ETV Bharat / state

ದೊಡ್ಡವರು ಸೂಚಿಸಿದ್ರೆ  ಈಗಲೂ ರಾಜೀನಾಮೆಗೆ ಬದ್ಧ ಎಂದ ಮೊಮ್ಮಗ

ಜೂ.17 ಅಥವಾ 18 ರಂದು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಅಷ್ಟರಲ್ಲಿ ದೇವೇಗೌಡರು ಯಾವ ತೀರ್ಮಾನವನ್ನು ತೆಗೆದುಕೊಂಡರೂ ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಾಲಿಸುತ್ತೇನೆ ಎಂದು ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಹೇಳಿದ್ದಾರೆ.

author img

By

Published : Jun 6, 2019, 9:19 PM IST

ನೂತನ ಸಂಸದ ಪ್ರಜ್ವಲ್ ರೇವಣ್ಣ

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಸನದಿಂದ ಸ್ಪರ್ಧಿಸಲು ಮುಂದಾದರೆ ನಾನು ಈಗಲೂ ರಾಜೀನಾಮೆ ನೀಡುವ ಮಾತಿಗೆ ಬದ್ಧ ಎಂದು ನೂತನ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

ನಗರದಲ್ಲಿ ನಡೆದ ಮಾವು ಮೇಳ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ನಾನು ಈಗಾಗಲೇ ದೊಡ್ಡವರು (ದೇವೇಗೌಡ), ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರ ಬಳಿ ಮಾತನಾಡಿದ್ದೇನೆ. ದೊಡ್ಡವರು ಎಲ್ಲ ಸೇರಿ ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಈಗಲೂ ಬದ್ಧನಾಗಿರುತ್ತೇನೆ ಎಂದು ಪುನರುಚ್ಛರಿಸಿದರು.

ಜೂ.17 ಅಥವಾ 18 ರಂದು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಲು ಪ್ರಧಾನಿ ಅವಕಾಶ ಮಾಡಿಕೊಟ್ಟಿದ್ದಾರೆ. ಅಷ್ಟರಲ್ಲಿ ದೇವೇಗೌಡರು ಯಾವ ತೀರ್ಮಾನ ತೆಗೆದುಕೊಂಡರೂ ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಾಲಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದರು.

ನೂತನ ಸಂಸದ ಪ್ರಜ್ವಲ್ ರೇವಣ್ಣ

ಬೇಜಾರು ಶಮನ :

ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಕೆಲ ವಿಚಾರಗಳಿಗೆ ಬೇಸರ ಮಾಡಿಕೊಂಡಿದ್ರು. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮನವೊಲಿಸಿದ್ದಾರೆ. ಬುಧವಾರ ನಡೆದ ಜೆಡಿಎಸ್ ಸಭೆಯಲ್ಲಿ ಅವರೂ ಭಾಗಿಯಾಗಿದ್ದರು. ಎಲ್ಲ ಶಾಸಕರೂ ಹಾಗೂ ಸಚಿವರು ವಿಶ್ವನಾಥ್‌ ಅವರ ಮನವೊಲಿಸಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟುತ್ತೇವೆ. ವಿಶ್ವನಾಥ್ ಅವರು ಎರಡು ಮೂರು ದಿನದಲ್ಲಿ ರಾಜೀನಾಮೆ ವಾಪಸ್ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ಸುಭದ್ರ:

ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ, ಸುಭದ್ರವಾಗಿರಲಿದೆ ಸಿಎಂ ಕುಮಾರಸ್ವಾಮಿ ಅವರು ಇನ್ನೂ ಉತ್ತಮ ಯೋಜನೆ ಕೊಡಲಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಬೀಳಲ್ಲ, ಇದು ಬಿಜೆಪಿಯ ಐದನೇ ಡೆಡ್ ಲೈನ್ ಆಗಿದೆ ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲ ಎಂದ ಅವರು, ರಮೇಶ್ ಜಾರಕಿಹೊಳಿ ಸರ್ಕಾರದ ವಿರುದ್ಧ ಅಸಮಾಧಾನ ಹಿನ್ನೆಲೆ ಮತ್ತು ಬಿಜೆಪಿ ಪಕ್ಷದವರು ಸರ್ಕಾರ ಅಸ್ಥಿರಗೊಳಿಸೋ ಪ್ರಯತ್ನ ಖಂಡನೀಯ. ಒಳ್ಳೆ ಕೆಲಸ ಮಾಡಲು ಬೆಂಬಲ ಕೊಡಬೇಕು. ಹೀಗೆಲ್ಲಾ ಮಾಡೋದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ವಿಚಾರವಾಗಿ ಮಾತನಾಡಿದ ಅವರು, ಇದು ಒಳ್ಳೇ ನಿರ್ಧಾರ ಎಂದು ಸ್ವಾಗತಿಸಿದರು. ಇದರಿಂದ ಗ್ರಾಮೀಣ ಸಮಸ್ಯೆಗಳ ಅರಿವಾಗುತ್ತದೆ. ಹಿಂದಿನಿಂದಲೂ ಗ್ರಾಮ ವಾಸ್ತವ್ಯ ಮಾಡಿಕೊಂಡು ಬಂದಿದ್ದಾರೆ. ಹೀಗೆ ಮಾಡುವುದರಿಂದ ಜನರ ಹೆಚ್ಚಿನ ಸಮಸ್ಯೆ ಗಮನಕ್ಕೆ ಬಂದು ಮತ್ತಷ್ಟು ಒಳ್ಳೇ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಸನದಿಂದ ಸ್ಪರ್ಧಿಸಲು ಮುಂದಾದರೆ ನಾನು ಈಗಲೂ ರಾಜೀನಾಮೆ ನೀಡುವ ಮಾತಿಗೆ ಬದ್ಧ ಎಂದು ನೂತನ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

ನಗರದಲ್ಲಿ ನಡೆದ ಮಾವು ಮೇಳ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ನಾನು ಈಗಾಗಲೇ ದೊಡ್ಡವರು (ದೇವೇಗೌಡ), ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರ ಬಳಿ ಮಾತನಾಡಿದ್ದೇನೆ. ದೊಡ್ಡವರು ಎಲ್ಲ ಸೇರಿ ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಈಗಲೂ ಬದ್ಧನಾಗಿರುತ್ತೇನೆ ಎಂದು ಪುನರುಚ್ಛರಿಸಿದರು.

ಜೂ.17 ಅಥವಾ 18 ರಂದು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಲು ಪ್ರಧಾನಿ ಅವಕಾಶ ಮಾಡಿಕೊಟ್ಟಿದ್ದಾರೆ. ಅಷ್ಟರಲ್ಲಿ ದೇವೇಗೌಡರು ಯಾವ ತೀರ್ಮಾನ ತೆಗೆದುಕೊಂಡರೂ ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಾಲಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದರು.

ನೂತನ ಸಂಸದ ಪ್ರಜ್ವಲ್ ರೇವಣ್ಣ

ಬೇಜಾರು ಶಮನ :

ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಕೆಲ ವಿಚಾರಗಳಿಗೆ ಬೇಸರ ಮಾಡಿಕೊಂಡಿದ್ರು. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮನವೊಲಿಸಿದ್ದಾರೆ. ಬುಧವಾರ ನಡೆದ ಜೆಡಿಎಸ್ ಸಭೆಯಲ್ಲಿ ಅವರೂ ಭಾಗಿಯಾಗಿದ್ದರು. ಎಲ್ಲ ಶಾಸಕರೂ ಹಾಗೂ ಸಚಿವರು ವಿಶ್ವನಾಥ್‌ ಅವರ ಮನವೊಲಿಸಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟುತ್ತೇವೆ. ವಿಶ್ವನಾಥ್ ಅವರು ಎರಡು ಮೂರು ದಿನದಲ್ಲಿ ರಾಜೀನಾಮೆ ವಾಪಸ್ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ಸುಭದ್ರ:

ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ, ಸುಭದ್ರವಾಗಿರಲಿದೆ ಸಿಎಂ ಕುಮಾರಸ್ವಾಮಿ ಅವರು ಇನ್ನೂ ಉತ್ತಮ ಯೋಜನೆ ಕೊಡಲಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಬೀಳಲ್ಲ, ಇದು ಬಿಜೆಪಿಯ ಐದನೇ ಡೆಡ್ ಲೈನ್ ಆಗಿದೆ ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲ ಎಂದ ಅವರು, ರಮೇಶ್ ಜಾರಕಿಹೊಳಿ ಸರ್ಕಾರದ ವಿರುದ್ಧ ಅಸಮಾಧಾನ ಹಿನ್ನೆಲೆ ಮತ್ತು ಬಿಜೆಪಿ ಪಕ್ಷದವರು ಸರ್ಕಾರ ಅಸ್ಥಿರಗೊಳಿಸೋ ಪ್ರಯತ್ನ ಖಂಡನೀಯ. ಒಳ್ಳೆ ಕೆಲಸ ಮಾಡಲು ಬೆಂಬಲ ಕೊಡಬೇಕು. ಹೀಗೆಲ್ಲಾ ಮಾಡೋದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ವಿಚಾರವಾಗಿ ಮಾತನಾಡಿದ ಅವರು, ಇದು ಒಳ್ಳೇ ನಿರ್ಧಾರ ಎಂದು ಸ್ವಾಗತಿಸಿದರು. ಇದರಿಂದ ಗ್ರಾಮೀಣ ಸಮಸ್ಯೆಗಳ ಅರಿವಾಗುತ್ತದೆ. ಹಿಂದಿನಿಂದಲೂ ಗ್ರಾಮ ವಾಸ್ತವ್ಯ ಮಾಡಿಕೊಂಡು ಬಂದಿದ್ದಾರೆ. ಹೀಗೆ ಮಾಡುವುದರಿಂದ ಜನರ ಹೆಚ್ಚಿನ ಸಮಸ್ಯೆ ಗಮನಕ್ಕೆ ಬಂದು ಮತ್ತಷ್ಟು ಒಳ್ಳೇ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.

Intro:ದೊಡ್ಡವರು ಸೂಚಿಸಿದ್ರೆ ರಾಜೀನಾಮೆ ತೀರ್ಮಾನಕ್ಕೆ ಈಗಲೂ ಬದ್ಧ :

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನದಿಂದ ಸ್ಪರ್ಧಿಸಲು ಮುಂದಾದರೆ ನಾನು ಈಗಲೂ ರಾಜೀನಾಮೆ ನೀಡುವ ಮಾತಿಗೆ ಬದ್ಧ ಎಂದು ನೂತನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ರು.

ನಗರದಲ್ಲಿ ನಡೆದ ಮಾವುಮೇಳ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವನ್ನು ನಾನು ಈಗಾಗಲೇ ದೊಡ್ಡವರು (ದೇವೇಗೌಡರು), ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ರೇವಣ್ಣ ಅವರ ಬಳಿ ಮಾತನಾಡಿದ್ದೇನೆ. ದೊಡ್ಡವರು ಎಲ್ಲ ಸೇರಿ ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಈಗಲೂ ಬದ್ಧನಾಗಿರುತ್ತೇನೆ ಎಂದು ಪುನರುಚ್ಛರಿಸಿದರು.

ಜೂ. 17 ಅಥವಾ 18 ರಂದು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಲು ಪ್ರಧಾನಿ ಆಹ್ವಾನಿಸಿದ್ದಾರೆ. ಅಷ್ಟರಲ್ಲಿ ದೇವೇಗೌಡರು ಯಾವ ತೀರ್ಮಾನವನ್ನು ತೆಗೆದುಕೊಂಡರು ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಾಲಿಸುತ್ತೇನೆ ಎಂದ್ರು.

ಬೇಜಾರು ಶಮನ :

ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಕೆಲ ವಿಚಾರಗಳಿಗೆ ಬೇಸರ ಮಾಡಿಕೊಂಡಿದ್ರು. ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವೊಲಿಸಿದ್ದಾರೆ. ಬುಧವಾರ ನಡೆದ ಜೆಡಿಸ್ ಸಭೆಯಲ್ಲಿ ಅವರೂ ಭಾಗಿಯಾಗಿದ್ದರು. ಅವರನ್ನು ಎಲ್ಲಾ ಶಾಸಕರೂ ಹಾಗೂ ಸಚಿವರು ವಿಶ್ವನಾಥ್‌ರ ಮನವೊಲಿಸಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟುತ್ತೇವೆ. ವಿಶ್ವನಾಥ್ ಅವರು ಎರಡು ಮೂರು ದಿನದಲ್ಲಿ ರಾಜೀನಾಮೆಯನ್ನು ವಾಪಸ್ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಖಿಲ್ ಹೇಳಿಕೆ ಗೊತ್ತಿಲ್ಲ:

ವಿಧಾನಸಭೆಗೆ ಮಧ್ಯಂತರ ಚುನಾವಣೆ ಬಗ್ಗೆ ಸಿಎಂ ಪುತ್ರ ನಿಖಿಲ್ ಹೇಳಿಕೆ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ ಅವರನ್ನೇ ಕೇಳಿ ಎಂದ ಪತ್ರಕರ್ತರ ಪ್ರಶ್ನೆಗೆ ಪ್ರಜ್ವಲ್ ಪ್ರತಿಕ್ರಿಯಿಸಿದರು. ಸರಕಾರಕ್ಕೆ ಯಾವುದೇ ಧಕ್ಕೆ ಇಲ್ಲ, ಸುಭದ್ರವಾಗಿರಲಿದೆ ಸಿಎಂ ಕುಮಾರಸ್ವಾಮಿ ಅವರು ಇನ್ನೂ ಉತ್ತಮ ಯೋಜನೆ ಕೊಡಲಿದ್ದಾರೆ. ಸರಕಾರ ಯಾವುದೇ ಕಾರಣಕ್ಕೂ ಬೀಳಲ್ಲಾ , ಅದು ಸುಭದ್ರವಾಗಿದೆ,ಇದು ಬಿಜೆಪಿಯ ಐದನೇ ಡೆಡ್ ಲೈನ್ ಆಗಿದೆ ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲಾ ಎಂದ ಅವರು ರಮೇಶ್ ಜಾರಕಿಹೊಳಿ ಸರಕಾರದ ವಿರುದ್ದ ಅಸಮಾಧಾನ ಹಿನ್ನೆಲೆ ಮತ್ತು ಬಿಜೆಪಿ ಪಕ್ಷದವರು ಸರಕಾರ ಅಸ್ಥಿರಗೊಳಿಸೋ ಪ್ರಯತ್ನ ಖಂಡನೀಯ, ಒಳ್ಳೆ ಕೆಲಸ ಮಾಡಲು ಬೆಂಬಲ ಕೊಡಬೇಕು, ಹೀಗೆಲ್ಲಾ ಮಾಡೋದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಸಿಎಂ ಗ್ರಾಮವಾಸ್ತವ್ಯ ವಿಚಾರವಾಗಿ ಮಾತನಾಡಿದ ಅವರು ಇದು ಒಳ್ಳೇ ನಿರ್ಧಾರ ಎಂದು ಸ್ವಾಗತಿಸಿದ ಪ್ರಜ್ವಲ್ ಇದರಿಂದ ಗ್ರಾಮೀಣ ಸಮಸ್ಯೆಗಳ ಅರಿವಾಗುತ್ತದೆ. ಹಿಂದಿನಿಂದಲೂ ಗ್ರಾಮ ವಾಸ್ತವ್ಯ ಮಾಡಿಕೊಂಡು ಬಂದಿದ್ದಾರೆ. ಹೀಗೆ ಮಾಡುವುದರಿಂದ ಜನರ ಹೆಚ್ಚಿನ ಸಮಸ್ಯೆ ಗಮನಕ್ಕೆ ಮತ್ತಷ್ಟು ಒಳ್ಳೇ ಕೆಲಸ ಮಾಡಲು ಅನುಕೂಲವಾಗಲಿದೆ ಎಂದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಯಲ್ಲಿ ಗ್ರಾಮವಾಸ್ತವ್ಯ ಮಾಡುವ ಬಗ್ಗೆ ಮಾಹಿತಿ ಇಲ್ಲ ನನಗೆ ತಿಳಿದರೆ ಅದರ ಬಗ್ಗೆ ತಿಳಿಸುವುದಾಗಿ ಹೇಳಿದರು.

ಬೈಟ್: ಪ್ರಜ್ವಲ್ ರೇವಣ್ಣ, ನೂತನ ಸಂಸದ.


Body:0


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.