ETV Bharat / state

ಹೊಡೆದಾಡುವ ರಾಜಕಾರಣದಿಂದಲೇ ನೀವು ಸೋತಿದ್ದು: ಸಿದ್ದರಾಮಯ್ಯಗೆ ಸಿ.ಟಿ.ರವಿ ಟಾಂಗ್​​ - undefined

ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಟಿ.ರವಿ, ಹೊಡೆದಾಡುವ ರಾಜಕಾರಣ ಮಾಡಿದ್ದಕ್ಕೆ ನಿಮ್ಮ ಕ್ಷೇತ್ರದಲ್ಲಿ ನಿಮಗೆ ಸೋಲುಂಟಾಯಿತು ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

ಸಿ.ಟಿ.ರವಿ
author img

By

Published : Jun 28, 2019, 8:13 PM IST

ಹಾಸನ: ಹೊಡೆದಾಡುವ ರಾಜಕಾರಣ ಮಾಡಿದ್ದಕ್ಕೆ ನಿಮ್ಮ ಕ್ಷೇತ್ರದಲ್ಲಿ ನಿಮಗೆ ಸೋಲುಂಟಾಯಿತು ಎಂದು ಸಿ.ಟಿ.ರವಿ, ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

ನಗರದಲ್ಲಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಟಿ.ರವಿ, ಕೋಮುವಾದಿ ಪಕ್ಷ ಅಂತಾ ಬಿಜೆಪಿಯನ್ನು ಜನರೆದುರು ಜರಿಯುತ್ತಿದ್ದಾರೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಯಾರು ಎಂಬುದನ್ನು ಜನರೇ ತೋರಿಸಿಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆಯಲ್ಲಿ ಸಿಂಗಲ್ ಡಿಜಿಟ್ ಕೂಡ ಪಾಸ್ ಆಗಲ್ಲ ಎಂದಿದ್ದವರು ಸಿಂಗಲ್ ಡಿಜಿಟ್​ಗೆ ಬಂದರು. ಮೈತ್ರಿ ಪಕ್ಷದ ವರಿಷ್ಠರು ಈಗ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಾರಿಗೆ ಕೊಡಬೇಕು ಎಂಬ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ನನ್ನ ವಿರೋಧವಿಲ್ಲ. ಯಾವತ್ತೂ ಕೂಡ ಮೋದಿಯವರು ಗ್ರಾಮ ವಾಸ್ತವ್ಯದ ನಾಟಕ ಮಾಡಿಲ್ಲ. ಯಾಕಂದರೆ ಅವರು ಕೊಡುವ ಎಲ್ಲಾ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ಪಕ್ಷಾತೀತವಾಗಿ ತಲುಪುತ್ತಿವೆ. ಇದು ನಮ್ಮ ಪಕ್ಷಕ್ಕೂ ಮತ್ತು ಇತರೆ ಪಕ್ಷಕ್ಕೂ ಇರುವ ವ್ಯತ್ಯಾಸ. ಇನ್ನು ಪ್ರತಿ ಬಾರಿ ಕೂಡ ಕಣ್ಣೀರಿನ ಮೂಲಕ ಮತದಾರರನ್ನು ಒಲಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಗಳಲ್ಲಿ ಹೊಳೆನರಸಿಪುರ ಕೂಡ ಬಿಜೆಪಿ ಪಾಲಾಗುವುದರಲ್ಲಿ ಯಾವುದೇ ಅಚ್ಚರಿಯಿಲ್ಲ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯಗೆ ಸಿ.ಟಿ.ರವಿ ಟಾಂಗ್

ಐಎಂಎ ಕಂಪನಿಯವರ ಜೊತೆ ಮೈತ್ರಿ ಪಕ್ಷದ ಕೆಲವು ಮುಖಂಡರು ಬಿರಿಯಾನಿ ತಿಂದು ಮುಸ್ಲಿಂ ಜನಾಂಗದ ಬಡ ಕುಟುಂಬದವರಿಗೆ ದೋಖಾ ಮಾಡಿದ್ದಾರೆ. ಈಗ ಬಿಜೆಪಿ ಮೇಲೆ ಗೂಬೆ ಕೂರಿಸೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹಿಂದೆ ಬಿಜೆಪಿ ಪಕ್ಷವನ್ನು ಹೀಯಾಳಿಸುತ್ತಿದ್ದರು. ಆದರೆ ನಾವು ಪಕ್ಷದ ಸಿದ್ಧಾಂತವನ್ನು ಬದಲಾಯಿಸದೇ ವಿಚಾರಗಳ ಮೇಲೆ ಕೆಲಸ ಮಾಡುತ್ತಾ ಬಂದ ಪರಿಣಾಮ ನಮ್ಮ ಪಕ್ಷ ಮುಂಚೂಣಿಯಲ್ಲಿ ಬರಲು ಸಾಧ್ಯವಾಯಿತು. ಹಿಂದೆ ನಮ್ಮ ಪಕ್ಷದ ಮೇಲೆ ಎಷ್ಟು ದೌರ್ಜನ್ಯಗಳು ಆದವು ಎಂಬುದನ್ನು ನಾವಿನ್ನೂ ಮರೆತಿಲ್ಲ. ಆದರೆ ಅವೆಲ್ಲವನ್ನ ಪಕ್ಷ ಸಂಘಟನೆಗೆ ಒಂದಾಗಿ ಇವತ್ತು ರಾಜ್ಯ ಅಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲಿ ಕೂಡ ಬಿಜೆಪಿ ಪಕ್ಷ ಏನೆಂಬುದನ್ನು ತೋರಿಸಿಕೊಟ್ಟಿದ್ದೇವೆ. ಆದರೆ ಇದಕ್ಕೆ ನಾವು ಬೀಗಬಾರದು. ಬದಲಿಗೆ ಪಕ್ಷ ಸಂಘಟನೆಗೆ ಮತ್ತಷ್ಟು ಕೆಲಸ ಮಾಡಬೇಕು ಎಂದು ಸಿ.ಟಿ.ರವಿ ಕಿವಿಮಾತು ಹೇಳಿದರು.

ಹಾಸನ: ಹೊಡೆದಾಡುವ ರಾಜಕಾರಣ ಮಾಡಿದ್ದಕ್ಕೆ ನಿಮ್ಮ ಕ್ಷೇತ್ರದಲ್ಲಿ ನಿಮಗೆ ಸೋಲುಂಟಾಯಿತು ಎಂದು ಸಿ.ಟಿ.ರವಿ, ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

ನಗರದಲ್ಲಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಟಿ.ರವಿ, ಕೋಮುವಾದಿ ಪಕ್ಷ ಅಂತಾ ಬಿಜೆಪಿಯನ್ನು ಜನರೆದುರು ಜರಿಯುತ್ತಿದ್ದಾರೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಯಾರು ಎಂಬುದನ್ನು ಜನರೇ ತೋರಿಸಿಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆಯಲ್ಲಿ ಸಿಂಗಲ್ ಡಿಜಿಟ್ ಕೂಡ ಪಾಸ್ ಆಗಲ್ಲ ಎಂದಿದ್ದವರು ಸಿಂಗಲ್ ಡಿಜಿಟ್​ಗೆ ಬಂದರು. ಮೈತ್ರಿ ಪಕ್ಷದ ವರಿಷ್ಠರು ಈಗ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಾರಿಗೆ ಕೊಡಬೇಕು ಎಂಬ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ನನ್ನ ವಿರೋಧವಿಲ್ಲ. ಯಾವತ್ತೂ ಕೂಡ ಮೋದಿಯವರು ಗ್ರಾಮ ವಾಸ್ತವ್ಯದ ನಾಟಕ ಮಾಡಿಲ್ಲ. ಯಾಕಂದರೆ ಅವರು ಕೊಡುವ ಎಲ್ಲಾ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ಪಕ್ಷಾತೀತವಾಗಿ ತಲುಪುತ್ತಿವೆ. ಇದು ನಮ್ಮ ಪಕ್ಷಕ್ಕೂ ಮತ್ತು ಇತರೆ ಪಕ್ಷಕ್ಕೂ ಇರುವ ವ್ಯತ್ಯಾಸ. ಇನ್ನು ಪ್ರತಿ ಬಾರಿ ಕೂಡ ಕಣ್ಣೀರಿನ ಮೂಲಕ ಮತದಾರರನ್ನು ಒಲಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಗಳಲ್ಲಿ ಹೊಳೆನರಸಿಪುರ ಕೂಡ ಬಿಜೆಪಿ ಪಾಲಾಗುವುದರಲ್ಲಿ ಯಾವುದೇ ಅಚ್ಚರಿಯಿಲ್ಲ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯಗೆ ಸಿ.ಟಿ.ರವಿ ಟಾಂಗ್

ಐಎಂಎ ಕಂಪನಿಯವರ ಜೊತೆ ಮೈತ್ರಿ ಪಕ್ಷದ ಕೆಲವು ಮುಖಂಡರು ಬಿರಿಯಾನಿ ತಿಂದು ಮುಸ್ಲಿಂ ಜನಾಂಗದ ಬಡ ಕುಟುಂಬದವರಿಗೆ ದೋಖಾ ಮಾಡಿದ್ದಾರೆ. ಈಗ ಬಿಜೆಪಿ ಮೇಲೆ ಗೂಬೆ ಕೂರಿಸೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹಿಂದೆ ಬಿಜೆಪಿ ಪಕ್ಷವನ್ನು ಹೀಯಾಳಿಸುತ್ತಿದ್ದರು. ಆದರೆ ನಾವು ಪಕ್ಷದ ಸಿದ್ಧಾಂತವನ್ನು ಬದಲಾಯಿಸದೇ ವಿಚಾರಗಳ ಮೇಲೆ ಕೆಲಸ ಮಾಡುತ್ತಾ ಬಂದ ಪರಿಣಾಮ ನಮ್ಮ ಪಕ್ಷ ಮುಂಚೂಣಿಯಲ್ಲಿ ಬರಲು ಸಾಧ್ಯವಾಯಿತು. ಹಿಂದೆ ನಮ್ಮ ಪಕ್ಷದ ಮೇಲೆ ಎಷ್ಟು ದೌರ್ಜನ್ಯಗಳು ಆದವು ಎಂಬುದನ್ನು ನಾವಿನ್ನೂ ಮರೆತಿಲ್ಲ. ಆದರೆ ಅವೆಲ್ಲವನ್ನ ಪಕ್ಷ ಸಂಘಟನೆಗೆ ಒಂದಾಗಿ ಇವತ್ತು ರಾಜ್ಯ ಅಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲಿ ಕೂಡ ಬಿಜೆಪಿ ಪಕ್ಷ ಏನೆಂಬುದನ್ನು ತೋರಿಸಿಕೊಟ್ಟಿದ್ದೇವೆ. ಆದರೆ ಇದಕ್ಕೆ ನಾವು ಬೀಗಬಾರದು. ಬದಲಿಗೆ ಪಕ್ಷ ಸಂಘಟನೆಗೆ ಮತ್ತಷ್ಟು ಕೆಲಸ ಮಾಡಬೇಕು ಎಂದು ಸಿ.ಟಿ.ರವಿ ಕಿವಿಮಾತು ಹೇಳಿದರು.

Intro:ಹಾಸನ: ಹೊಡೆದಾಡುವ ರಾಜಕಾರಣ ಮಾಡಿದ್ದಕ್ಕೆ ನಿಮ್ಮ ಕ್ಷೇತ್ರದಲ್ಲಿ ನಿಮಗೆ ಸೋಲುಂಟಾಯಿತು ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೀಟಿ ರವಿ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಹಾಸನದಲ್ಲಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ಕೋಮುವಾದಿ ಪಕ್ಷ ಅಂತ ಬಿಜೆಪಿಯನ್ನು ಜನರು ಎದುರು ಜರಿಯುತ್ತಿದ್ದಾರೆ ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಯಾರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದ್ರು.

ಇನ್ನು ಇವಿಎಂ ಹ್ಯಾಕ್ ಮಾಡಿ ಬಿಜೆಪಿಯವರು ಪ್ರತಿಬಾರಿ ಗೆಲ್ತಾರೆ ಅನ್ನು ಆರೋಪಕ್ಕೆ ತಿರುಗೇಟು ನೀಡಿದ ಸೀಟಿ ರವಿ ಬಹುಶಃ ಅವರಿಗೆ ಇಂಟರ್ನೆಟ್ ಬಗ್ಗೆ ಗೊತ್ತಿಲ್ಲ ಅನ್ಸುತ್ತೆ ಇವಿಎಂ ಗೆ ಇಂಟರ್ನೆಟ್ ಸಂಪರ್ಕ ಇರುವುದಿಲ್ಲ. ಇದನ್ನು ತಿಳಿಯದೆ ಸುಮ್ಮನೆ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಅಂತ ಸಿದ್ದರಾಮಯ್ಯನವರಿಗೆ ಮತ್ತೊಮ್ಮೆ ಕುಟುಕಿದ್ರು.

ಇನ್ನೂ ಲೋಕಸಭಾ ಚುನಾವಣೆಯಲ್ಲಿ ಸಿಂಗಲ್ ಡಿಜಿಟ್ ಕೂಡ ಪಾಸ್ ಆಗಲ್ಲ ಎಂದಿದ್ದವರು ಸಿಂಗಲ್ ಡಿಜಿಟ್ ಗೆ ಬಂದರು. ಅಂತ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣಗೂ ಟಾಂಗ್ ಕೊಟ್ಟ ಸಿಟಿ ರವಿ, ಮೈತ್ರಿ ಪಕ್ಷದ ವರಿಷ್ಠರು ಈಗ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಾರಿಗೆ ಕೊಡಬೇಕು ಎಂಬ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವ ಮೂಲಕ ಮೈತ್ರಿ ಸರ್ಕಾರದ ಎರಡು ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯ್ದರು.

ಏನೋ ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ನನ್ನ ವಿರೋಧವಿಲ್ಲ ಆದರೆ ಮೂರುತಲೆಮಾರು ಆದರೂ ಕೂಡ ಗ್ರಾಮಗಳ ಸಮಸ್ಯೆ ಅರ್ಥವಾಗಿಲ್ವಲ್ಲಾ ಎಂಬ ಬೇಸರ ಅಷ್ಟೇ ನನಗೆ. ಯಾವತ್ತೂ ಕೂಡ ಮೋದಿಯವರು ಗ್ರಾಮವಾಸ್ತವ್ಯದ ನಾಟಕ ಮಾಡಿಲ್ಲ. ಯಾಕಂದರೆ ಅವರು ಕೊಡುವ ಎಲ್ಲಾ ಯೋಜನೆಗಳು ಕೂಡ ಗ್ರಾಮೀಣ ಭಾಗದ ಜನರಿಗೆ ಪಕ್ಷಾತೀತವಾಗಿ ತಲುಪುತ್ತಿದೆ. ಇದು ನಮ್ಮ ಪಕ್ಷಕ್ಕೂ ಮತ್ತು ಇತರರ ಪಕ್ಷಕ್ಕೂ ಇರುವ ವ್ಯತ್ಯಾಸ.

ಇನ್ನು ಪ್ರತಿ ಬಾರಿ ಕೂಡ ಕಣ್ಣೀರಿನ ಮೂಲಕ ಮತದಾರರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಮುಂದಿನ ಚುನಾವಣೆಗಳಲ್ಲಿ ಹೊಳೆನರಸೀಪುರ ಕೂಡ ಬಿಜೆಪಿ ಪಾಲಾಗುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಹಾಗಾಗಿ ಪ್ರತಿಯೊಬ್ಬರು ಕೂಡ ಪಕ್ಷದ ಸಂಘಟನೆಯಲ್ಲಿ ತೊಡಗಿದರೆ ಹಾಸನದಲ್ಲಿ ಹೇಳು ಕ್ಷೇತ್ರವನ್ನು ಬಿಜೆಪಿ ಗೆಲ್ಲಬಹುದು ಅಂತ ಕಾರ್ಯಕರ್ತರಿಗೆ ಕರೆಕೊಟ್ಟರು.

ಐಎಂಎ ಕಂಪನಿಯವರ ಜೊತೆ ಮೈತ್ರಿ ಪಕ್ಷದ ಕೆಲವು ಮುಖಂಡರು ಬಿರಿಯಾನಿ ತಿಂದು ಮುಸ್ಲಿಂ ಜನಾಂಗದ ಬಡ ಕುಟುಂಬದವರಿಗೆ ಧೋಖಾ ಮಾಡಿ ಬಿಜೆಪಿ ಮೇಲೆ ಗೂಬೆ ಕೂರಿಸೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದರು.

ಹಿಂದೆ ಬಿಜೆಪಿ ಪಕ್ಷವನ್ನು ಹಿಯ್ಯಾಳಿಸುತ್ತಿದ್ದರು. ಆದರೆ ನಾವು ಪಕ್ಷದ ಸಿದ್ಧಾಂತವನ್ನು ಬದಲಾಯಿಸದೇ ವಿಚಾರಗಳ ಮೇಲೆ ಕೆಲಸ ಮಾಡುತ್ತಾ ಬಂದ ಪರಿಣಾಮ ನಮ್ಮ ಪಕ್ಷ ಮುಂಚೂಣಿಯಲ್ಲಿ ಬರಲು ಸಾಧ್ಯವಾಯಿತು. ಹಿಂದೆ ನಮ್ಮ ಪಕ್ಷದ ಮೇಲೆ ಎಷ್ಟು ದೌರ್ಜನ್ಯಗಳು ಆದವು ಎಂಬುದನ್ನು ನಾವಿನ್ನೂ ಮರೆತಿಲ್ಲ. ಆದರೆ ಅವೆಲ್ಲವನ್ನ ಪಕ್ಷದ ಸಂಘಟನೆಗೆ ಒಂದಾಗಿ ಇವತ್ತು ರಾಜ್ಯ ಅಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲಿ ಕೂಡ ಬಿಜೆಪಿ ಪಕ್ಷ ಏನೆಂಬುದನ್ನು ತೋರಿಸಿಕೊಟ್ಟಿದ್ದೇವೆ. ಆದರೆ ಇದಕ್ಕೆ ನಾವು ಬೀಗ ಬಾರದು ಬದಲಿಗೆ ಪಕ್ಷ ಸಂಘಟನೆಗೆ ಮತ್ತಷ್ಟು ಕೆಲಸ ಮಾಡಬೇಕು ಅಂತ ಬಿಜೆಪಿಯ ಪ್ರಮುಖರಿಗೆ ಕಿವಿಮಾತು ಹೇಳಿದರು.

ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಉತ್ತಮ ಎನ್ನುತ್ತಿದ್ದವರು ಈಗ ಮೋದಿ ಅವರ ಸರಕಾರ ಅದಕ್ಕಿಂತ ಬೆಸ್ಟ್ ಅಂತ ಹೇಳುತ್ತಿರುವುದು ನಮ್ಮ ಪಕ್ಷ ರೈತರ ಪರ, ಜನರ ಪರ, ದೇಶದ ಪರ ಕೆಲಸ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ ಅಂತ ಮೋದಿ ಅವರನ್ನು ಕೊಂಡಾಡಿದರು.

ಬೈಟ್: ಸಿ.ಟಿ. ರವಿ, ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ.


Body:0


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.