ETV Bharat / state

ಡ್ರಗ್ಸ್ ಮಾಫಿಯಾ ಹಿಂದೆ ಯಾರೇ ಇದ್ದರೂ ಶಿಕ್ಷೆ ಖಚಿತ: ವಿ.ಸೋಮಣ್ಣ​

author img

By

Published : Sep 11, 2020, 2:10 PM IST

Updated : Sep 11, 2020, 2:19 PM IST

ಡ್ರಗ್ಸ್ ವಿಚಾರದಲ್ಲಿ ಕಾಂಗ್ರೆಸ್​​ನವರ ಹೇಳಿಕೆ ಅವರ ಪಕ್ಷದಲ್ಲಿನ ತೊಳಲಾಟ ಹಾಗೂ ವಿಫಲತೆ ತೋರಿಸುತ್ತಿದೆ. ನಾಯಕರ ನಡುವೆ ಹಾಗೂ ಪಕ್ಷದಲ್ಲಿ ಸಾಮ್ಯತೆ ಕೊರತೆ ಇದೆ ಅದನ್ನು ಮರೆಮಾಚಲು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಸಚಿವ ಸೋಮಣ್ಣ ಕಿಡಿಕಾರಿದ್ದಾರೆ.

V somanna talks about sandalwood drug mafia
ಡ್ರಗ್ಸ್​ ಮಾಫಿಯಾ ಬಗ್ಗೆ ಸೋಮಣ್ಣ ಹೇಳಿಕೆ

ಹಾಸನ: ರಾಜ್ಯದಲ್ಲಿನ ಡ್ರಗ್ಸ್​ ಮಾಫಿಯಾ ದಂಧೆ ಇಂದು‌ ನೆನ್ನೆಯದಲ್ಲ. ಅವರು ಮಾಫಿಯಾದವರು ಎಷ್ಟೇ ದೊಡ್ಡವರಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಖಡಕ್ ಎಚ್ಚರಿಕೆ ನೀಡಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳ ಅವಧಿಯಲ್ಲಿನ ಡ್ರಗ್ಸ್ ಮಾಫಿಯಾ ಬಗ್ಗೆ ಚರ್ಚೆ ಮಾಡಿದ್ದೇವೆ. ಇದು ಲಾಜಿಕಲ್ ಎಂಡ್‌ಗೆ ಹೋಗಲಿದೆ. ಇದಕ್ಕೆ ತಾತ್ವಿಕ ಅಂತ್ಯ ಕಾಣಿಸಲು ಸಿಎಂ, ಗೃಹ ಇಲಾಖೆ, ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಲಿದೆ ಎಂದರು.

ವಿ.ಸೋಮಣ್ಣ, ವಸತಿ ಸಚಿವ

ಕೊರೊನಾ ಸಮಸ್ಯೆ ನಿರ್ವಹಿಸಲಾಗದೆ ಸರ್ಕಾರ ಇಬ್ಬರನ್ನ ಬಂಧಿಸಿ ವಿಷಯಾಂತರಿಸಿ ಜನರ ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್​ನಲ್ಲೇ ನಾಲ್ಕೈದು ಗುಂಪುಗಳಿವೆ. ಅವರಿಗೆ ಮಾಡೋಕೆ ಈಗ ಕೆಲಸವಿಲ್ಲ. ಕಾಂಗ್ರೆಸ್​​​​ನವರು ತೊಳಲಾಟದಲ್ಲಿದ್ದಾರೆ ಎಂದು ಟೀಕಿಸಿದರು.

ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬ ಪರಿಸ್ಥಿತಿಯಲ್ಲಿ ಕಾಂಗ್ರೆಸ್​​​ನವರಿದ್ದಾರೆ. ಅವರು ದಿಗ್ಭ್ರಾಂತರಾಗಿದ್ದಾರೆ. ಏನು ಕೆಲಸ ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಯಾರಾದರೂ ಜನ್ರ ದಿಕ್ಕು ತಪ್ಪಿಸುವಂತಹ ಕೆಲಸ ಮಾಡುತ್ತಿದ್ದರೆ ಅದು ಕಾಂಗ್ರೆಸ್​​​ನವರೇ ವಿನಾ ನಾವಲ್ಲ. ಡ್ರಗ್ಸ್ ವಿಚಾರದಲ್ಲಿ ಯಾರೂ ಯಾರನ್ನೂ ಕೂಡ ಸೀಲ್ಡ್ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಡ್ರಗ್ಸ್​ ಮಾಫಿಯಾದಲ್ಲಿ ಎಷ್ಟೇ ಪ್ರಭಾವಿಗಳು ಇದ್ದರೂ ಶಿಕ್ಷೆ ಖಚಿತ. ಎಷ್ಟು ದೊಡ್ಡವರಾದರು ಅವರನ್ನು‌ ಬಿಡುವ ಪ್ರಶ್ನೆಯೇ ಇಲ್ಲ. ಡ್ರಗ್ಸ್ ವಿಚಾರದಲ್ಲಿ ಕಾಂಗ್ರೆಸ್​​​ನವರ ಹೇಳಿಕೆ ಅವರ ಪಕ್ಷದಲ್ಲಿನ ತೊಳಲಾಟ ಹಾಗೂ ವಿಫಲತೆ ತೋರಿಸುತ್ತಿದೆ. ನಾಯಕರ ನಡುವೆ ಹಾಗೂ ಪಕ್ಷದಲ್ಲಿ ಸಾಮ್ಯತೆ ಕೊರತೆ ಇದೆ. ಅದನ್ನು ಮರೆಮಾಚಲು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಸೋಮಣ್ಣ ಕಿಡಿಕಾರಿದರು.

ಹಾಸನ: ರಾಜ್ಯದಲ್ಲಿನ ಡ್ರಗ್ಸ್​ ಮಾಫಿಯಾ ದಂಧೆ ಇಂದು‌ ನೆನ್ನೆಯದಲ್ಲ. ಅವರು ಮಾಫಿಯಾದವರು ಎಷ್ಟೇ ದೊಡ್ಡವರಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಖಡಕ್ ಎಚ್ಚರಿಕೆ ನೀಡಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳ ಅವಧಿಯಲ್ಲಿನ ಡ್ರಗ್ಸ್ ಮಾಫಿಯಾ ಬಗ್ಗೆ ಚರ್ಚೆ ಮಾಡಿದ್ದೇವೆ. ಇದು ಲಾಜಿಕಲ್ ಎಂಡ್‌ಗೆ ಹೋಗಲಿದೆ. ಇದಕ್ಕೆ ತಾತ್ವಿಕ ಅಂತ್ಯ ಕಾಣಿಸಲು ಸಿಎಂ, ಗೃಹ ಇಲಾಖೆ, ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಲಿದೆ ಎಂದರು.

ವಿ.ಸೋಮಣ್ಣ, ವಸತಿ ಸಚಿವ

ಕೊರೊನಾ ಸಮಸ್ಯೆ ನಿರ್ವಹಿಸಲಾಗದೆ ಸರ್ಕಾರ ಇಬ್ಬರನ್ನ ಬಂಧಿಸಿ ವಿಷಯಾಂತರಿಸಿ ಜನರ ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್​ನಲ್ಲೇ ನಾಲ್ಕೈದು ಗುಂಪುಗಳಿವೆ. ಅವರಿಗೆ ಮಾಡೋಕೆ ಈಗ ಕೆಲಸವಿಲ್ಲ. ಕಾಂಗ್ರೆಸ್​​​​ನವರು ತೊಳಲಾಟದಲ್ಲಿದ್ದಾರೆ ಎಂದು ಟೀಕಿಸಿದರು.

ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬ ಪರಿಸ್ಥಿತಿಯಲ್ಲಿ ಕಾಂಗ್ರೆಸ್​​​ನವರಿದ್ದಾರೆ. ಅವರು ದಿಗ್ಭ್ರಾಂತರಾಗಿದ್ದಾರೆ. ಏನು ಕೆಲಸ ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಯಾರಾದರೂ ಜನ್ರ ದಿಕ್ಕು ತಪ್ಪಿಸುವಂತಹ ಕೆಲಸ ಮಾಡುತ್ತಿದ್ದರೆ ಅದು ಕಾಂಗ್ರೆಸ್​​​ನವರೇ ವಿನಾ ನಾವಲ್ಲ. ಡ್ರಗ್ಸ್ ವಿಚಾರದಲ್ಲಿ ಯಾರೂ ಯಾರನ್ನೂ ಕೂಡ ಸೀಲ್ಡ್ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಡ್ರಗ್ಸ್​ ಮಾಫಿಯಾದಲ್ಲಿ ಎಷ್ಟೇ ಪ್ರಭಾವಿಗಳು ಇದ್ದರೂ ಶಿಕ್ಷೆ ಖಚಿತ. ಎಷ್ಟು ದೊಡ್ಡವರಾದರು ಅವರನ್ನು‌ ಬಿಡುವ ಪ್ರಶ್ನೆಯೇ ಇಲ್ಲ. ಡ್ರಗ್ಸ್ ವಿಚಾರದಲ್ಲಿ ಕಾಂಗ್ರೆಸ್​​​ನವರ ಹೇಳಿಕೆ ಅವರ ಪಕ್ಷದಲ್ಲಿನ ತೊಳಲಾಟ ಹಾಗೂ ವಿಫಲತೆ ತೋರಿಸುತ್ತಿದೆ. ನಾಯಕರ ನಡುವೆ ಹಾಗೂ ಪಕ್ಷದಲ್ಲಿ ಸಾಮ್ಯತೆ ಕೊರತೆ ಇದೆ. ಅದನ್ನು ಮರೆಮಾಚಲು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಸೋಮಣ್ಣ ಕಿಡಿಕಾರಿದರು.

Last Updated : Sep 11, 2020, 2:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.