ಹಾಸನ/ಅರಸೀಕೆರೆ: ಉತ್ತರ ಮತ್ತು ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮಳೆ ರಾಯನ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡರೆ ಇತ್ತ ಅರಸೀಕೆರೆ ತಾಲೂಕಿನಲ್ಲಿ ಮಾತ್ರ ವರುಣ ಮತ್ತು ಸೂರ್ಯ ದೇವ ಕಣ್ಣ ಮುಚ್ಚಾಲೆ ಆಟವಾಡುತ್ತಿದ್ದಾರೆ.
ಅಲ್ಲಿ ಬೇಡ ಹೋಗು ಅಂದ್ರೂ ನಿಲ್ತಿಲ್ಲ.. ಇಲ್ಲ ಬಾ ಅಂದರೂ ಬರ್ತಿಲ್ವಲ್ಲೋ ಮಳೆರಾಯ..
ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ರೇ ಹಾಸನದ ಅರಸೀಕೆರೆಯಲ್ಲಿ ಮಾತ್ರ ಜನ ಮಳೆಯಿಲ್ಲದೇ ಕಂಗಾಲಾಗಿದ್ದಾರೆ.
![ಅಲ್ಲಿ ಬೇಡ ಹೋಗು ಅಂದ್ರೂ ನಿಲ್ತಿಲ್ಲ.. ಇಲ್ಲ ಬಾ ಅಂದರೂ ಬರ್ತಿಲ್ವಲ್ಲೋ ಮಳೆರಾಯ..](https://etvbharatimages.akamaized.net/etvbharat/prod-images/768-512-4094382-thumbnail-3x2-surya.jpeg?imwidth=3840)
ಅರಸೀಕೆರೆಯಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆಯಾಗುತ್ತಿದೆ. ಹೆಚ್ಚು ಮಳೆಯಿಲ್ಲದ ಕಾರಣ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ತುಂಬುವುದಿರಲಿ ಮನೆ ಮುಂದಿನ ಚರಂಡಿ ಮೋರಿಗಳಲ್ಲೂ ಸಹ ನೀರು ತುಂಬಿ ಹರಿಯುತ್ತಿಲ್ಲ. ಜಿಲ್ಲೆಯಲ್ಲಿ ಸಕಲೇಶಪುರ ಸೇರಿದಂತೆ ಐದು ತಾಲೂಕುಗಳಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ, ಅರಸೀಕೆರೆಯಲ್ಲಿ ಶಾಲಾ - ಕಾಲೇಜುಗಳು ಎಂದಿನಿಂತೆ ನಡೆಯುತ್ತಿವೆ.
ಒಂದೆಡೆ ನಾಡಿನ ಬಹುತೇಕ ಕಡೆ ಜನ ಮಳೆ ನಿಲ್ಲಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅರಸೀಕೆರೆಯ ಮಂದಿ ಮಾತ್ರ ಬಾರೋ ಬಾರೋ ಮಳೆರಾಯ ಅಂತ ಪ್ರಾರ್ಥಿಸುತ್ತಿದ್ದಾರೆ. ಇನ್ನಾದರೂ ಮಳೆರಾಯ ಉತ್ತರ ಕರ್ನಾಟಕದಿಂದ ತನ್ನ ಚಿತ್ತವನ್ನ ಇತ್ತ ಹರಿಸುತ್ತಾನಾ ನೋಡಬೇಕು.
ಹಾಸನ/ಅರಸೀಕೆರೆ: ಉತ್ತರ ಮತ್ತು ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮಳೆ ರಾಯನ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡರೆ ಇತ್ತ ಅರಸೀಕೆರೆ ತಾಲೂಕಿನಲ್ಲಿ ಮಾತ್ರ ವರುಣ ಮತ್ತು ಸೂರ್ಯ ದೇವ ಕಣ್ಣ ಮುಚ್ಚಾಲೆ ಆಟವಾಡುತ್ತಿದ್ದಾರೆ.
ಅರಸೀಕೆರೆಯಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆಯಾಗುತ್ತಿದೆ. ಹೆಚ್ಚು ಮಳೆಯಿಲ್ಲದ ಕಾರಣ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ತುಂಬುವುದಿರಲಿ ಮನೆ ಮುಂದಿನ ಚರಂಡಿ ಮೋರಿಗಳಲ್ಲೂ ಸಹ ನೀರು ತುಂಬಿ ಹರಿಯುತ್ತಿಲ್ಲ. ಜಿಲ್ಲೆಯಲ್ಲಿ ಸಕಲೇಶಪುರ ಸೇರಿದಂತೆ ಐದು ತಾಲೂಕುಗಳಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ, ಅರಸೀಕೆರೆಯಲ್ಲಿ ಶಾಲಾ - ಕಾಲೇಜುಗಳು ಎಂದಿನಿಂತೆ ನಡೆಯುತ್ತಿವೆ.
ಒಂದೆಡೆ ನಾಡಿನ ಬಹುತೇಕ ಕಡೆ ಜನ ಮಳೆ ನಿಲ್ಲಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅರಸೀಕೆರೆಯ ಮಂದಿ ಮಾತ್ರ ಬಾರೋ ಬಾರೋ ಮಳೆರಾಯ ಅಂತ ಪ್ರಾರ್ಥಿಸುತ್ತಿದ್ದಾರೆ. ಇನ್ನಾದರೂ ಮಳೆರಾಯ ಉತ್ತರ ಕರ್ನಾಟಕದಿಂದ ತನ್ನ ಚಿತ್ತವನ್ನ ಇತ್ತ ಹರಿಸುತ್ತಾನಾ ನೋಡಬೇಕು.
ಉತ್ತರ ಮತ್ತು ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮಳೆ ರಾಯನ ಆರ್ಭಟಕ್ಕೆ ಜನ ಜೀವನ ಅಸ್ಥವ್ಯಸ್ಥಗೊಂಡರೆ ಇತ್ತ ಬಯಲು ಸೀಮೆ ಅರಸೀಕೆರೆ ತಾಲೂಕಿನಲ್ಲಿ ಮಾತ್ರ ವರುಣ ಮತ್ತು ಸೂರ್ಯ ದೇವ ಕಣ್ಣ ಮುಚ್ಚಾಲೆ ಆಟವಾಡುತ್ತಿದ್ದಾರೆ. ಯಾರಿಟ್ಟ ಶಾಪವೋ ಏನೋ ನೆರೆಹೊರೆಯ ತಾಲೂಕುಗಳಲ್ಲಿ ಬಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೆ ತಾಲೂಕಿನಲ್ಲಿ ಮಾತ್ರ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆಯಾಗುತ್ತಿದೆ. ಮಳೆರಾಯನ ಈ ತಾರತಮ್ಯ ರೀತಿಯಿಂದ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ತುಂಬುವುದಿರಲಿ ಮನೆ ಮುಂದಿನ ಚರಂಡಿ ಮೋರಿಗಳಲ್ಲೂ ಸಹ ನೀರು ತುಂಬಿ ಹರಿಯುತ್ತಿಲ್ಲಾ.
Body:ತುಂತುರು ಮಳೆಯೊಂದಿಗೆ ತಣ್ಣನೇ ಗಾಳಿ ಬೀಸುತ್ತಿರುವುದರಿಂದ ಚುಮುಚುಮು ಚಳಿಗೆ ಬೆಚ್ಚಗಿರಲು ಮನ ಹಂಬಲಿಸುತ್ತಿರುವುದರಿಂದ ಜನತೆ ಕೂಡ ಮನೆಯಿಂದ ಆಚೆ ಬರದ ಕಾರಣ ನಗರದ ರಸ್ತೆಗಳಲ್ಲಿ ಜನ ಸಂಚಾರವಿಲ್ಲದೆ ಬಿಕ್ಕೋ ಎನ್ನುವಂತ ವಾತಾವರಣ ಸೃಷ್ಠಿಯಾಗಿದೆ. ಜಿಲ್ಲೆಯಲ್ಲಿ ಸಕಲೇಶಪುರ ಸೇರಿದಂತೆ ಐದು ತಾಲೂಕುಗಳಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ ತಾಲೂಕಿನಲ್ಲಿ ಎಂದಿನಂತೆ ಶಾಲಾ ಕಾಲೇಜುಗಳು ನಡೆಯುತ್ತಿರುವುದರಿಂದ ಮೋಡಕವಿದ ವಾತಾವರಣದಿಂದಾಗಿ ವಿದ್ಯಾರ್ಥಿಗಳು ವಲ್ಲದ ಮನಸ್ಸಿನಿಂದಲೇ ಶಾಲೆಯಡೆಗೆ ಮುಖ ಮಾಡಿದ್ದು ಕಂಡುಬಂತು.
ಇನ್ನೂ ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಾಹಸೀಲ್ದಾರ್ ಸಂತೋಷ್ಕುಮಾರ್ ಸೇರಿದಂತೆ ನಾನಾ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಕಚೇರಿಯಲ್ಲೇ ಇರುವ ಮೂಲಕ ಅನಿರೀಕ್ಷಿತವಾಗಿ ಏನಾದರು ಅನಾಹುತ ಸಂಭವಿಸಿದರೆ ತ್ವರಿತವಾಗಿ ಕ್ರಮಕೈಗೊಳ್ಳಲು ಸನ್ನದ್ದರಾಗಿದ್ದು ಸರಕಾರಿ ಕಚೇರಿಗಳಲ್ಲಿ ಕಂಡುಬಂದರೆ ಅಕ್ಕಪಕ್ಕದ ತಾಲೂಕುಗಳಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ ಈ ಬಾರಿ ತಾಲೂಕಿನಲ್ಲು ಬಾರಿ ಮಳೆಯಾಗಿ ಹತ್ತಾರು ವರ್ಷಗಳಿಂದ ಬರಿದಾಗಿರುವ ನಮ್ಮ ಊರ ಕೆರೆಕಟ್ಟೆಗಳು ತುಂಬಲಿವೆ ಎಂಬ ರೈತರ ವಿಶ್ವಾಸವನ್ನೂ ವರುಣದೇವ ಹುಸಿಗೊಳಿಸಿದ್ದಾನೆ.
Conclusion:ಬಾರೋ ಬಾರೋ ಮಳೆರಾಯ ಎಂಬ ತಾಲೂಕಿನ ಜನತೆಯ ಕೂಗು ಮಳೆರಾಯನಿಗೆ ಯಾವಾಗ ಕೇಳುವುದೋ ಗೊತ್ತಿಲ್ಲಾ ಒಟ್ಟಾರೆ ಜಲಪ್ರಳಯ ಎದುರಿಸುತ್ತಿರುವ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಜನತೆಯ ಮೇಲೆ ದಯೆ ತೋರಿ ಮಳೆಗಾಗಿ ಪರಿತಪ್ಪಿಸುತ್ತಿರುವ ಬಯಲು ಸೀಮೆ ಅರಸೀಕೆರೆಗೆ ಹದವಾದ ಮಳೆ ಸುರಿಸಿ ನಮ್ಮನ್ನು ಹರಿಸು ಎನ್ನುತ್ತಿದ್ದಾರೆ ತಾಲೂಕಿನ ಅನ್ನ ದಾತರು.
- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.