ETV Bharat / state

ಲೋಕಸಮರದಲ್ಲಿ ಸೋಲಿಲ್ಲದ ಸರದಾರನ ಸೋಲು ನಿಶ್ಚಿತ : ಮಾಲಕರೆಡ್ಡಿ ಭವಿಷ್ಯ - undefined

ಯಾವಾಗಲೋ ಸೋಲಬೇಕಾದ ಖರ್ಗೆಯನ್ನು ನಾವು ಪ್ರೋತ್ಸಾಹ ನೀಡುತ್ತ ಬಂದಿದ್ದರ ಪರಿಣಾಮ ಗೆಲ್ಲುತ್ತಿದ್ದರು. ಆದರೆ, ಈ ಬಾರಿ ಖರ್ಗೆ ಅವರ ನಿಜವಾದ ಮುಖವಾಡ ಕಳಚಿ ಬೀಳಲಿದೆ . ತಂದೆ, ಮಗನ ಆಟಕ್ಕೆ ಜನರು ಬ್ರೇಕ್​ ಹಾಕುತ್ತಾರೆ ಎಂದು ಮಾಜಿ ಸಚಿವ ಮಾಲಕರೆಡ್ಡಿ ಆಕ್ರೋಶವ್ಯಕ್ತಪಡಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ
author img

By

Published : May 21, 2019, 1:48 AM IST

ಯಾದಗಿರಿ : ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸೋಲು ನಿಶ್ಚಿತ ಎಂದು ಮಾಜಿ ಸಚಿವ ಮಾಲಕರೆಡ್ಡಿ ಭವಿಷ್ಯ ನುಡಿದಿದ್ದಾರೆ.

ಯಾವಾಗೋ ಸೋಲಬೇಕಾದ ಖರ್ಗೆಯನ್ನು ನಾವು ಪ್ರೋತ್ಸಾಹ ನೀಡುತ್ತ ಬಂದಿದ್ದರ ಪರಿಣಾಮ ಖರ್ಗೆ ಗೆಲ್ಲುತ್ತಿದ್ದರು. ಆದರೆ, ಈ ಬಾರಿ ಖರ್ಗೆ ಅವರ ನಿಜವಾದ ಮುಖವಾಡ ಕಳಚಿ ಬೀಳಲಿದೆ . ತಂದೆ, ಮಗನ ಆಟಕ್ಕೆ ಜನರು ಬ್ರೇಕ್​ ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.

ಖರ್ಗೆ ಮೋಸದಾಟದಿಂದ ಸಾಕಷ್ಟು ಹಿರಿಯ ನಾಯಕರು ರಾಜಕೀಯ ರಂಗದಿಂದ ನಿವೃತ್ತಿ ಹೊಂದಿದರು. ಸಾಕಷ್ಟು ಪ್ರಭಾವಿ ಮುಖಂಡರು ಪಕ್ಷವನ್ನು ತೊರೆದು ತಮ್ಮ ನೋವನ್ನು ಸಹಿಸಿಕೊಂಡಿದ್ದಾರೆ. ಮಾಜಿ ಸಚಿವ ಬಾಬುರಾವ್​ ಅವರ ಬದಲು ತಮ್ಮ ಪುತ್ರ ಪ್ರಿಯಾಂಕ್​ ಖರ್ಗೆಗೆ ಸಚಿವ ಸ್ಥಾನ ನೀಡಿದರು. ಮಾಲಿಕಯ್ಯ ಗುತ್ತೆದಾರ ತಂದೆ ಮಗನ ಆಟಕ್ಕೆ ಬೇಸತ್ತು ಹೊರ ಬಂದಿದ್ದಾರೆ ಎಂದು ಕಿಡಿಕಾರಿದರು.

ಮೋದಿ ಹವಾದಿಂದ ಖರ್ಗೆ ವರ್ಚಸ್​ಗೆ ಧಕ್ಕೆ ಉಂಟಾಗಲಿದೆ. ಮುಂದಿನ ದಿನಗಳಲ್ಲಿ ಖರ್ಗೆ ಕಲಬುರಗಿಯಿಂದ ಗಂಟು ಮೂಟೆ ಕಟ್ಟಿಕೊಂಡು ಓಡಿ ಹೋಗಬೇಕು. ಖರ್ಗೆಯ ನಿಜವಾದ ಬಣ್ಣ ಫಲಿತಾಂಶದಲ್ಲಿ ಹೊರಬೀಳಲಿದೆ ಎಂದು ಹೇಳಿದರು.

ಯಾದಗಿರಿ : ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸೋಲು ನಿಶ್ಚಿತ ಎಂದು ಮಾಜಿ ಸಚಿವ ಮಾಲಕರೆಡ್ಡಿ ಭವಿಷ್ಯ ನುಡಿದಿದ್ದಾರೆ.

ಯಾವಾಗೋ ಸೋಲಬೇಕಾದ ಖರ್ಗೆಯನ್ನು ನಾವು ಪ್ರೋತ್ಸಾಹ ನೀಡುತ್ತ ಬಂದಿದ್ದರ ಪರಿಣಾಮ ಖರ್ಗೆ ಗೆಲ್ಲುತ್ತಿದ್ದರು. ಆದರೆ, ಈ ಬಾರಿ ಖರ್ಗೆ ಅವರ ನಿಜವಾದ ಮುಖವಾಡ ಕಳಚಿ ಬೀಳಲಿದೆ . ತಂದೆ, ಮಗನ ಆಟಕ್ಕೆ ಜನರು ಬ್ರೇಕ್​ ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.

ಖರ್ಗೆ ಮೋಸದಾಟದಿಂದ ಸಾಕಷ್ಟು ಹಿರಿಯ ನಾಯಕರು ರಾಜಕೀಯ ರಂಗದಿಂದ ನಿವೃತ್ತಿ ಹೊಂದಿದರು. ಸಾಕಷ್ಟು ಪ್ರಭಾವಿ ಮುಖಂಡರು ಪಕ್ಷವನ್ನು ತೊರೆದು ತಮ್ಮ ನೋವನ್ನು ಸಹಿಸಿಕೊಂಡಿದ್ದಾರೆ. ಮಾಜಿ ಸಚಿವ ಬಾಬುರಾವ್​ ಅವರ ಬದಲು ತಮ್ಮ ಪುತ್ರ ಪ್ರಿಯಾಂಕ್​ ಖರ್ಗೆಗೆ ಸಚಿವ ಸ್ಥಾನ ನೀಡಿದರು. ಮಾಲಿಕಯ್ಯ ಗುತ್ತೆದಾರ ತಂದೆ ಮಗನ ಆಟಕ್ಕೆ ಬೇಸತ್ತು ಹೊರ ಬಂದಿದ್ದಾರೆ ಎಂದು ಕಿಡಿಕಾರಿದರು.

ಮೋದಿ ಹವಾದಿಂದ ಖರ್ಗೆ ವರ್ಚಸ್​ಗೆ ಧಕ್ಕೆ ಉಂಟಾಗಲಿದೆ. ಮುಂದಿನ ದಿನಗಳಲ್ಲಿ ಖರ್ಗೆ ಕಲಬುರಗಿಯಿಂದ ಗಂಟು ಮೂಟೆ ಕಟ್ಟಿಕೊಂಡು ಓಡಿ ಹೋಗಬೇಕು. ಖರ್ಗೆಯ ನಿಜವಾದ ಬಣ್ಣ ಫಲಿತಾಂಶದಲ್ಲಿ ಹೊರಬೀಳಲಿದೆ ಎಂದು ಹೇಳಿದರು.

Intro:ಸ್ತಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಖರ್ಗೆ ಭವಿಷ್ಯ ನುಡಿದ ಮಾಜಿ ಮಂತ್ರಿ ಮಾಲಕರೆಡ್ಡಿ.

ನಿರೂಪಕ : ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಸೋಲು ನಿಶ್ಚಿತ ಎಂದು ಬಿಜೆಪಿಯ ಹಿರಿಯ ಮುಖಂಡ ಮಾಜಿ ಮಂತ್ರಿ ಮಾಲಕರೆಡ್ಡಿ ಭವಿಷ್ಯವನ್ನು ನುಡಿದಿದ್ದಾರೆ.

ಯಾದಗಿರಿಯ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಮಂತ್ರಿ ಮಾಲಕರೆಡ್ಡಿ ಖರ್ಗೆ ಸೋಲುವುದು ನಿಶ್ಚಿತ ಎಂದು ಹೇಳಿದ್ದಾರೆ. ಖರ್ಗೆ ಈ ಬಾರಿ ಚುನಾವಣೆಯಲ್ಲಿ ಸೋಲೆ ಸದ್ಗತಿ ಎಂದು ಹೇಳಿದ್ದಾರೆ.




Body:ಯಾವಾಗೋ ಸೋಲಬೇಕಾದ ಖರ್ಗೆಯನ್ನು ನಾವು ಪ್ರೋತ್ಸಾಹ ನೀಡುತ್ತ ಬಂದಿದ್ದ ಪರಿಣಾಮ ಖರ್ಗೆಗೆ ಗೇಲುತ್ತಿದ್ದರು. ಆದ್ರೆ ಈ ಬಾರಿ ಖರ್ಗೆಯ ನಿಜವಾದ ಮುಖವಾಡ ಕಳಚಿ ಬೀಳಲಿದೆ . ತಂದೆ ಮಗನ ಆಟಕ್ಕೆ ಜನರು ಬ್ರೇಕ ಬೀಳಸಲಿದ್ದಾರೆ ಎಂದರು.

ಖರ್ಗೆ ಮೋಸದಾಟದಿಂದ ಸಾಕಷ್ಟು ಹಿರಿಯ ನಾಯಕರು ರಾಜಕೀಯ ರಂಗದಿಂದ ನಿವೃತ್ತಿ ತೆಗೆದುಕೊಂಡರು. ಸಾಕಷ್ಟ ಪ್ರಭಾವಿ ಮುಖಂಡರು ಪಕ್ಷವನ್ನು ತೊರೆದ ತಮ್ಮ ನೋವನ್ನು ಸಹಿಸಿಕೊಂಡೊದ್ದಾರೆ. ಮಾಜಿ ಮಂತ್ರಿ ಬಾಬುರಾವರನ್ನು ತೆಗೆದುಹಾಕಿ ಪ್ರೀಯಾಂಕಗೆ ಸಚಿವ ಸ್ಥಾನ ನೀಡಿದರು.
ಮಾಲಿಕಯ್ಯ ಗುತ್ತೆದಾರ ತಂದೆ ಮಗನ ಆಟಕ್ಕೆ ಬೇಸತ್ತು ಹೊರ ಬಂದಿದ್ದಾರೆ. ಆದ್ರೆ ಈ ಬಾರಿ ಖರ್ಗೆಯ ಮೋಸದಾಟಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.




Conclusion:ಮೋದಿಯ ಹವಾದಿಂದ ಖರ್ಗೆ ವರ್ಚಸ್ ಧಕ್ಕೆ ಉಂಟಾಗಲಿದ್ದು ಮುಂದಿನ ದಿನಗಳಲ್ಲಿ ಖರ್ಗೆ ಗುಲಬರ್ಗಾದಿಂದ ಗಂಟು ಮುಟ್ಟೆ ಕಟ್ಟಿಕೊಂಡು ಓಡಿ ಹೋಗಬೇಕು ಎಂದು ವ್ಯಂಗವಾಡಿದ್ದಾರೆ. ಖರ್ಗೆಯ ನಿಜವಾದ ಬಣ್ಣವನ್ನು ಜನರು ಫಲಿತಾಂಶದಲ್ಲಿ ಹೊರಹಾಕಲಿದ್ದಾರೆ ಎಂದು ತಿಳಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.