ETV Bharat / state

ರೈಲ್ವೆ ಇಲಾಖೆ ಸಿಬ್ಬಂದಿಗೆ ಗನ್​​ ತೋರಿಸಿ ಬೆದರಿಕೆ: ನಕ್ಸಲರೆಂಬ ಶಂಕೆ

ಸುಬ್ರಹ್ಮಣ್ಯ ರೈಲು ಮಾರ್ಗದ ಕಡಗರವಳ್ಳಿ ಬಳಿ ರೈಲ್ವೆ ಇಲಾಖೆ ಸಿಬ್ಬಂದಿಗೆ ಯಾರೋ ಆಗಂತುಕರು ಗನ್​​ ತೋರಿಸಿ ಬೆದರಿಸಿದ ಘಟನೆ ನಡೆದಿದೆ.

author img

By

Published : Jul 17, 2019, 1:38 PM IST

Updated : Jul 17, 2019, 5:19 PM IST

ಸಾಂದರ್ಭಿಕ ಚಿತ್ರ

ಹಾಸನ : ಅಪರಿಚಿತರು ರೈಲ್ವೆ ಇಲಾಖೆ ಸಿಬ್ಬಂದಿಗೆ ಗನ್​​ ತೋರಿಸಿ ಬೆದರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಸಕಲೇಶಪುರ ಸುಬ್ರಹ್ಮಣ್ಯ ರೈಲು ಮಾರ್ಗದ ಕಡಗರವಳ್ಳಿ ಬಳಿ ಜು.16ರ ರಾತ್ರಿ ಇಂಥದ್ದೊಂದು ಘಟನೆ ನಡೆದಿದ್ದು, ರೈಲ್ವೆ ಹಳಿ ರಿಪೇರಿ ಮಾಡುತ್ತಿದ್ದ ಸಿಬ್ಬಂದಿಗೆ ಇಬ್ಬರು ಅಪರಿಚಿತರು ಬಂದೂಕು ತೋರಿಸಿ ಬೆದರಿಸಿದ್ದಾರೆ.

ರೈಲ್ವೆ ಇಲಾಖೆ ಸಿಬ್ಬಂದಿಗೆ ಗನ್​​ ತೋರಿಸಿ ಬೆದರಿಕೆ

ಆಗಂತುಕರ ಬಳಿ ಪಿಸ್ತೂಲು, ಚೂರಿ ಹಾಗೂ ಇತರ ಆಯುಧಗಳು ಇದ್ದು, ರಾತ್ರಿ 7 ಗಂಟೆ ಸುಮಾರಿಗೆ ಕಾಲುದಾರಿಯಿಂದ ರೈಲ್ವೆ ಟ್ರ್ಯಾಕ್​ನತ್ತ ಬಂದಿದ್ದರು. ರೈಲ್ವೆ ಸಿಬ್ಬಂದಿ ನೀವು ಯಾರು? ರಾತ್ರಿ ಇಲ್ಲೇನು ಕೆಲಸ ಎಂದು ಪ್ರಶ್ನಿಸಿದ್ದಕ್ಕೆ ಹಿಂದಿಯಲ್ಲಿ ಉತ್ತರ ನೀಡಿದ್ದಾರೆ.

ಭಾಷೆ ಅರ್ಥವಾಗದ್ದರಿಂದ ಸಿಬ್ಬಂದಿ ಕೊಂಚ ಏರು ಧ್ವನಿಯಲ್ಲಿ ಮಾತನಾಡಿದಾಗ, ತಕ್ಷಣ ತಮ್ಮ ಬ್ಯಾಗಿನಿಂದ ಗನ್​​ ಹಾಗೂ ಚೂರಿ ತೆಗೆದು ಕೊಲೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

ಆಗಂತುಕರು ರೈಲ್ವೆ ಹಳಿಯಲ್ಲಿಯೇ ಕುಳಿತು ಮದ್ಯ ಸೇವಿಸಿ, ಊಟ ಮಾಡಿ ಕಾಡಿನತ್ತ ತೆರಳಿದರು ಎಂದು ಸಿಬ್ಬಂದಿ, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಡಗರವಳ್ಳಿಗೆ ಭೇಟಿ ನೀಡಿದ ರೈಲ್ವೆ ಪೊಲೀಸರು, ಡಿವೈಎಸ್​ಪಿ ಶಶಿಧರ್, ಗ್ರಾಮಾಂತರ ಠಾಣೆ ಪಿಎಸ್​ಐ ಬ್ಯಾಟರಾಯನಗೌಡ ತಮ್ಮ ಸಿಬ್ಬಂದಿಯೊಂದಿಗೆ 5ಕಿ.ಮೀ. ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇವರ ಚಲನವಲನ ನೋಡಿದ ಸ್ಥಳೀಯರು, ಇವರು ನಕ್ಸಲರು ಆಗಿರಬಹುದು ಎಂದು ಶಂಕಿಸಿದ್ದಾರೆ.

ಹಾಸನ : ಅಪರಿಚಿತರು ರೈಲ್ವೆ ಇಲಾಖೆ ಸಿಬ್ಬಂದಿಗೆ ಗನ್​​ ತೋರಿಸಿ ಬೆದರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಸಕಲೇಶಪುರ ಸುಬ್ರಹ್ಮಣ್ಯ ರೈಲು ಮಾರ್ಗದ ಕಡಗರವಳ್ಳಿ ಬಳಿ ಜು.16ರ ರಾತ್ರಿ ಇಂಥದ್ದೊಂದು ಘಟನೆ ನಡೆದಿದ್ದು, ರೈಲ್ವೆ ಹಳಿ ರಿಪೇರಿ ಮಾಡುತ್ತಿದ್ದ ಸಿಬ್ಬಂದಿಗೆ ಇಬ್ಬರು ಅಪರಿಚಿತರು ಬಂದೂಕು ತೋರಿಸಿ ಬೆದರಿಸಿದ್ದಾರೆ.

ರೈಲ್ವೆ ಇಲಾಖೆ ಸಿಬ್ಬಂದಿಗೆ ಗನ್​​ ತೋರಿಸಿ ಬೆದರಿಕೆ

ಆಗಂತುಕರ ಬಳಿ ಪಿಸ್ತೂಲು, ಚೂರಿ ಹಾಗೂ ಇತರ ಆಯುಧಗಳು ಇದ್ದು, ರಾತ್ರಿ 7 ಗಂಟೆ ಸುಮಾರಿಗೆ ಕಾಲುದಾರಿಯಿಂದ ರೈಲ್ವೆ ಟ್ರ್ಯಾಕ್​ನತ್ತ ಬಂದಿದ್ದರು. ರೈಲ್ವೆ ಸಿಬ್ಬಂದಿ ನೀವು ಯಾರು? ರಾತ್ರಿ ಇಲ್ಲೇನು ಕೆಲಸ ಎಂದು ಪ್ರಶ್ನಿಸಿದ್ದಕ್ಕೆ ಹಿಂದಿಯಲ್ಲಿ ಉತ್ತರ ನೀಡಿದ್ದಾರೆ.

ಭಾಷೆ ಅರ್ಥವಾಗದ್ದರಿಂದ ಸಿಬ್ಬಂದಿ ಕೊಂಚ ಏರು ಧ್ವನಿಯಲ್ಲಿ ಮಾತನಾಡಿದಾಗ, ತಕ್ಷಣ ತಮ್ಮ ಬ್ಯಾಗಿನಿಂದ ಗನ್​​ ಹಾಗೂ ಚೂರಿ ತೆಗೆದು ಕೊಲೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

ಆಗಂತುಕರು ರೈಲ್ವೆ ಹಳಿಯಲ್ಲಿಯೇ ಕುಳಿತು ಮದ್ಯ ಸೇವಿಸಿ, ಊಟ ಮಾಡಿ ಕಾಡಿನತ್ತ ತೆರಳಿದರು ಎಂದು ಸಿಬ್ಬಂದಿ, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಡಗರವಳ್ಳಿಗೆ ಭೇಟಿ ನೀಡಿದ ರೈಲ್ವೆ ಪೊಲೀಸರು, ಡಿವೈಎಸ್​ಪಿ ಶಶಿಧರ್, ಗ್ರಾಮಾಂತರ ಠಾಣೆ ಪಿಎಸ್​ಐ ಬ್ಯಾಟರಾಯನಗೌಡ ತಮ್ಮ ಸಿಬ್ಬಂದಿಯೊಂದಿಗೆ 5ಕಿ.ಮೀ. ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇವರ ಚಲನವಲನ ನೋಡಿದ ಸ್ಥಳೀಯರು, ಇವರು ನಕ್ಸಲರು ಆಗಿರಬಹುದು ಎಂದು ಶಂಕಿಸಿದ್ದಾರೆ.

Intro:
ಹಾಸನ : ರೈಲ್ವೆ ಇಲಾಖೆ ಸಿಬ್ಬಂದಿಗಳಿಗೆ ಗನ್ ತೋರಿಸಿ ಬೆದರಿಸಿ ಪರಾರಿಯಾಗಿರೋ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದೆ.

ಸಕಲೇಶಪುರ–ಸುಬ್ರಹ್ಮಣ್ಯ ರೈಲು ಮಾರ್ಗದ ಕಡಗರವಳ್ಳಿ ಬಳಿ ಜು.16ರ ರಾತ್ರಿ ಇಂಥಹುದೂಂದು ಘಟನೆ ನಡೆದಿದ್ದು, ರೈಲ್ವೆ ಹಳಿ ರೀಪೇರಿ ಮಾಡುತ್ತಿದ್ದ ಸಿಬ್ಬಂದಿಗಳಿಗೆ ಇಬ್ಬರು ಅಪರಿಚಿತರು ಬಂದೂಕು ತೋರಿಸಿ ಬೆದರಿಸಿದ್ದಾರೆ. ಆಗಂತುಕರ ಬಳಿ ಪಿಸ್ತೂಲ್‌, ಚೂರಿ ಹಾಗೂ ಇತರ ಆಯುಧಗಳು ಇದ್ದು, ರಾತ್ರಿ 7 ಗಂಟೆ ಸುಮಾರಿಗೆ ಕಾಲುದಾರಿಯಿಂದ ರೈಲ್ವೆ ಟ್ರ್ಯಾಕ್‌ನತ್ತ ಅವರುಗಳನ್ನ ನೀವು ಯಾರು, ರಾತ್ರಿ ಇಲ್ಲೇನು ಕೆಲಸ ಎಂದು ರೈಲ್ವೆ ಸಿಬ್ಬಂದಿಗಳು ಪ್ರಶ್ನಿಸಿದ್ದು, ಅದಕ್ಕೆ ಅವರು ಹಿಂದಿಯಲ್ಲಿ ಉತ್ತರಿಸಿದ್ರಂತೆ. ಭಾಷೆ ಅರ್ಥವಾಗದ ಕಾರಣ ಸಿಬ್ಬಂದಿಗಳು ಕೊಂಚ ಏರುದನಿಯಲ್ಲಿ ಮಾತನಾಡಿದಾಗ, ತಕ್ಷಣ ತಮ್ಮ ಚೀಲದಿಂದ ಗನ್ ಹಾಗೂ ಚೂರಿ ತೆಗೆದು ಕೊಲೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಇಬ್ಬರು ರೈಲ್ವೆ ಹಳಿಯಲ್ಲಿಯೇ ಕುಳಿತು ಮದ್ಯ ಸೇವಿಸಿ, ಊಟ ಮಾಡಿ ಕಾಡಿನತ್ತ ತೆರಳಿದರು ಎಂದು ಸಿಬ್ಬಂದಿಗಳು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಘಟನೆ ನಡೆದ ಕಡಗರವಳ್ಳಿಗೆ ಭೇಟಿ ನೀಡಿದ ರೈಲ್ವೆ ಪೊಲೀಸರು, ಡಿವೈಎಸ್‌ಪಿ ಶಶಿಧರ್, ಗ್ರಾಮಾಂತರ ಠಾಣೆ ಪಿಎಸ್ಐ ಬ್ಯಾಟರಾಯನಗೌಡ ತಮ್ಮ ಸಿಬ್ಬಂದಿಗಳೊಂದಿಗೆ 5ಕಿ.ಮೀ. ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ್ರು ಯಾವುದೇ ಸುಳಿವು ಸಿಕ್ಕಿಲ್ಲ. ಇವರು ನಕ್ಸಲರು ಆಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಆದ್ರೆ ಜಿಲ್ಲೆಯಲ್ಲಿ ಕಳೆದ 6 ವರ್ಷಗಳಿಂದ ನಕ್ಸಲರ ಚಲನವಲನ ಇಲ್ಲ. ಅವರುಗಳು ಸಣ್ಣ ಪುಟ್ಟ ಆಯುಧ ಇಟ್ಟುಕೊಳ್ಳುವುದಿಲ್ಲ. ಹಾಗಾಗಿ ದರೋಡೆ ಕೋರರು ಇರಬಹುದಾ...ಅಥವಾ ಆಗಸ್ಟ್‌ನಲ್ಲಿ ಸಕಲೇಶಪುರ ಭಾಗದಲ್ಲಿ ಟ್ರೆಕಿಂಗ್‌ ಹೋಗುವುದು ಸಾಮಾನ್ಯ. ಹೀಗಾಗಿ ಅಂತಹ ವ್ಯಕ್ತಿಗಳು ಸುರಕ್ಷತೆಗಾಗಿ ನಕಲಿ ಪಿಸ್ತೂಲ್‌ ತೋರಿಸಿರಬಹುದಾ.? ಎಂಬೆಲ್ಲಾ ಅನುಮಾನಗಳು ಕಾಡುತ್ತಿವೆ. ಆದ್ರೆ ಈ ಎಲ್ಲಾ ಅನುಮಾನಗಳು ತನಿಖೆಯಿಂದಷ್ಟೆ ಬಯಲಾಗಬೇಕಿದೆ.


Body:0


Conclusion:0
Last Updated : Jul 17, 2019, 5:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.