ಹಾವೇರಿ: ಗುತ್ತಲದ ಕಂಟೈನ್ಮೆಂಟ್ ನಿವಾಸಿಗಳು ಉಚಿತ ಆಹಾರ ಸಾಮಗ್ರಿ, ದನಗಳಿಗೆ ಮೇವು ಪೂರೈಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಗುತ್ತಲ ಪಟ್ಟಣದ ಕಲಾಲ ಓಣಿಯಲ್ಲಿರುವ ಕಂಟೈನ್ಮೆಂಟ್ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರದೇಶದ ಮಹಿಳೆಯಲ್ಲಿ ಜೂನ್ 5 ರಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಅವತ್ತಿನಿಂದ ಜಿಲ್ಲಾಡಳಿತ ನಮ್ಮ ಪ್ರದೇಶವನ್ನ ಸೀಲ್ ಡೌನ್ ಮಾಡಿದೆ. ಆದರೆ ಸೀಲ್ ಡೌನ್ ಮಾಡಿ ವಾರವಾದರೂ ಜಿಲ್ಲಾಡಳಿತ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ನಿವಾಸಿಗಳು ದೂರಿದರು.
ಪ್ರತಿಭಟನಾಕಾರರು ಸ್ಥಳಕ್ಕೆ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸಾಮಾಜಿಕ ಅಂತರ ಮರೆತು ಪ್ರತಿಭಟನೆಗೆ ಇಳಿದಿರುವ ನಿವಾಸಿಗಳ ಕ್ರಮ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.