ETV Bharat / state

ಹಾವೇರಿ: ಗ್ರಾಹಕರಿಗೆ ವಂಚನೆ ಆರೋಪ.. ಬ್ಯಾಂಕ್​ ಮ್ಯಾನೇಜರ್​ ಬಂಧನ

author img

By ETV Bharat Karnataka Team

Published : Nov 9, 2023, 10:58 PM IST

Allegation of cheating customers: ಬ್ಯಾಂಕ್​ನ ಪ್ರಸ್ತುತ ಮ್ಯಾನೇಜರ್​ ನೀಡಿರುವ ದೂರಿನ ಆಧಾರದಲ್ಲಿ ಬ್ಯಾಂಕ್​ನ ಹಿಂದಿನ ಮ್ಯಾನೇಜರ್​ನನ್ನು ಸೈಬರ್​ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

Cyber Crime Police Station
ಪೊಲೀಸ್​ ಠಾಣೆ

ಹಾವೇರಿ: ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬ್ಯಾಂಕ್​ನಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಅಸಿಸ್ಟೆಂಟ್ ಮ್ಯಾನೇಜರ್​ನನ್ನು ಬಂಧಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ತಾಲೂಕು ಕುರುಬಗೊಂಡ ಗ್ರಾಮದಲ್ಲಿನ ಖಾಸಗಿ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್​ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಅರ್ಚನಾ ಬೇಟಗೇರಿ ಬಂಧನವಾಗಿರುವ ಮಹಿಳೆ. ಈ ಮಹಿಳೆ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸುಮಾರು ಒಂದು ಕೋಟಿ 62 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬ್ಯಾಂಕ್‌ನಲ್ಲಿ ಇಡಲಾಗಿದ್ದ ಎಫ್​ಡಿ, ಗ್ರಾಹಕರ ವಿವಿಧ ಖಾತೆ ಮತ್ತು ಚಿನ್ನದ ಲೋನ್​ಗಳಲ್ಲೂ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಸಿಸ್ಟೆಂಟ್ ಮ್ಯಾನೇಜರ್ ಅರ್ಚನಾ ಜೊತೆಗೆ ಬ್ಯಾಂಕ್​ನ ಇನ್ನೂ ಇಬ್ಬರು ಸಿಬ್ಬಂದಿ ಶಾಂತಪ್ಪ ಮತ್ತು ಪ್ರವೀಣ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಅರ್ಚನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್‌ನ ಪ್ರಸ್ತುತ ಮ್ಯಾನೇಜರ್ ರವಿರಾಜ್ ನೀಡಿದ ದೂರಿನ ಮೇಲೆ ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಸಿಬ್ಬಂದಿ, ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.

ಪೊಲೀಸರಿಗೇ ವಂಚಿಸುತ್ತಿದ್ದ ಆಟೋ ಚಾಲಕನ ಬಂಧನ: ಪೊಲೀಸ್​ ಮಾಹಿತಿದಾರನ ಸೋಗಿನಲ್ಲಿ ನಗರದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುವ ಬಗ್ಗೆ ಮಾಹಿತಿ ನೀಡಿವುದಾಗಿ ಹೇಳಿ ಪೊಲೀಸರಿಂದಲೇ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿತ್ತು. ಹೊಸಗುಡ್ಡಹಳ್ಳಿಯ ಗೋರಿಪಾಳ್ಯದ ವಸೀಂ ಬಂಧನಗೊಂಡಿರುವ ಆರೋಪಿಯಾಗಿದ್ದಾನೆ.

ಆಟೋ ಚಾಲಕನಾಗಿದ್ದ ಆರೋಪಿ ವಸೀಂ ತನಗೆ ನಗರದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ಇದೆ ಎಂದು ಸುಳ್ಳು ಹೇಳಿ ಪೊಲೀಸರಿಂದ ಹಣ ಪಡೆಯುತ್ತಿದ್ದನು. ಆತನನ್ನು ನಂಬಿ ಪೊಲೀಸರು ಹಣ ನೀಡುತ್ತಿದ್ದು, ಹಣ ಕೈ ಸೇರುತ್ತಿದ್ದಂತೆ, ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಳ್ಳುತ್ತಿದ್ದನು. ಇದೇ ರೀತಿ ಇತ್ತೀಚೆಗೆ ಕಾನ್​ಸ್ಟೆಬಲ್​ಗೆ ಮಾಡಿದ್ದು, ಆ ವೇಳೆ ಕಾರ್ಯಾಚರಣೆ ಕೈಗೊಂಡ ಪೊಲೀಸರ ಕೈಗೆ ಅಪರಾಧಿ ಸಿಕ್ಕಿಬಿದ್ದಿದ್ದನು

ಇದನ್ನೂ ಓದಿ: ಬೆಂಗಳೂರು: ಮಾಹಿತಿದಾರನೆಂದು ಪೊಲೀಸರಿಗೆ ವಂಚಿಸುತ್ತಿದ್ದ ಆಟೋ ಚಾಲಕ ಬಂಧನ

ಹಾವೇರಿ: ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬ್ಯಾಂಕ್​ನಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಅಸಿಸ್ಟೆಂಟ್ ಮ್ಯಾನೇಜರ್​ನನ್ನು ಬಂಧಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ತಾಲೂಕು ಕುರುಬಗೊಂಡ ಗ್ರಾಮದಲ್ಲಿನ ಖಾಸಗಿ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್​ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಅರ್ಚನಾ ಬೇಟಗೇರಿ ಬಂಧನವಾಗಿರುವ ಮಹಿಳೆ. ಈ ಮಹಿಳೆ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸುಮಾರು ಒಂದು ಕೋಟಿ 62 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬ್ಯಾಂಕ್‌ನಲ್ಲಿ ಇಡಲಾಗಿದ್ದ ಎಫ್​ಡಿ, ಗ್ರಾಹಕರ ವಿವಿಧ ಖಾತೆ ಮತ್ತು ಚಿನ್ನದ ಲೋನ್​ಗಳಲ್ಲೂ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಸಿಸ್ಟೆಂಟ್ ಮ್ಯಾನೇಜರ್ ಅರ್ಚನಾ ಜೊತೆಗೆ ಬ್ಯಾಂಕ್​ನ ಇನ್ನೂ ಇಬ್ಬರು ಸಿಬ್ಬಂದಿ ಶಾಂತಪ್ಪ ಮತ್ತು ಪ್ರವೀಣ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಅರ್ಚನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್‌ನ ಪ್ರಸ್ತುತ ಮ್ಯಾನೇಜರ್ ರವಿರಾಜ್ ನೀಡಿದ ದೂರಿನ ಮೇಲೆ ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಸಿಬ್ಬಂದಿ, ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.

ಪೊಲೀಸರಿಗೇ ವಂಚಿಸುತ್ತಿದ್ದ ಆಟೋ ಚಾಲಕನ ಬಂಧನ: ಪೊಲೀಸ್​ ಮಾಹಿತಿದಾರನ ಸೋಗಿನಲ್ಲಿ ನಗರದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುವ ಬಗ್ಗೆ ಮಾಹಿತಿ ನೀಡಿವುದಾಗಿ ಹೇಳಿ ಪೊಲೀಸರಿಂದಲೇ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿತ್ತು. ಹೊಸಗುಡ್ಡಹಳ್ಳಿಯ ಗೋರಿಪಾಳ್ಯದ ವಸೀಂ ಬಂಧನಗೊಂಡಿರುವ ಆರೋಪಿಯಾಗಿದ್ದಾನೆ.

ಆಟೋ ಚಾಲಕನಾಗಿದ್ದ ಆರೋಪಿ ವಸೀಂ ತನಗೆ ನಗರದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ಇದೆ ಎಂದು ಸುಳ್ಳು ಹೇಳಿ ಪೊಲೀಸರಿಂದ ಹಣ ಪಡೆಯುತ್ತಿದ್ದನು. ಆತನನ್ನು ನಂಬಿ ಪೊಲೀಸರು ಹಣ ನೀಡುತ್ತಿದ್ದು, ಹಣ ಕೈ ಸೇರುತ್ತಿದ್ದಂತೆ, ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಳ್ಳುತ್ತಿದ್ದನು. ಇದೇ ರೀತಿ ಇತ್ತೀಚೆಗೆ ಕಾನ್​ಸ್ಟೆಬಲ್​ಗೆ ಮಾಡಿದ್ದು, ಆ ವೇಳೆ ಕಾರ್ಯಾಚರಣೆ ಕೈಗೊಂಡ ಪೊಲೀಸರ ಕೈಗೆ ಅಪರಾಧಿ ಸಿಕ್ಕಿಬಿದ್ದಿದ್ದನು

ಇದನ್ನೂ ಓದಿ: ಬೆಂಗಳೂರು: ಮಾಹಿತಿದಾರನೆಂದು ಪೊಲೀಸರಿಗೆ ವಂಚಿಸುತ್ತಿದ್ದ ಆಟೋ ಚಾಲಕ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.