ETV Bharat / state

ಜೂಜು ಅಡ್ಡೆ ಮೇಲೆ ಪೊಲೀಸ್‌ ದಾಳಿ; ತಪ್ಪಿಸಿಕೊಳ್ಳಲು ಹೋಗಿ ಯುವಕ ಸಾವು

ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಯುವಕನೊಬ್ಬ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.

author img

By

Published : Aug 31, 2022, 9:47 PM IST

Kn_klb_01_police_dhali_yuvak_savu_ka10050
ಸಾವನ್ನೊಪ್ಪಿದ ಯುವಕ

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಯುವಕನೊಬ್ಬ ಬಿದ್ದು ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ಗ್ರಾಮದ ಹಾಜಿ ಸರ್ವರ್ ದರ್ಗಾದ ಗುಡ್ಡದಲ್ಲಿ 10 ರಿಂದ 15 ಜನರಿದ್ದ ತಂಡ ಜೂಜಾಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು.

ಹೆದ್ದಾರಿ ತಡೆದು ಪ್ರತಿಭಟನೆ

ಸಿದ್ದಪ್ಪಾಕೊಂಡ (22) ಮೃತಪಟ್ಟ ಯುವಕ. ಆದರೆ ಈತ ಜೂಜಾಟ ಆಡುತ್ತಿರಲಿಲ್ಲ. ಅಲ್ಲಿ ಯುವಕರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದನಂತೆ. ಯುವಕನ ಕುಟುಂಬಸ್ಥರು ಮಾತನಾಡಿ, ಅಲ್ಲಿ ಯಾರೂ ಜೂಜಾಟ ಆಡುತ್ತಿರಲಿಲ್ಲ. ಪೊಲೀಸರು ಅನಗತ್ಯವಾಗಿ ದಾಳಿ ಮಾಡಿ ನಮ್ಮ ಮಗನನ್ನು ಕೊಂದು ಹಾಕಿದರು ಎಂದು ಆರೋಪಿಸಿದ್ದಾರೆ.

ಘಟನೆಯಿಂದ ಕೋಪಗೊಂಡ ಗ್ರಾಮಸ್ಥರು ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮನೆ ಮುಂದೆ ಬೈಕ್​​ ನಿಲ್ಲಿಸಿ ಮಾತನಾಡಿದ್ದೇ ತಪ್ಪಾಯ್ತು.. ಯುವಕನ ಮೇಲೆ ಗುಂಡಿನ ದಾಳಿ

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಯುವಕನೊಬ್ಬ ಬಿದ್ದು ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ಗ್ರಾಮದ ಹಾಜಿ ಸರ್ವರ್ ದರ್ಗಾದ ಗುಡ್ಡದಲ್ಲಿ 10 ರಿಂದ 15 ಜನರಿದ್ದ ತಂಡ ಜೂಜಾಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು.

ಹೆದ್ದಾರಿ ತಡೆದು ಪ್ರತಿಭಟನೆ

ಸಿದ್ದಪ್ಪಾಕೊಂಡ (22) ಮೃತಪಟ್ಟ ಯುವಕ. ಆದರೆ ಈತ ಜೂಜಾಟ ಆಡುತ್ತಿರಲಿಲ್ಲ. ಅಲ್ಲಿ ಯುವಕರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದನಂತೆ. ಯುವಕನ ಕುಟುಂಬಸ್ಥರು ಮಾತನಾಡಿ, ಅಲ್ಲಿ ಯಾರೂ ಜೂಜಾಟ ಆಡುತ್ತಿರಲಿಲ್ಲ. ಪೊಲೀಸರು ಅನಗತ್ಯವಾಗಿ ದಾಳಿ ಮಾಡಿ ನಮ್ಮ ಮಗನನ್ನು ಕೊಂದು ಹಾಕಿದರು ಎಂದು ಆರೋಪಿಸಿದ್ದಾರೆ.

ಘಟನೆಯಿಂದ ಕೋಪಗೊಂಡ ಗ್ರಾಮಸ್ಥರು ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮನೆ ಮುಂದೆ ಬೈಕ್​​ ನಿಲ್ಲಿಸಿ ಮಾತನಾಡಿದ್ದೇ ತಪ್ಪಾಯ್ತು.. ಯುವಕನ ಮೇಲೆ ಗುಂಡಿನ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.