ETV Bharat / state

ಹಿಂದೂಗಳ ಹೆಸರಿನಲ್ಲಿ ರಾಜಕೀಯ, ಬಿಜೆಪಿ ನಾಡನ್ನು ನಿರ್ನಾಮ ಮಾಡಲು ಹೊರಟಿದೆ: ಹೆಚ್​ಡಿಕೆ ವಾಗ್ದಾಳಿ

author img

By

Published : Jul 30, 2022, 9:35 PM IST

ರಾಜ್ಯದಲ್ಲಿ ಯುವಕರ ಹತ್ಯೆ- ಸರ್ಕಾರದ ವಿರುದ್ಧ ಮುಂದುವರಿದ ಹೆಚ್​ಡಿಕೆ ವಾಕ್​ ಪ್ರಹಾರ- ಖರ್ಗೆ ಬಗ್ಗೆ ಕುಮಾರಸ್ವಾಮಿ ಮೃದು ಮಾತು

bjp-politics-in-name-of-hindus-says-jds-leader-hd-kumaraswamy
ಹಿಂದೂಗಳ ಹೆಸರಿನಲ್ಲಿ ರಾಜಕೀಯ, ನಾಡನ್ನು ನಿರ್ನಾಮ ಮಾಡಲು ಹೊರಟ ಬಿಜೆಪಿ: ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ

ಕಲಬುರಗಿ: ಕಳೆದ ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಕೋಮು ಸಂಘರ್ಷಗಳು ಹೆಚ್ಚುತ್ತಿವೆ. ಅದಕ್ಕೆ ಕಡಿವಾಣ ಹಾಕಬೇಕಿರುವ ಸರ್ಕಾರ ಜಾತಿ ಹೆಸರಿನ ಮೇಲೆ ರಾಜಕಾರಣ ಮಾಡುತ್ತಿದೆ. ಹಿಂದೂಗಳ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತ ನಾಡನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್​​ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದ ಜೆಡಿಎಸ್ ಪಕ್ಷದ ಕಚೇರಿ ಆವರಣದಲ್ಲಿ ನಡೆದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸರಣಿ ಕೊಲೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಕೇವಲ ಒಂದು ವರ್ಗದ ವ್ಯಕ್ತಿಯ ಮನೆಗೆ ಮಾತ್ರ ಭೇಟಿ ಕೊಟ್ಟಿದ್ದಾರೆ. ಕೊಲೆಯಾದ ಇನ್ನೊಂದು ವರ್ಗದ ಯುವಕನ ಮನೆಗೂ ಹೋಗಿಲ್ಲ, ವಿಚಾರಣೆ ಮಾಡಿಲ್ಲ. ಅವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಬಿಜೆಪಿ ಸರ್ಕಾರ ಕೇವಲ ಒಂದು ವರ್ಗದ ಜನರ ರಕ್ಷಣೆಗಾಗಿ ಇದೆಯಾ ಎಂದು ಪ್ರಶ್ನೆ ಮಾಡಿದರು.

ತಮ್ಮ ಆಸೆಗಾಗಿ ಜನರ ಬಲಿ: ಬಿಜೆಪಿಯವರು ಕೇವಲ ತಮ್ಮ ಆಸೆಗಾಗಿ ಜನರನ್ನು ಬಲಿಕೊಡುತ್ತಿದ್ದಾರೆ. ಇದು ಸರ್ಕಾರದ ಅನಾಗರಿಕ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಹಿಂದುತ್ವದ ಮೂಲಕ ನಿಮ್ಮನ್ನು (ಜನರನ್ನು) ಮರಳು ಮಾಡಿ ಅಧಿಕಾರ ಹಿಡಿದು, ನಿಮ್ಮನ್ನೇ (ಜನರನ್ನೇ) ಗುಲಾಮರನ್ನಾಗಿ ಮಾಡುತ್ತಿದ್ದಾರೆ. ನಿಮ್ಮ ಬದುಕನ್ನು ಹಾಳು ಮಾಡಲು ಇಂತಹ ಸರ್ಕಾರಗಳು ಬೇಕಾ?. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುವುದು ಅವಶ್ಯಕವಾಗಿದೆ ಎಂದು ಹೆಚ್​​ಡಿಕೆ ಕರೆ ನೀಡಿದರು.

ಹಿಂದೂಗಳ ಹೆಸರಿನಲ್ಲಿ ರಾಜಕೀಯ, ನಾಡನ್ನು ನಿರ್ನಾಮ ಮಾಡಲು ಹೊರಟ ಬಿಜೆಪಿ: ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ

ಜನರಿಗಾಗಿ ಯೋಜನೆಗಳನ್ನು ಕೊಟ್ಟೆ: ಈಗಿನ ಬಿಜೆಪಿ ಸರ್ಕಾರದ ಶೇ.40ರಷ್ಟು ಕಮಿಷನ್​ ಸರ್ಕಾರ ಅಂತಾ ಹೇಳಲಾಗುತ್ತಿದೆ. ಆ ರೀತಿ ನಾನೂ ಮಾಡಿದ್ದರೆ ಹತ್ತು ಸಾವಿರ ಕೋಟಿ ಗಳಿಸುತ್ತಿದ್ದೆ. ಆದರೆ, ನಾನು ಜನರಿಗಾಗಿ ಯೋಜನೆಗಳನ್ನು ಕೊಟ್ಟಿದ್ದೇನೆ. ರಾಜ್ಯದ ಎಲ್ಲರೂ ನನ್ನ ಅಣ್ಣ-ತಮ್ಮಂದಿರೂ ಎಲ್ಲರ ಮೈಯಲ್ಲಿ ಹರಿತಿರೋದು ಕೆಂಪು ರಕ್ತ. ಬಿಜೆಪಿ ಸರ್ಕಾರ ಅನಾಗರಿಕ ಸರ್ಕಾರ. ನಮ್ಮದೂ ತಾಯಿ ಹೃದಯದ ಪಕ್ಷ. ನಿಮಗೆ ಅನಾಗರಿಕ ಸರ್ಕಾರ ಬೇಕೋ, ತಾಯಿ ಹೃದಯ ಸರ್ಕಾರ ಬೇಕೋ?. ನೀವೇ ನಿರ್ಧಾರ ಮಾಡಿ ಎಂದ ಕುಮಾರಸ್ವಾಮಿ ಅವರು, ಜಾತಿ ಹೆಸರಿನ ವ್ಯಾಮೋಹಕ್ಕೆ ಒಳಗಾಗಬೇಡಿ. ನಿಮ್ಮ ಹೆಸರಿನಲ್ಲಿ ಅವರು ಮಜಾ ಮಾಡುತ್ತಿದ್ದಾರೆ ಎಂದರು.

ನಮಗೆ ಪೂರ್ಣ ಬಹುಮತ ಕೊಡಿ: ನನಗೆ ಐವತ್ತು ಸ್ಥಾನ ಗೆಲ್ಲೋದು ಕಷ್ಟ ಅಲ್ಲವೇ, ಅಲ್ಲ. ಆದರೆ, ಮತ್ತೊಬ್ಬರ ಬೆಂಬಲದಿಂದ ಸರ್ಕಾರ ಮಾಡಿದರೆ, ಅವರ ಹಂಗಿನಲ್ಲೇ ಆಡಳಿತ ನಡೆಸಬೇಕಾಗುತ್ತದೆ. ನಮ್ಮ ಪಕ್ಷವನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ. ಬಿಜೆಪಿ, ಕಾಂಗ್ರೆಸ್​ನಂತೆ ಹೆಣದ ಮೇಲೆ ರಾಜಕೀಯ ಮಾಡುವವರು ನಾವಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ಜೆಡಿಎಸ್‌ಗೆ ಬಹುಮತ ನೀಡಿ, ಅಧಿಕಾರಕ್ಕೆ ತನ್ನಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಖರ್ಗೆ ಸಿಎಂ ಮಾಡೋದು ಬೇಡ ಅಂದ್ರು: 2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರಗೊಂಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದರು. ಆದರೆ, ದೆಹಲಿಯಿಂದ ಬಂದಿದ್ದ ಕಾಂಗ್ರೆಸ್​ ನಾಯಕರು ಖರ್ಗೆ ಸಿಎಂ ಮಾಡೋದು ಬೇಡ ಎಂದು, ನನ್ನನ್ನು ಸಿಎಂ ಮಾಡಿದರು. ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿಸಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯವರು ಎಂದು ಎರಡೂ ಪಕ್ಷಗಳ ವಿರುದ್ಧ ಹೆಚ್​​ಡಿಕೆ ಕಿಡಿಕಾರಿದರು.

ಪಂಚಾಯಿತಿಗೆ 30 ಬೆಡ್​ಗಳ ಆಸ್ಪತ್ರೆ: ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದರೆ, ಎಲ್ಲ ರೀತಿಯ ರೋಗಗಳಿಗೂ ಸರ್ಕಾರದಿಂದ ಉಚಿತ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತೇನೆ. ಪ್ರತಿ ಗ್ರಾಮ ಪಂಚಾಯಿತಿಗೆ 30 ಬೆಡ್​ಗಳ ಆಸ್ಪತ್ರೆಗಳನ್ನು ಮಾಡುತ್ತೇನೆ. ಮೂರು ದಿನಗಳ ಹಿಂದೆ ಹತ್ಯೆಯಾದ ಪ್ರವೀಣ್​ ನೆಟ್ಟಾರು ಕುಟುಂಬಕ್ಕೆ ಸಿಎಂ ಸಾಂತ್ವನ ಹೇಳಲು ಹೋದಾಗ, ಸಮೀಪ ಆಸ್ಪತ್ರೆ ಇದ್ದರೆ ನನ್ನ ಗಂಡ ಬದುಕುತ್ತಿದ್ದ ಅಂತಾ ಪ್ರವೀಣ್​ ಹೆಂಡತಿ ಹೇಳಿದ್ದರು. ಅದಕ್ಕಾಗಿಯೇ ಗ್ರಾಮ ಪಂಚಾಯಿತಿಗೊಂದು ಆಸ್ಪತ್ರೆ ಮಾಡಲು ನಿರ್ಧರಿಸಿದ್ದೇನೆ ಕುಮಾರಸ್ವಾಮಿ ಹೇಳಿದರು.

ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ: ನಾನು ಅಧಿಕಾರದಲ್ಲಿದ್ದಾಗ ರೈತರು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದ್ದೇನೆ. ಈ ಹಿಂದೆ ಸಾಲ ಮನ್ನಾ ಹೇಗೆ ಮಾಡ್ತೀರಾ ಎಂದು ಕಾಂಗ್ರೆಸ್​ನವರು ಪ್ರಶ್ನೆ ಮಾಡಿದ್ದರು. ಆದರೂ, ನಾನು ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದೇನೆ. ಅದಕ್ಕಾಗಿ ಸ್ವತಂತ್ರವಾಗಿ ಅಧಿಕಾರ ನಡೆಸಲು ಬೆಂಬಲಿ ಕೊಡಿ. ರೈತರು ಸಾಲಗಾರರಾಗದಂತೆ ಕಾರ್ಯಕ್ರಮಗಳನ್ನು ಕೊಡುತ್ತೇನೆ. ಐದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ, ಐದು ವರ್ಷದಲ್ಲಿ ಪೂರ್ತಿ ಮಾಡುತ್ತೇನೆ. ಇಲ್ಲದಿದ್ರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ, ಇಲ್ಲವೇ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ವಾಗ್ದಾನ ಮಾಡಿದರು.

ಕಲಬುರಗಿಯಲ್ಲಿ 5-6 ಸ್ಥಾನ ಗೆಲ್ಲಿಸಿ: ಸ್ವತಂತ್ರ ಸರ್ಕಾರ ಮಾಡಲು ನೀವು ಆಶೀರ್ವಾದ ಮಾಡಿ, ಸರ್ವಜನಾಂಗದ ಶಾಂತಿಯ ತೋಟ ಈ ನಾಡಿಗೆ ಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಹಣ ಕೊಟ್ಟು ರಾಜಕಾರಣ ಮಾಡುವ ಪಕ್ಷಗಳನ್ನು ತಿರಸ್ಕರಿಸಿ, ಜೆಡಿಎಸ್​ಗೆ ಮತ ಕೊಡಿ. ಈ ಹಿಂದೆ ಅರುಣಾ ಪಾಟೀಲ್ ರೇವೂರ್​ ಅವರನ್ನು ಗೆಲ್ಲಿಸಲು ನಾನು ಪ್ರಚಾರಕ್ಕೆ ಬಂದಾಗ ಒಂದೂ ಕಪ್ ಟೀ ಕುಡಿಸಿಲ್ಲ. ಆದರೆ, ನಾನು ಅವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ಶ್ರೀಮಂತಿಕೆ ನೋಡಿ ನಾನು ಟಿಕೆಟ್ ಕೊಡುವುದಿಲ್ಲ. ಈ ನಾಡಿಗೆ ರಕ್ಷಣೆ ಮಾಡುವ ಶಾಸಕರ ಅವಶ್ಯಕತೆ ಇದೆ. ಅಂತಹವನ್ನು ನೀವು ಆಯ್ಕೆ ಮಾಡಬೇಕು. ಕಲಬುರಗಿಯ 9 ಕ್ಷೇತ್ರಗಳಲ್ಲಿ ಜೆಡಿಎಸ್​ಗೆ 5-6 ಸ್ಥಾನಗಳಲ್ಲಿ ಗೆಲ್ಲಿಸಿ ಎಂದು ಹೆಚ್​ಡಿಕೆ ಮನವಿ ಮಾಡಿದರು.

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಕುಮಾರಸ್ವಾಮಿ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದರು. ಅದೇ ರೀತಿ ನಿಮಗೆ ಧಮ್ ಇದ್ರೆ ರೈತರ ಸಾಲ ಮನ್ನಾ ಮಾಡಿ ಎಂದು ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದರು. ಉದ್ರಿ ಮಾತನಾಡುವವರಿಗೆ ನಂಬಬೇಡಿ, ನಗದಿ ಕುಮಾರಣ್ಣಾಗೆ ಬೆಂಬಲಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ, ಕೃಷ್ಣಾರೆಡ್ಡಿ, ಸಂಜೀವನ್ ಯಾಕಾಪೂರ, ಬಾಲರಾಜ್ ಗುತ್ತೇದಾರ್, ಮನೋಹರ್ ಪೊದ್ದಾರ್, ಶಿವಕುಮಾರ ನಾಟೀಕಾರ್, ಮಹೇಶ್ವರಿ ವಾಲಿ ಸೇರಿದಂತೆ ಅನೇಕ ಜನ ಮುಖಂಡರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ: ಎಬಿವಿಪಿಯ 30 ಜನರ ವಿರುದ್ಧ ಎಫ್ಐಆರ್, ಇಬ್ಬರು ಪಿಎಸ್​ಐ ಅಮಾನತು

ಕಲಬುರಗಿ: ಕಳೆದ ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಕೋಮು ಸಂಘರ್ಷಗಳು ಹೆಚ್ಚುತ್ತಿವೆ. ಅದಕ್ಕೆ ಕಡಿವಾಣ ಹಾಕಬೇಕಿರುವ ಸರ್ಕಾರ ಜಾತಿ ಹೆಸರಿನ ಮೇಲೆ ರಾಜಕಾರಣ ಮಾಡುತ್ತಿದೆ. ಹಿಂದೂಗಳ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತ ನಾಡನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್​​ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದ ಜೆಡಿಎಸ್ ಪಕ್ಷದ ಕಚೇರಿ ಆವರಣದಲ್ಲಿ ನಡೆದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸರಣಿ ಕೊಲೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಕೇವಲ ಒಂದು ವರ್ಗದ ವ್ಯಕ್ತಿಯ ಮನೆಗೆ ಮಾತ್ರ ಭೇಟಿ ಕೊಟ್ಟಿದ್ದಾರೆ. ಕೊಲೆಯಾದ ಇನ್ನೊಂದು ವರ್ಗದ ಯುವಕನ ಮನೆಗೂ ಹೋಗಿಲ್ಲ, ವಿಚಾರಣೆ ಮಾಡಿಲ್ಲ. ಅವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಬಿಜೆಪಿ ಸರ್ಕಾರ ಕೇವಲ ಒಂದು ವರ್ಗದ ಜನರ ರಕ್ಷಣೆಗಾಗಿ ಇದೆಯಾ ಎಂದು ಪ್ರಶ್ನೆ ಮಾಡಿದರು.

ತಮ್ಮ ಆಸೆಗಾಗಿ ಜನರ ಬಲಿ: ಬಿಜೆಪಿಯವರು ಕೇವಲ ತಮ್ಮ ಆಸೆಗಾಗಿ ಜನರನ್ನು ಬಲಿಕೊಡುತ್ತಿದ್ದಾರೆ. ಇದು ಸರ್ಕಾರದ ಅನಾಗರಿಕ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಹಿಂದುತ್ವದ ಮೂಲಕ ನಿಮ್ಮನ್ನು (ಜನರನ್ನು) ಮರಳು ಮಾಡಿ ಅಧಿಕಾರ ಹಿಡಿದು, ನಿಮ್ಮನ್ನೇ (ಜನರನ್ನೇ) ಗುಲಾಮರನ್ನಾಗಿ ಮಾಡುತ್ತಿದ್ದಾರೆ. ನಿಮ್ಮ ಬದುಕನ್ನು ಹಾಳು ಮಾಡಲು ಇಂತಹ ಸರ್ಕಾರಗಳು ಬೇಕಾ?. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುವುದು ಅವಶ್ಯಕವಾಗಿದೆ ಎಂದು ಹೆಚ್​​ಡಿಕೆ ಕರೆ ನೀಡಿದರು.

ಹಿಂದೂಗಳ ಹೆಸರಿನಲ್ಲಿ ರಾಜಕೀಯ, ನಾಡನ್ನು ನಿರ್ನಾಮ ಮಾಡಲು ಹೊರಟ ಬಿಜೆಪಿ: ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ

ಜನರಿಗಾಗಿ ಯೋಜನೆಗಳನ್ನು ಕೊಟ್ಟೆ: ಈಗಿನ ಬಿಜೆಪಿ ಸರ್ಕಾರದ ಶೇ.40ರಷ್ಟು ಕಮಿಷನ್​ ಸರ್ಕಾರ ಅಂತಾ ಹೇಳಲಾಗುತ್ತಿದೆ. ಆ ರೀತಿ ನಾನೂ ಮಾಡಿದ್ದರೆ ಹತ್ತು ಸಾವಿರ ಕೋಟಿ ಗಳಿಸುತ್ತಿದ್ದೆ. ಆದರೆ, ನಾನು ಜನರಿಗಾಗಿ ಯೋಜನೆಗಳನ್ನು ಕೊಟ್ಟಿದ್ದೇನೆ. ರಾಜ್ಯದ ಎಲ್ಲರೂ ನನ್ನ ಅಣ್ಣ-ತಮ್ಮಂದಿರೂ ಎಲ್ಲರ ಮೈಯಲ್ಲಿ ಹರಿತಿರೋದು ಕೆಂಪು ರಕ್ತ. ಬಿಜೆಪಿ ಸರ್ಕಾರ ಅನಾಗರಿಕ ಸರ್ಕಾರ. ನಮ್ಮದೂ ತಾಯಿ ಹೃದಯದ ಪಕ್ಷ. ನಿಮಗೆ ಅನಾಗರಿಕ ಸರ್ಕಾರ ಬೇಕೋ, ತಾಯಿ ಹೃದಯ ಸರ್ಕಾರ ಬೇಕೋ?. ನೀವೇ ನಿರ್ಧಾರ ಮಾಡಿ ಎಂದ ಕುಮಾರಸ್ವಾಮಿ ಅವರು, ಜಾತಿ ಹೆಸರಿನ ವ್ಯಾಮೋಹಕ್ಕೆ ಒಳಗಾಗಬೇಡಿ. ನಿಮ್ಮ ಹೆಸರಿನಲ್ಲಿ ಅವರು ಮಜಾ ಮಾಡುತ್ತಿದ್ದಾರೆ ಎಂದರು.

ನಮಗೆ ಪೂರ್ಣ ಬಹುಮತ ಕೊಡಿ: ನನಗೆ ಐವತ್ತು ಸ್ಥಾನ ಗೆಲ್ಲೋದು ಕಷ್ಟ ಅಲ್ಲವೇ, ಅಲ್ಲ. ಆದರೆ, ಮತ್ತೊಬ್ಬರ ಬೆಂಬಲದಿಂದ ಸರ್ಕಾರ ಮಾಡಿದರೆ, ಅವರ ಹಂಗಿನಲ್ಲೇ ಆಡಳಿತ ನಡೆಸಬೇಕಾಗುತ್ತದೆ. ನಮ್ಮ ಪಕ್ಷವನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ. ಬಿಜೆಪಿ, ಕಾಂಗ್ರೆಸ್​ನಂತೆ ಹೆಣದ ಮೇಲೆ ರಾಜಕೀಯ ಮಾಡುವವರು ನಾವಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ಜೆಡಿಎಸ್‌ಗೆ ಬಹುಮತ ನೀಡಿ, ಅಧಿಕಾರಕ್ಕೆ ತನ್ನಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಖರ್ಗೆ ಸಿಎಂ ಮಾಡೋದು ಬೇಡ ಅಂದ್ರು: 2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರಗೊಂಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದರು. ಆದರೆ, ದೆಹಲಿಯಿಂದ ಬಂದಿದ್ದ ಕಾಂಗ್ರೆಸ್​ ನಾಯಕರು ಖರ್ಗೆ ಸಿಎಂ ಮಾಡೋದು ಬೇಡ ಎಂದು, ನನ್ನನ್ನು ಸಿಎಂ ಮಾಡಿದರು. ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿಸಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯವರು ಎಂದು ಎರಡೂ ಪಕ್ಷಗಳ ವಿರುದ್ಧ ಹೆಚ್​​ಡಿಕೆ ಕಿಡಿಕಾರಿದರು.

ಪಂಚಾಯಿತಿಗೆ 30 ಬೆಡ್​ಗಳ ಆಸ್ಪತ್ರೆ: ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದರೆ, ಎಲ್ಲ ರೀತಿಯ ರೋಗಗಳಿಗೂ ಸರ್ಕಾರದಿಂದ ಉಚಿತ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತೇನೆ. ಪ್ರತಿ ಗ್ರಾಮ ಪಂಚಾಯಿತಿಗೆ 30 ಬೆಡ್​ಗಳ ಆಸ್ಪತ್ರೆಗಳನ್ನು ಮಾಡುತ್ತೇನೆ. ಮೂರು ದಿನಗಳ ಹಿಂದೆ ಹತ್ಯೆಯಾದ ಪ್ರವೀಣ್​ ನೆಟ್ಟಾರು ಕುಟುಂಬಕ್ಕೆ ಸಿಎಂ ಸಾಂತ್ವನ ಹೇಳಲು ಹೋದಾಗ, ಸಮೀಪ ಆಸ್ಪತ್ರೆ ಇದ್ದರೆ ನನ್ನ ಗಂಡ ಬದುಕುತ್ತಿದ್ದ ಅಂತಾ ಪ್ರವೀಣ್​ ಹೆಂಡತಿ ಹೇಳಿದ್ದರು. ಅದಕ್ಕಾಗಿಯೇ ಗ್ರಾಮ ಪಂಚಾಯಿತಿಗೊಂದು ಆಸ್ಪತ್ರೆ ಮಾಡಲು ನಿರ್ಧರಿಸಿದ್ದೇನೆ ಕುಮಾರಸ್ವಾಮಿ ಹೇಳಿದರು.

ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ: ನಾನು ಅಧಿಕಾರದಲ್ಲಿದ್ದಾಗ ರೈತರು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದ್ದೇನೆ. ಈ ಹಿಂದೆ ಸಾಲ ಮನ್ನಾ ಹೇಗೆ ಮಾಡ್ತೀರಾ ಎಂದು ಕಾಂಗ್ರೆಸ್​ನವರು ಪ್ರಶ್ನೆ ಮಾಡಿದ್ದರು. ಆದರೂ, ನಾನು ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದೇನೆ. ಅದಕ್ಕಾಗಿ ಸ್ವತಂತ್ರವಾಗಿ ಅಧಿಕಾರ ನಡೆಸಲು ಬೆಂಬಲಿ ಕೊಡಿ. ರೈತರು ಸಾಲಗಾರರಾಗದಂತೆ ಕಾರ್ಯಕ್ರಮಗಳನ್ನು ಕೊಡುತ್ತೇನೆ. ಐದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ, ಐದು ವರ್ಷದಲ್ಲಿ ಪೂರ್ತಿ ಮಾಡುತ್ತೇನೆ. ಇಲ್ಲದಿದ್ರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ, ಇಲ್ಲವೇ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ವಾಗ್ದಾನ ಮಾಡಿದರು.

ಕಲಬುರಗಿಯಲ್ಲಿ 5-6 ಸ್ಥಾನ ಗೆಲ್ಲಿಸಿ: ಸ್ವತಂತ್ರ ಸರ್ಕಾರ ಮಾಡಲು ನೀವು ಆಶೀರ್ವಾದ ಮಾಡಿ, ಸರ್ವಜನಾಂಗದ ಶಾಂತಿಯ ತೋಟ ಈ ನಾಡಿಗೆ ಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಹಣ ಕೊಟ್ಟು ರಾಜಕಾರಣ ಮಾಡುವ ಪಕ್ಷಗಳನ್ನು ತಿರಸ್ಕರಿಸಿ, ಜೆಡಿಎಸ್​ಗೆ ಮತ ಕೊಡಿ. ಈ ಹಿಂದೆ ಅರುಣಾ ಪಾಟೀಲ್ ರೇವೂರ್​ ಅವರನ್ನು ಗೆಲ್ಲಿಸಲು ನಾನು ಪ್ರಚಾರಕ್ಕೆ ಬಂದಾಗ ಒಂದೂ ಕಪ್ ಟೀ ಕುಡಿಸಿಲ್ಲ. ಆದರೆ, ನಾನು ಅವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ಶ್ರೀಮಂತಿಕೆ ನೋಡಿ ನಾನು ಟಿಕೆಟ್ ಕೊಡುವುದಿಲ್ಲ. ಈ ನಾಡಿಗೆ ರಕ್ಷಣೆ ಮಾಡುವ ಶಾಸಕರ ಅವಶ್ಯಕತೆ ಇದೆ. ಅಂತಹವನ್ನು ನೀವು ಆಯ್ಕೆ ಮಾಡಬೇಕು. ಕಲಬುರಗಿಯ 9 ಕ್ಷೇತ್ರಗಳಲ್ಲಿ ಜೆಡಿಎಸ್​ಗೆ 5-6 ಸ್ಥಾನಗಳಲ್ಲಿ ಗೆಲ್ಲಿಸಿ ಎಂದು ಹೆಚ್​ಡಿಕೆ ಮನವಿ ಮಾಡಿದರು.

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಕುಮಾರಸ್ವಾಮಿ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದರು. ಅದೇ ರೀತಿ ನಿಮಗೆ ಧಮ್ ಇದ್ರೆ ರೈತರ ಸಾಲ ಮನ್ನಾ ಮಾಡಿ ಎಂದು ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದರು. ಉದ್ರಿ ಮಾತನಾಡುವವರಿಗೆ ನಂಬಬೇಡಿ, ನಗದಿ ಕುಮಾರಣ್ಣಾಗೆ ಬೆಂಬಲಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ, ಕೃಷ್ಣಾರೆಡ್ಡಿ, ಸಂಜೀವನ್ ಯಾಕಾಪೂರ, ಬಾಲರಾಜ್ ಗುತ್ತೇದಾರ್, ಮನೋಹರ್ ಪೊದ್ದಾರ್, ಶಿವಕುಮಾರ ನಾಟೀಕಾರ್, ಮಹೇಶ್ವರಿ ವಾಲಿ ಸೇರಿದಂತೆ ಅನೇಕ ಜನ ಮುಖಂಡರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ: ಎಬಿವಿಪಿಯ 30 ಜನರ ವಿರುದ್ಧ ಎಫ್ಐಆರ್, ಇಬ್ಬರು ಪಿಎಸ್​ಐ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.