ಕಲಬುರಗಿ : ಹಿಂದುಳಿದ ಹಾಗೂ ಸ್ಲಮ್ ಬಡಾವಣೆಗಳಿಗೆ ನೀರು ಪೂರೈಸಲು ನಿರ್ಮಿಸಿದ್ದ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ ಹಾಗೂ ಎರಡು ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಸಂಸದ ಮಲ್ಲಿಕಾರ್ಜುನ ಖರ್ಗೆ ನೆರವೇರಿಸಿದರು.
ನಗರದ ಬುದ್ಧ ನಗರದ, ಹಾಗೂ ಅಶೋಕನಗರದಲ್ಲಿ ಸಂಸದರ ಅನುದಾನದಲ್ಲಿ ನಿರ್ಮಿಸಲಾದ ತಲಾ 15 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಅವರು ಚಾಲನೆ ನೀಡಿದರು. ಹಾಗೂ ವಡ್ಡರ್ ಗಲ್ಲಿ ಮತ್ತು ವಿದ್ಯಾನಗರದಲ್ಲಿಯೂ ತಲಾ 15ಲಕ್ಷ ವೆಚ್ಚದ ಕಾಮಗಾರಿಗಳಿಗೆ ಖರ್ಗೆ ಅಡಿಗಲ್ಲು ಹಾಕಿದರು.
ಈ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ 5 ರೂಪಾಯಿಗೆ 25 ಲೀಟರ್ ನೀರು ದೊರೆಯುತ್ತದೆ. ಸಾರ್ವಜನಿಕರು ಇದನ್ನು ಸುರಕ್ಷಿತವಾಗಿ ನೋಡಿಕೊಂಡು ಹೋಗಬೇಕು ಎಂದು ಹೇಳಿದರು.