ETV Bharat / state

ಶೂನ್ಯಮಾಸ ಮುಗಿದ ಬಳಿಕ ನನ್ನ ನಿರ್ಣಯ ಹೇಳುವೆ : ಶಾಸಕ ಶಿವಲಿಂಗೇಗೌಡ

ಪಕ್ಷದಲ್ಲಿ ಭಿನ್ನಾಭಿಪ್ರಾಯ ಸರ್ವೇ ಸಾಮಾನ್ಯ- ಇದನ್ನು ಬಗೆಹರಿಸಲು ಹೆಚ್​ಡಿ ರೇವಣ್ಣ ಮತ್ತು ಕುಮಾರಸ್ವಾಮಿ ನನ್ನೊಂದಿಗೆ ಮಾತುಕತೆ ನಡೆಸಿದ್ದಾರೆ- ಶೂನ್ಯ ಮಾಸ ಮುಗಿದ ನಿರ್ಣಯ ತಿಳಿಸುತ್ತಾರಂತೆ ಶಾಸಕ ಶಿವಲಿಂಗೇಗೌಡ

author img

By

Published : Dec 31, 2022, 9:11 PM IST

shivalinge-gowda-talk
ಶಾಸಕ ಶಿವಲಿಂಗೇಗೌಡ
ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯೆ

ಹಾಸನ: ನಾನು ಯಾವ ಕಾರ್ಯಕರ್ತರನ್ನು ಕಡೆಗಣಿಸಿಲ್ಲ. ನನ್ನ ಪಾಡಿಗೆ ನಾನು ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿಕೊಂಡು ಹೋಗ್ತಾ ಇದ್ದೇನೆ. ಈ ಬಗ್ಗೆ ಸಭೆಯಲ್ಲಿ ನಿರ್ಣಯ ತಿಳಿಸುತ್ತೇನೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವಿದೆ. ಎಲ್ಲಾ ಪಕ್ಷದಲ್ಲೂ ಇದು ಸರ್ವೇಸಾಮಾನ್ಯ. ಭಿನ್ನಾಬಿಪ್ರಾಯವನ್ನು ಬಗೆಹರಿಸಲು ರೇವಣ್ಣ ಮತ್ತು ಕುಮಾರಸ್ವಾಮಿ ನನ್ನೊಂದಿಗೆ ಮಾತುಕತೆ ಮಾಡಿದ್ದಾರೆ. ನಾನು ಕೂಡ ಅವರ ಜೊತೆಯಲ್ಲೇ ಮಾತುಕತೆ ಮಾಡಿದ್ದೇನೆ. ಶೂನ್ಯ ಮಾಸ ಹಾಗಾಗಿ ನಾನು ಈಗ ಏನನ್ನು ಮಾತನಾಡುವುದಿಲ್ಲ. ಶೂನ್ಯ ಮಾಸ ಕಳೆದ ಬಳಿಕ ನನ್ನ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸ್ನೇಹಿತರು ಮತ್ತು ಮುಖಂಡರುಗಳನ್ನು ಕರೆದು ಬೃಹತ್ ಸಭೆಯಲ್ಲಿ ಮಾತುಕತೆ ನಡೆಸುತ್ತೇನೆ ಎಂದರು.

ಯಾವ ವಿಷಯಕ್ಕಾಗಿ ಭಿನ್ನಾಬಿಪ್ರಾಯ ಬಂದಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಈ ಬಗ್ಗೆ ಎಲ್ಲಾರಿಗೂ ಗೊತ್ತೇ ಇದೆ. ಅದರ ಬಗ್ಗೆ ಮತ್ತೆ ಪ್ರಸ್ತಾಪ ಮಾಡುವುದು ಬೇಡ. ಸಮಯ ಬಂದಾಗ ಹೇಳುವೆ ಎಂದರು.

ಇನ್ನು ಮಾಜಿ ಸಚಿವ ಹೆಚ್​ ಡಿ ರೇವಣ್ಣರಿಗೆ ಜ.15ರೊಳಗೆ ಅರಸೀಕೆರೆ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸುವಂತೆ ಕಾರ್ಯಕರ್ತರು ಬಿಗಿ ಪಟ್ಟು ಹಿಡಿದಿದ್ದಾರೆ. ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಿ ಎಂದು ಪಟ್ಟು ಹಿಡಿದ ಕಾರ್ಯಕರ್ತರಿಗೆ ಹೆಚ್.​ಡಿ. ರೇವಣ್ಣ ಸಮಾಧಾನ ಮಾಡಿ, ಜ. 15ರೊಳಗೆ ತೀರ್ಮಾನ ಹೇಳಿ ಎಂದು ಪಕ್ಷಕ್ಕೆ ಹೇಳಿರುವ ಮಾತು ಮಾಧ್ಯಮದಲ್ಲಿ ನೋಡಿದೆ. ಹಾಗಾಗಿ ಶೂನ್ಯ ಮಾಸ ಮುಗಿದ ಕೂಡಲೇ ನಿರ್ಧಾರ ಮಾಡುತ್ತೇನೆ ಎಂದು ಶಿವಲಿಂಗೇಗೌಡರು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಬರೀ ಬೂಟಾಟಿಕೆ ಪಾರ್ಟಿ ಬಿಜೆಪಿ: ಸುಳ್ಳುಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಕರ್ಮ ನಿಮಗೇಕೆ ಬಂತು ಶಾ ಜೀ.. ಹೆಚ್​ಡಿಕೆ

ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯೆ

ಹಾಸನ: ನಾನು ಯಾವ ಕಾರ್ಯಕರ್ತರನ್ನು ಕಡೆಗಣಿಸಿಲ್ಲ. ನನ್ನ ಪಾಡಿಗೆ ನಾನು ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿಕೊಂಡು ಹೋಗ್ತಾ ಇದ್ದೇನೆ. ಈ ಬಗ್ಗೆ ಸಭೆಯಲ್ಲಿ ನಿರ್ಣಯ ತಿಳಿಸುತ್ತೇನೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವಿದೆ. ಎಲ್ಲಾ ಪಕ್ಷದಲ್ಲೂ ಇದು ಸರ್ವೇಸಾಮಾನ್ಯ. ಭಿನ್ನಾಬಿಪ್ರಾಯವನ್ನು ಬಗೆಹರಿಸಲು ರೇವಣ್ಣ ಮತ್ತು ಕುಮಾರಸ್ವಾಮಿ ನನ್ನೊಂದಿಗೆ ಮಾತುಕತೆ ಮಾಡಿದ್ದಾರೆ. ನಾನು ಕೂಡ ಅವರ ಜೊತೆಯಲ್ಲೇ ಮಾತುಕತೆ ಮಾಡಿದ್ದೇನೆ. ಶೂನ್ಯ ಮಾಸ ಹಾಗಾಗಿ ನಾನು ಈಗ ಏನನ್ನು ಮಾತನಾಡುವುದಿಲ್ಲ. ಶೂನ್ಯ ಮಾಸ ಕಳೆದ ಬಳಿಕ ನನ್ನ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸ್ನೇಹಿತರು ಮತ್ತು ಮುಖಂಡರುಗಳನ್ನು ಕರೆದು ಬೃಹತ್ ಸಭೆಯಲ್ಲಿ ಮಾತುಕತೆ ನಡೆಸುತ್ತೇನೆ ಎಂದರು.

ಯಾವ ವಿಷಯಕ್ಕಾಗಿ ಭಿನ್ನಾಬಿಪ್ರಾಯ ಬಂದಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಈ ಬಗ್ಗೆ ಎಲ್ಲಾರಿಗೂ ಗೊತ್ತೇ ಇದೆ. ಅದರ ಬಗ್ಗೆ ಮತ್ತೆ ಪ್ರಸ್ತಾಪ ಮಾಡುವುದು ಬೇಡ. ಸಮಯ ಬಂದಾಗ ಹೇಳುವೆ ಎಂದರು.

ಇನ್ನು ಮಾಜಿ ಸಚಿವ ಹೆಚ್​ ಡಿ ರೇವಣ್ಣರಿಗೆ ಜ.15ರೊಳಗೆ ಅರಸೀಕೆರೆ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸುವಂತೆ ಕಾರ್ಯಕರ್ತರು ಬಿಗಿ ಪಟ್ಟು ಹಿಡಿದಿದ್ದಾರೆ. ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಿ ಎಂದು ಪಟ್ಟು ಹಿಡಿದ ಕಾರ್ಯಕರ್ತರಿಗೆ ಹೆಚ್.​ಡಿ. ರೇವಣ್ಣ ಸಮಾಧಾನ ಮಾಡಿ, ಜ. 15ರೊಳಗೆ ತೀರ್ಮಾನ ಹೇಳಿ ಎಂದು ಪಕ್ಷಕ್ಕೆ ಹೇಳಿರುವ ಮಾತು ಮಾಧ್ಯಮದಲ್ಲಿ ನೋಡಿದೆ. ಹಾಗಾಗಿ ಶೂನ್ಯ ಮಾಸ ಮುಗಿದ ಕೂಡಲೇ ನಿರ್ಧಾರ ಮಾಡುತ್ತೇನೆ ಎಂದು ಶಿವಲಿಂಗೇಗೌಡರು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಬರೀ ಬೂಟಾಟಿಕೆ ಪಾರ್ಟಿ ಬಿಜೆಪಿ: ಸುಳ್ಳುಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಕರ್ಮ ನಿಮಗೇಕೆ ಬಂತು ಶಾ ಜೀ.. ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.