ಕಲಬುರಗಿ: ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರು ಸೇಡಂ ತಾಲೂಕಿನ ಯಾನಾ ಗುಂದಿಗೆ ಭೇಟಿ ನೀಡಿ ಮಾತೆ ಮಾಣಿಕೇಶ್ವರಿ ದರ್ಶನ ಪಡೆದಿದ್ದಾರೆ.
ಸೋಮವಾರ ಕಲಬುರಗಿ ಜಿಲ್ಲೆಯ ಪ್ರವಾಸದಲ್ಲಿದ್ದ ಡಿಸಿಎಂ ಯಾನ ಗುಂದಿಗೆ ಭೇಟಿ ನೀಡಿದ್ದರು. ಮಾತೆಯ ದರ್ಶನ ಪಡೆದ ನಂತರ ಕೋಟಿಲಿಂಗೇಶ್ವರದ ದರ್ಶನ ಪಡೆದರು. ಈ ವೇಳೆ ವೈಯಕ್ತಿಕವಾಗಿ ಮಾಣಿಕೇಶ್ವರಿ ಮಠಕ್ಕೆ 5.25 ಲಕ್ಷ ರೂ. ದೇಣಿಗೆಯ ಚೆಕ್ನ ಶ್ರೀಮಠಕ್ಕೆ ಹಸ್ತಾಂತರಿಸಿದರು. ಸಂಸದ ಡಾ. ಉಮೇಶ್ ಜಾಧವ್, ಸೇಡಂ ಶಾಸಕ ರಾಜಕುಮಾರ್ ಪಾಟೀಲ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹಾಗೂ ಮತ್ತಿತರರು ಅವರಿಗೆ ಸಾಥ್ ನೀಡಿದರು.