ETV Bharat / state

ಮಗಳನ್ನು ಯುವಕನೊಬ್ಬ ಪ್ರೀತಿಸುತ್ತಿದ್ದ ವಿಷಯ ಮುಚ್ಚಿಟ್ಟ ಸಂಬಂಧಿ ಮೇಲೆ ಹಲ್ಲೆ ಆರೋಪ - ಯುವಕನ ಮೇಲೆ ಹಲ್ಲೆ

21 ವರ್ಷದ ಪೊನ್ನಪ್ಪ ಹಲ್ಲೆಗೊಳಗಾದ ಯುವಕನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊನ್ನಪ್ಪನ ಸಂಬಂಧಿಯ ಮಗಳು ಬೇರೆ ಹುಡುಗನನ್ನು ಪ್ರೀತಿಸುತ್ತಿರುವುದು ಪೊನ್ನಪ್ಪನಿಗೆ ತಿಳಿದಿತ್ತಂತೆ. ಆದರೆ ಆತ ಈ ವಿಷಯನ್ನು ಸಂಬಂಧಿಕರ ಬಳಿ ಹೇಳದೆ ಮುಚ್ಚಿಟ್ಟಿದ್ದನಂತೆ. ಇದರಿಂದ ಕೋಪಗೊಂಡಿದ್ದ ಯುವಕನ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Attack on a young man By his relatives in Haveri
ಮಗಳನ್ನು ಯುವಕನೊಬ್ಬ ಪ್ರೀತಿಸುತ್ತಿದ್ದ ವಿಷಯ ಮುಚ್ಚಿಟ್ಟ ಸಂಬಂಧಿ ಮೇಲೆ ಹಲ್ಲೆ
author img

By

Published : Jan 13, 2021, 11:02 PM IST

ಹಾವೇರಿ: ಮಗಳನ್ನು ಬೇರೊಬ್ಬ ಹುಡುಗ ಪ್ರೀತಿಸುತ್ತಿರುವ ವಿಷಯ ಮುಚ್ಚಿಟ್ಟಿದ್ದ ಸಂಬಂಧಿಕನ ಮಗನಿಗೆ ಹುಡುಗಿ ತಂದೆಯ ಕಡೆಯವರು ಹಲ್ಲೆ ಮಾಡಿರುವ ಘಟನೆ ಕಬ್ಬೂರು ಗ್ರಾಮದಲ್ಲಿ ನಡೆದಿದೆ.

21 ವರ್ಷದ ಪೊನ್ನಪ್ಪ ಹಲ್ಲೆಗೊಳಗಾದ ಯುವಕನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊನ್ನಪ್ಪನ ಸಂಬಂಧಿಯ ಮಗಳು ಬೇರೆ ಹುಡುಗನನ್ನು ಪ್ರೀತಿಸುತ್ತಿರುವುದು ಪೊನ್ನಪ್ಪನಿಗೆ ತಿಳಿದಿತ್ತು. ಆದರೆ ಆತ ಈ ವಿಷಯನ್ನು ಸಂಬಂಧಿಕರ ಬಳಿ ಹೇಳದೆ ಮುಚ್ಚಿಟ್ಟಿದ್ದನಂತೆ. ಇದರಿಂದ ಕೋಪಗೊಂಡಿದ್ದ ಹುಡುಗಿ ಕಡೆಯವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಯುವಕನ ಮೇಲೆ ಹಲ್ಲೆ

ಬಳಿಕ ಕೈ-ಕಾಲು ಕಟ್ಟಿ ಹಾಕಿ ಕಾರದ ಪುಡಿ ಬಾಯಿಗೆ ಹಾಕಿ ನಿರ್ಜನ ಪ್ರದೇಶದಲ್ಲಿ ಎಸೆದು ಅಲ್ಲಿಂದ ತೆರಳಿದ್ದಾರೆ. ಮಗನಿಗಾಗಿ ಹುಡುಕುತ್ತಾ ಬಂದ ಪೊನ್ನಪ್ಪನ ತಾಯಿಗೆ ಮಗನ ಕಿರುಚಾಟ ಕೇಳಿದೆ. ನಂತರ ಪೊನ್ನಪ್ಪನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಘಟನೆ ಸಂಬಂಧ ಹುಡುಗಿಯ ತಂದೆ ವಿರುದ್ಧ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಜಮೀನಿನಲ್ಲಿ ಮೇಯ್ದ ತಪ್ಪಿಗೆ ಎತ್ತಿನ ಕಾಲು ಕತ್ತರಿಸಿದ ವ್ಯಕ್ತಿ... ಹೊಲದಲ್ಲೇ ಮಲಗಿರುವ ಎತ್ತು!

ಹಾವೇರಿ: ಮಗಳನ್ನು ಬೇರೊಬ್ಬ ಹುಡುಗ ಪ್ರೀತಿಸುತ್ತಿರುವ ವಿಷಯ ಮುಚ್ಚಿಟ್ಟಿದ್ದ ಸಂಬಂಧಿಕನ ಮಗನಿಗೆ ಹುಡುಗಿ ತಂದೆಯ ಕಡೆಯವರು ಹಲ್ಲೆ ಮಾಡಿರುವ ಘಟನೆ ಕಬ್ಬೂರು ಗ್ರಾಮದಲ್ಲಿ ನಡೆದಿದೆ.

21 ವರ್ಷದ ಪೊನ್ನಪ್ಪ ಹಲ್ಲೆಗೊಳಗಾದ ಯುವಕನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊನ್ನಪ್ಪನ ಸಂಬಂಧಿಯ ಮಗಳು ಬೇರೆ ಹುಡುಗನನ್ನು ಪ್ರೀತಿಸುತ್ತಿರುವುದು ಪೊನ್ನಪ್ಪನಿಗೆ ತಿಳಿದಿತ್ತು. ಆದರೆ ಆತ ಈ ವಿಷಯನ್ನು ಸಂಬಂಧಿಕರ ಬಳಿ ಹೇಳದೆ ಮುಚ್ಚಿಟ್ಟಿದ್ದನಂತೆ. ಇದರಿಂದ ಕೋಪಗೊಂಡಿದ್ದ ಹುಡುಗಿ ಕಡೆಯವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಯುವಕನ ಮೇಲೆ ಹಲ್ಲೆ

ಬಳಿಕ ಕೈ-ಕಾಲು ಕಟ್ಟಿ ಹಾಕಿ ಕಾರದ ಪುಡಿ ಬಾಯಿಗೆ ಹಾಕಿ ನಿರ್ಜನ ಪ್ರದೇಶದಲ್ಲಿ ಎಸೆದು ಅಲ್ಲಿಂದ ತೆರಳಿದ್ದಾರೆ. ಮಗನಿಗಾಗಿ ಹುಡುಕುತ್ತಾ ಬಂದ ಪೊನ್ನಪ್ಪನ ತಾಯಿಗೆ ಮಗನ ಕಿರುಚಾಟ ಕೇಳಿದೆ. ನಂತರ ಪೊನ್ನಪ್ಪನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಘಟನೆ ಸಂಬಂಧ ಹುಡುಗಿಯ ತಂದೆ ವಿರುದ್ಧ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಜಮೀನಿನಲ್ಲಿ ಮೇಯ್ದ ತಪ್ಪಿಗೆ ಎತ್ತಿನ ಕಾಲು ಕತ್ತರಿಸಿದ ವ್ಯಕ್ತಿ... ಹೊಲದಲ್ಲೇ ಮಲಗಿರುವ ಎತ್ತು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.