಟುಂಬದಲ್ಲಿ ಒಬ್ಬರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡುವಂತೆ ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.